ಗುಡಿಬಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೆಚ್ಚಿನ ವಿವರ ಸೇರಿಸಿ
ಚುNo edit summary
೫೮ ನೇ ಸಾಲು:
}}
 
'''ಗುಡಿಬಂಡೆ''', [[ಚಿಕ್ಕಬಳ್ಳಾಪುರ]] ಜಿಲ್ಲೆಯ ಒಂದು ತಾಲ್ಲೂಕು, . [[ಹಾವಳಿ ಬೈರೆ ಗೌಡ|ಹಾವಳಿ ಬೈರೆ ಗೌಡರ]] ಕಾಲದಲ್ಲಿ ರೂಪುಗೊಂಡು, [[ಪಾಳೇಗಾರ|ಪಾಳೇಗಾರರ]] [[ಆಡಳಿತ|ಆಡಳಿತಕ್ಕೆ]] ಒಳಪಟ್ಟಿತ್ತು. ಇವನೊಬ್ಬ ಸ್ಥಳೀಯ ಮುಖಂಡ. ಇವನು ಆಗಿನ ಕಾಲದಲ್ಲಿ ರಾಬಿನ್ ಹುಡ್ ತರಹ ಶ್ರೀಮಂತರನ್ನು ದೋಚಿ ಬಡವರಿಗೆ ಹಂಚುತ್ತಿದ್ದನಂತೆ. ಹಾಗಾಗಿ ಅತ್ಯಂತ ಜನಪ್ರಿಯನಾಗಿದ್ದ ಇವನು ಔರಂಗಜೇಬನ ಮಗನಾದ ಮೊಹಮ್ಮದ್ ಅಜಮ್ ಶಾನನ್ನೂ ಎದುರಿಸಿ ಗೆರಿಲ್ಲಾ ಯುದ್ಧದಿಂದ ಅವನನ್ನು ಓಡಿಸಿದ ಖ್ಯಾತಿ ಇವನಿಗಿದೆ. ಭೈರೇಗೌಡನ ಹೆಚ್ಚುತ್ತಿದ್ದ ಪ್ರಸಿದ್ಧಿಯನ್ನು ಸಹಿಸದೆ ಇವನಿಂದ ಲೂಟಿಗೊಳಗಾಗುತ್ತಿದ್ದ ಶ್ರೀಮಂತರ ಒಳಸಂಚಿಗೆ ಕೊನೆಗೂ ಇವನು ಬಲಿಯಾದ. ಆ ನಂತರ ಇವನ ವಂಶಜರು ಬೆಂಗಳೂರಿನ ಬನ್ನೇರುಘಟ್ಟದ ಗೊಟ್ಟಿಗೆರೆಗೆ ಸ್ಥಳಾಂತರ ಹೊಂದಿದರು. ಇವನು ವಿಜಯನಗರದರಸರ ತುಳುವ ವಂಶಕ್ಕೆ ಸೇರಿದವನೆಂದು ಹೇಳಲಾಗುತ್ತಿದ್ದು ಈ ಕೋಟೆಯನ್ನು ೧೭ನೇ ಶತಮಾನದಲ್ಲಿ ಕಟ್ಟಿಸಿದ. ಇದು ಮಧುಗಿರಿ ಕೋಟೆಯ ಚಿಕ್ಕ ಪ್ರತರೂಪದಂತಿದೆಪ್ರತಿರೂಪದಂತಿದೆ. ಏಳು ಹಂತದ ಕೋಟೆ ಇದಾಗಿದ್ದು ಶತೃಗಳ ಆಕ್ರಮಣ ಎದುರಾದಾಗ ತಪ್ಪಿಸಿಕೊಳ್ಳಲು ಅಲ್ಲಲ್ಲಿ ಕಳ್ಳ ದಾರಿಗಳಿವೆ. ಕೋಟೆಯ ತುತ್ತ ತುದಿಯಲ್ಲಿ ಶ್ರೀರಾಮೇಶ್ವರ ದೇವಸ್ಥಾನವಿದೆ. ಕೋಟೆಯ ಮೇಲಿಂದ ನೋಡಿದರೆ ಅಮಾನಿ ಕೆರೆಯ ಸುಂದರ ನೋಟ ನೋಡಲು ಸಿಗುತ್ತದೆ. ಕೋಟೆಯಲ್ಲಿ ಸುಮಾರು ೧೯ ಚಿಕ್ಕ-ಪುಟ್ಟ 'ದೊಣೆ'ಗಳಿವೆ. ಇದರಿಂದ ಗುಡ್ಡದ ಮೇಲೆ ಬಿದ್ದ ಮಳೆ ನೀರು ಇವುಗಳಲ್ಲಿ ಸಂಗ್ರಹವಾಗಿ ಕೋಟೆ ಜನಕ್ಕೆ ಉಪಯೋಗವಾಗಲೆಂಬ ದೂರಾಲೋಚನೆ ಸ್ಪಷ್ಟವಾಗುತ್ತದೆ. ಇದು ಇಂದಿನ ಮಳೆನೀರು ಕೊಯ್ಲಿಗೆ ಆಗಿನ ಕಾಲದ ಉತ್ತರದಂತಿದೆ. ಇವುಗಳಲ್ಲಿ ಸುಮಾರು ೩ ಲಕ್ಷ ಲೀಟರ್ ನೀರು ಸಂಗ್ರಹಿಸಬಹುದೆಂದು ಅಂದಾಜಿಸಲಾಗಿದೆ. ಅವರು ಕಟ್ಟಿಸಿದ ಸುಂದರ [[ಕೋಟೆ|ಕೋಟೆಗಳನ್ನು]] ಇಂದಿಗೂ ಕಾಣಬಹುದು. ಈ ಊರಿನ ಬೃಹದಾಕಾರದ [[ಬಂಡೆ|ಬಂಡೆಯೊಂದರ]] ಮೇಲೆ [[ಗುಡಿ|ಗುಡಿಯಿರುವುದರಿಂದ]] ಇದಕ್ಕೆ ಗುಡಿಬಂಡೆ ಎಂದು ಹೆಸರು ಬಂದಿದೆ.
 
ಗುಡಿಬಂಡೆ ತಾಲ್ಲೂಕಿನ ೨ ಕಸಬಾಗಳಿವೆ.
"https://kn.wikipedia.org/wiki/ಗುಡಿಬಂಡೆ" ಇಂದ ಪಡೆಯಲ್ಪಟ್ಟಿದೆ