ನಿರಂಜನ ಬದಲಾಯಿಸಿ

ಬರಹವನ್ನೆ ಬದುಕಾಗಿಸಿಕೊಂಡ ಕುಳಕುಂದ ಶಿವರಾಯರು ೧೯೨೪ರಲ್ಲಿ ದಕ್ಛಿಣ ಕನ್ನಡದ ಪುತ್ತುರಿನಲ್ಲಿ ಜನಿಸಿದರು. ಇವರು 'ನಿರಂಜನ' ಎಂಬ ಕಾವ್ಯ ನಾಮದಿಂದ ಪರಿಚಿತರಾದವರು. ಎಡ ಪಂಥೀಯ ಚಿಂತನೆಯಲ್ಲಿ ಒಲವಿದ್ದ ನಿರಂಜನರು ಕನ್ನಡದ ಪ್ರಮುಖ ಪ್ರಗತಿಶೀಲ ಲೇಖಕರು. ಕನ್ನಡ ನಾಡಿನ ಪ್ರಮುಖ ಪತ್ರಿಕೆಗಳಾದ 'ತಾಯಿ ನಾದಡು', 'ಜನವಾಣಿ' ಮೋದಲಾದ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಅಂಕಣ ಬರಹಗಳನ್ನು ಪ್ರಕತಿಸಿದ್ದಾರೆ. ಇವರು ೨೫ ಕಾದಂಬರಿಗಳು ೯ ಕಥಾಸಂಕಲನಗಳು ೨ ನಾಟಕಗಳು ಇವರ ಪ್ರತಿಭೆಯ ಮೂಸೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಸಂದಿವೆ.