ಸದಸ್ಯ:MANJUNATH N SATTUR/ನನ್ನ ಪ್ರಯೋಗಪುಟ

ಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರ ಬದಲಾಯಿಸಿ

https://kn.wikipedia.org/s/2anj

"ತತ್ತ್ವಾರ್ಥ ಸೂತ್ರ"ವು ಸಮಸ್ತ ಜೈನ ಆಗಮಗಳನ್ನು ಭಟ್ಟಿ ಇಳಿಸಿದ ಸಾರ ರೂಪದ ಗ್ರಂಥವಾಗಿದೆ. ಇದಕ್ಕೆ `ಮೋಕ್ಷಶಾಸ್ತ್ರ' ಎಂಬ ಇನ್ನೊಂದು ಹೆಸರು ಇದೆ. ಈ ಗ್ರಂಥವನ್ನು ಜೈನ ಧರ್ಮದ ಪ್ರಾತಃಸ್ಮರಣೀಯರಾದ ಆಚಾರ್ಯ ಶ್ರೀ ಉಮಾಸ್ವಾಮಿಯವರು ಜೈನ ಪರಂಪರೆಯಲ್ಲಿ ಗೌರವಾಧರಗಳಿಂದ ಪೂಜನೀಯ ಸ್ಥಾನದಲ್ಲಿದ್ದಾರೆ. ಇವರು ಭಗವಾನ್ ಕುಂದ ಕುಂದಾಚಾರ್ಯರ ಶಿಷ್ಯರಯ. ಅವರಿಂದ ಸಂಪೂರ್ಣ ಆಗಮ ಜ್ಞಾನವನ್ನು ಪಡೆದುಕೊಂಡರು. ಆ ಜ್ಞಾನವನ್ನೇ ಸೂತ್ರ ಬದ್ಧಗೊಳಿಸಿ 'ತತ್ತ್ವಾರ್ಥಸೂತ್ರ' ಎಂಬ ಗ್ರಂಥವನ್ನು ರಚಿಸಿದರು.ಇದು ಸೂತ್ರ ಬದ್ಧವಾದ ಜೈನ ಸಿದ್ಧಾಂತದ ಪ್ರಥಮ ಕೃತಿಯಾಗಿದೆ. ಈ ಗ್ರಂಥವನ್ನು ಶ್ವೇತಾಂಬರ ಮತ್ತು ದಿಗಂಬರ ಈ ಎರಡು ಸಂಪ್ರದಾಯದ ಜೈನರು ಮನ್ನಿಸುತ್ತಾರೆ. ಶ್ವೇತಾಂಬರರು ಇವರನ್ನು ಉಮಾ ಸ್ವಾತಿಗಳೆಂದು ಕರೆಯುತ್ತಾರೆ. ಜೈನ ಧರ್ಮದ ಈ ಎರಡು ಸಂಪ್ರದಾಯದಲ್ಲಿ ಈ ಗ್ರಂಥಕ್ಕೆ ಅನೇಕ ಆಚಾರ್ಯರು ಟೀಕೆಗಳನ್ನು ಬರೆದಿದ್ದಾರೆ. ಇಲ್ಲಿಯವರೆಗೆ ಪ್ರಕಟವಾದ ಗ್ರಂಥಗಳ ಪ್ರಕಾರ ದಿಗಂಬರ ಸಂಪ್ರದಾಯದ ತತ್ತ್ವಾರ್ಥಸುತ್ರದಲ್ಲಿ 357 ಸೂತ್ರಗಳಿವೆ. ಶ್ವೇತಾಂಬರ ಸಂಪ್ರದಾಯದ ಪ್ರಕಾರ 344 ಸೂತ್ರಗಳಿವೆ. ಹದಿಮೂರು ಸೂತ್ರಗಳು ದಿಗಂಬರ ಸಂಪ್ರದಾಯದಲ್ಲಿ ಹೆಚ್ಚಿಗೆ ಇವೆ.

ಭಗವದುಮಾಸ್ವಾಮೀ ವಿರಚಿರ " ತತ್ತ್ವಾರ್ಥ ಸೂತ್ರ" ಒಟ್ಟು ಹತ್ತು ಅಧ್ಯಾಗಳನ್ನು ಒಳಗೊಂಡಿದ್ದು ಇರುತ್ತದೆ. ಹತ್ತು ಅಧ್ಯಾಯಗಳಲ್ಲಿ ಹಲವಾರೂ ಸೂತ್ರಗಳನ್ನು ಒಳಗೊಂಡಿದೆ. ಈ ಸೂತ್ರಗಳಿಗೆ ಸಂಕ್ಷೀಪ್ತ ಅರ್ಥವನ್ನು ಇಲ್ಲಿ ನೀಡಲಾಗಿದೆ.

ಅಧ್ಯಾಯ : ಒಂದು[edit] ಬದಲಾಯಿಸಿ

ಮೋಕ್ಷ ಮಾರ್ಗಸ್ಯ ನೇತಾರಂ ಭೇತ್ತಾರಂ ಕರ್ಮ ಬೋಭೃತಾಂ l

ಜ್ಞಾತಾರಂ ವಿಶ್ವತತ್ವಾನಾಂ ವಂದೇ ತದ್ಗುಣಲಬ್ಧಯೇ ll

ಅರ್ಥ :- ಗ್ರಂಥಾರಂಭದಲ್ಲಿ ಶ್ರೀ ಮಹರ್ಷಿಗಳು ಮಂಗಲಾಚರಣೆಯನ್ನು ಮಾಡುತ್ತ ಮೋಕ್ಷ ಮಾರ್ಗದ ಉಪದೇಶಕರಾದ, ಕರ್ಮಪರ್ವತಗಳನ್ನು ಭೇಧಿಸುವ ವಿಶ್ವದ ಸಮಸ್ತ ಚರಾಚರ ತತ್ವಳನ್ನಿರಿಯುವ ಶ್ರೀ ಆಪ್ತರನ್ನು ಅವರ ಗುಣಗಳ ಪ್ರಾಪ್ತಿಗೋಸ್ಕರ ನಮಸ್ಕರಿಸುತ್ತೇನೆಂದು ಹೇಳುತ್ತಾರೆ.

೧. ಸಮ್ಯಕ್ ದರ್ಶನ-ಜ್ನಾನ-ಚಾರಿತ್ತಾಣಿ ಮೋಕ್ಷ ಮಾರ್ಗಃ

ಅರ್ಥ : ಸಮ್ಯಗ್ದರ್ಶನ, ಸಮ್ಯಗ್ ಜ್ಞಾನ, ಮತ್ತು ಸಮ್ಯಕ್ ಚಾರಿತ್ರ ಈ ಮೂರು ಕೂಡಿಯೇ ಮೋಕ್ಷ ಪ್ರಾಪ್ತಿಯ ಉಪಾಯವು.ಯಥಾರ್ಥ ದೇವ ಗುರು ಶಾಸ್ತ್ರಗಳಿಂದ ಪ್ರತಿಪಾದಿತವಾದ ತತ್ವದ ಮೇಲೆ ಶ್ರದ್ಧೆ ಇಡುವದಕ್ಕೆ ಸಮ್ಯಗ್ದರ್ಶನವೆಂದೂ, ಸಂಶಯ ವಿಪರ್ಯಯ ಮತ್ತು ಅನಧ್ಯವಸಾಯ ರಚಿತವಾದ ಜ್ಞಾನಕ್ಕೆ ಸಮ್ಯಗ್ ಜ್ಞಾನವೆಂದೂ, ಸಂಸಾರಕ್ಕೆ ಕಾರಣವಾದ ಕಾಮಕ್ರೊಧಾದಿಗಳಿಂದ ದೂರವಾಗುವದಕ್ಕೆ ಸಮ್ಯಕ್ ಚಾರಿತ್ರವೆಂದೂ ಹೆಸರು.

ಸಮ್ಯಗ್ದರ್ಶನ

೨. ತತ್ವಾರ್ಥ ಶ್ರದ್ಧಾನಂ ಸಮ್ಯಕ್ ದರ್ಶನಮ್.

ಅರ್ಥ:- (ತತ್ವ) ವಸ್ತು ಸ್ವರೂಪದಿಂದ ಯುಕ್ತವಾದ ಜೀವಾದಿ ಪದಾರ್ಥಗಳ ಮೇಲೆ ಶ್ರದ್ಧೆಯನ್ನಿಡುವದಕ್ಕೆ ಸಮ್ಯಗ್ದರ್ಶನವೆಂದು ಹೇಳುತ್ತಾರೆ. ಜೀವಾಧಿ ಪದಾರ್ಥಗಳೆ ಸಪ್ತ ತತ್ವಗಳ ರೂಪದಿಂದ ವರ್ಣಿಸಲ್ಪಟ್ಟಿವೆ. ಅವುಗಳ ಸ್ವರೂಪಗಳಲ್ಲಿ ಶಾಸ್ತ್ರಕಾರರು

ಹೇಳಿದಂತೆ ಶ್ರದ್ಧೆಯನ್ನಿಡುವದಕ್ಕೆ ಸಮ್ಯಗ್ದರ್ಶನವೆಂದು ಹೇಳುತ್ತಾರೆ.


ಸಮ್ಯಗ್ದರ್ಶನ ಭೇದ

೩. ತತ್-ನಿಸರ್ಗಾತ್ ಅಧಿಗಮಾತ್ ವಾ

ಅರ್ಥ:- ಸಮ್ಯಗ್ದರ್ಶನವು ನಿಸರ್ಗ ಅಂದರೆ ಸ್ವಭಾವದಿಂದ ಮತ್ತು ಅಧಿಗಮ ಅಂದರೆ ಪರೋಪದೇಶದಿಂದ ಉತ್ಪನ್ನವಾಗುತ್ತದೆ. ಹೀಗೆ ಉತ್ಪತ್ತಿಯು ಅಪೇಕ್ಷೆಯಿಂದ ಸಮ್ಯಗ್ದರ್ಶನವು ಎರಡು ಭೇದದಿಂದ ಯುಕ್ತವಾಗಿದೆ. ತನ್ನ ಸ್ವಭಾವದಿಂದ ಅಂದರೆ ಪರೋಪದೇಶವಿಲ್ಲದೇನೆಯೇ ಪೂರ್ವಭವದ ಸಂಸ್ಕಾರದಿಂದ ಉತ್ಪನ್ನವಾಗುವ ಸಮ್ಯಗ್ದರ್ಶನಕ್ಕೆ ನಿಸರ್ಗಜವೆಂದೂ, ಪರೋಪದೇಶಾದಿಕಾರನಗಳಿಂದ ಉತ್ಪನ್ನವಾಗುವ ಸಮ್ಯಗ್ದರ್ಶನಕ್ಕೆ ಅಧಿಗಮಜ ಸಮ್ಯಗ್ದರ್ಶನವೆಂದೂ ಹೇಳುವರು.


ತತ್ವ ಭೇದ

೪. ಜೀವ-ಅಜೀವ-ಆಸ್ರವ-ಬಂಧ-ಸಂವರ-ನಿರ್ಜರಾ-ಮೋಕ್ಷಾಃ-ತತ್ವಂ

ಅರ್ಥ:- ಜೀವ,ಅಜೀವ,ಆಸ್ರವ,ಬಂಧ,ಸಂವರ,ನಿರ್ಜರಾ,ಮೋಕ್ಷ, ಇವು ಏಳು ತತ್ವಗಳು. ಈ ಏಳು ತತ್ವಗಳ ವಿಸ್ತಾರವಾದ ಸ್ವರೂಪವನ್ನು ಮುಂದಿನ ಅಧ್ಯಾಯಗಳಲ್ಲಿ ವರ್ಣಿಸಲಾಗಿದೆ.ಆದರೂ ಇಲ್ಲಿ ಸಂಕ್ಷೇಪವಾಗಿ ಹೇಳುವೇವು.

ಜೀವ:- ಜ್ಞಾನದರ್ಶನ ಸ್ವರೂಪ ಚೈತನ್ಯದಿಂದ ಯುಕ್ತವಾದ ದ್ರವ್ಯಕ್ಕೆ ಜೀವನೆಂದು ಹೆಸರು.

ಅಜೀವ:- ಚೈತನ್ಯ ರಹಿತವಾದ ದ್ರವ್ಯಕ್ಕೆ ಅಜೀವವೆಂದು ಹೇಳುತ್ತಾರೆ.

ಆಸ್ರವ:- ಕರ್ಮಗಳ ಗಮನಕ್ಕೆ ಆಸ್ರವವೆಂದು ಹೆಸರು.

ಬಂಧ:- ಆತ್ಮ ಪ್ರದೇಶದೊಡನೆ ಕರ್ಮಪ್ರದೇಶಗಳ ಸಂಬಂಧವಾಗುವದಕ್ಕೆ ಬಂಧವೆನ್ನುತ್ತಾರೆ.

ಸಂವರ:- ಅಸ್ರವದ ನಿರೋಧಕ್ಕೆ(ತಡೆಯುವದಕ್ಕೆ) ಸಂವರವೆನ್ನುವರು.

ನಿರ್ಜರಾ:- ಆತ್ಮಪ್ರದೇಶದಿಂದ ಪೂರ್ವಸಂಚಿತ ಕರ್ಮಗಳು ಏಕದೇಶವಾಗಿ ಹೊರಗೆ ಹೋಗುವದಕ್ಕೆ ನಿರ್ಜರೆಯೆಂದು ಹೆಸರು.

ಮೋಕ್ಷ:- ಸಮಸ್ತ ಕರ್ಮಗಳು ಆತ್ಮ ಪ್ರದೇಶದಿಂದ ಬಿಡುಗಡಯಾಗುವದಕ್ಕೆ ಅಥವಾ ಆತ್ಮನು ತನ್ನ ಕರ್ಮಗಳಿಂದ ಪೂರ್ಣರೂಪವಾಗಿ ಬಿಡುಗಡೆಯನ್ನು ಹೊಂದುವದಕ್ಕೆ ಮೋಕ್ಷವೆಂದು ಹೆಸರು.


ಸಪ್ತ ತತ್ವ ಮತ್ತು ಸಮ್ಯಗ್ದರ್ಶನಾದಿಗಳನ್ನು ತಿಳಿಯುವ ಪಾಯ

೫. ನಾಮ ಸ್ಥಾಪನಾ-ದ್ರವ್ಯ-ಭಾವತಃ-ತತ್-ನ್ಯಾಸಃ

ಅರ್ಥ:- ನಾಮ, ಸ್ಥಾಪನಾ, ದ್ರವ್ಯ,ಮತ್ತು ಭಾವಗಳಿಂದ  ಸಪ್ತತತ್ವಗಳ ಮತ್ತು ಸಮ್ಯಗ್ದರ್ಶನಾದಿಗಳ ಜ್ಞಾನವು ಆಗುತ್ತದೆ. ಇವುಗಳಿಗೆ ನಿಕ್ಷೇಪಗಳೆಂದು ಹೇಳುತ್ತಾರೆ.

ನಾಮ:- ಗುಣ, ಜಾತಿ, ದ್ರವ್ಯ ಆದಿಗಳ ಅಪೇಕ್ಷೆ ಇಲ್ಲದೇನೆಯೇ ಲೋಕವ್ಯವಹಾರವನ್ನು ನಡೆಸುವದಕ್ಕೋಸ್ಕರ ಹೆಸರನ್ನಿಡುವದಕ್ಕೆ ನಾಮ ನಿಕ್ಷೇಪವೆಂದು ಹೆಸರು.

ದ್ರವ್ಯ:- ಭೂತ ಮತ್ತು ಭವಿಷ್ಯತ್ ಪಯಾಯಗಳ ಅಪೇಕ್ಷೇಯಿಂದ ವರ್ತಮಾನ ಕಾಲದಲ್ಲಿ ಹೇಳುವದಕ್ಕೆ ದ್ರವ್ಯ ನಿಕ್ಷೇಪವೆಂದು ಹೆಸರು. ಮುಂದೆ ಆಗುವ ರಾಜನಿಗೆ ಈಗಾಗಲೇ ರಾಜನೆನ್ನುವದು. ಅಥವಾ ಹಿಂದೆ ಅಧ್ಯಾಪಕ ವೃತ್ತಿಯಲ್ಲಿದ್ದವನಿಗೆ ಈಗಲೂ ಅಧ್ಯಾಪಕನೆನ್ನುವದು ಇದು ದ್ರವ್ಯ ನಿಕ್ಷೇಪವು.

ಭಾವ:- ವರ್ತಮಾನ ಪರ್ಯಾಯವನ್ನೇ ಅವಲಂಬಿಸಿ ಕಥನ ಮಾಡುವದಕ್ಕೆ ಭಾವ ನಿಕ್ಷೇಪವೆಂದು ಹೆಸರು. ಉದಾಹರಣೆಗೆ ರಾಜಪುತ್ರನಿಗೆ ಯುವ ರಾಜ, ಓದಿಸುತ್ತಿರುವಾಗ ಅಧ್ಯಾಪಕ, ದಾನ ಕೊಡುತ್ತಿರುವಾಗ ದಾತಾ ಇತ್ಯಾದಿ.


ತತ್ವಗಳನ್ನು ತಿಳಿಯುವ ಇತರ ಉಪಾಯ

೬. ಪ್ರಮಾಣ-ನಯೈಃ-ಅಧಿಗಮಃ

ಅರ್ಥ:- ಪ್ರಮಾಣ ಮತ್ತು ನಯಗಳಿಂದ ತತ್ವಗಳ ಪರಿಜ್ಞಾನವಾಗುತ್ತದೆ. ಪಧಾರ್ಥಗಳ ಸರ್ವದೇಶವನ್ನು ತಿಳಿಯುವ ಜ್ಞಾನಕ್ಕೆ ಪ್ರಮಾನವೆಂದೂ ಏಕದೇಶವನ್ನು ತಿಳಿಯುವ ಜ್ಞಾನಕ್ಕೆ ನಯವೆಂದೂ ಹೆಸರು. ಪ್ರಮಾನವು ಪ್ರತ್ಯಕ್ಷ ಪ್ರಮಾನವೆಂದೂ ಪರೋಕ್ಷ ಪ್ರಮಾಣವೆಂದೂ ಎರಡು ಭೇದಗಳಾಗಿ ವಿಭಾಗಿಸಲ್ಪಟ್ಟಿವೆ.ನಯವು ದ್ರವ್ಯಾರ್ಥಿಕ ನಯವೆಂದೂ ಪರ್ಯಾಯಾರ್ಥಿಕ ನಯವೆಂದೂ ಎರಡು ಪ್ರಕಾರವಾಗಿ ವಿಭಾಗಿಸಲ್ಪಟ್ಟಿದೆ.