ಸದಸ್ಯ:Skanda K N/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
==ಡಾ.ಎಂ.ವಿ.ಗೋಪಾಲಸ್ವಾಮಿ==
ಡಾ.ಎಂ.ವಿ.ಗೋಪಾಲಸ್ವಾಮಿ ಅವರನ್ನು ಮೈಸೂರು ಆಕಾಶವಾಣಿಯ ಪಿತಾಮಹ ಎಂದು ಕರೆಯಲಾಗುತ್ತದೆ. ಅನೇಕ ಕ್ಷೇತ್ರಗಳಿಗೆ ವಿಶಿಷ್ಟವಾದ ಕೊಡುಗೆಗಗಳನ್ನು ನೀಡಿದ ಇವರು ಆಕಾಶವಾಣಿಯನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೆ ಇನ್ನಿತರ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ೧೯೩೫ ರಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಿದ ರೇಡಿಯೊ ಕೇಂದ್ರ ಇಡೀ ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರು ವರ್ಷಗಳ ಕಾಲ ಡಾ.ಎಂ.ವಿ. ಗೋಪಾಲಸ್ವಾಮಿ ಅವರು ಆಕಾಶವಾಣಿಯನ್ನು ತಮ್ಮ ಸ್ವಂತ ಖರ್ಚಿನಿಂದ ನಿಭಾಯಿಸಿದರು. ಅನಂತರದಲ್ಲಿ ಹಣಕಾಸಿನ ಬಿಕ್ಕಟ್ಟು ಎದುರಾಗಿ ಆಕಾಶವಾಣಿಯನ್ನು ನಿರ್ವಹಿಸುವುದು ಕಷ್ಟವಾಯಿತು. ಆದರೆ, ಅವರಿಗೆ ತಾವು ಆರಂಭಿಸಿದ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ವಿಶ್ವಾಸವಿದ್ದ ಕಾರಣ ಅದರ ಆಡಳಿತವನ್ನು ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಆಕಾಶವಾಣಿ ಮುಂದುವರೆಯುವಂತೆ ನೋಡಿಕೊಂಡರು. ನಂತರ ೧೯೪೨ರ ಜನವರಿ ೧ ನೇ ತಾರೀಖಿನಿಂದ ಮಹಾರಾಜರ ಪ್ರಾಂತೀಯ ಸರ್ಕಾರವು ಆಕಾಶವಾಣಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ವಹಿಸಿಕೊಂಡಿತು. ೧೯೪೨ ರಿಂದ ೧೯೪೩ನೇ ಇಸವಿಯ ಆಗಸ್ಟ್ ೨ ನೇ ತಾರೀಖಿನವರೆಗೆ ಡಾ.ಎಂ.ವಿ.ಗೋಪಾಲಸ್ವಾಮಿ ಅವರನ್ನು ನಿರ್ದೇಶಕರನ್ನಾಗಿ ಸಂಸ್ಥೆಯೊಟ್ಟಿಗೆ ಇರಿಸಿಕೊಳ್ಳಲಾಯಿತು. ಗೋಪಾಲಸ್ವಾಮಿಯವರ ನಂತರ ಅವರ ಸಹೋದ್ಯೋಗಿ ಪ್ರೊಫೆಸರ್ ಎನ್. ಕಸ್ತೂರಿ ಅವರನ್ನು 'ಸಹಾಯಕ ನಿಲ್ದಾಣ ಅಧೀಕ್ಷಕರು' ಎಂಬ ಹುದ್ದೆಯೊಂದಿಗೆ ಪೂರ್ಣ ಸಮಯದ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ವಿಭಿನ್ನತೆಯನ್ನು ಮೈಗೂಡಿಸಿಕೊಂಡಿದ್ದ ಹಾಗೂ ಸದಾ ಕ್ರಿಯಾಶೀಲರಾಗಿರುತ್ತಿದ್ದ ಕಸ್ತೂರಿಯವರ ಮಾರ್ಗದರ್ಶನದಲ್ಲಿ ರೇಡಿಯೋ ಕೇಂದ್ರವು ಮುಂದುವರೆಯಿತು. ಕಸ್ತೂರಿಯವರ ಅವಧಿಯಲ್ಲಿಯೇ ಅಖಿಲ ಭಾರತ ರೇಡಿಯೊವನ್ನು ಆಕಾಶವಾಣಿ ಎಂದು ಮರುನಾಮಕರಣ ಮಾಡಲಾಯಿತು. ಆಕಾಶವಾಣಿ ಎಂಬ ಹೆಸರು ರೇಡಿಯೋ ಸಂಸ್ಥೆಗೆ ಸಿಕ್ಕ ಅತ್ಯಂತ ಸೂಕ್ತವಾದ ಹೆಸರಾಗಿರುವುದಲ್ಲದೇ, ಕಡಿಮೆ ಅವಧಿಯಲ್ಲಿ ಜನರನ್ನು ತಲುಪಿ ಎಲ್ಲರ ಮನಗೆದ್ದಿತು. ಅಖಿಲ ಭಾರತ ರೇಡಿಯೋ ಸಂಸ್ಥೆಯು ಭಾರತ ಸರ್ಕಾರದ ಆಡಳಿತಾತ್ಮಕ ವ್ಯಾಪ್ತಿಗೆ ಬಂದ ನಂತರ ಎಲ್ಲಾ ರೇಡಿಯೊ ಕೇಂದ್ರಗಳು 'ಆಕಾಶವಾಣಿ’ ಎಂಬ ಹೆಸರನ್ನು ಅಧಿಕೃತವಾಗಿ ಬಳಸುತ್ತಿವೆ ಹಾಗೂ ಈ ಸುಂದರ ಹೆಸರನ್ನು ದೇಶದ ಎಲ್ಲಾ ರೇಡಿಯೊ ಕೇಂದ್ರಗಳಿಗೆ ಸಾಲ ನೀಡಿದ ಶ್ರೇಯಸ್ಸು ಮೈಸೂರು ಆಕಾಶವಾಣಿಗೆ ಸೇರಿದೆ. ಆಕಾಶವಾಣಿಯ ಹುಟ್ಟು, ಬೆಳವಣಿಗೆ ಹಾಗೂ ಪ್ರಭಾವವನ್ನು ನೋಡಿದಾಗ ಗೋಪಾಲಸ್ವಾಮಿಯವರ ಆಸಕ್ತಿ, ಉತ್ಸಾಹ, ಕಠಿಣ ಪರಿಶ್ರಮ ಹಾಗೂ ಸಮಾಜಕ್ಕೆ ಹೊಸತನದ ಸಾಧ್ಯತೆಗಳನ್ನು ತೆರೆದಿಡುವ ದೂರದೃಷ್ಟಿತ್ವ ಹೊಂದಿದ ವ್ಯಕ್ತಿತ್ವದ ಅನಾವರಣ ಆಗುತ್ತದೆ.
===ಪರಿಚಯ===
Line ೫ ⟶ ೪:
 
=== ಸಾಧನೆ ===
೧. #ಆಕಾಶವಾಣಿ : ತಮ್ಮ ಮನೆಯಲ್ಲಿ ೧೯೫೨ರಲ್ಲಿ ಆಕಾಶವಾಣಿಯನ್ನು ಪ್ರಾರಂಭಿಸಿದರು. ೨.
#ಶಿಶುವಿಹಾರ : ೧೯೨೮ರಲ್ಲಿ ಹೊಸ ಮಾದರಿಯ ಶಿಕ್ಷಣ ನೀಡುವ ಉದ್ದೇಶದೊಂದಿಗೆ ನೂತನ ಪರಿಕಲ್ಪನೆಯೊಂದಿಗೆ ಶಿಶುವಿಹಾರವನ್ನು ಆರಂಭಿಸಿದರು. ೩.
#ಬಹು ಆಯ್ಕೆಯ ಪ್ರಶ್ನೆಗಳು : ಪರೀಕ್ಷಾ ವ್ಯವಸ್ಥೆಯಲ್ಲಿ ನವೀನ ಮಾದರಿ ಪ್ರಶ್ನೆಗಳನ್ನು ಸೇರಿಸುವ ಸಲುವಾಗಿ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಿದರು. ೪.
#ನಿಮ್ಹಾನ್ಸ್ : ಮೈಸೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಬಳಿಕ ಬೆಂಗಳೂರು ಹುಚ್ಚಾಸ್ಪತ್ರೆಯಲ್ಲಿ ಮನಶಾಸ್ತ್ರ, ಸಂಶೋಧನಾ ವಿಭಾಗ ಆರಂಭಿಸಿ ಅದು ಸುಪ್ರಸಿದ್ದ ಚಿಕಿತ್ಸಾ ಸಂಶೋಧನಾ ಸಂಸ್ಥೆಯಾಗಿ ಹೆಸರು ಮಾಡುವಂತೆ ಬೆಳೆಸಿದರು.
 
===ಉಲ್ಲೇಖ===