ಯಾರ್ಲುಂಗ್ ಟ್ಸಾಂಗ್ಪೋ ( ಬ್ರಹ್ಮಪುತ್ರ ) ಉತ್ತರ ಹಿಮಾಲಯದ [[ಕೈಲಾಸಪರ್ವತ|ಕೈಲಾಸಪರ್ವತದ]] ಬಳಿ ಜೀಮಾ ಯಾಂಗ್ಜಾಂಗ್ [[ಹಿಮನದಿ|ಹಿಮನದಿಯಲ್ಲಿ]] ಉಗಮಿಸುತ್ತದೆ. ಅಲ್ಲಿಂದ ಸುಮಾರು ೧೭೦೦ ಕಿ.ಮೀ. ವರೆಗೆ ಈ ನದಿಯು ಟಿಬೆಟ್ ನಲ್ಲಿ ಪೂರ್ವಾಭಿಮುಖವಾಗಿ ಹರಿಯುವುದು. ಇಲ್ಲಿ ಇದು ಸರಾಸರಿ ಸಮುದ್ರಮಟ್ಟದಿಂದ ಸುಮಾರು ೪೦೦೦ ಮೀ. ಎತ್ತರದಲ್ಲಿ ಹರಿಯುವುದು. ಹೀಗೆ ಬ್ರಹ್ಮಪುತ್ರ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಹರಿಯುವ ಮಹಾನದಿಯಾಗಿದೆ. ತನ್ನ ಪಾತ್ರದ ಅತ್ಯಂತ ಪೂರ್ವದ ಅಂಚಿನಲ್ಲಿ ಈ ನದಿಯು ನಮ್ಚಾ ಬರ್ವಾ ಪರ್ವತವನ್ನು ಬಳಸಿ ಮುಂದೆ ಯಾರ್ಲುಂಗ್ ಟ್ಸಾಂಗ್ಪೋ [[ಕೊಳ್ಳ|ಕೊಳ್ಳವನ್ನು]] ಸೃಷ್ಟಿಸಿದೆ. ಈ ಕೊಳ್ಳವು ಜಗತ್ತಿನ ಅತಿ ಆಳದ ಕೊಳ್ಳವೆನ್ನಲಾಗುತ್ತದೆ.
==ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ==
* ಟಿಬೆಟ್ನಲ್ಲಿ ಬ್ರಹ್ಮಪುತ್ರ ಉಪ ನದಿಗೆ ಅಡ್ಡಲಾಗಿ ಚೀನಾವು ಅಣೆಕಟ್ಟೆ ನಿರ್ಮಿಸಿ ಭಾರಿ ವೆಚ್ಚದ ಜಲ ವಿದ್ಯುತ್ ಯೋಜನೆ ಕಾರ್ಯಗತ ಮಾಡುತ್ತಿರುವುದರಿಂದ ನೀರಿನ ಹರಿವು ಕಡಿಮೆ ಆಗಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.
*ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ರೂ.೪೯೦೦ ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ. ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ ಜಲವಿದ್ಯುತ್ ಯೋಜನೆ ೨೦೧೪ರ ಜೂನ್ ನಲ್ಲಿ ಆರಂಭಗೊಂಡಿದ್ದು ೨೦೧೯ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.<ref>{{cite web |title=ಬ್ರಹ್ಮಪುತ್ರಾ ಉಪನದಿಗೆ ಅಣೆಕಟ್ಟು ನಿರ್ಮಾಣ ಭಾರತಕ್ಕೆ ತೊಂದರೆಯಿಲ್ಲ: ಚೀನಾ |url=http://m.varthabharati.in/article/2016_10_09/43596 |website=Varthabharati |accessdate=11 January 2020}}</ref>▼
▲*ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ರೂ.೪೯೦೦ ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ. ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ ಜಲವಿದ್ಯುತ್ ಯೋಜನೆ ೨೦೧೪ರ ಜೂನ್ ನಲ್ಲಿ ಆರಂಭಗೊಂಡಿದ್ದು ೨೦೧೯ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.<ref>{{cite web |title=ಬ್ರಹ್ಮಪುತ್ರಾ ಉಪನದಿಗೆ ಅಣೆಕಟ್ಟು ನಿರ್ಮಾಣ ಭಾರತಕ್ಕೆ ತೊಂದರೆಯಿಲ್ಲ: ಚೀನಾ |url=http://m.varthabharati.in/article/2016_10_09/43596 |website=Varthabharati |accessdate=11 January 2020}}</ref>
*ಕಳೆದ ವರ್ಷ ಚೀನಾವು ಟಿಬೆಟ್ನ ಅತ್ಯಂತ ದೊಡ್ಡ ಝಾಮ್ ಜಲವಿದ್ಯುತ್ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು. ಈ ಯೋಜನೆಗೆ ರೂ.೯೯೦೦ ಕೋಟಿ ವೆಚ್ಚ ತಗುಲಿದೆ ಎನ್ನಲಾಗಿದೆ. ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ, ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ.<ref>[http://www.prajavani.net/news/article/2016/10/02/442178.html ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ]</ref>▼
▲*ಕಳೆದ ವರ್ಷ ಚೀನಾವು ಟಿಬೆಟ್ನ ಅತ್ಯಂತ ದೊಡ್ಡ ಝಾಮ್ ಜಲವಿದ್ಯುತ್ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು. ಈ ಯೋಜನೆಗೆ ರೂ.೯೯೦೦ ಕೋಟಿ ವೆಚ್ಚ ತಗುಲಿದೆ ಎನ್ನಲಾಗಿದೆ. ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ, ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ.<ref>[http://www.prajavani.net/news/article/2016/10/02/442178.html ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ]</ref>
===ಭಾರತದಲ್ಲಿ ಬ್ರಹ್ಮಪುತ್ರ===
*ಬ್ರಹ್ಮಪುತ್ರ ಭಾರತವನ್ನು [[ಅರುಣಾಚಲ ಪ್ರದೇಶ]]ದಲ್ಲಿ ಪ್ರವೇಶಿಸುತ್ತದೆ. ಅಲ್ಲಿ ಈ ನದಿಗೆ ಸಿಯಾಂಗ್ ಎಂಬ ಹೆಸರು. ಟಿಬೆಟ್ ನಲ್ಲಿ ಅತಿ ಎತ್ತರದಲ್ಲಿ ಹರಿಯುವ ಈ ನದಿ ಅರುಣಾಚಲ ಪ್ರದೇಶದಲ್ಲಿ ಕೆಳ ಮಟ್ಟಕ್ಕೆ ತೀವ್ರ ಗತಿಯಲ್ಲಿ ಇಳಿಯಲಾರಂಭಿಸಿ ಕೊನೆಗೆ ಬಯಲು ಪ್ರದೇಶವನ್ನು ತಲುಪುವುದು. ಈ ಪ್ರದೇಶದಲ್ಲಿ ನದಿಗೆ ಡಿಹಾಂಗ್ ಎಂಬ ಹೆಸರು. ಸುಮಾರು ೩೫ ಕಿ.ಮೀ. ಹರಿದ ನಂತರ ಡಿಬಾಂಗ್ ಮತ್ತು ಲೋಹಿತ್ ಎಂಬೆರಡು ದೊಡ್ಡ ನದಿಗಳು ಈ ನದಿಯನ್ನು ಕೂಡಿಕೊಳ್ಳುತ್ತವೆ.
* ಈ ಸಂಗಮ ಸ್ಥಾನದಿಂದ ಮುಂದೆ ನದಿಯ ಅಗಲವು ಅಗಾಧವಾಗಿ ಹೆಚ್ಚಿ ಬ್ರಹ್ಮಪುತ್ರ ಎಂದು ಕರೆಯಿಸಿಕೊಳ್ಳುವುದು. ಅಸ್ಸಾಮಿನ ಸೋನಿತ್ ಪುರದ ಬಳಿ ಬ್ರಹ್ಮಪುತ್ರವನ್ನು ಜಿಯಾ ಭೊರೇಲಿ (ಕಾಮೆಂಗ್) ನದಿ ಸೇರಿಕೊಳ್ಳುತ್ತದೆ. ಅಸ್ಸಾಮ್ ರಾಜ್ಯದುದ್ದಕ್ಕೂ ಹರಿಯುವ ಈ ಮಹಾನದಿಯ ಅಗಲ ಕೆಲವು ಕಡೆ ೧೦ ಕಿ.ಮೀ. ಗೂ ಹೆಚ್ಚು. ಡಿಬ್ರೂಗಢದಿಂದ ಮುಂದಕ್ಕೆ ಬ್ರಹ್ಮಪುತ್ರ ಎರಡು ಕವಲುಗಳಾಗಿ ಒಡೆಯುವುದು.
*ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. ೧೦೦ ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. [[ಗುವಾಹಾಟಿ|ಗುವಾಹಾಟಿಯ]] ಬಳಿ ಹಾಜೋ ಎಂಬಲ್ಲಿ ಬ್ರಹ್ಮಪುತ್ರ [[ಷಿಲ್ಲಾಂಗ್ ಪ್ರಸ್ಥಭೂಮಿ|ಷಿಲ್ಲಾಂಗ್ ಪ್ರಸ್ಥಭೂಮಿಯ]] ಶಿಲಾಪದರಗಳನ್ನು ಭೇಧಿಸುತ್ತದೆ. ಈ ಸ್ಥಳದಲ್ಲಿ ನದಿಯ ಅಗಲ ಕೇವಲ ೧ ಕಿ.ಮೀ. ಸಮೀಪದ ಸರಾಯ್ ಘಾಟ್ ಬಳಿ ಬ್ರಹ್ಮಪುತ್ರ ನದಿಗೆ ಮೊತ್ತ ಮೊದಲ ರೈಲು-ರಸ್ತೆ ಸೇತುವೆ ನಿರ್ಮಿಸಲಾಗಿ ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು. ▼
*ಬ್ರಹ್ಮಪುತ್ರ ನದಿಯ ಪ್ರಾಚೀನ ಸಂಸ್ಕೃತ ಹೆಸರು ಲೌಹಿತ್ಯ. ಅಸ್ಸಾಮಿನ ಸ್ಥಳೀಯ ಹೆಅಸು ಲೂಯಿತ್. ಅಸ್ಸಾಮಿನ ಮೂಲನಿವಾಸಿಗಳಾದ [[ಬೋಡೋ]] ಜನರು ಇದನ್ನು ಭುಲ್ಲಮ್-ಬುಥೂರ್ ಎಂದು ಕರೆದರು. ಭಾರತದ ಇತರ ಪ್ರಮುಖ ನದಿಗಳಿಗೆ ಹೋಲಿಸಿದರೆ ಬ್ರಹ್ಮಪುತ್ರ ಹೆಚ್ಚು ಕಲುಷಿತವಾಗಿಲ್ಲ. ಆದರೆ ಈ ನದಿಯು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ. ▼
▲*ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. ೧೦೦ ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. [[ಗುವಾಹಾಟಿ|ಗುವಾಹಾಟಿಯ]] ಬಳಿ ಹಾಜೋ ಎಂಬಲ್ಲಿ ಬ್ರಹ್ಮಪುತ್ರ [[ಷಿಲ್ಲಾಂಗ್ ಪ್ರಸ್ಥಭೂಮಿ|ಷಿಲ್ಲಾಂಗ್ ಪ್ರಸ್ಥಭೂಮಿಯ]] ಶಿಲಾಪದರಗಳನ್ನು ಭೇಧಿಸುತ್ತದೆ. ಈ ಸ್ಥಳದಲ್ಲಿ ನದಿಯ ಅಗಲ ಕೇವಲ ೧ ಕಿ.ಮೀ. ಸಮೀಪದ ಸರಾಯ್ ಘಾಟ್ ಬಳಿ ಬ್ರಹ್ಮಪುತ್ರ ನದಿಗೆ ಮೊತ್ತ ಮೊದಲ ರೈಲು-ರಸ್ತೆ ಸೇತುವೆ ನಿರ್ಮಿಸಲಾಗಿ ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು.
*ಪೆಟ್ರೋಲಿಯಮ್ ಸಂಸ್ಕರಣಾ ಘಟಕಗಳು ದೊಡ್ಡ ಪ್ರಮಾಣದಲ್ಲಿ ನದಿಯನ್ನು ಮಲಿನಗೊಳಿಸುತ್ತಿವೆ. ನದಿಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಪದೇ ಪದೇ ಉಂಟಾಗುವ ಪ್ರವಾಹ. ಅರಣ್ಯನಾಶವು ಹೆಚ್ಚುತ್ತಿದ್ದಂತೆ ನದಿಯಲ್ಲಿ ಪ್ರವಾಹದ ಸಾಧ್ಯತೆಯೂ ಹೆಚ್ಚುತ್ತಿದೆ.▼
▲*ಬ್ರಹ್ಮಪುತ್ರ ನದಿಯ ಪ್ರಾಚೀನ ಸಂಸ್ಕೃತ ಹೆಸರು ಲೌಹಿತ್ಯ. ಅಸ್ಸಾಮಿನ ಸ್ಥಳೀಯ ಹೆಅಸು ಲೂಯಿತ್. ಅಸ್ಸಾಮಿನ ಮೂಲನಿವಾಸಿಗಳಾದ [[ಬೋಡೋ]] ಜನರು ಇದನ್ನು ಭುಲ್ಲಮ್-ಬುಥೂರ್ ಎಂದು ಕರೆದರು. ಭಾರತದ ಇತರ ಪ್ರಮುಖ ನದಿಗಳಿಗೆ ಹೋಲಿಸಿದರೆ ಬ್ರಹ್ಮಪುತ್ರ ಹೆಚ್ಚು ಕಲುಷಿತವಾಗಿಲ್ಲ. ಆದರೆ ಈ ನದಿಯು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ.
▲*ಪೆಟ್ರೋಲಿಯಮ್ ಸಂಸ್ಕರಣಾ ಘಟಕಗಳು ದೊಡ್ಡ ಪ್ರಮಾಣದಲ್ಲಿ ನದಿಯನ್ನು ಮಲಿನಗೊಳಿಸುತ್ತಿವೆ. ನದಿಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಪದೇ ಪದೇ ಉಂಟಾಗುವ ಪ್ರವಾಹ. ಅರಣ್ಯನಾಶವು ಹೆಚ್ಚುತ್ತಿದ್ದಂತೆ ನದಿಯಲ್ಲಿ ಪ್ರವಾಹದ ಸಾಧ್ಯತೆಯೂ ಹೆಚ್ಚುತ್ತಿದೆ.