ಅಂಬಿಲಿ ಫಾತೀಮ ದೃಡಸಂಕಲ್ಪ ಮತ್ತು ಆತ್ಮವಿಶ್ವಾಸಕ್ಕೆ ಮಾದರಿಯಾದಂತಹ ಒಬ್ಬ ಹುಡುಗಿ.ತನ್ನ ವಿದ್ಯಾಭ್ಯಾಸದಲ್ಲಿ ಕೂಡ ಅವರು ಉತ್ತಮ ಪಡೆದಿದ್ದರು.ಅಂಬಿಲಿ ಫಾತೀಮ ಕೇರಳದ ಕೋಟಯ್ಯಂ ಎಂಬ ಊರಿನ ಕಾಂಜಿರಪಲ್ಲಿ ಎಂಬ ಗ್ರಾಮದ ಪುತುಪರಂಬಿಲ್ ಎಂಬ ಮನೆಯಲ್ಲಿ ಜನಿಸಿದಳು.ಇವರು ಬಶೀರ್ ಹಸನ್ ಹಾಗು ಶೈಲಾ ಎಂಬ ದಂಪತಿಗಳಿಗೆ ಜನಿಸಿದ ಮುದ್ದಾದ ಹೆಣ್ಣು ಮಗಳು ಅಂಬಿಲಿ ಫಾತೀಮ.ಇವಳು ಒಂದು ಸಾಮಾನ್ಯ ಕುಟುಂಬದಲ್ಲಿ ಬೆಳೆದವರು.ಅಂಬಿಲಿ ಫಾತೀಮ ನೋಡಲು ತುಂಬಾ ಸುಂದರವಾಗಿದ್ದು,ಆಕೆಯ ಕಣ್ಣುಗಳು ಅತ್ಯಂತ ಆಕರ್ಶ್ಣೆಯಿಂದ ಕೂಡಿದ್ದವು.ಇವರು ಎರಡು ವರ್ಷ್ದದವರಿದ್ದಾಗ ಅವರ ಹೃದಯದಲ್ಲಿ ರಂಧ್ರವಿರುವುದು ಕಂಡು ಬಂದಿತು.ಅಂಬಿಲಿ ಫಾತೀಮ ಅವರ ದೃಡಸಂಕಲ್ಪ ಪ್ರತಿಯೊಬ ವಿದ್ಯಾರ್ಥಿಗೂ ಆದರ್ಶಪ್ರಾಯ ವಾದಂತದ್ದು.ಇವರು ತಮ್ಮ ೨೧ನೇ ವಯಸಿನಲ್ಲಿ ಹೃದಯ ಹಾಗು ಶ್ವಾಸ ಕೋಶ ಕಸಿಯನ್ನು ಚನೈನ ಒಂದು ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಾದ ಅಪೋಲೋನಲ್ಲಿ ಮಾಡಿಸಿಕೊಂಡರು ಹಾಗೂ ಅದು ಯಶ್ವಸಿಯು ಆಯಿತು.ಅಂಬಿಲಿ ಫಾತೀಮರವರ ಒಂದು ಬಡ ಕುಟುಂಬದಲ್ಲಿ ಜನಿಸಿದ ಕಾರಣ ಅವರ ಶಸ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನು ಒದಗಿಸುವುದಲ್ಲಿ ಅವರ ಪೋಷಕರು ವಿಫಲರಾದಾಗ,ಅವರಿಗೆ ಸಾಮಾಜಿಕ ಜಾಲತಾಣಗಳಿಂದ,ಸಿನಿ ತಾರೆಯರಿಂದ ಹಾಗೂ ಸಿ.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಂದ ಅವರಿಗೆ ಹಣದ ಸಹಾಯ ದೊರೆಯಿತು.ಸಿ.ಎಂ.ಎಸ್.ಕಾಲೇಜಿನ ಪ್ರಾಂಶುಪಾಲರು ಮತ್ತು ಅಂಬಿಲಿ ಫಾತೀಮರ ಶಿಕ್ಷಕರಾದ ಡಾ. ರಾಯ್ ಸಾಮ್ ಡಾನೈಲ ಅವರು ಅಂಬಿಲಿ ಫಾತೀಮರ ಬಗ್ಗೆ ಅತ್ಯಂತ ಆತ್ಮ ವಿಶ್ವಾಸ ಹಾಗು ಧೃಡಸಂಕಲ್ಪ ಉಳ್ಳಂತಹ ಒಬ್ಬ ಹೆಣ್ಣು ಹಾಗೂ ಅವರು ಹಸನ್ಮುಕಿಯಾಗಿ ಇರುತ್ತಿದ್ದರು ಎಂದು ಹೇಳುವರು. ತಮ್ಮ ದರ್ಬಲ್ಯತೆಯನ್ನು ಎಂದು ವ್ಯಕ್ತ ಪಡಿಸಿದವರಲ್ಲ ಎಂದು ಅತ್ಯಂತ ಮೆಚ್ಚುಗೆಯಿಂದ ಹೇಳಿಕೊಳ್ಳುತ್ತಾರೆ.ಇವರು ಮಹಾತ್ಮ ಗಾಂಧೀಜಿ ವಿಶ್ವವಿದ್ಯಾಲಯದ ಸಿ.ಎಂ.ಎಸ್.ಕಾಲೇಜಿನಲ್ಲಿ ತಮ್ಮ ಅಂತಿಮ ವರ್ಷ್ದದ ಎಂ.ಕಾಮ್ ವ್ಯಾಸಂಗವನ್ನು ಮಾಡುತಿದ್ದರು.ಅಂಬಿಲಿ ಫಾತೀಮರವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಾಗುತಿದ್ದರು.ಆದರೆ ಅವ್rಉ ಮ್ಮ ೨೨ನೇ ವಯಸ್ಸಿನಲ್ಲಿ ಆಸ್ಪತ್ರೆಯಲ್ಲಿ ಇರಬೇಕಾದರೆ ತಮ್ಮ ಕೊನೆಯ ಉಸಿರನ್ನು ಎಳೆದರು.ಈ ಕಾರಣದಿಂದಾಗಿ ಅಂಬಿಲಿ ಫಾತೀಮರ ತಂದೆಯವರು ಸಿ.ಎಂ.ಎಸ್.ಕಾಲೇಜಿನಲ್ಲಿ ತಮ್ಮ ಮುದ್ದು ಮಗಳಾದ ಅಂಬಿಲಿ ಫಾತೀಮರ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ತೆರೆಯಬೇಕೆಂದು ಮನವಿ ಮಾಡಿಕೊಂಡಿದ್ದರು.ಅಂಬಿಲಿ ಫಾತೀಮರವರು ತಮ್ಮ ನೇತ್ರಗಳನ್ನು ದಾನಮಾಡಿ ಮಾನವೀಯತೆಯನ್ನು ಮೆರದಿದ್ದಾರೆ.ಅವರು ಇನ್ನೊಬ್ಬರ ಜೀವನದಲ್ಲಿ ಬೆಳಕನ್ನು ಮೂಡಿಸಿದ್ದಾರೆ.ಅಂಬಿಲಿ ಫಾತೀಮ,ಅವರ ಮಿತ್ರರು ಅವರ ಬಗ್ಗೆ ಹೇಳುವುದು,ಅಂಬಿಲಿ ಫಾತೀಮ ಒಬ್ಬ ಮಿತ್ರ ಮಾತ್ರ ಆಗಿರಲಿಲ್ಲ ಅವಳು ಒಂದು ಸಹೋದರಿ ಇದ್ದಂತ್ತೆ ಎಲ್ಲರ ಜೋತೆ ಚೆನ್ನಾಗಿ ಮಾತಾಡುವ ಒಬ್ಬ ಒಳ್ಳೆಯ ಹುಡುಗಿ ಆಗಿದ್ದಳು.ಅವಳು ಯಾವಾಗಳು ನಗುತ್ತ ಸಂತೋಷದಿಂದ ಇರುತಿದ್ದಳು.ಅವಳಿಗೆ ರೋಗ ಇರುವುದು ಯಾರಿಗೂ ತೋರಿಸದೆ ಅದನ್ನು ಮರೆತ್ತು ಸಂತೋಷದಿಂದ ಇರುತಿದ್ದಳು.ಅವಳು ಅನುಭವಿಸಿದ್ದ ಕಷ್ಟ,ದುಃಖವನೆಲ್ಲಾ ಯಾರಿಗು ತೋರಿಸದೆ ಸಂತೋಷದಿಂದ ಇದ್ದಳು.ಅಂಬಲಿ ಫ಼ಾತೀಮ ಎಂಬ ಮುದಾದ ಹುಡುಗಿಯನ್ನು ತುಂಬಾ ಜನರು ಸಹಾಯವನ್ನು ಮಾಡಿದರು.ಕೇರಳದ ಮಾಜಿ ಮುಕ್ಯ ಮಂತ್ರಿ ಉಮ್ಮನ್ ಚಾಂಡಿ ಅವರು ಅಂಬಿಲಿ ಫಾತೀಮರವರಿಗೆ ಸಹಾಯ ಮಾಡಿದರು.ಅಂಬಿಲಿ ಫಾತೀಮರವರ ಹೆಸರಲ್ಲು ಒಂದು ವ್ಯತ್ಯಸ ಇತ್ತು ಎಂದು ಅವರ ತಂದೆ ಬಶೀರ್ ಹಸನ್ ಹೇಳಿದರು.ಅದು ಅಂಬಿಲಿ ಎಂದರೆ ಅದರ ಸುತ್ತ ಯಾವಾಗಲು ಪ್ರಕಾಶ ಇರುತ್ತದೆ.ಈ ಪ್ರಕಾಶವು ಕೋಟಾನುಕೋಟಿ ಜನಗಳಿಗೆ ಬೆಳಕನ್ನು ನೀಡುತದೆ.ಅದೇ ರೀತಿ ನನ್ನ ಮಗಳು ಬೆಳಕನ್ನು ನೀಡುವ ಒಬ್ಬ ಮುದಾದ ಮಗಳು ಆಗಿತ್ತು.ಆ ಕಾರಣದಿಂದ ಅಂಬಿಲಿ ಫಾತೀಮ ಅವರಿಗೆ ಕಠೀಣ ಪರೀಕ್ಷಣೆಗಳಲ್ಲಿಯೂ ಅವಳು ಜೀವಿಸುತಿದ್ದಳು.ಅಂಬಿಲಿ ಫಾತೀಮ ಅವರ ತಂದೆ-ತಾಯಿಗೆ ಅವಳ ತಿರುಗ ಎರಡನೆಯ ಶಸ್ತ್ರ ಕ್ರಿಯೆ ಮಾಡಿದಾಗ ಅವರ ಮಗಳು ಜೀವಿಸುವಂತ ವಿಶ್ವಾಸ ಇರಲ್ಲಿಲ.ಆದರೆ ಆ ಸಂರ್ದಭದಲ್ಲಿ ಅಂಬಿಲಿ ಫಾತೀಮ ಅವರ ತಂದೆ-ತಾಯಿಗೆ ತಾನು ಜೀವಿಸುತೇನೆ ಎಂದುಹೇಳಿ ಅವರಿಗೆ ವಿಶ್ವಾಸವನ್ನು ನೀಡಿದಳು.ಆ ಸಂದರ್ಭದಲೂ ಅಂಬಿಲಿ ಫಾತೀಮ ಅವರಿಗೆ ತುಂಬ ಧೈರ್ಯ ಇತ್ತು.ಅಂಬಿಲಿ ಫಾತೀಮರವರನ್ನು ಸಹಾಯ ಮಾಡಿದ ಒಬ್ಬ ಸಿನಿ ತಾರೆ,ಜೀವದ ಆಟವು ದೇವರ ಪರೀಕ್ಷಣೆ ಎಂದು ನಾವು ಜನರು ಹೇಳುವ ತರಹ ಅದೇ ರೀತಿ ಅಂಬಿಲಿ ಫಾತೀಮರವರು ಅನುಭವಿಸಿದನ್ನು ನೋಡಿ ತಂದೆ-ತಾಯಿಯರು ಮನಸ್ತಾಪ ಕೊಂಡರು ಅವರು ಮಗಳ ಮುಂದೆ ಅದನ್ನು ತೋರಿಸದೆ ಇದ್ದರು.ತುಂಬಾ ಜನ ಅಂಬಿಲಿ ಫಾತೀಮ ಜೀವಿಸಬೇಕು ಎಂದು ಹೇಳಿ ಪ್ರಾರ್ಥನೆ ಮಾಡಿದರು.ಆದರೆ ಅದು ಸಾಧ್ಯವಾಗಲಿಲ್ಲ.ಈಗ ಅಂಬಿಲಿ ಫಾತೀಮ ಎಲ್ಲರ ಮನಸ್ಸಲ್ಲೂ ಜೀವಿಸುತಿರುವ ಒಂದು ಪ್ರತೀಕ ಆಗಿವೆ.