}}
'''ರಾಂಪುರ ಪಿ.ಟಿ.''' ಗ್ರಾಮವು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯ [[ಸಿಂದಗಿ]] ತಾಲ್ಲೂಕಿನಲ್ಲಿದೆ.
=='''ಭೌಗೋಳಿಕ'''==
ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51" ಪೂರ್ವ ರೇಖಾಂಶದಲ್ಲಿ ಬರುತ್ತದೆ.
=='''ಹವಾಮಾನ'''==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''43 ಡಿಗ್ರಿ'''ವರೆಗೆಡಿಗ್ರಿವರೆಗೆ(ಎಪ್ರೀಲನಲ್ಲಿ), ಅತೀ ಕಡಿಮೆ ಅಂದರೆ '''9 ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - '''35°C-42°C ಡಿಗ್ರಿ''' ಸೆಲ್ಸಿಯಸ್
* <big>ಚಳಿಗಾಲ</big> ಮತ್ತು
* <big>ಮಳೆಗಾಲ</big> - '''18°C-28°C ಡಿಗ್ರಿ''' ಸೆಲ್ಸಿಯಸ್.
* <big>ಮಳೆ</big> - ಪ್ರತಿ ವರ್ಷ ಮಳೆ '''300 - 600ಮಿಮಿ''' ಗಳಸ್ಟು ಆಗುತ್ತದೆ.
* <big>ಗಾಳಿ</big> - ಗಾಳಿಯ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.
=='''ಜನಸಂಖ್ಯೆ'''==
ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''1500''' ಇದೆ. ಅದರಲ್ಲಿ 800 ಪುರುಷರು ಮತ್ತು 700 ಮಹಿಳೆಯರು ಇದ್ದಾರೆ. ಒಟ್ಟಾರೆ ಸುಮಾರು 1000ಕ್ಕೂ ಹೆಚ್ಚು ಮತಗಳನ್ನು ಹೊಂದಿದೆ.
=='''ಕಲೆ'''==
ಲಾವಣಿ ಪದ, ಡೊಳ್ಳಿನ ಪದ, ಗೀಗೀ ಪದ, ಹಂತಿ ಪದ ಮತ್ತು ಮೊಹರಮ ಹೆಜ್ಜೆ ಕುಣಿತದ ಪದ ಮುಂತಾದವು ಗ್ರಾಮದ ಕಲೆಯಾಗಿದೆ.
=='''ಸಂಸ್ಕೃತಿ'''==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''ಇಲಕಲ್ಲ ಸೀರೆ'''ಗಳನ್ನುಸೀರೆಗಳನ್ನು ಧರಿಸುತ್ತಾರೆ.
=='''ಆಹಾರ (ಖಾದ್ಯ)'''==
ಪ್ರಮುಖ ಆಹಾರ ಧಾನ್ಯ '''ಜೋಳ'''. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಹಾಗೂ ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರು ಲಭ್ಯವಿರುತ್ತದೆ.
=='''ಕೃಷಿ'''==
ಗ್ರಾಮದ ಪ್ರತಿಶತ '''90''' ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''', ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
=='''ಕಾಲುವೆ'''==
'''[[ಕೃಷ್ಣಾ]]''' ನದಿಯ [[ಆಲಮಟ್ಟಿ ಆಣೆಕಟ್ಟು]]ಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
=='''ಉದ್ಯೋಗ'''==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''90%''' ಜನಸಂಖ್ಯೆ '''ಕೃಷಿ'''ಯಲ್ಲಿಕೃಷಿಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯುಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿಸಾಕಾಣಿಕೆ ಉಪಕಸುಬುಗಳಾಗಿವೆ.
=='''ಬೆಳೆಗಳು'''==
'''ಆಹಾರ ಬೆಳೆಗಳು'''
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
'''ವಾಣಿಜ್ಯ ಬೆಳೆಗಳು'''
'''ದ್ರಾಕ್ಷಿ''', '''ಕಬ್ಬು''', ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
'''ತರಕಾರಿ ಬೆಳೆಗಳು'''
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
=='''ಸಸ್ಯ ವರ್ಗ'''==
ಆಲದ ಮರ, ಬೇವಿನ ಮರ, ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
=='''ಪ್ರಾಣಿ ವರ್ಗ'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ ಮತ್ತು ಕೋಗಿಲೆ ಇತ್ಯಾದಿ.
=='''ಆರ್ಥಿಕತೆ'''==
ಫಲವತ್ತಾದ ಭೂಮಿ ಹಾಗೂ ನೀರಾವರಿಯಿಂದಾಗಿ ಗ್ರಾಮದ ಆರ್ಥಿಕತೆ ಹಾಗೂ ಹಣಕಾಸಿನ ಸ್ಥಿತಿ ಉತ್ತಮವಾಗಿದೆ.
=='''ಧರ್ಮಗಳು'''==
ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
=='''ಭಾಷೆಗಳು'''==
ಗ್ರಾಮದ ಪ್ರಮುಖ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು [[ಹಿಂದಿ]] ಮಿಶ್ರಿತ ವಿಶಿಷ್ಠವಾದ ಕನ್ನಡ.
ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
=='''ದೇವಾಲಯ'''==
* ಶ್ರೀ ಮಹಾಲಕ್ಷ್ಮಿ ದೇವಾಲಯ
* ಶ್ರೀ ಮಾಳಿಂಗರಾಯ ದೇವಾಲಯ
=='''ಮಸೀದಿ'''==
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
=='''ಹಬ್ಬಗಳು'''==
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಓಕುಳಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
=='''ಶಿಕ್ಷಣ'''==
ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ.
=='''ಸಾಕ್ಷರತೆ'''==
ಗ್ರಾಮದ '''ಸಾಕ್ಷರತೆ ಪ್ರಮಾಣ'''ವುಪ್ರಮಾಣವು ಸುಮಾರು '''75%'''. ಅದರಲ್ಲಿ '''65% ಪುರುಷರು''' ಹಾಗೂ '''55% ಮಹಿಳೆಯರು''' ಸಾಕ್ಷರತೆ ಹೊಂದಿದೆ.
=='''ರಾಜಕೀಯ'''==
ಗ್ರಾಮವು ಸಿಂದಗಿ ವಿಧಾನ ಸಭಾ ಕ್ಷೇತ್ರ ಮತ್ತು '''[[ವಿಜಯಪುರ ಲೋಕಸಭಾ ಕ್ಷೇತ್ರ]]'''ದ ವ್ಯಾಪ್ತಿಯಲ್ಲಿ ಬರುತ್ತದೆ.
{{ಬಿಜಾಪುರ ತಾಲ್ಲೂಕುಗಳು}}
|