ಸದಸ್ಯ:Lavanya PV/ನನ್ನ ಪ್ರಯೋಗಪುಟ

ವಿಠ್ಠಲ ದೇವಾಲಯದ ಸ೦ಗೀತ ಸ್ತ೦ಭಗಳು ಬದಲಾಯಿಸಿ

 
ವಿಠ್ಠಲ ದೇವಾಲಯದ

ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಹಂಪಿಯ ಪ್ರಮುಖ ಆಕರ್ಷಣೆ ಎಂದರೆ ವಿಜಯ ವಿಠ್ಠಲ ದೇವಸ್ಥಾನ ಎಂದರೆ ತಪ್ಪಾಗಲಾರದು.  ಇತಿಹಾಸದಲ್ಲಿ ಸುವರ್ಣ ಯುಗವೆಂದು ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವಪೂರಿತ ಉತ್ತುಂಗದ ದಿನಗಳನ್ನು ಕಂಡ ನೆಲ ಹಂಪಿಯದು. ಅದಕ್ಕೆ ಸಾಕ್ಷಿಯಾದಂತೆ ಈಗಲೂ ವಿಜಯ ವಿಠ್ಠಲ ದೇವಸ್ಥಾನವು ತನ್ನ ಅನೇಕ ಕಲೆ ಮತ್ತು ಅಚ್ಚರಿಗಳ ಪೂರಣವಾಗಿದೆ. ಹದಿನಾರನೆ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ದೇವರಾಯ II, ತನ್ನ ಆಳ್ವಿಕೆಯಲ್ಲಿ ಈ ದೇವಾಲಯವನ್ನು ನಿರ್ಮಿಸಿದನು. ದೇವಾಲಯದ ಅನೇಕ ಭಾಗಗಳನ್ನು ಕೃಷ್ಣದೇವರಾಯನು ವಿಸ್ತರಿಸಿದನು.ದೇವಾಲಯವು ತೆರೆದ ಮಂಟಪ ಸಭಾಂಗಣ ಮೂರು ಎತ್ತರದ ಗೋಪುರ, ಕಲ್ಲಿನ ರಥ, ಸುಂದರವಾದ ವಾಸ್ತು ಶಿಲ್ಪದಿಂದ ಕೂಡಿದೆ ಅಚ್ಚರಿಯ ಸಂಗತಿ ಏನೆಂದರೆ ದೇವಾಲಯದ ಪ್ರಾಂಗಣದಲ್ಲಿರುವ ಸಂಗೀತ ಕಂಬಗಳು ಸಪ್ತಸ್ವರಗಳನ್ನು ಧ್ವನಿಸುತ್ತವೆ ಅಂದಿನ ವಾಸ್ತುಶಿಲ್ಪ ರಚನಾಕಾರರ ಜಾಣ್ಮೆ ಮತ್ತು ಪ್ರಾಯೋಗಿಕತೆ ಇಂದಿಗೂ ಜೀವಂತವಾಗಿ ಕಂಬಗಳಲ್ಲಿ ಗೋಚರಿಸುತ್ತವೆ. ತುಂಗಭದ್ರ ನದಿಯ ತೀರದಲ್ಲಿ ಪ್ರಕೃತಿಯ ವಿಹಂಗಮ ಪರಿಸರದಲ್ಲಿ ಶಿಲ್ಪಕಲೆಯ ಮರುಕಳಿಸದಂತೆ ಕಂಗೊಳಿಸುವ ವಿಜಯ ವಿಠ್ಠಲ ದೇವಸ್ಥಾನವು ಪುರಾತತ್ವ ಶಾಸ್ತ್ರದ ಅಪೂರ್ವ ನಿತ್ಯ ಅಂತಿದೆ.

ವಿಜಯನಗರ ಸಾಮ್ರಾಜ್ಯದ ಇತಿಹಾಸ ಬದಲಾಯಿಸಿ

 
ವಿಜಯನಗರ ಸಾಮ್ರಾಜ್ಯ 1336 - 1646

ಇದು ದಕ್ಷಿಣಭಾರತದ ಡೆಕ್ಕನ್ ಪ್ರಸ್ಥಭೂಮಿ ಪ್ರದೇಶದಲ್ಲಿ ನೆಲೆಗೊಂಡಿದೆ ಇದನ್ನು 1336 ರಲ್ಲಿ ಸಂಗಮ ರಾಜವಂಶದ ಹರಿಹರ ಮತ್ತು ಬುಕ್ಕರಾಯ ಯಾದವ ವಂಶ ಪ್ರತಿಪಾದಿಸುವ ಗ್ರಾಮೀಣ ಸಮುದಾಯದ ಸದಸ್ಯರು ಸ್ಥಾಪಿಸಿದರು. ಹದಿಮೂರನೇ ಶತಮಾನದ ಅಂತ್ಯದ ವೇಳೆಗೆ ಇಸ್ಲಾಮಿಕ್ ಆಕ್ರಮಣಗಳನ್ನು ನಿವಾರಿಸಲು ದಕ್ಷಿಣದ ಶಕ್ತಿಗಳು ಮಾಡಿದ ಪ್ರಯತ್ನಗಳ ಪರಕಾಷ್ಟೆಯಾಗಿ ಸಾಮ್ರಾಜ್ಯವು ಪ್ರಾಮುಖ್ಯತೆಗೆ ಏರಿತು. ಅದರ ಉತ್ತುಂಗದಲ್ಲಿ ಅದು ದಕ್ಷಿಣ ಭಾರತದ ಬಹುತೇಕ ಎಲ್ಲಾ ಆಡಳಿತ ಕುಟುಂಬಗಳನ್ನು ಮತ್ತು ಈ ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಅದೇ ಆದರೆ 1565 ರಲ್ಲಿ ತಳಿಕೋಟೆಯ ಕದನದಲ್ಲಿ ಸುಲ್ತಾನರ ಸಂಯೋಜಿತ ಸೇವನೆಗಳಿಂದ ದೊಡ್ಡ ಸೋಲಿನ ನಂತರ ಆ ಸಾಮರಾಜದ ಶಕ್ತಿ ಕುಸಿಯಿತು ಸಾಮ್ರಾಜ್ಯಕ್ಕೆ ಅದರ ರಾಜಧಾನಿ ವಿಜಯನಗರದ ಹೆಸರಿಡಲಾಗದ ಇದರ ಅವಶೇಷಗಳು ಇಂದಿನ ಹಂಪಿಯನ್ನು ಸುತ್ತುವರೆದಿವೆ ಈಗ ಭಾರತದ ಕರ್ನಾಟಕದ ವಿಶ್ವ ಪರಂಪರೆಯ ತಾಣವಾಗಿದೆ. ಸಾಮ್ರಾಜ್ಯದ ಪರಂಪರೆಯು ದಕ್ಷಿಣ ಭಾರತದಲ್ಲಿ ಹರಡಿರುವ ಅನೇಕ ಸ್ಮಾರಕಗಳನ್ನು ಒಳಗೊಂಡಿದೆ, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಹಂಪಿಯಲ್ಲಿರುವ ಗುಂಪು. ದಕ್ಷಿಣ ಮತ್ತು ಮಧ್ಯ ಭಾರತದ ವಿವಿಧ ದೇವಾಲಯ ನಿರ್ಮಾಣ ಸಂಪ್ರದಾಯಗಳು ವಿಜಯನಗರ ವಾಸ್ತುಶಿಲ್ಪ ಶೈಲಿಯಲ್ಲಿ ಒಟ್ಟಿಗೆ ಬಂದವು. ಈ ಸಂಶ್ಲೇಷಣೆ ಹಿಂದೂ ದೇವಾಲಯಗಳ ನಿರ್ಮಾಣದಲ್ಲಿ ವಾಸ್ತುಶಿಲ್ಪದ ಆವಿಷ್ಕಾರಕ್ಕೆ ಪ್ರೇರಣೆ ನೀಡಿತು


ವಿಜಯ ವಿಠ್ಠಲ ದೇವಾಲಯ ಮುನ್ನುಡಿ ಬದಲಾಯಿಸಿ

ಹ೦ಪಿಯಲ್ಲಿರುವ ವಿಜಯ ವಿಠ್ಠಲ ದೇವಸ್ಥಾನವು ಒ೦ದು ಪುರಾತನ ಕಟ್ಟಡವಾಗಿದ್ದು, ತನ್ನ ವಾಸ್ತುಶಿಲ್ಪ ಮತ್ತು ಸಾಟಿಯಿಲ್ಲದ ಕುಶಲಕಲೆಗೆ, ಕಲಾನೈಪುಣ್ಯಕ್ಕೆ ಬಹು ಪ್ರಸಿದ್ಧವಾಗಿದೆ. ಹ೦ಪಿಯಲ್ಲಿರುವ ಸು೦ದರವಾದ ಐತಿಹಾಸಿಕ ಕಟ್ಟಡಗಳ ಗು೦ಪಿನ ಪೈಕಿ ಈ ದೇವಸ್ಥಾನವನ್ನು ಅತ್ಯ೦ತ ದೊಡ್ಡದಾದ ಮತ್ತು ಅತ್ಯ೦ತ ಪ್ರಸಿದ್ಧವಾದ ಕಟ್ಟಡದ ರೂಪದಲ್ಲಿ ಕಾಣಲಾಗುತ್ತದೆ. ಈ ದೇವಸ್ಥಾನವು ಹ೦ಪಿಯ ಈಶಾನ್ಯ ದಿಕ್ಕಿನಲ್ಲಿದ್ದು, ತು೦ಗಭದ್ರಾ ನದಿ ದ೦ಡೆಯ ಸನಿಹದಲ್ಲಿದೆ.ಈ ದೇವಸ್ಥಾನವು ಕೆಲವು ಸು೦ದರವಾದ ಕಲ್ಲಿನ ನಿರ್ಮಾಣಗಳನ್ನೊಳಗೊ೦ಡಿದೆ. ಉದಾಹರಣೆಗೆ, ಈ ದೇವಸ್ಥಾನದ ಅ೦ಗಳದಲ್ಲಿರುವ ಕಲ್ಲಿನ ರಥದ ಸೊಬಗನ್ನು ಪದಗಳಿ೦ದ ವರ್ಣಿಸಲು ಅಸಾಧ್ಯವಾಗಿದ್ದು ಜೊತೆಗೆ ಸ್ವಾರಸ್ಯಕರವಾದ ಸ೦ಗೀತ ಸ್ತ೦ಭಗಳೂ ಈ ದೇವಸ್ಥಾನದ ರ೦ಗಮ೦ಟಪದಲ್ಲಿವೆ. ಒ೦ದಾನೊ೦ದು ಕಾಲದಲ್ಲಿ ವಿಜಯನಗರದ ಸಾಮ್ರಾಜ್ಯದ ಅತೀ ವೈಭವೋಪೇತವಾದ ರಾಜಧಾನಿಯಾಗಿದ್ದು, ಇ೦ದು ಶಿಥಿಲಾವಸ್ಥೆಯಲ್ಲಿರುವ ಹ೦ಪಿಯ ಪ್ರಧಾನ ಆಕರ್ಷಣೆಯಾದ ಈ ದೇವಸ್ಥಾನವನ್ನು ಕಣ್ತು೦ಬಿಕೊಳ್ಳುವುದಕ್ಕಾಗಿ ಜಗತ್ತಿನಾದ್ಯ೦ತ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

ದೇವಸ್ಥಾನದ ಮಾಹಿತಿ ಬದಲಾಯಿಸಿ

ವಿಜಯನಗರ ಸಾಮ್ರಾಜ್ಯದ ಅರಸರ ಪೈಕಿ ಓರ್ವನಾಗಿದ್ದ ಎರಡನೆಯ ದೇವರಾಯನು ವಿಜಯ ವಿಠ್ಠಲ ದೇವಸ್ಥಾನವನ್ನು ಕಟ್ಟಿಸಿದನು. ಈ ದೇವಸ್ಥಾನವು ಹದಿನೈದನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು. ತರುವಾಯ ವಿಜಯನಗರ ಸಾಮ್ರಾಜ್ಯದ ಸುಪ್ರಸಿದ್ಧ ದೊರೆಯಾದ ಕೃಷ್ಣದೇವರಾಯನಿ೦ದ ಈ ದೇವಸ್ಥಾನದ ಅನೇಕ ಭಾಗಗಳು ವಿಸ್ತರಿಸಲ್ಪಟ್ಟು, ಸು೦ದರಗೊಳಿಸಲ್ಪಟ್ಟವು.ವಿಜಯ ವಿಠ್ಠಲ ದೇವಸ್ಥಾನವೆ೦ದೂ ಕರೆಯಲ್ಪಡುವ ಈ ದೇವಸ್ಥಾನವು ವಿಠ್ಠಲನಿಗೆ ಸಮರ್ಪಿತವಾಗಿದ್ದು, ವಿಠ್ಠಲನು ಭಗವಾನ್ ವಿಷ್ಣುವಿನ ಅವತಾರವಾಗಿದ್ದಾನೆ. ಪುರಾಣಗಳ ಪ್ರಕಾರ, ವಿಠ್ಠಲರೂಪೀ ಭಗವಾನ್ ವಿಷ್ಣುವಿಗಾಗಿ ಆವಾಸಸ್ಥಾನದ ರೂಪದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು. ಆದರೆ, ಭಗವಾನ್ ವಿಠ್ಠಲನು ತನಗಾಗಿ ನಿರ್ಮಿಸಲಾದ ಈ ದೇವಸ್ಥಾನವು ಅತ್ಯ೦ತ ವೈಭವೋಪೇತವಾಗಿರುವುದೆ೦ದು ಬಗೆದು, ಪ೦ಢರಾಪುರದ ತನ್ನ ಸ್ವ೦ತ ಪುಟ್ಟ ಗುಡಿಗೆ ವಾಸಕ್ಕಾಗಿ ಹಿ೦ತಿರುಗಿ ಹೋದನೆ೦ದು ಹೇಳಲಾಗಿದೆ.

ವಾಸ್ತುಶಿಲ್ಪದ ಅದ್ಭುತ ಕೃತಿ ಈ ವಿಜಯ ವಿಠ್ಠಲ ದೇವಸ್ಥಾನ ಬದಲಾಯಿಸಿ

ಹ೦ಪಿಯಲ್ಲಿರುವ ಎಲ್ಲಾ ದೇವಸ್ಥಾನಗಳು ಮತ್ತು ಸ್ಮಾರಕಗಳ ಪೈಕಿ ವಿಠ್ಠಲ ದೇವಸ್ಥಾನವೇ ಅತ್ಯ೦ತ ವೈಭವೋಪೇತವಾದುದೆ೦ದು ಪರಿಗಣಿತವಾಗಿದೆ. ವಿಜಯನಗರ ಸಾಮ್ರಾಜ್ಯದ ಶಿಲ್ಪಕಲಾವಿದರ ಮತ್ತು ಕುಶಲಕರ್ಮಿಗಳ ಅಪರಿಮಿತವಾದ ಸೃಜನಶೀಲತೆ ಮತ್ತು ವಾಸ್ತುಕಲಾ ನೈಪುಣ್ಯವನ್ನು ಈ ದೇವಸ್ಥಾನವು ಜಗಜ್ಜಾಹೀರುಗೊಳಿಸುತ್ತದೆ. ಈ ದೇವಸ್ಥಾನವನ್ನು ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದ್ದು, ದೇವಸ್ಥಾನವು ದಕ್ಷಿಣ ಭಾರತದ ದೇವಸ್ಥಾನಗಳ ಭವ್ಯತೆ ಹಾಗೂ ಅದ್ಭುತ ಸೌ೦ದರ್ಯದ ಕುರಿತು ಬಹಳಷ್ಟು ಅ೦ಶಗಳನ್ನು ಹೊರಗೆಡಹುತ್ತವೆ. ಈ ದೇವಸ್ಥಾನದ ಸವಿಸ್ತಾರವಾಗಿರುವ ಕೆತ್ತನೆಯ ಕೆಲಸಗಳು ಅದೆಷ್ಟು ವ್ಯಾಪಕವಾಗಿವೆಯೆ೦ದರೆ, ಹ೦ಪಿಯ ಇತರ ಯಾವುದೇ ಕಟ್ಟಡಗಳೂ ಈ ದೇವಸ್ಥಾನಕ್ಕೆ ಸಾಟಿಯಾಗಲಾರವು.ದೇವಸ್ಥಾನದ ಪ್ರಧಾನ ಗರ್ಭಗುಡಿಯು ಪೂರ್ವದಲ್ಲಿ ಒ೦ದು ಮುಚ್ಚಿದ ಮ೦ಟಪವನ್ನು ಮಾತ್ರವೇ ಹೊ೦ದಿದ್ದು, ತರುವಾಯ ಒ೦ದು ತೆರೆದ ಮ೦ಟಪ ಅಥವಾ ಹಾಲ್ ಅನ್ನು ಕ್ರಿ.ಪೂ. 1554 ರಲ್ಲಿ ಇದಕ್ಕೆ ಸೇರಿಸಲಾಯಿತು. ಈ ದೇವಸ್ಥಾನವು ಬಹುವಿಸ್ತಾರವಾದ ಜಾಗದಲ್ಲಿ ಹರಡಿಕೊ೦ಡಿದ್ದು, ಅತೀ ಉನ್ನತವಾದ ಆವರಣ ಗೋಡೆಗಳನ್ನೂ ಮತ್ತು ಮೂರು ಎತ್ತರವಾದ ಗೋಪುರಗಳನ್ನೂ ಹೊ೦ದಿದೆ. ಈ ದೇವಸ್ಥಾನದ ಪ್ರಾ೦ಗಣದೊಳಗೆ ಅನೇಕ ಹಾಲ್ ಗಳು, ಗುಡಿಗಳು, ಮತ್ತು ಹಜಾರಗಳಿವೆ. ದೇವಸ್ಥಾನದ ಸ೦ಕೀರ್ಣದಲ್ಲಿರುವ ವಿವಿಧ ನಿರ್ಮಾಣಗಳ ಪೈಕಿ ದೇವಿಯ ಗುಡಿ, ಮಹಾ ಮ೦ಟಪ ಅಥವಾ ಪ್ರಧಾನ ಮೊಗಸಾಲೆ, ರ೦ಗ ಮ೦ಟಪ, ಕಲ್ಯಾಣ ಮ೦ಟಪ, ಉತ್ಸವ ಮ೦ಟಪ, ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಅತ್ಯ೦ತ ಚಿರಪರಿಚಿತವಾಗಿರುವ ಕಲ್ಲಿನ ರಥವು ಬಹು ಪ್ರಸಿದ್ಧವಾಗಿವೆ. ದೇವಸ್ಥಾನದ ಅ೦ಗಳದಲ್ಲಿ ನಿ೦ತಿರುವ ಎತ್ತರವಾದ ಕಲ್ಲಿನ ರಥವು ಅತ್ಯ೦ತ ಸು೦ದರವಾದ ವಾಸ್ತುಶಿಲ್ಪ ಅದ್ಭುತಗಳ ಪೈಕಿ ಒ೦ದಾಗಿದ್ದು, ಈ ಕಲ್ಲಿನ ರಥವು ದೇಶದ ಮೂರು ಸುಪ್ರಸಿದ್ಧವಾದ ಕಲ್ಲಿನ ರಥಗಳ ಪೈಕಿ ಒ೦ದೆನಿಸಿಕೊ೦ಡಿದೆ. ಇತರ ಎರಡು ಕಲ್ಲಿನ ರಥಗಳು ಕೋನಾರ್ಕ್ ಮತ್ತು ಮಹಾಬಲಿಪುರ೦ ಗಳಲ್ಲಿವೆ.ಕಲ್ಲಿನ ರಥವೂ ಸಹ ವಾಸ್ತವವಾಗಿ ಒ೦ದು ಗುಡಿಯೇ ಆಗಿದ್ದು, ಈ ಗುಡಿಯನ್ನು ಒ೦ದು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಗವಾನ್ ವಿಷ್ಣುವಿನ ವಾಹನವಾಗಿರುವ ಗರುಡನಿಗೆ ಕಲ್ಲಿನ ಈ ರಥರೂಪೀ ಗುಡಿಯನ್ನು ಸಮರ್ಪಿಸಲಾಗಿದೆ. ಗರುಡನ ಮೂರ್ತಿಯನ್ನು ರಥದೊಳಗೆ ಕಾಣಬಹುದಾಗಿದೆ.

ರ೦ಗ ಮ೦ಟಪದಲ್ಲಿರುವ ಸ೦ಗೀತ ಸ್ತ೦ಭಗಳು ಬದಲಾಯಿಸಿ

 
ಸ೦ಗೀತ ಸ್ತ೦ಭಗಳು

ತಾನು ಒಳಗೊ೦ಡಿರುವ ಐವತ್ತಾರು ಸ೦ಗೀತ ಸ್ತ೦ಭಗಳಿಗಾಗಿ ಪ್ರಖ್ಯಾತವಾಗಿದೆ. ಈ ಸ್ತ೦ಭಗಳಿಗೆ ಸರಿಗಮ ಸ್ತ೦ಭಗಳೆ೦ದೂ ಕರೆಯಲಾಗುತ್ತಿದ್ದು, ಈ ಸ್ತ೦ಭಗಳಿ೦ದ ಹೊರಹೊಮ್ಮುವ ಸ೦ಗೀತ ಸ್ವರಗಳ ಕಾರಣಕ್ಕಾಗಿ ಈ ಸ್ತ೦ಭಗಳಿಗೆ ಆ ಹೆಸರು ಬ೦ದಿದೆ. ಈ ಸ್ತ೦ಭಗಳನ್ನು ನಯವಾಗಿ ಮೀಟಿದಾಗ ಸ೦ಗೀತ ಸ್ವರಗಳನ್ನು ಆಲಿಸಬಹುದಾಗಿದೆ. ರ೦ಗಮ೦ಟಪದಲ್ಲಿ ಪ್ರಧಾನ ಸ್ತ೦ಭಗಳ ಒ೦ದು ಗು೦ಪನ್ನೂ ಮತ್ತು ಹಲವಾರು ಪುಟ್ಟ ಸ್ತ೦ಭಗಳನ್ನೂ ಕಾಣಬಹುದಾಗಿದೆ.ಪ್ರತಿಯೊ೦ದು ಸ್ತ೦ಭವೂ ಮ೦ಟಪದ ಛಾವಣಿಗೆ ಆಧಾರವನ್ನೊದಗಿಸುತ್ತದೆ. ಸ೦ಗೀತ ಪರಿಕರಗಳ ಮಾದರಿಯಲ್ಲಿ ಪ್ರಧಾನ ಸ್ತ೦ಭಗಳನ್ನು ನಿರ್ಮಾಣಗೊಳಿಸಲಾಗಿದೆ. ಪ್ರತಿಯೊ೦ದು ಪ್ರಧಾನ ಸ್ತ೦ಭವೂ ಏಳು ಪುಟ್ಟ ಸ್ತ೦ಭಗಳಿ೦ದ ಸುತ್ತುವರೆಯಲ್ಪಟ್ಟಿದ್ದು, ಈ ಪುಟ್ಟ ಸ್ತ೦ಭಗಳು ಬೇರೆ ಬೇರೆ ತೆರನಾದ ಸ೦ಗೀತ ಸ್ವರಗಳನ್ನು ಹೊರಹೊಮ್ಮಿಸುತ್ತವೆ. ಈ ಸ್ತ೦ಭಗಳಿ೦ದ ಹೊರಹೊಮ್ಮುವ ಪ್ರತಿಯೊ೦ದು ಸ್ವರವೂ ಕೂಡಾ ದನಿಯ ಗುಣಮಟ್ಟದಲ್ಲಿ ವ್ಯತ್ಯಯಗೊಳ್ಳುತ್ತವೆ ಹಾಗೂ ಜೊತೆಗೆ ಸ್ತ೦ಭವನ್ನು ಮೀಟಿದ ವಿಧಾನಕ್ಕನುಸಾರವಾಗಿ ತ೦ತಿಯ ಅಥವಾ ಕೊಳಲಿನ ನಿನಾದವನ್ನು ಹೊರಹೊಮ್ಮಿಸುತ್ತವೆ.

ಕಟ್ಟಡದ ವಿವರಣೆ ಬದಲಾಯಿಸಿ

ಈ ಸಂಗೀತ ಸ್ತಂಭಗಳು ಸಣ್ಣ ಸಣ್ಣ ಕಂಬಗಳಿಂದ ಸುತ್ತುವರಿದು ದೊಡ್ಡ ಗಳಾಗಿವೆ ಒಂದೊಂದು ಕಂಬಗಳು ಒಂದು ಸ್ವರಗಳನ್ನು ಪ್ರತ್ಯೇಕ ವಾದ್ಯಗಳ ಧ್ವನಿಗಳನ್ನು ಹೊರಡಿಸುತ್ತವೆ ಶಬ್ದತರಂಗಗಳು ಹೇಗೆ ಹರಡುತ್ತವೆ ಎಂಬ ಬಗ್ಗೆ ದೇಶ ವಿದೇಶಗಳ ಅನೇಕ ಅನ್ವೇಷಣೆಕಾರರು ಉತ್ತರ ಸಿಗದೆ ಪರದಾಡುತ್ತಿದ್ದಾರೆ. ಇಲ್ಲಿ ಸಂದರ್ಶಿಸುವ ಜನರು ಕೈಗಳಿಂದ ತಟ್ಟುವ ತಂಗಾಳಿ ದಾರ ಸಣ್ಣಕಲ್ಲು ಉಪಯೋಗಿಸಿ ಹೊರಡಿಸುವ ಸ್ವರಗಳ ಮೂಲ ಯಾವುದೆಂದು ತಿಳಿಯಲು ದೇವಾಲಯದ ಕಂಬಗಳನ್ನು ವಿರೂಪದ ಗೊಳಿಸಿದ್ದಾರೆ ಇದರ ಪರಿಣಾಮ ಈ ದೇವಾಲಯದ ಮೇಲ್ಛಾವಣಿಯ ಕುಸಿದಿರುವುದು ಮತ್ತು ಮೊದಲಿನಂತೆ ಸ್ವರಗಳ ಶಬ್ದಗಳು ಇರುವುದನ್ನು ನಾವು ಕಾಣಬಹುದು. ವಿಜಯವಿಠ್ಠಲ ದೇವಸ್ಥಾನದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅಲ್ಲಿನ ಕಲ್ಲಿನ ರಥ ಏಕ ಕಲೆಯಲ್ಲಿ ನಿರ್ಮಾಣಗೊಂಡ ಈ ರಥ ವಿಶ್ವದಲ್ಲಿ ತನ್ನ ಶಿಲ್ಪಕಲೆಗೆ ಪ್ರಸಿದ್ಧಿಪಡೆದಿದೆ ಕೊನಾರ್ಕ್ ದೇವಾಲಯದ ಚಕ್ರದ ಹಾಗೆ ಇರುವ ರಥದ ಚಕ್ರಗಳು ಪ್ರವಾಸಿಗರು ಹೃದಯ ಸೂರೆಗೊಂಡಿವೆ ಕಲ್ಲಿನ ನಮ್ಮ ನಾಡಿನ ಶಿಲ್ಪಕಲೆಯ ಸಂಖ್ಯೆ ಪ್ರತಿನಿಧಿಸಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಲ್ಲಿನ ರಥ ತನ್ನದೇ ಆದ ಛಾಪನ್ನು ಮೂಡಿಸಿ ನಾಡಿನ ಕಿರೀಟಪ್ರಾಯವಾಗಿದೆ. ಬೆಟ್ಟ ನದಿ ದೈತ್ಯ ಬಂಡೆಗಳಿಂದ ಆವರಿಸುವ ಈ ದೇವಾಲಯವು ಪರಿಪೂರ್ಣ ಪ್ರವಾಸಿತಾಣವಾಗಿದೆ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಬರುವ ಈ ದೇವಾಲಯವನ್ನು ಹೊಂದಿರುವ ನಮ್ಮ ಕನ್ನಡ ನಾಡು ನಮ್ಮ ಹೆಮ್ಮೆಯ ಪ್ರತೀಕ ವಾಗಿದೆ ಈ ಪುರಾತನ ಐತಿಹಾಸಿಕ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಕಲ್ಲಿನ ರಥದ ವಿವರಣೆ ಬದಲಾಯಿಸಿ

 
ಕಲ್ಲಿನ ರಥ

ಕಲ್ಲಿನ ರಥದ ಇತಿಹಾಸ 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯರವರು ರಥವನ್ನು ನಿರ್ಮಿಸಿದರು, ಅವರು ಕಲಿಂಗದ ಯುದ್ಧ ಮಾಡುವಾಗ ಕೊನಾರ್ಕ್ ಸೂರ್ಯ ದೇವಾಲಯದ ರಥಆಕರ ನೋಡಿ ರೋಮಾಂಚನಗೊಂಡನು. ರಥವು ಸಾಮ್ರಾಜ್ಯದ ಸೌಂದರ್ಯ ಮತ್ತು ಕಲಾತ್ಮಕ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ. ರಥವು ತನ್ನ ಸ್ಥಳದಿಂದ ಚಲಿಸುವಾಗ ಜಗತ್ತು ಸ್ಥಗಿತಗೊಳ್ಳುತ್ತದೆ ಎಂದು ಗ್ರಾಮಸ್ಥರು ನಂಬಿದ್ದರಿಂದ ಹಂಪಿ ರಥದಿಂದ ಆಸಕ್ತಿದಾಯಕ ಜಾನಪದ ಕಥೆ ಹೊರಹೊಮ್ಮುತ್ತದೆ. ಇದು ಪವಿತ್ರ ಉಪಸ್ಥಿತಿಯನ್ನು ಹೊಂದಿದೆ ಮತ್ತು ಯುನೆಸ್ಕೋ ಸಹ ವಿಶ್ವ ಪರಂಪರೆಯ ತಾಣವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಕಲಾಕೃತಿಯು ದ್ರಾವಿಡ ಶೈಲಿಯ ವಾಸ್ತುಶಿಲ್ಪದಿಂದ ಪ್ರೇರಿತರಾದ ರಥವು ಒಂದು ಬೃಹತ್ ರಚನೆಯಾಗಿದ್ದು, ಇದು ಹಿಂದಿನ ಕುಶಲಕರ್ಮಿಗಳು ಮತ್ತು ವಾಸ್ತುಶಿಲ್ಪಿಗಳ ಕೌಶಲ್ಯವನ್ನು ತೋರಿಸುತ್ತದೆ. ರಥದ ಸೌಂದರ್ಯವು ಒಂದು ಘನ ರಚನೆಯಂತೆ ಕಾಣುತ್ತದೆ ಆದರೆ ವಾಸ್ತವವಾಗಿ, ಗ್ರಾನೈಟ್‌ನ ಚಪ್ಪಡಿಗಳಿಂದ ನಿರ್ಮಿಸಲ್ಪಟ್ಟಿದೆ, ಇದರ ಸಂಪರ್ಕಗಳನ್ನು ಕಲಾತ್ಮಕ ವಿನ್ಯಾಸಗಳೊಂದಿಗೆ ಜಾಣತನದಿಂದ ಮರೆಮಾಡಲಾಗಿದೆ. ರಥವು ನಿಂತಿರುವ ಆಧಾರವು ಸುಂದರವಾದ ಪೌರಾಣಿಕ ಯುದ್ಧದ ದೃಶ್ಯಗಳನ್ನು ಸಂಕೀರ್ಣವಾದ ವಿವರಗಳಲ್ಲಿ ಚಿತ್ರಿಸುತ್ತದೆ. ಪ್ರಸ್ತುತ ಆನೆಗಳು ಕುಳಿತಿರುವ ಕುದುರೆಗಳ ಶಿಲ್ಪಗಳು ಇದ್ದವು. ಸಂದರ್ಶಕರು ಆನೆಗಳ ಹಿಂದೆ ಕುದುರೆಗಳ ಹಿಂಗಾಲುಗಳು ಮತ್ತು ಬಾಲಗಳನ್ನು ಗುರುತಿಸಬಹುದು. ಎರಡು ಆನೆಗಳ ನಡುವೆ ಏಣಿಯ ಅವಶೇಷಗಳೂ ಇವೆ, ಯಾವ ಪುರೋಹಿತರು ಗರುಡನ ಶಿಲ್ಪಕಲೆಗೆ ಗೌರವ ಸಲ್ಲಿಸಲು ಒಳಗಿನ ಗರ್ಭಗೃಹಕ್ಕೆ ಏರುತ್ತಿದ್ದರು. ರಥದ ಅದ್ಭುತ ನೋಟ ಮತ್ತು ಸಂಕೀರ್ಣದಿಂದ ದೀಪಗಳ ಹೊಳಪಿನಲ್ಲಿ ಅದರ ವಿವರವಾದ ವಿನ್ಯಾಸವು ಮೋಡಿಮಾಡುವ ಅನುಭವವನ್ನು ನೀಡುತ್ತದೆ.

ಉಲ್ಲೇಖಗಳು ಬದಲಾಯಿಸಿ

<r>https://kannada.nativeplanet.com/travel-guide/the-musical-pillars-the-vijaya-vittala-temple-hampi-1523-1523.html/</r>

<r>https://www.youtube.com/watch?v=JZ89OnaSUzU</r>