ಗೋವರ್ದನ ಗಿರಿಯ ಪೂಜೆ
            ವೃಂದಾವನವಾಸಿಗಳು, ಸ್ವರ್ಗದ ಅರಸನೂ ಮತ್ತು ಮಳೆಸುರಿಸುವವನೂ ಆದ ಇಂದ್ರನನ್ನು ತೃಪ್ತಿಗೋಳಿಸಲು ಒಂದು ಯಜ್ಞವನ್ನು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದುದನ್ನು ಕೃಷ್ಣ ಮತ್ತು ಬಲರಾಮರು ಕಂಡರು. ಶ್ರೀ ಕೃಷ್ಣನ ಪರಿಶುದ್ಧ ಭಕ್ತರು ಅವನನ್ನು ಭಕ್ತಿಯಿಂದ ಸೇವೆಮಾಡಿದರೆ ಸಾಕು. ಯಾವುದೆ ಯಜ್ಞ  ಯಾಗಾದಿಗಳ ಅವಶ್ಯಕತೆಯಿರುವುದಿಲ್ಲ,ಈ ವಿಷಯವನ್ನು ಕೃಷ್ಣ ಸ್ಪಷ್ಟ ಪಡಿಸಲು ನಿರ್ದರಿಸಿ ನಂದ ಮಹಾರಾಜನನ್ನು ಕುರಿತು ಹೀಗೆಂದನು:"ಪ್ರೀತಿಯ ತಂದೆಯೇ, ದೊಡ್ದ ಫಲವೇನು? ಮತ್ತು ಆದು ಯಾರಿಗಾಗಿ? ಅದನ್ನು ಮಾಡುವುದು ಹೇಗೆ ಎಂಬುವುದನ್ನು ಹೇಳುವೆಯಾ? " ನಂದ ಮಹಾರಾಜನು ಯಜ್ಞದಂತಹ ವಿಷಯದ ಬಗ್ಗೆ ತಿಳಿ ಹೇಳಲು ಕೃಷ್ಣನು ಇನ್ನೂ ಬಹಳ ಚಿಕ್ಕವನೆಂದು ಮಾತನಾಡದೆ ಸುಮ್ಮನಿದ್ದನು. ಆದರೆ ಕೃಷ್ಣು ಸುಮ್ಮನಿರದೆ ಮತ್ತೆ ಕೇಳಿದನು.'ಕುಟುಂಬದ ಸದಸ್ಯರಲ್ಲಿ ಯಾವ ವಿಷಯವನ್ನು ಮುಚ್ಚುಡಬಾರದು. ಆದ್ದರಿಂದ ಈ ಯಜ್ಞವನ್ನು ಮಾಡುತ್ತಿರುವ ಉದ್ಧೇಶವೇನೆಂದು ಹೇಳು" ಎಂದನು.
           ಆಗ ಕೃಷ್ಣನ ತಂದೆ ,"ಪ್ರೀತಿಯ ಮಗು , ಈ ಉತ್ಸವವು ಬಹು ಮಟ್ಟಿಗೆ ಸಾಂಪ್ರದಾಯಕವೇ. ಮಳೆ ಬರುವುದು ಇಂದ್ರನ ಕೃಪೆಯಿಂದ. ನೀರು ನಮ್ಮ ಜೇವಜಲ. ಅದನ್ನು ಕರುಣಿಸುವ ಅವನಿಗೆ ನಾವು ಋಣಿಗಳಾಗಿರಬೇಕಲ್ಲವೆ? ಇಂದ್ರನು ಧಾರಾಳವಾಗಿ ಮೋಡಗಳನ್ನು ಕಳುಹಿಸಿ ನಮ್ಮ ವ್ಯವಸಾಯಕ್ಕೆ ಬೇಕಾದಷ್ಟು ನೀರನ್ನು ಕರುಣಿಸುತ್ತಿದ್ದಾನೆ. ಆದ್ದರಿಂದ ಅವನನ್ನು ಸಂತೃಪ್ತಿಗೊಳಿಸಲು ಈ  ಯಜ್ಞವನ್ನು ಮಾಡಲಿದ್ದೇವೆ" ಎಂದನು.
          ಇಂದ್ರ ಮಹಾರಾಜನು ರಾಕ್ಷಸನಲ್ಲ. ಅವನೊಬ್ಬ ಭಕ್ತ , ದೇವತೆ . ಆದರೆ ಅವನಿಗೆ ದುರಹಂಕಾರ ಬಂದಿದ್ದು ಕೃಷ್ಣನಿಗೆ ತಿಳಿದಿತ್ತು. ಈಗ ಅವನಿಗೆ ಗೋಪಾಲಕರು  ಯಜ್ಞವನ್ನು ಮಾಡುತಿದ್ದಾರೆ. ಇದನ್ನು ತಪಿಸಿದ ಪರಿಣಾಮವಾಗಿ ಇಂದ್ರನಿಗೆ ಕೋಪಬರುವಂತೆ ಮಾಡಿ ಅವನಿಗೆ ಬುದ್ದಿ ಕಲಿಸಬೇಕೆಂದುಕೊಂಡ ಶ್ರೀ ಕೃಷ್ಣ. ಅದಕ್ಕಾಗಿ ದೇವೋತ್ತಮ ಮಹಾಪುರುಷನು ತನ್ನ ತಂದೆಯ ಮತ್ತು ವೃಂದಾವನದ ಗೋಪಾಲಕರ ಎದುರಿನಲ್ಲಿ ಸ್ವರ್ಗದ ರಾಜ ಇಂದ್ರನಿಗೆ ಬಹಳ ಕೋಪಬರುವಂತೆ ಮಾತನಾಡಿದನು.ಅವರು ಯಜ್ಞವನ್ನು  ನಿಲ್ಲಿಸಬೇಕೆಂದು ಸಲಹೆ ನೀಡಿದನು. ಈ ಯಜ್ಞವನ್ನು ನಿಲ್ಲಿಸಲು ಅವನು ಎರಡು ಕಾರಣಗಳನ್ನೂ ನೀಡಿದನು. ಮೊದಲನೆಯದಾಗಿ ಭಗವದ್ಗೀತೆಯಲ್ಲಿ ಹೇಳಿರುವಂತೆ ಯಾವುದೋ  ಭೌತಿಕ ಪ್ರಯೋಜನಕ್ಕಾಗಿ ದೇವತೆಗಳನ್ನು ಪೂಜಿಸವ ಅಗತ್ಯವಿಲ್ಲ.. ದೇವತೆಗಳನ್ನು ಪೂಜಿಸುವುದರಿಂದ ಪಡೆಯುವ ಫಲವೆಲ್ಲ ಅಲ್ಪಕಾಲದ್ದು. ಮತ್ತು ಎರಡದನೆಯಾಗಿ ದೇವತೆಗಳನ್ನು ಪೂಜಿಸಿ ಪಡೆಯುವ ಯಾವುದೇ ಅಲ್ಪಕಾಲದ ಫಲವನ್ನು ದೆವೋತ್ತಮ ಪರಮ ಪುರುಷನ ಅನುಮತಿಯಿಂದಲೇ ಕೊಡಲು ಸಾಧ್ಯ.
         ಶ್ರೀ ಕೃಷ್ಣನು ಕರ್ಮ ಮೀಮಾಂಸೆಗೆ ಅನುಗುಣವಾಗಿ ತನ್ನ ತಂದೆಯೊಡನೆ ಮಾತನಾಡಲು ಪ್ರಾರಂಭಿಸಿದ. ಅವನು,"ಪ್ರೀತಿಯ ತಂದೆಯೇ, ನೀವು ನಿಮ್ಮ ವ್ಯವಸಾಯದ ಕಾರ್ಯಗಳು ಯಶಸ್ವಿಯಾಗಿ ನಡೆಯಬೇಕೆಂದು ಯಾವುದೇ ದೇವತೆಯ ಪೊಜೆಯನ್ನು ಮಾಡಬೇಕಾಗಿಲ್ಲವೆಂದು ನನಗೆ ತೋರುತ್ತದೆ, ಏಕೆಂದರೆ ಪ್ರತೆಯೊಬ್ಬ ಜೀವಿಯೂ ತನ್ನ ಹಿಂದಿನ ಕರ್ಮಗಳಿಗೆ ಅನುಗುಣವಾಗಿ ಬೇರೆ ಬೇರೆ ವರ್ಗಗಳಲ್ಲಿ ಹುಟ್ಟುತ್ತಾರೆ. ಮತ್ತು ವರ್ತಮಾನದ ಕರ್ಮಫಲಗಳ ಅನುಗುಣವಾಗಿ ಪ್ರಪಂಚವನ್ನು ಬಿಟ್ಟು ಹೋಗುತ್ತಾರೆ. ಬದುಕಿನಲ್ಲಿರುವ ಸುಖ ದುಃಖಗಳು, ನೆಮ್ಮದಿ ಮತ್ತು ಅನುಕೂಲತೆಗಳು, ಹಾಗು ಬೇರೆ ಬೇರೆ ಮಟ್ಟಗಳಿಗೆ ಕಾರಣ, ಹಿಂದಿನ ಜನ್ನದ ಅಥವಾ ಈ ಜನ್ನದ ಹಲವಾರು ರೀತಿಯ ಕೆಲಸ ಕಾರ್ಯಗಳು.
       ಇದನ್ನು ಕೇಳಿದ ನಂದ ಮಹಾರಾಜ ಮತ್ತಿತ್ತರ ಹಿರಿಯರು ಪ್ರಬಲನಾದ ದೇವತೆಯನ್ನು ಸಂತೃಪ್ತಿಗೊಳಿಸದೆ ಕೇವಲ ಭೌತಿಕ ಚಟುವಟಿಕೆಗಳಿಂದ ಮಾತ್ರವೇ ಒಳ್ಳೆಯ ಫಲವನ್ನು ಪಡೆಯುವುದು ಸಾಧ್ಯವಿಲ್ಲವೆಂಬ ವಾದ ವಿವಾದ ಅವರ ಬಳಿ ನಡೆಯಿತು. ಆದರೆ ಇದಕ್ಕೆ ಒಪ್ಪದ ಕೃಷ್ಣನು ಹೀಗೆಂದು ತನ್ನ ಮಾತನ್ನು ಮುಂದುವರಿಸಿದನು. "ಆದರೆ ಪ್ರೀತಿಯ ತಂದೆಯೇ, ದೇವತೆಯಾದ ಇಂದ್ರನನ್ನು ಪೂಜಿಸುವ ಅಗತ್ಯವಿಲ್ಲ . ಪ್ರತಿಯೊಬ್ಬನೂ ತನ್ನ ಕೆಲಸದ ಪ್ರಯೋಜನವನ್ನು ಪಡೆದುಕೊಳ್ಳಬೇಕು.ನಮ್ಮ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಸಾಕು ದೇವತೆಗಳು ತೃಪ್ತರಾಗುತ್ತಾರೆ. ಆದುದರಿಂದ ಅವರನ್ನು ಪೂಜಿಸುವ ಅಗತ್ಯವಿಲ್ಲ. ಬ್ರಾಹ್ಮಣರಿಗೆ ನಿಗದಿತವಾದ ಕರ್ತವ್ಯ ವೇದಾಧ್ಯಯನ, ಕ್ಷತ್ರಿಯರ ಯೋಗ್ಯ ಕರ್ತವ್ಯ  ಪ್ರಜೆಗಳ ರಕ್ಷಣೆಯಲ್ಲಿ ತೊಡಗುವುದು, ವೈಶ್ಯರ ಮೂಲ ಕರ್ತವ್ಯ ಕೃಷಿ ವ್ಯಾಪಾರ ಮತ್ತು ಗೋ ರಕ್ಷಣೆ.ಶೂದ್ರರು ಮಾಡಬೇಕಾದ ಕರ್ತವ್ಯವೆಂದರೆ ಬ್ರಾಹ್ಮಣರು, ಕ್ಷತ್ರಿಯರು,ವೈಶ್ಯರು ಈ ಮೂರು ಮೇಲು ವರ್ಗಗಳ ಸೇವೆ. ನಾವು ವೈಶ್ಯವರ್ಗಕ್ಕೆ ಸೇರಿದವರು. ನಮ್ಮ ಕರ್ತವ್ಯವೆಂದರೆ ವ್ಯವಸಾಯ ಅಥವಾ ಕೃಷಿಯಿಂದ ಬಂದ ಉತ್ಪನ್ನಗಳ ಮಾರಾಟ, ಗೋರಕ್ಷಣೆ ಅಥವಾ ಲೇವಾದೇವಿ.
       "ನೀನು ಇಂದ್ರನನ್ನು ಸಂತೃಪ್ತಿಗೊಳಿಸದಿದ್ದರೂ ತಾನೇ ಅವನೇನು ಮಾಡಬಲ್ಲ? ಇಂದ್ರನಿಂದ ನಮಗೆ ಯಾವ ಲಾಭವೂ ಇಲ್ಲ. ಇದಕ್ಕೆ ಉದಾಹರಣೆಯೆಂದರೆ ನೀರಿನ ಅಗತ್ಯವಿಲ್ಲದ ಸಮುದ್ರದ ಮೇಲೂ ನೀರನ್ನು ಸುರಿಸುತ್ತಾನೆ. ಅದು ನಾವು  ಅವನನ್ನು ಪೂಜಿಸುವುದನ್ನೇನೂ ಅವಲಂಬಿಸುವುದಿಲ್ಲ. ನಮ್ಮ ಮಟ್ಟಿಗೆ ಹೇಳುವುದಾದರೆ ನಾವು ಬೇರೊಂದು ನಗರಕ್ಕೆ ಹಳ್ಳಿಗೆ ಅಥವಾ ಬೇರೊಂದು ದೇಶಕ್ಕೆ ಹೋಗಬೇಕಿಲ್ಲ. ನಮ್ಮ ಖಚಿತವಾದ ಬಾಂಧವ್ಯವಿರುವುದು ಗೋವರ್ಧನ ಗಿರಿಯೊಂದಿಗೆ ಮತ್ತು ವೃಂದಾವನದ ಕಾಡಿನೊಂದಿಗೆ , ಬೇರೆ ಯಾವುದರೊಂದಿಗೂ ಇಲ್ಲ. ಆದರಿಂದ ಪ್ರೀತಿಯ ತಂದೆಯೇ, ಸ್ಥಳೀಯ ಬ್ರಾಹ್ಮಣರನ್ನು ಗೋವರ್ಧನ ಗಿರಿಯನ್ನೂ ತೃಪ್ತಿಗೊಳಿಸಲು ಒಂದು ಯಜ್ಞವನ್ನು ಪ್ರಾರಂಭಿಸೋಣ. ಇಂದ್ರನೊಡನೆ ನಮಗೆ ಸಂಬಂಧವೇ ಬೇಡ".
        ಕೃಷ್ಣನ ಮಾತನ್ನು ಕೇಳಿ ನಂದ ಮಹಾರಾಜನು "ಪ್ರೀತಿಯ ಹುಡುಗ , ನೀನು ಕೇಳುತ್ತಿರುವುದರಿಂದ ಸ್ಥಳೀಯ ಬ್ರಾಹ್ಮಣರು ಮತ್ತು ಗೋವರ್ಧನ ಗಿರಿಗಾಗಿ ಒಂದು ಪ್ರತ್ಯೇಕ ಯಜ್ಞವನ್ನು ಏರ್ಪಡಿಸುತ್ತೇನೆ. ಆದರೆ ಈಗ ನಾವು ಇಂದ್ರ ಯಜ್ಞವನ್ನು ಮಾಡೋಣ" ಎಂದು ಹೇಳಿದನು.
        ಆದಕ್ಕೆ ಕೃಷ್ಣನು ಹೀಗೆ ಉತ್ತರಿಸಿದನು : "ಪ್ರೀತಿಯ ತಂದೆಯೇ, ವಿಳಂಬ ಮಾಡಬೇಡ. ಗೋವರ್ಧನ ಗಿರಿಗೆ ಮತ್ತು ಸ್ಥಳಿಯ ಬ್ರಾಹ್ಮಣರಿಗೆ ಒಂದು ವರ್ಷ ಏರ್ಪಡಿಸಬೇಕೆಂದಿರುವ ಯಜ್ಞಕ್ಕೆ ಬಹಳ ಕಾಲವು ಬೇಕು . ಇಂದ್ರ ಯಜ್ಞಕ್ಕಾಗಿ ನೀನು ಮಾಡಿರುವ ಸಿದ್ಧತೆಗಳನ್ನೇ ಬಳಸಿಕೊಂಡು ಗೋವರ್ಧನ ಗಿರಿಯನ್ನು ಸ್ಥಳೀಯ ಬ್ರಾಹ್ಮಣರನ್ನು ತೃಪ್ತಿಗೊಳಿಸಲು ಅವನ್ನು ಕೊಡ್ಲೆ ಉಪಯೋಗಿಸಿಕೊಳ್ಳುವುದು ಉತ್ತಮ". ಎಂದನು
          ಇದಕ್ಕೆ ಪ್ರತಿಯಾಡಲಾಗದೆ ನಂದ ಮಹಾರಾಜನು ಈ ಯಜ್ಞವನ್ನು ಮಾಡಲು ಒಪ್ಪಿದನು. ಈ ಯಜ್ಞವನ್ನು ಹೇಗೆ ಮಾಡಬೇಕೆಂದು ಗೋಪಾಲಕರು ಕೃಷ್ಣನನ್ನು ಕೇಳಿದರು . ಆಗ ಕೃಷ್ಣನು ಈ ರೀತಿ ಮಾರ್ಗದರ್ಶನವನ್ನು ಮಾಡಿದನು. "ಯಜ್ಞಕ್ಕಾಗಿ ಧಾನ್ಯದಿಂದ ಮತ್ತು ತುಪ್ಪದಿಂದ ಸೊಗಸಾದ ಎಲ್ಲ ಬಗೆಯ ಆಹಾರವನ್ನು ಮಾಡಿ. ಅನ್ನ, ಬೇಳೆ, ಹಲ್ಪ, ಪಕೋಡ, ಪೊರಿ ಇವುಗಳನ್ನು ಮಾಡಿ.ಜೊತೆಗೆ ಸಿಹಿ ಭಾತು, ಸಿಹಿ ಉಂಡೆ, ಸಂದೇಶ ರಸಗುಲ್ಲ ಹಾಗೂ ಲಡ್ಡುಗಳಂತಹ ಹಾಲಿನಿಂದ ಮಾಡುವ ತಿಂಡಿಗಳನ್ನು ಮಾಡಿ. ವೈದಿಕ ಪ್ರಾರ್ಥನೆಗಳನ್ನು ಪಠಿಸಿ ಅಗ್ನಿಗೆ ಆಹುತಿಕೊಡಬಲ್ಲ ವಿದ್ವಾಂಸ ಬ್ರಾಹ್ಮಣರನ್ನು ಆಹ್ವಾನಿಸಿ ಅವರಿಗೆ ದಾನವಾಗಿ ಎಲ್ಲ ಬಗೆಯ ದವಸ ಧಾನ್ಯಗಳನ್ನು ಕೊಡಬೇಕು. ಅನಂತರ ಎಲ್ಲ ಹಸುಗಳಿಗೆ ಅಲಂಕಾರ ಮಾಡಿ