ಶಿಲ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
cleanup |
cleanup completed |
||
೧೫ ನೇ ಸಾಲು:
ಅನೇಕ ಶಿಲ್ಪಿಗಳು ಕೃತಿಗಳನ್ನು ಸೃಷ್ಟಿಸಲು ಹೊಸ ರೀತಿಗಳನ್ನು ಮತ್ತು ವಸ್ತುಗಳನ್ನು ಹುಡುಕುತ್ತಾರೆ. ಪಾಬ್ಲೋ ಪಿಕಾಸೋನ ಅತ್ಯಂತ ಪ್ರಸಿದ್ಧ ಶಿಲ್ಪಗಳಲ್ಲಿ ಒಂದು ಸೈಕಲ್ ಭಾಗಗಳನ್ನು ಒಳಗೊಂಡಿತ್ತು. ಅಲೆಕ್ಸಾಂಡರ್ ಕ್ಯಾಲ್ಡರ್ ಮತ್ತು ಇತರ ಆಧುನಿಕತಾವಾದಿಗಳು ಬಣ್ಣದ ಉಕ್ಕನ್ನು ಅದ್ಭುತವಾಗಿ ಬಳಸಿದರು. 1960ರ ದಶಕದಿಂದ, ಅಕ್ರಿಲಿಕ್ಗಳು ಮತ್ತು ಇತರ ಪ್ಲಾಸ್ಟಿಕ್ಗಳನ್ನು ಕೂಡ ಬಳಸಲಾಗಿದೆ. ಆಂಡಿ ಗೋಲ್ಡ್ಸ್ವರ್ದಿ ತನ್ನ ಅಸಾಮಾನ್ಯ ಕ್ಷಣಿಕ ಶಿಲ್ಪಗಳನ್ನು ನೈಸರ್ಗಿಕ ಹಿನ್ನೆಲೆಗಳಲ್ಲಿ ಬಹುತೇಕ ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಸೃಷ್ಟಿಸುತ್ತಾನೆ. ಹಿಮ ಶಿಲ್ಪ, ಮರಳು ಶಿಲ್ಪ, ಮತ್ತು ಅನಿಲ ಶಿಲ್ಪದಂತಹ ಕೆಲವು ಶಿಲ್ಪಗಳು ಉದ್ದೇಶಪೂರ್ವಕವಾಗಿ ಅಲ್ಪಾಯಸ್ಸಿನದಾಗಿರುತ್ತವೆ. ಮಿರೋ, ಮಾರ್ಸೆಲ್ ಡಚಾಂಪ್, ವ್ಯೂಸ್ ಕ್ಲೀನ್, ಜಾನ್ ಚೇಂಬರ್ಲೇನ್, ಜೀನ್ ಟಿಂಗ್ವೆಲಿ, ರಿಚರ್ಡ್ ಸ್ಟ್ಯಾನ್ಕೀವಿಜ಼್, ಲ್ಯಾರಿ ಬೆಲ್, ಕಾರ್ಲ್ ಆಂಡ್ರೆ, ಲೂಯಿಸ್ ಬೂರ್ಜ್ವಾ, ಜಿಮ್ ಗ್ಯಾರಿ, ಮತ್ತು ಇತರರು ಸೇರಿದಂತೆ ಅನೇಕ ಶಿಲ್ಪಿಗಳು ತಮ್ಮ ಕೃತಿಗಳನ್ನು ನಿರ್ಮಾಣಮಾಡಲು ಗಾಜು, ವರ್ಣರಂಜಿತ ಗಾಜು, ವಾಹನದ ಭಾಗಗಳು, ಉಪಕರಣಗಳು, ಯಂತ್ರಭಾಗಗಳು, ಹಾರ್ಡ್ವೇರ್ ಅನ್ನು ಬಳಸಿದರು.
ಶಿಲ್ಪಿಗಳು ಹಲವುವೇಳೆ ಪ್ಯಾರಿಸ್ ಗಾರೆ, ಮೇಣ, ಜೇಡಿಮಣ್ಣು ಪ್ಲ್ಯಾಸ್ಟಸೀನ್ನಂತಹ ಅಲ್ಪಕಾಲಿಕ ವಸ್ತುಗಳಿಂದ ನಕಾಸೆಗಳೆಂದು ಕರೆಯಲ್ಪಡುವ ಸಣ್ಣ ಪೂರ್ವಭಾವಿ ಕೃತಿಗಳನ್ನು ನಿರ್ಮಿಸುತ್ತಾರೆ, ಉದಾಹರಣೆಗೆ ಆಲ್ಫ್ರೆಡ್ ಗಿಲ್ಬರ್ಟ್ ಪಿಕ್ಯಾಡಿಲಿ ಸರ್ಕಸ್, ಲಂಡನ್ನಲ್ಲಿ 'ಈರಾಸ್'ನ್ನು ನಿರ್ಮಿಸಿದಂತೆ. ರೆಟ್ರೊ ಆರ್ಕಿಯಾಲಜಿಯಲ್ಲಿ, ಈ ವಸ್ತುಗಳು ಸಾಮಾನ್ಯವಾಗಿ ಅಂತಿಮ ಉತ್ಪನ್ನವಾಗಿರುತ್ತವೆ.
ಶಿಲ್ಪಿಗಳು ಕೆಲವೊಮ್ಮೆ ಕಂಡು ವಸ್ತುಗಳನ್ನು ಬಳಸಿ.▼
==ಭಾರತದಲ್ಲಿ ಶಿಲ್ಪಗಳ ಇತಿಹಾಸ==
ಪರಿಚಿತವಿರುವ ಮೊದಲ ಶಿಲ್ಪಗಳು ಸಿಂಧೂತಟದ ನಾಗರೀಕತೆಯ (3300-1700 BC) ಕಾಲದ್ದಾಗಿವೆ ಮತ್ತು ಆಧುನಿಕ ಪಾಕಿಸ್ತಾನದ ಮೋಹನ್ಜೋದಡೊ ಹಾಗೂ ಹಡಪ್ಪಾ ಸ್ಥಳಗಳಲ್ಲಿ ಕಂಡುಬರುತ್ತವೆ. ನಂತರ, ಹಿಂದೂ ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳು ಮತ್ತಷ್ಟು ಅಭಿವೃದ್ಧಿಯಾದಂತೆ, ಭಾರತವು ಕಂಚಿನ ಶಿಲ್ಪಗಳು ಮತ್ತು ಬಹಳ ಸಂಕೀರ್ಣತೆಯ ಕಲ್ಲಿನ ಕೆತ್ತನೆಗಳನ್ನು ನಿರ್ಮಾಣಮಾಡಿತು, ಉದಾಹರಣೆಗೆ ವಿವಿಧ ಹಿಂದೂ, ಜೈನ ಮತ್ತು ಬೌದ್ಧ ಮಂದಿರಗಳನ್ನು ಚೆಲುವಾಗಿಸುವ ಪ್ರಸಿದ್ಧ ದೇವಾಲಯ ಕೆತ್ತನೆಗಳು. ಇವುಗಳಲ್ಲಿ ಕೆಲವು, ಉದಾಹರಣೆಗೆ ಎಲ್ಲೋರ ಮತ್ತು ಅಜಂತಾದ ಗುಹಾ ದೇವಾಲಯಗಳು, ಭಾರತೀಯ ಕಲ್ಲು ಕೆತ್ತನೆಯ ವಾಸ್ತುಶಿಲ್ಪದ ಉದಾಹರಣೆಗಳಾಗಿವೆ, ಮತ್ತು ಬಹುಶಃ ವಿಶ್ವದಲ್ಲಿನ ಅತಿ ದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷಿ ಶಿಲ್ಪ ಯೋಜನೆಗಳಾಗಿವೆ.
ಮಥುರಾದ ಗುಲಾಬಿ ಬಣ್ಣದ ಮರಳುಶಿಲೆಯ ಶಿಲ್ಪಗಳು ಗುಪ್ತ ಸಾಮ್ರಾಜ್ಯದ ಕಾಲದಲ್ಲಿ (4-6 ಶತಮಾನ) ವಿಕಸನಗೊಂಡವು ಮತ್ತು ವಿನ್ಯಾಸದಲ್ಲಿ ಬಹಳ ನವಿರಾದ ಕಾರ್ಯಗತಗೊಳಿಸುವಿಕೆ ಮತ್ತು ನಾಜೂಕು ಮುಟ್ಟಿದವು. ಗುಪ್ತರ ಅವಧಿಯ ಕಲೆಯು ನಂತರ ಸೂಯಿ ಸಾಮ್ರಾಜ್ಯ ಸಮಯದಲ್ಲಿ ಚೀನೀ ಶೈಲಿಗಳ ಮೇಲೆ, ಮತ್ತು ಉಳಿದ ಪೂರ್ವ ಏಷ್ಯಾದ ಉದ್ದಕ್ಕಿನ ಕಲಾತ್ಮಕ ಶೈಲಿಗಳ ಮೇಲೆ ಪ್ರಭಾವ ಬೀರಿತು. ತಿಳಿಗಚ್ಚು, ಪದರಶಿಲೆ ಅಥವಾ ಜೇಡಿಮಣ್ಣಿನಲ್ಲಿನ ಅಫ್ಘಾನಿಸ್ಥಾನದ ಹೆಚ್ಚು ನವೀನ ಶಿಲ್ಪಗಳು ಭಾರತೀಯ ಉತ್ತರಗುಪ್ತ ವಿಲಕ್ಷಣತೆ ಮತ್ತು ಶಾಸ್ತ್ರೀಯ ಪ್ರಭಾವದ ಪ್ರಬಲವಾದ ಸಮ್ಮಿಶ್ರಣವನ್ನು ಪ್ರದರ್ಶಿಸುತ್ತವೆ. ದಕ್ಷಿಣ ಭಾರತದ ಚೋಳ ಸಾಮ್ರಾಜ್ಯದ (ಸು. 850-1250) ಪ್ರಸಿದ್ಧ ಕಂಚಿನ ಶಿಲ್ಪಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ; ನಟರಾಜನ ಅಪ್ರತಿಮ ಆಕೃತಿಯು ಉತ್ಕೃಷ್ಟ ಉದಾಹರಣೆಯಾಗಿದೆ. ಭಾರತೀಯ ಶಿಲ್ಪಕಲೆಯ ಸಂಪ್ರದಾಯಗಳು 20 ನೇ ಮತ್ತು 21 ನೇ ಶತಮಾನಗಳಲ್ಲಿ ಮುಂದುವರೆಯುತ್ತಿವೆ, ಉದಾಹರಣೆಗೆ ಪಲ್ಲವ ಸಾಮ್ರಾಜ್ಯದಿಂದ ಹುಟ್ಟಿಕೊಂಡ ಮಹಾಬಲಿಪುರಂನಲ್ಲಿರುವ ಬೆಣಚುಕಲ್ಲು ಕೆತ್ತನೆಗಳು. ಸಮಕಾಲೀನ ಭಾರತೀಯ ಶಿಲ್ಪಕಲೆಯು ವಿಶಿಷ್ಟವಾಗಿ ಬಹುರೂಪಿಯಾಗಿದೆ, ಆದರೆ ಧ್ರುವ ಮಿಸ್ತ್ರಿಯಂತಹ ಹೆಸರಾಂತ ವ್ಯಕ್ತಿಗಳನ್ನು ಒಳಗೊಂಡಿದೆ.
[[ವರ್ಗ:ಕಲೆಗಳು]]
|