ವೈವಿಧ್ಯಮಯ ಕಲೆಯನ್ನು ಚಿತ್ರಿಸಿದ ಕಲೆಗಾರ...

gravish art 2
gravish art
water milan art

ಒಂದು ವಸ್ತುವಿಗೆ ಆಕಾರ ನೀಡಿ ವಿಶಿಷ್ಟ ರೀತಿಯಲ್ಲಿ ಚಿತ್ರಿಸುವುದು ಕಲೆಗಾರನ ಕಲೆ. ದಿನಬಳಕೆಯ ತರಕಾರಿಗಳಿಂದ ದೇವರ ವಿಗ್ರಹ, ಪ್ರಾಣಿಗಳ ಆಕಾರ ಮಾಡಬಲ್ಲ ಶಕ್ತಿ ಒಬ್ಬ ಕಲೆಗಾರನದ್ದು. ಪೇಪರ್ನಲ್ಲಿ ಬಣ್ಣಗಳ ಮೂಖಾಂತರ ಚಿತ್ರಗಳನ್ನು ರಚಿಸಬಹುದು ಆದರೆ ತರಕಾರಿಯಲ್ಲಿ ವ್ಯಕ್ತಿಯ ಭಾವಚಿತ್ರ ಬಿಡಿಸುವುದು ಮಾತ್ರ ಸವಾಲಿನ ಕೆಲಸ. ಇಂತಹ ವೈಶಿಷ್ಟವಾದ ಜನಾಕರ್ಷಣ ಮಾಡಬಲ್ಲಂತಹ ಚಿತ್ರಗಳನ್ನು ರೂಪಿಸುವುದು ಹರೀಶ್ ರವರ ಹವ್ಯಾಸ. ಆ ಕಲಾವಿದ ಬೇರ್ಯಾರು ಅಲ್ಲ ಶಿವಮೊಗ್ಗ ಜಿಲ್ಲೆಯ ಸಾಗರದ ಒಬ್ಬ ಅಪ್ರತಿಮ ಕಲಾವಿದರು.

ಮೊಸಳೆ, ನವಿಲು, ದೇವಿಯ ಆಕೃತಿಗಳನ್ನು ಎಲೆಯ ಮೂಲಕ ನಿಮರ್ಿಸುವುದು, ಈ ಕಲೆಗೆ "ಜಾನುರ್ ಆಟ್ರ್ಸ" ಎಂದು ಕರೆಯುತ್ತಾರೆ. ಎಲೆಗಳಿಂದ ಆಕೃತಿಗಳನ್ನು ಮಾಡಬಹುದು ಎಂದು ಯಾರಾದರೂ ಊಹೆ ಮಾಡಲು ಸಾಧ್ಯವೇ, ಆದರೆ ಇಂತಹ ಕೆಲಸದಲ್ಲಿ ಹರೀಶ್ ಅವರ ಪಾತ್ರ ಬಹುಮುಖ್ಯ.
ಹಾಗೇಯೇ ಕಲ್ಲಗಂಡಿ ಹಣ್ಣಿನಿಂದ ಮನಷ್ಯರ ಭಾವ ಚಿತ್ರವನ್ನು ಬಿಡಿಸುತ್ತಾರೆ. ಹರೀಶ ಅವರು 2015ರ ನುಡಿಸಿರಿಯಲ್ಲಿ ಈ ಕಲೆಯನ್ನು ಪ್ರದಶರ್ಿಸಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಗಿರೀಶ್ ಕಾನರ್ಾಡ್, ಶಿವರಾಮ ಕಾರಂತರು, ಚಂದ್ರಶೇಖರ ಕಂಬಾರ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವರ ಚಿತ್ರಗಳನ್ನು ಕಲ್ಲಂಗಡಿ ಹಣ್ಣಿನಲ್ಲಿ ಮೂಡಿಸಿದದ್ದು ವಿಶೇಷವಾಗಿತ್ತು ಈ ಕಲೆಗೆ "ವಾಟರ್ ಮಿಲನ್ ಗಾವರ್ಿಶ್ ಆಟ್ರ್ಸ" ಎಂದು ಕರೆಯುತ್ತಾರೆ.

ಇಂತಹ ಗಾವರ್ಿಶ್ ಆಟ್ರ್ಸ, ಜಾನುರ್ ಆಟ್ರ್ಸ ಕಲೆಯನ್ನಯ ಇಡೀ ಭಾರತದಲ್ಲಿಯೇ ಯಾರೂ ಮಾಡಲಾರರು ಹರೀಶ್ ಅವರ ಹವ್ಯಾಸ ಈ ಕಲೆಗಳನ್ನು ಮಾಡಲು ಪ್ರೇರೆಪಿಸಿತು ಎಂಬುವುದು ಅವರ ಮನದಾಳದ ಮಾತಾಗಿದೆ. ಇಂತಹ ವಿಶಿಷ್ಟ ಕಲೆಗಳನ್ನು ಕೃಷಿಮೇಳ, ಸಾಹಿತ್ಯಮೇಳ, ಫ್ಲವರ್ ಶೋಗಳಲ್ಲಿ ಪ್ರದರ್ಶನ ಮಾಡುತ್ತಾರೆ.

ಹರೀಶ್ ಅವರು ಒಂದು ಕಂಪನಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಇಂತಹ ಅದ್ಭುತ ಕಲೆಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ. ಇಲ್ಲಿಯ ವರೆಗೆ ರಾಜ್ಯಮಟ್ಟದ 3 ಪ್ರಶಸ್ತಿಗಳು, ರಾಷ್ಟ್ರಮಟ್ಟದ 2 ಪ್ರಶಸ್ತಿ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 1 ಪ್ರಶಸ್ತಿಯನ್ನು ಪಡೆದಿದ್ದಾರೆ.
 ಬೈಟ್ - ಹರೀಶ್
"ವಾಟರ್ ಮಿಲನ್ ಗಾವರ್ಿಶ್ ಆಟ್ರ್ಸ" ಚಿತ್ರಗಳ ಮೂಲಕ ಕನ್ನಡದ ಗಣ್ಯವ್ಯಕ್ತಿಗಳನ್ನು ಗುರುತುಸಬೇಕು, ಯುವ ಕಲೆಗಾರರು ಇಂತಹ ಕಲೆಗಳನ್ನು ನೋಡಿ ಇನ್ನೂ ಆಕಷರ್ಿತವಾಗಿ ಮಾಡಲು ಸ್ಪೂತರ್ಿ ಆಗಬೇಕು ಕನ್ನಡದಲ್ಲಿ ಸಾಧನೆ ಮಾಡಿದವರನ್ನು ಗುರಿತಿಸುವುದು ಮುಖ್ಯ ಉದ್ದೇಶವಾಗಿದೆ.
  ಬೈಟ್ - ಸುನಿಲ್ ಕುಮಾರ್ ( ವ್ಯಾಪಾರಸ್ಥರು)
ಎಲೆಗಳ ಮೂಲಕ, ಕಲ್ಲಂಗಡಿ ಹಣ್ಣುಗಳನ್ನು ಬಳಸಿಕೊಂಡು ಇಂತಹ ಅದ್ಭುತ ಕಲೆಯನ್ನು ಮಾಡವುದು ಸಹಜದ ಮಾತಲ್ಲ. ಇಂತಹ ಕಲೆಯನ್ನು ಜನರು ಗುರುತಿಸಿ ಪ್ರಶಂಶಿಸಬೇಕು