ಭಾಗಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್: 2017 source edit |
||
೪ ನೇ ಸಾಲು:
|other_name =
|taluk_names =
|district = [[
|state_name =
|nearest_city =
|parliament_const =
|assembly_const =
೨೯ ನೇ ಸಾಲು:
|website=
}}
[[ಭಾರತ]]ದಲ್ಲಿನ [[ಕರ್ನಾಟಕ]]ದ [[ಕೊಡಗು]] ಜಿಲ್ಲೆಯಲ್ಲಿನ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಕಾವೇರಿ ನದಿಯ ದಂಡೆಯ ಮೇಲಿನ ನದಿಯ ಹರಿವಿಗೆ ಎದುರು ದಿಕ್ಕಿನಲ್ಲಿರುವ ವಿಸ್ತರಣೆಗಳ ಮೇಲೆ ಇದು ನೆಲೆಗೊಂಡಿದೆ. ಈ ಸ್ಥಳದಲ್ಲಿ, ಕಾವೇರಿಗೆ ಎರಡು ಉಪನದಿಗಳು ಬಂದು ಸೇರಿಕೊಳ್ಳುತ್ತವೆ; ಕನ್ನಿಕೆ ಮತ್ತು ಕಾಲ್ಪನಿಕ ನದಿಯಾದ ಸುಜ್ಯೋತಿ ಇವೇ ಆ ಎರಡು ನದಿಗಳಾಗಿವೆ. ಒಂದು ನದಿ ಸಂಗಮಸ್ಥಾನವಾಗಿ (ಕನ್ನಡ ಮತ್ತು [[ಸಂಸ್ಕೃತ]] ಭಾಷೆಗಳಲ್ಲಿ ಕ್ರಮವಾಗಿ ''ಕೂಡಲ'' ಅಥವಾ ''ತ್ರಿವೇಣಿ ಸಂಗಮ'' ) ಇದು ಪವಿತ್ರ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ.
ಯಾತ್ರಾರ್ಥಿಗಳು ಕಾವೇರಿಯ ಜನ್ಮಸ್ಥಳವಾದ [[ತಲಕಾವೇರಿ]]ಯೆಡೆಗೆ ಮುಂದುವರಿಯುವುದಕ್ಕೆ ಮುಂಚಿತವಾಗಿ, ತ್ರಿವೇಣಿ ಸಂಗಮದಲ್ಲಿ ಒಮ್ಮೆ ಸ್ನಾನಮಾಡಿ ತಮ್ಮ ಪೂರ್ವಜರ ಕುರಿತಾದ ಕರ್ಮಾಚರಣೆಗಳನ್ನು ನಿರ್ವಹಿಸುವುದು ಒಂದು ಸಾಮಾನ್ಯ ಪರಿಪಾಠವಾಗಿದೆ. ಅಕ್ಟೋಬರ್ ತಿಂಗಳ 17ನೇ ಅಥವಾ 18ನೇ ತಾರೀಖಿನಂದು ಬರುವ ತುಲಾ ಸಂಕ್ರಮಣದ ಸಂದರ್ಭದಲ್ಲಿ, ಯಾತ್ರಾರ್ಥಿಗಳು ಇಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾವಣೆಯಾಗುತ್ತಾರೆ.
ತ್ರಿವೇಣಿ ಸಂಗಮದಿಂದ ಸ್ವಲ್ಪವೇ ದೂರದಲ್ಲೊಂದು ಪ್ರಸಿದ್ಧ ದೇವಸ್ಥಾನವಿದ್ದು, ಶ್ರೀ ಭಗಂಡೇಶ್ವರ ದೇವಸ್ಥಾನ ಎಂದು ಅದು ಸುಪರಿಚಿತವಾಗಿದೆ; ಇಲ್ಲಿ ಭಗಂಡೇಶ್ವರ (ಈಶ್ವರ), ಸುಬ್ರಹ್ಮಣ್ಯ, ಮಹಾವಿಷ್ಣು ಮತ್ತು ಗಣಪತಿ ದೇವರುಗಳ ವಿಗ್ರಹಗಳು ಪ್ರತಿಷ್ಠಾಪಿಸಲ್ಪಟ್ಟಿವೆ. ಈ ಸ್ಥಳವು ಭಗಂಡೇಶ್ವರ ಕ್ಷೇತ್ರ ಎಂಬ ಹೆಸರಿನಿಂದಲೂ ಪ್ರಸಿದ್ಧಿಯಾಗಿದ್ದು, ಇದರಿಂದಲೇ ಭಾಗಮಂಡಲ ಎಂಬ ಹೆಸರು ಜನ್ಯವಾಗಿದೆ. ಈ ಪ್ರದೇಶದಲ್ಲಿನ ದೇವಸ್ಥಾನಗಳು ಕೇರಳ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದ್ದು, ಈ ಶೈಲಿಯು ನೇಪಾಳದಲ್ಲಿರುವ ದೇವಸ್ಥಾನಗಳನ್ನೂ ಹೋಲುವಂತಿದೆ.
|