ಸದಸ್ಯ:Ganapathi Diwan/ನನ್ನ ಪ್ರಯೋಗಪುಟ1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಸುನಾದ್‍ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ, ಛಾಯಾಗ್ರಾಹಕ ಸುನಾದ್‍ಗ...
( ಯಾವುದೇ ವ್ಯತ್ಯಾಸವಿಲ್ಲ )

೧೦:೧೦, ೧೧ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಸುನಾದ್‍ಗೌತಮ್

ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ, ಛಾಯಾಗ್ರಾಹಕ

ಸುನಾದ್‍ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತುಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇತಮ್ಮ"ಸುನಿನಾದಡಿಜಿಟಲ್‍ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸಮಾಡುತ್ತಿದ್ದಾರೆ. ಹಿರಿತೆರೆ, ಕಿರಿತೆರೆ, ಜಾಹೀರಾತು ಹೀಗೆ ಮುಂತಾದಕ್ಷೇತ್ರದಲ್ಲಿ ಕೆಲಸ ಮಾಡಿರುವಅನುಭವ ಹೊಂದಿದ್ದಾರೆ.

ಬಾಲ್ಯ/ಶಿಕ್ಷಣ :

ಸುನಾದ್‍ಗೌತಮ್‍ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆಉಮೇಶ್‍ಗೌತಮ್ ನಾಯಕ್ ಮತ್ತುತಾಯಿ ಸುಮಾ ನಾಯಕ್. ಸುನಾದ್‍ಗೌತಮ್‍ತಂದೆಉಮೇಶ್‍ಗೌತಮ್ ನಾಯಕ್‍ಇವರುಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇಆರಂಭವಾಯಿತು. ತಮ್ಮಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನುಕಲಿಯಲು ಪ್ರಾರಂಭಿಸಿದರು.ಉಮೇಶ್‍ಗೌತಮ್ ನಾಯಕ್‍ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಇದು ಸುನಾದ್‍ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು.ಅದರ ಪರಿಣಾಮತಮ್ಮ 13 ವರ್ಷ ವಯಸ್ಸಿನಲ್ಲೇತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನುರಚಿಸುವ ಅವಕಾಶ ಪಡೆದುಕೊಂಡರು.ಜೊತೆಗೆಬಾಲ್ಯದಲ್ಲಿಅವರುಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದರು.ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು.

ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕುಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು.ಅವರುತಮ್ಮಕಾಲೇಜುಶಿಕ್ಷಣದೊಂದಿಗೆ ಆಸಕ್ತಿಯಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.

ವೃತ್ತಿ ಬದುಕಿನಆರಂಭ :

ಪದವಿಪೂರ್ವ ಶಿಕ್ಷಣದ ಜೊತೆಗೆ, ಅವರು ಹೆಚ್ಚು ಹೆಚ್ಚು ಸಂಗೀತದತ್ತ ಗಮನಹರಿಸಿದರು. ಸಂಗೀತ ಸಂಯೋಜನೆಗಳು, ಧ್ವನಿಮುದ್ರಣಗಳು ಮತ್ತು ಸಂಗೀತನಿರ್ದೇಶನದಲ್ಲಿ ಕೆಲಸ ಮಾಡಲುತೊಡಗಿದರು. ಆ ಮೂಲಕ ಅವರಮನೆಯಲ್ಲೇಇದ್ದಸಣ್ಣರೆಕಾಡಿರ್ಂಗ್‍ಘಟಕವನ್ನು ವಿಸ್ತರಿಸಿದರು.ಅವರ ಸಾಧನೆಯ ಹಾದಿಗೆ ಪ್ರತಿಫಲ ಎಂಬಂತೆ ಪಿಯುಸಿಕಲಿಕೆಯಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯಕಾರ್ಕಳದಲ್ಲಿ ತಮ್ಮದೇಆದಆಡಿಯೋರೆಕಾಡಿರ್ಂಗ್ ಸ್ಟುಡಿಯೋವನ್ನು ಸ್ಥಾಪಿಸಿದರು. "ಸುನಿನಾದಡಿಜಿಟಲ್‍ಆಡಿಯೋ ಸ್ಟುಡಿಯೋ" ಎಂಬ ಸ್ಟುಡಿಯೋ ಸ್ಥಾಪಿಸಿ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡರು.ತಮ್ಮ 18ನೇ ವಯಸ್ಸಿನಲ್ಲೇ ಈ ಸಾಧನೆಯ ಹಾದಿ ತಲುಪಿದ್ದು ವೃತ್ತಿಜೀವನದದೊಡ್ಡ ಮೈಲುಗಲ್ಲಾಗಿ ಪರಿಣಮಿಸಿತು.

ಪದವಿ ಕಲಿಕೆಯದಿನಗಳಲ್ಲಿ ಅವರು ನಾಟಕಗಳಿಗೆ ಸಂಗೀತ ನಿರ್ದೇಶನಗಳನ್ನು ಮಾಡಲು ಪ್ರಾರಂಭಿಸಿದರು.ಅದೇ ಸಮಯದಲ್ಲಿಅವರುಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕೋಟಿಚೆನ್ನಯ್ಯ" ಎಂಬ ಧಾರಾವಾಹಿಯಸಂಗೀತ ಸಂಯೋಜನೆಗೆಅವಕಾಶವನ್ನು ಪಡೆದರು.ಜೊತೆಜೊತೆಗೆಅವರ ಸ್ಟುಡಿಯೋದಿಂದ 150 ಕ್ಕೂ ಹೆಚ್ಚು ಮ್ಯೂಸಿಕ್ ಆಡಿಯೊ ಸಿಡಿಗಳನ್ನು ಬಿಡುಗಡೆ ಮಾಡಿದ್ದರು.

ಸಂಗೀತದಜೊತೆಗೆ, ಅವರುಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದರು.ವಿಶೇಷ ಕಾಳಜಿ ವಹಿಸಿ ಸಿನಿಮಾಛಾಯಾಗ್ರಹಣಕಲೆಯನ್ನೂಕರಗತಮಾಡಿಕೊಂಡರು.

ಇವೆಲ್ಲವೂಅವರ ಮೊದಲಸಿನಿಮಾ ಕೆಲಸ "ಸೋಜಿಗ" ಎಂಬ ಕನ್ನಡ ಚಲನಚಿತ್ರಕ್ಕೆ ಸಹಕಾರಿಯಾಯಿತು.ಸೋಜಿಗಚಿತ್ರದಲ್ಲಿಅವರು ಸಂಗೀತ ನಿರ್ದೇಶಕನಾಗಿ ಮತ್ತುಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದರು. ಈ ನಡುವೆಅವರು ವಿವಿಧ ಜಾಹೀರಾತುಗಳು,ರೇಡಿಯೋ ಮಿರ್ಚಿಜಿಂಗಲ್ಸ್, ಭಕ್ತಿ - ಭಾವಗೀತೆಗಳು ಮತ್ತುಇತರ ಹಾಡುಗಳ ಆಲ್ಬಮ್‍ಗಳಿಗಾಗಿ ಕೆಲಸ ಮಾಡಿದರು.

ವೃತ್ತಿಜೀವನ ಮತ್ತು ಕೆಲಸಗಳು:

ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು :

ಸೋಜಿಗ, ಪ್ರಾಣಕೊಡುವೆ ಗೆಳತಿ, ಚದುರಿದಕಾರ್ಮೋಡ, 400, ರಂಭಾರೂಟಿ, ಗಲ್ಲಿಬೇಕರಿ ಮತ್ತು ವಿನಯ್‍ರಾಜ್‍ಕುಮಾರ್‍ಅಭಿನಯದ “ಅನಂತು ವರ್ಸಸ್ ನುಸ್ರತ್” ಇತ್ತೀಚೆಗೆತೆರೆಕಂಡ ಯಶಸ್ವಿ ಚಿತ್ರ.

ಜೊತೆಗೆ “ಗೋಲ್ ಮಾಲ್” ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ” ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು :

ಕನ್ನಡದ ಸೋಜಿಗ, ತುಳುವಿನಲ್ಲಿ ಗೋಲ್ ಮಾಲ್ ಮತ್ತುಕೊಂಕಣಿ ಭಾಷೆಯ ಬಾಯೊ ಎಂಬ ಚಿತ್ರಕ್ಕೆಛಾಯಾಗ್ರಾಹಕರಾಗಿದುಡಿದಅನುಭವ ಸುನಾದ್‍ಗೌತಮ್‍ಅವರದ್ದು.

ಇಷ್ಟಲ್ಲದೆಕಿರುತೆರೆಯಧಾರಾವಾಹಿ ಮತ್ತುರಿಯಾಲಿಟಿ ಶೋ ವಿಭಾಗದಲ್ಲೂ ಸುನಾದ್‍ಅವರದು ಯಶಸ್ವಿ ಪಾತ್ರ. ಚಂದನ ವಾಹಿನಿಯ “ಕೋಟಿಚೆನ್ನಯ್ಯ”, ಉದಯ ವಾಹಿನಿಯ “ಆನಂದ ಭೈರವಿ”, “ಸರಯೂ”, “ರಾಗಾನುರಾಗ”, “ಜೋಜೋ ಲಾಲಿ”, “ದೇವಯಾನಿ” ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.ಇತ್ತೀಚೆಗೆತೆರೆಕಂಡಜೀಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ. ಜೀಕನ್ನಡ ವಾಹಿನಿಯ “ಜೀಕುಟುಂಬ ಅವಾಡ್ರ್ಸ್-2019”ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ.

ಕನ್ನಡದರಿಯಾಲಿಟಿ ಶೋಗಳಾದಉದಯ ವಾಹಿನಿಯಕಿಕ್‍ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.