ಸದಸ್ಯ:Dayananda Kavi/ನನ್ನ ಪ್ರಯೋಗಪುಟ

ದಯಾನಂದ

ಯುವ ಕಥೆಗಾರರಲ್ಲಿ ಮುಖ್ಯ ಹೆಸರು ದಯಾನಂದ. ಹುಟ್ಟಿದ್ದು ೧೯೮೮ರ ಅಂಬೇಡ್ಕರ್ ಜಯಂತಿಯಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ. ಓದಿ ಬೆಳೆದಿದ್ದು ಬೆಳ್ಳೂರು ಮತ್ತು ಬೆಂಗಳೂರಿನಲ್ಲಿ.

ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ವೃತ್ತಿಯಿಂದ ಪತ್ರಕರ್ತ.

ದಯಾನಂದರ ಕತೆಗಳಿಗೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ಮತ್ತು ಛಂದ ಪುಸ್ತಕ ಬಹುಮಾನ ಲಭಿಸಿದೆ.

ಛಂದ ಪುಸ್ತಕ ಬಹುಮಾನ ಪಡೆದು ಪ್ರಕಟಗೊಂಡ ಮೊದಲ ಕಥಾ ಸಂಕಲನ 'ದೇವರು ಕಚ್ಚಿದ ಸೇಬು'