ಭಾರತದ ರಾಷ್ಟ್ರಪತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯೧ ನೇ ಸಾಲು:
 
ಆದರೆ ಮುಂದಿನ ಎರಡು ಸನ್ನಿವೇಶ ಅಥವಾ ಅವಧಿಗಳಲ್ಲಿ ಇದೇ ಪರಿಸ್ಥಿತಿ ಇರಲಿಲ್ಲ; 1952ರ ಚುನಾವಣೆಯಲ್ಲಿ, ಸಂವಿಧಾನ ರಚನಾಮಂಡಲಿಯ ಓರ್ವ ಸದಸ್ಯರಾಗಿದ್ದ ಕೆ.ಟಿ. ಷಾ ಅವರಿಂದ ಪ್ರಸಾದರು ಪೈಪೋಟಿ ಎದುರಿಸಬೇಕಾಗಿ ಬಂತು. ಆದರೆ ಷಾ ಮಡಿಲಿಗೆ ಬಿದ್ದಿದ್ದು 93,000 ಮತಗಳು. 5 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ ಪ್ರಸಾದರು ವಿಜಯಿಯಾದರು. 1957ರಲ್ಲಿ ನಡೆದ ‘ಸಾಂಕೇತಿಕ’ ಅಥವಾ ‘ನಾಮಮಾತ್ರದ’ ಚುನಾವಣೆಯಲ್ಲಿ 4.6 ಲಕ್ಷ ಮತಗಳನ್ನು ಗಳಿಸಿದ ರಾಜೇಂದ್ರ ಪ್ರಸಾದರು ಎದುರಾಳಿ ಹರಿ ರಾಮ್ (2,672 ಮತಗಳು) ಅವರನ್ನು ಸೋಲಿಸಿದರು. ಇದುವರೆಗೆ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದವರ ಪೈಕಿ ಇವರದ್ದೇ ಸುದೀರ್ಘ ಕಾಲಾವಧಿ (12 ವರ್ಷಗಳು) ಎಂಬುದು ಗಮನಿಸಬೇಕಾದ ಸಂಗತಿ.
 
;ಝಾಕೀರ್ ಹುಸೇನ್ (1967-1969):
 
ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು.
 
;ಸರ್ವೆಪಲ್ಲಿ ರಾಧಾಕೃಷ್ಣನ್ (1962-1967):
 
ಬಾಬು ರಾಜೇಂದ್ರ ಪ್ರಸಾದರ ತರುವಾಯ ಈ ಸ್ಥಾನ ಅಲಂಕರಿಸಿದ್ದು ಶ್ರೇಷ್ಠ ವಿದ್ವಾಂಸ ಎಂದೇ ವ್ಯಾಪಕ ಮೆಚ್ಚುಗೆ ಪಡೆದಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್. ಬರೋಬ್ಬರಿ 10 ವರ್ಷಗಳ ಕಾಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ, ಅದನ್ನು ರಾಷ್ಟ್ರಪತಿ ಚುನಾವಣೆಗೆ ಚಿಮ್ಮುಹಲಗೆಯಾಗಿಸಿಕೊಂಡ ಇವರು, ಐದೂವರೆ ಲಕ್ಷ ಮತಗಳನ್ನು ಗಳಿಸುವ ಮೂಲಕ ಸಮೀಪದ ಪ್ರತಿಸ್ಪರ್ಧಿ ಹರಿ ರಾಮ್ (6,341 ಮತಗಳು) ಅವರನ್ನು ಸೋಲಿಸಿ, 1962ರಿಂದ 67ರವರೆಗೆ ರಾಷ್ಟ್ರಪತಿ ಹುದ್ದೆಯಲ್ಲಿದ್ದರು.
 
;ಝಾಕೀರ್ ಹುಸೇನ್ (1967-1969):
 
ಇವರು ದೇಶದ ಮೊಟ್ಟಮೊದಲ ಮುಸ್ಲಿಂ ರಾಷ್ಟ್ರಪತಿಯೂ ಹೌದು. 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಂಚ ಹಿನ್ನಡೆ (283 ಸ್ಥಾನಗಳು) ಅನುಭವಿಸಬೇಕಾಗಿ ಬಂದ ವಾತಾವರಣದ ಹಿನ್ನೆಲೆಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿತು ಎನ್ನಬೇಕು. ಈ ಚುನಾವಣೆಯಲ್ಲಿ, ವಿಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಯಾಗಿದ್ದ ಸುಪ್ರೀಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ಕೊಕಾ ಸುಬ್ಬರಾವ್ 3.64 ಲಕ್ಷ ಮತ ಗಳಿಸಿದರೆ, 4.71 ಲಕ್ಷ ಮತ ಗಿಟ್ಟಿಸಿಕೊಂಡ ಝಾಕೀರ್ ಹುಸೇನ್ ವಿಜಯಶಾಲಿಯಾದರು.
 
;ವಿ.ವಿ. ಗಿರಿ (1969-1974):
"https://kn.wikipedia.org/wiki/ಭಾರತದ_ರಾಷ್ಟ್ರಪತಿ" ಇಂದ ಪಡೆಯಲ್ಪಟ್ಟಿದೆ