ಸದಸ್ಯ:ಕೋಣನಕುಂಟೆ ಜಿ ವೆಂಕಟೇಶ/ನನ್ನ ಪ್ರಯೋಗಪುಟ

ಬಾರಿಸು ಸಂಜೀವಿನಿ ಡಿಂಡಿಮವ

ಬಾರಿಸು ಸಂಜೀವಿನಿ ಡಿಂಡಿಮವ

ಓ ಪಂಚಾಯ್ತಿ ಎಂಸಿಆರ್ ಪಿಯವ್ವ //ಪ//

ಸಾಲುಮರದ ತಿಮ್ಮಕ್ಕನಂತೆ ಮಾದರಿಯಾಗವ್ವ

ಸೇವಾ ಮನೋಭಾವದಿಂದ ಸೇವೆ ಮಾಡವ್ವ //ಬಾರಿಸು//

ಪಂಚಾಯ್ತಿ ಹಳ್ಳಿ ಹಳ್ಳಿಗೂ ನೀನು ತಿರುಗವ್ವ

ಮಾಹಿತಿ ಕಣಜವಾಗಬೇಕು ನೀನು ಕಣವ್ವ //ಬಾರಿಸು//

ಸತ್ತಂತಿರುವ ಸಂಘಗಳ ನೀ ಬಡಿದೆಚ್ಚರಿಸವ್ವ

ಕಚ್ಚಾಡುವ ಸಂಘಗಳ ಕೂಡಿಸಿ ಒಲಿಸವ್ವ //ಬಾರಿಸು//

ಹೊಟ್ಟೆ ಕಿಚ್ಚಿಗೆ ತಣ್ಣೀರು ಸುರಿಸವ್ವ

ಒಟ್ಟಾಗಿ ಲೆಕ್ಕಾಚಾರದಿ ಸಂಘ ಸೇರಂಗೆ ಮಾಡವ್ವ//ಬಾರಿಸು//

ಸಂಘದ ಪಂಚಸೂತ್ರದ ಮಂತ್ರ ನೀ ಸಾರವ್ವ

ಪಂಚಾಯ್ತಿ ಪಂಚತಂತ್ರಕ್ಕೆ ಸಂಘ ಸೇರಂಗೆ ಮಾಡವ್ವ //ಬಾರಿಸು//

ಸರಕಾರಕ್ಕೂ ಸಂಘಗಳಿಗೂ ಸರಪಳಿ ನೀನವ್ವ

ಸಂಘಗಳ ಸಂಜೀವಿನಿ ಸೂತ್ರದಾರ ನೀನವ್ವ //ಬಾರಿಸು//

ರಚನೆ: ಪಂಚಾಯ್ತಿ ಕವಿ ಜಿ.ವೆಂಕಟೇಶ ಬಿ.ಕಾಂ, ಎಂ.ಎ (ಕನ್ನಡ)

ಮನಗಳ ಗೆಲ್ಲೋ ಮಾತುಗಾರ

ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್

ಅಗರ ಗ್ರಾಮ ಪಂಚಾಯಿತಿ

ಕೆಂಗೇರಿ ಹೋಬಳಿ, ಬೆಂ.ದ.ತಾ.

ಬೆಂಗಳೂರು – 560082.