"ಬೆಳಗುತ ಬನ್ಡಿರೆ ಕನ್ನಡ ಜ್ಯೋತಿಯ.."

ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ ಕನ್ನಡಾಂಬೆಗೆ,ನಾಡದೇವಿಗೆ... ಬೆಳಗುತ ಬನ್ನಿರೆ ಕನ್ನಡದಾರತಿ ಕನ್ನಡನಾಡಿನ ರಾಜ್ಯೋತ್ಸವಕೆ/ ಬೆಳಗುತ ಬನ್ನಿರೆ ಕನ್ನಡ ಜ್ಯೋತಿಯ//ಪ//

ನಾವು ಮೆಟ್ಟಿದ ನೆಲ,ಕನ್ನಡ ನುಡಿ ಬಲ ಪುಣ್ಯ ಪವಿತ್ರಿತ ಕಾವೇರಿಯ ಜಲ ಕನ್ನಡ ಕಸ್ತೂರಿ ಪರಿಮಳಕೆ ಪಸರಿಪ ಕನ್ನಡ ಕವಿಕುಲ ಜಗಕೆ//೧// ಕನ್ನಡಾಂಬೆಗೆ,ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ, ಕನ್ನಡಿಗರ ಈ ಮಿಲನೋತ್ಸವಕೆ//

ಕನ್ನಡ ನಾಡಿಗೆ ಕನ್ನಡ ನುಡಿಗೆ ಶೌರ್ಯವ ಮೆರೆದು ಕಹಳೆಯನೂದಿದ ಕಿತ್ತೂರವನಿತೆಗೆ ದುರ್ಗದ ಧೀರೆಗೆ ಈ ಜನ್ಮದಾತೆಗೆ ನಮೋ ನಮೋ//೨// ಕನ್ನಡಾಂಬೆಗೆ ನಾಡದೇವಿಗೆ ಬೆಳಗುತ ಬನ್ನಿರೆ ಕನ್ನಡದಾರತಿ,

ಕನ್ನಡ ಸಂಸ್ಕೃತಿ ಬೆಳಗುವ ದೀವಿಗೆ//

ಕನ್ನಡನುಡಿ ಭಾವೈಕ್ಯತೆ ಮೆರೆಯುವ ಮಿಲನ ಮಹೋತ್ಸವ ಈ ವೈಭವವು ಚಿಮ್ಮಲಿ ಹೊಮ್ಮಲಿ ಭಾವೋಲ್ಲಾಸದಿ ನವಕರ್ನಾಟಕ ವಿಜಯಿಭವ, ನವಕರ್ನಾಟಕ ವಿಜಯಿಭವ///೩// ವಿಜಯಿಭವ......,ವಿಜಯಿಭವ...,ವಿಜಯಿಭವ.....!

                                         ಕವಿ :ಈರಣ್ಣ ಮೂಲೀಮನಿ.