ಸದಸ್ಯ:BHARATHESHA ALASANDEMAJALU/ನನ್ನ ಪ್ರಯೋಗಪುಟ1

BHARATHESHA ALASANDEMAJALU/ನನ್ನ ಪ್ರಯೋಗಪುಟ1
ಪಾದೇಕಲ್ಲು ವಿಷ್ಣು ಭಟ್ಟ
ಜನನಫೆಬ್ರುವರಿ, ೦೬ ೧೯೫೬
ಪಾದೇಕಲ್ಲು, ಕರೋಪಾಡಿಗ್ರಾಮ,ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯ, ಲೇಖನ, ವಿಮರ್ಶೆ, ತುಳು ಶಬ್ದಕೋಶ

ಪ್ರಭಾವಿತರು
  • ಸೇಡಿಯಾಪು ಕೃಷ್ಣ ಭಟ್ಟ
ಪಾದೇಕಲ್ಲು ವಿಷ್ಣು ಭಟ್ಟ
ಜನನಫೆಬ್ರುವರಿ, ೦೬ ೧೯೫೬
ಪಾದೇಕಲ್ಲು, ಕರೋಪಾಡಿಗ್ರಾಮ,ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ
ಉದ್ಯೋಗಉಪನ್ಯಾಸಕ
ಇದಕ್ಕೆ ಖ್ಯಾತರುತುಳು ನಿಘಂಟು ಯೋಜನೆಯಲ್ಲಿ ಸಹಾಯಕ ಸಂಪಾದಕ

ಪಾದೇಕಲ್ಲು ವಿಷ್ಣು ಭಟ್ಟ ಇವರು ಕನ್ನಡ ತುಳು ಲೇಖಕರು, ತುಳು ನಿಘಂಟು ರಚನೆಯಲ್ಲಿ ಹಾಗೂ ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ

ಜೀವನ ಬದಲಾಯಿಸಿ

ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಹುಟ್ಟಿದರು (ಫೆಬ್ರುವರಿ ೧೬ ೧೯೫೬) ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾಭ್ಯಾಸಾನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದು (1976) ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ಮೂಲಕ ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್‍ನೊಂದಿಗೆ ಗಳಿಸಿದರು (1978). ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು (1997). ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು.

ಸಾಹಿತ್ಯ ಬದಲಾಯಿಸಿ

ತುಳುನಿಘಂಟು ಯೋಜನೆಯ ಸಂಪಾದಕರು, ಇವರು ಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರಿಗೆ ಲಿಪಿಕಾರರಾಗಿ ಸಹಾಯಕರಾಗಿದ್ದುದಲ್ಲದೆ ಅವರ ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದ್ದಾರೆ. ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ

ಕೃತಿಗಳು ಬದಲಾಯಿಸಿ

ಸ್ವಂತ ರಚನೆಗಳು ಬದಲಾಯಿಸಿ

  1. ಸೇಡಿಯಾಪು - 1996 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  2. ಸೇಡಿಯಾಪು ಕೃಷ್ಣ ಭಟ್ಟರು -1997 (ಪ್ರ. : ಪ್ರಸಾರಾಂಗ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ )
  3. ಪಂಡಿತವರೇಣ್ಯ - 2002 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  4. ಶ್ರೀಭಾಗವತೊ - 2007 (ಪ್ರ. : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು)
  5. ಪ್ರಸಂಗ ವಿಶ್ಲೇಷಣೆ - 2007 (ಪ್ರ. : ಸ್ವಾಗತ ಸಮಿತಿ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿ)
  6. ಏರ್ಯ ಲಕ್ಷ್ಮೀನಾರಾಯಣ ಆಳ್ವ - 2012 (ಪ್ರ. : ಕಾಂತವರ ಕನ್ನಡ ಸಂಘ, ಕಾಂತವರ, ಉಡುಪಿ ಜಿಲ್ಲೆ)
  7. ಶ್ರೀ ಕುಮಾರಿಲಭಟ್ಟರು - 2014 (ಪ್ರ : ಭಾರತೀ ಪ್ರಕಾಶನ, ಬೆಂಗಳೂರು)
  8. ಬೆಳಗಿನ ನಲ್ನುಡಿ - 2016 (ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ, ಇಡ್ಕಿದು)
  9. ಸಾಹಿತ್ಯಾಧ್ಯಯನ - 2016 (ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಯಲ, ಮಂಗಳಗಂಗೋತ್ರಿ)
  10. ಯಕ್ಷಗಾನಾಧ್ಯಾಯನ - 2016 (ಯಕ್ಷಗಾನ ಕೇಂದ್ರ, ಯಕ್ಷಗುರುಕುಲಶಿಕ್ಷಣ ಟ್ರಸ್ಟ್, ಉಡುಪಿ)
  11. ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು - 2016 (ಪ್ರ. : ಕಾಂತವರ ಕನ್ನಡ ಸಂಘ, ಕಾಂತಾವರ, ಉಡುಪಿ ಜಿಲ್ಲೆ)
  12. ಸ್ವಪ್ರಯತ್ನದ ಧೀಮಂತ ಲೇಖಕ ಅಂಬಾತನಯ ಮುದ್ರಾಡಿ - 2017 (ಪ್ರ. : ಕಾಂತವರ ಕನ್ನಡ ಸಂಘ, ಕಾಂತಾವರ, ಉಡುಪಿ ಜಿಲ್ಲೆ)
  13. ಹಳಗನ್ನಡ-ಹೊಸಗನ್ನಡಗಳ ಮಧ್ಯಮಣಿ ಕವಿ ಮುದ್ದಣ - 2017 (ಪ್ರ. : ಚೇತನ ಬುಕ್ ಹೌಸ್, ಮೈಸೂರು)
  14. ಕನ್ನಡ ಸಾಹಿತ್ಯ ಪರಿಚಾರಕ ಪ್ರೊ. ಎಂ. ರಾಮಚಂದ್ರ - 2017 (ಪ್ರ. : ಕಾಂತವರ ಕನ್ನಡ ಸಂಘ, ಕಾಂತಾವರ, ಉಡುಪಿ ಜಿಲ್ಲೆ)
  15. ವೈಷ್ಣವಿದೇವೀಸಂದರ್ಶನ - 2018 (ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ, ಇಡ್ಕಿದು)

ಸಂಪಾದಿತ ಕೃತಿಗಳು ಬದಲಾಯಿಸಿ

  1. ವಿಚಾರ ಪ್ರಪಂಚ - 1992(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  2. ಸ್ಕಂದ ವೈಭವ - 1993 (ಪ್ರ. : ವಗೆನಾಡು ಸುಬ್ರಾಯ ದೇವಸ್ಥಾನ ಜೀನೋದ್ಧಾರ ಸಮಿತಿ, ಕರೋಪಾಡಿ)
  3. ಚಂದ್ರಖಂಡ (ಪರಿವರ್ಧಿತ ಮತ್ತು ಅನುಬಂಧಿತ) ಮತ್ತು ಕೆಲವು ಸಣ್ಣ ಕಾವ್ಯಗಳು - 1994 (ಪ್ರ. : ಸಾಹಿತ್ಯ ಸಂಘ, ಮಣಿಪಾಲ)
  4. ತುಳುವರಿವರು - 1997 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  5. ಕೇಶಿರಾಜದರ್ಪಣ - 1999(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  6. ಪುರಂದರದಾಸರ ಕೀರ್ತನೆಗಳು - 2001 (ಪ್ರ. : ಶ್ರೀಮನ್ಮಧ್ವಸಿದ್ಧಾಂತಗ್ರಂಥಾಲಯ, ಉಡುಪಿ)
  7. ಶಾರದಾರಾಧನಮ್ - 2003 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)
  8. ಸಾವಿರದ ಗದ್ಯ - 2003(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  9. ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗಳು - 2004 (ಪ್ರ. : ಯಕ್ಷಗಾನ ಕೇಂದ್ರ, ಎಂ. ಜಿ. ಎಂ. ಕಾಲೇಜು, ಉಡುಪಿ)
  10. ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ -2004 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ; ಪುನರ್ಮುದ್ರಣ 2018)
  11. ಶ್ರೀರಾಮಾಶ್ವಮೇಧಂ - 2006 (ಪ್ರ. : ಮುದ್ದಣ ಪ್ರಕಾಶನ, ಬಿಜೈ, ಮಂಗಳೂರು)
  12. ಸೇಡಿಯಾಪು ಛಂದಸ್ಸಂಪುಟ - 2006(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  13. ಯಕ್ಷಗಾನ ಪ್ರಸಂಗ ಸಂಚಯ - 2006 (ಪ್ರ. : ಕನ್ನಡ ಅಧ್ಯಯನ ವಿಭಾಗ, ಮಂಗಳಗಂಗೋತ್ರಿ)
  14. ಯಕ್ಷಗಾನ ಗ್ರಂಥಸೂಚಿ - 2006 (ಪ್ರ. : ಯಕ್ಷಗಾನ ಕೇಂದ್ರ, ಎಂ. ಜಿ. ಎಂ. ಕಾಲೇಜು, ಉಡುಪಿ)
  15. ಯಕ್ಷಗಾನ ಭಾಗವತ ಪ್ರಸಂಗಗಳು - 2006 (ಪ್ರ. : ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು)
  16. ಸುಕೃತಿ - 2006 (ಪ್ರ. : ಪ್ರೊ. ಟಿ. ಕೇಶವ ಭಟ್ಟ ಸಂಸ್ಮರಣ ಸಮಿತಿ, ಉಡುಪಿ)
  17. ತುಳುಛಂದೋವಿನ್ಯಾಸ - 2007(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  18. ಶಬ್ದಾರ್ಥಶೋಧ - 2008(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  19. ವೇದವೇದಾಂಗಪರಿವಾರ - 2010 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)
  20. ಅನನ್ಯವ್ಯಕ್ತಿ - 2010 (ಪ್ರ. : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ವಿದ್ಯಾಗಿರಿ, ಮೂಡಬಿದ್ರೆ)
  21. ವಿದ್ವಜ್ಜೀವಿತ - 2011(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  22. ಭಾನುಮತಿಯ ನೆತ್ತ - 2012(ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  23. ಭಾರತೀಯ ಸಂವೇದನೆ : ಸಂವಾದ - 2012 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  24. ಮಹಾಜನಪದ - 2014 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  25. ಪುರಾಣಲೋಕ - 2015 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)
  26. ಯಕ್ಷಗಾನ ಪ್ರಸಂಗಸಂಪುಟ - 1- 2015 (ಪ್ರ. : ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ)
  27. ಯಕ್ಷಗಾನ ಶ್ರೀಕೃಷ್ಣದಿನಾಶ್ವಮೇಧ ಮತ್ತು ದ್ರೋಣಪರ್ವ - 2015 (ಪ್ರ. : ಉಡುಪಿ ಶ್ರೀ ಶೀರೂರು ಮಠ)
  28. ಯಕ್ಷಗಾನ ಪ್ರಸಂಗಸಂಪುಟ - 2- 2016 (ಪ್ರ. : ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಕೇಂದ್ರದ ಪರವಾಗಿ ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ)

ಸಹಸಂಪಾದಿತ ಕೃತಿಗಳು ಬದಲಾಯಿಸಿ

  1. ರಂಗವೈಖರಿ - 1981 (ಪ್ರ. : ಮಾಂಬಾಡಿ ನಾರಾಯಣ ಭಾಗವತ ಸಮ್ಮಾನ ಸಮಿತಿ, ಕರೋಪಾಡಿ)
  2. ಪೊನ್ನಕಂಠಿ - 1997 (ಪ್ರ. : ಅಖಿಲ ಭಾರತ 66ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಮಂಗಳೂರು)
  3. ಏರ್ಯ - 1999 (ಪ್ರ. : ಏರ್ಯ ಲಕ್ಷ್ಮೀನಾರಾಯಣ ಆಳ್ವ ಅಭಿನಂದನ ಸಮಿತಿ, ಮಂಗಳೂರು)
  4. ಮಂತ್ರಮಂಜರೀ - 2002 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)
  5. ಶತಾಂಜಲಿ - 2002 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ).
  6. ಜ್ಯೋತಿಷಸÀಂವಾದ - 2003 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)
  7. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾವ್ಯ ಸಂಪುಟ - 2003 (ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  8. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾದಂಬರಿ ಸಂಪುಟ (ಎರಡು ಭಾಗಗಳು) - 2004 (ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  9. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಥಾಸಂಪುಟ - 2004 (ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  10. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಗದ್ಯ ಸಂಪುಟ - 2004 (ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  11. ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ನಾಟಕ ಸಂಪುಟ - 2004 (ಪ್ರ.: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  12. ಯಕ್ಷಭೀಮನ ನೂರು ಹೆಜ್ಜೆಗಳು - 2004 (ಪ್ರ. : ಡಾ. ಕೃಷ್ಣಮೂರ್ತಿ ಪಂಜ, ಸುಳ್ಯ ತಾಲೂಕು, ದ.ಕ.)
  13. ಕಾಲಪುರುಷ - 2005 (ಪ್ರ. : ಕಾರಂತ ಶತಮಾನೋತ್ಸವ ಸಮಿತಿ, ರಾ. ಗೋ. ಪೈ. ಸಂ. ಕೇಂದ್ರ, ಉಡುಪಿ)
  14. ಹರಿದಾಸ ಕೀರ್ತನ - 2005 (ಪ್ರ. : ಹೆರಂಜೆ ಕೃಷ್ಣ ಭಟ್ಟ ಅಭಿನಂದನ ಸಮಿತಿ, ಉಡುಪಿ)
  15. ವಾಚಿಕ - 2009 (ಪ್ರ. : ಯಕ್ರಗಾನ ಕಲಾರಂಗ, ಉಡುಪಿ)
  16. ಕನ್ನಡ ತುಳು ಶಬ್ದ ಪ್ರಯೋಗಕೋಶ - 2009 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  17. ಸುಮನಸ - 2010 (ಪ್ರ. : ಅಂಬಾತನಯ ಮುದ್ರಾಡಿ ಅಭಿನಂದನ ಸಮಿತಿ, ಮುಂಬಯಿ)
  18. ಜಗತ್‍ಸಾಹಿತ್ಯಪ್ರವೇಶಿಕೆ- 2016 (ಪ್ರ. : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ)
  19. ಪುರೋಹಿತಸ್ಮರಣ (ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ, ಮೈಕೆ ಶಂಕರನಾರಾಯಣ ಭಟ್ಟ ಶತಮಾನ ಸಂಸ್ಮರಣಸಂಪುಟ) – 2018 (ಪ್ರ. : ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ, ಸಂಪ್ರತಿಷ್ಠಾನ, ಇಡ್ಕಿದು)

ಅನುವಾದ ಕೃತಿಗಳು ಬದಲಾಯಿಸಿ

ಸತೀ ಕಮಲೆ– 1997

ಪ್ರಶಸ್ತಿ/ಗೌರವಗಳು ಬದಲಾಯಿಸಿ

  1. ಉಡುಪಿ ಶ್ರೀ ಶೀರೂರು ಮಠದಿಂದ ಶ್ರೀಕೃಷ್ಣನುಗ್ರಹ ಪ್ರಶಸ್ತಿ - 1996
  2. ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದಲ್ಲಿ ಸಮ್ಮಾನ - 2011
  3. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್‍ಪ್ರಶಸ್ತಿ - 2014
  4. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಸೇಡಿಯಾಪು ಪ್ರಶಸ್ತಿ - 2015
  5. ಶೃಂಗೇರಿ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವರ್ಧಂತ್ಯುತ್ಸವ ವಿದ್ವತ್ ಸಮ್ಮಾನ - 2015
  6. ಉಡುಪಿ ಶ್ರೀ ಪೇಜಾವರ ಮಠದಿಂದ ರಾಮವಿಠಲ ಪ್ರಶಸ್ತಿ - 2016
  7. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ `ಯಕ್ಷಗಾನಾಧ್ಯಯನ’ ಕೃತಿಗೆ - 2017
  8. ಕಾಂತಾವರ ಕನ್ನಡ ಸಂಘದ `ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ `ಪಂಡಿತ ಪರಂಪರೆಯ ಪಾದೇಕಲ್ಲು ವಿಷ್ಣು ಭಟ್ಟ’ ಎಂಬ ಕೃತಿ ಬಿಡುಗಡೆಯಾಗಿದೆ. ಲೇಖಕರು - ಡಾ. ಎಸ್. ಅರ್. ಅರುಣಕುಮಾರ್ – 2018
  9. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ - 2018
  10. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವಿದ್ವತ್‍ಪ್ರಶಸ್ತಿ - 2018