}}
'''ನಿಂಬಾಳ ಬಿ.ಕೆ.''' ಗ್ರಾಮವು [[ಕರ್ನಾಟಕ]] ರಾಜ್ಯದ [[ಬಿಜಾಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನಲ್ಲಿದೆ.
=='''ಇತಿಹಾಸ'''==
ಕಲ್ಯಾಣಿ ಚಾಲುಕ್ಯರ ಕಾಲದಿಂದಲೂ ಶಿಲ್ಪಕಲೆ, ದಾನ-ಧರ್ಮಕ್ಕೆ ಪ್ರಸಿದ್ಧವಾಗಿದ್ದು, ನಿಂಬಾಳ ಆಧುನಿಕ ಕಾಲದಲ್ಲಿ '''ಗುರುದೇವ ಆರ್. ಡಿ. ರಾನಡೆ'''ಯವರರಾನಡೆಯವರ ಆಧಾತ್ಮಿಕ ಕೇಂದ್ರದಿಂದ ರಾರಾಜಿಸುತ್ತಿದೆ.
ಇಂಡಿಯಿಂದ ೨೨ ಕಿ.ಮೀ. ದೂರದಲ್ಲಿರುವ ಇದು '''ನಿಂಬರ''' ಎಂಬ ಜನಾಂಗದಿಂದಾಗಿ ನಿಂಬರಪುರ-ನಿಂಬಹಳ್ಳಿ- ನಿಂಬಾಳ ಎಂದು ಹೆಸರನ್ನು ಪಡೆಯಿತು. ತರ್ದವಾಡಿ ನಾಡಿನ ಅಂಕಲಿಗೆ ಐವತ್ತೂರಲ್ಲಿದ್ದ ಈ ಗ್ರಾಮದಲ್ಲಿ ಈಗ ಉಳಿದಿರುವ ಕೆಲವೇ ಸ್ಮಾರಕಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ ಶಂಕರಲಿಂಗ ಅಥವಾ ಕೋಟಿ ಶಂಕರಲಿಂಗ ದೇವಾಲಯ ಬಹಳ ಮುಖ್ಯವಾದುದು.
ಈ ದೇವಸ್ಥಾನ ಸದ್ಯ ಕೇಂದ್ರ ಪುರಾತತ್ವ ಇಲಾಖೆಯ ಸಂರಕ್ಷಣೆಗೆ ಒಳಪಟ್ಟಿದ್ದು ಇದೇ ಇಲಾಖೆಯಿಂದ ಜೀರ್ಣೋದ್ಧಾರಗೊಂಡಿದೆ. ಈ ದೇವಾಲಯದ ಆವರಣದಲ್ಲಿ ನೂರಾರು ಲಿಂಗಗಳು, ಎತ್ತರವಾದ ಬಾಣಲಿಂಗ ಹೊಂದಿದ ಪಾಣಿಪೀಠಗಳು ಇಲ್ಲಿವೆ. ಇವುಗಳಲ್ಲಿ ಕೆಲವನ್ನು ಬೇರೆಕಡೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬರುತ್ತದೆ.
<big>''ಗುರುದೇವ ಆರ್. ಡಿ. ರಾನಡೆ'''</big>
'''ನಿಂಬಾಳ'''ದನಿಂಬಾಳದ ಹೆಸರನ್ನು ಭಾರತದುದ್ದಕ್ಕೂ ಹಾಗೂ ಭಾರತದ ಹೊರಗೂ ಪಸರಿಸಿದವರು '''ಗುರುದೇವ ರಾಮಚಂದ್ರ ದತ್ತಾತ್ರೇಯ ರಾನಡೆ'''ಯವರುರಾನಡೆಯವರು.
ದಿನಾಂಕ : ೦೩-೦೭-೧೮೮೬ ರಲ್ಲಿ ಜನಿಸಿದ ರಾನಡೆಯವರು ನಿಂಬಾಳದಲ್ಲಿ ಬಾಹು ಮಹಾರಾಜರ ಚಿತಾಭಸ್ಮವನ್ನಿರಿಸಿ ಆಶ್ರಮವನ್ನು ಸ್ಥಾಪಿಸಿದರು. ಪ್ರತಿವರ್ಷ [[ನಿಂಬರಗಿ]], [[ಉಮದಿ]], [[ಇಂಚಗೇರಿ]]ಗಳಿಗೆ ಹೋಗಿ ದರ್ಶನ ಪಡೆದು ಬರುತ್ತಿದ್ದರು. ರಾನಡೆಯವರು ಅನೇಕ ಕೃತಿಗಳನ್ನು ರಚಿಸಿದರು. ಇದರಲ್ಲಿ ಉಪನಿಷದ್ರಹಷ್ಯ ಬಹುಮುಖ್ಯವಾದದ್ದು. ಹಾಗೆಯೇ ನಿತ್ಯಸೀಮಾವಲಿ, ಬೋಧಸುದೆ, ಮಹಾರಾಷ್ಟ್ರ ಸಂತರ ಅನುಭಾವ, ಹಿಂದು ಸಂತರ ಪಾರಮಾರ್ಥ ಪಥ, ಭಗವದ್ಗೀತೆಯ ಸಾಕ್ಷಾತ್ಕಾರ ದರ್ಶನ, ಧ್ಯಾನಗೀತೆ, ಕನ್ನಡ ಸಂತರಫಾ ಪಾರಮಾರ್ಥ ಪಥ ಇವು ಮುಖ್ಯವಾದವುಗಳು.
=='''ಭೌಗೋಳಿಕ'''==
ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
=='''ಹವಾಮಾನ'''==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''೪೨.೭ ಡಿಗ್ರಿ'''ವರೆಗೆಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''೯.೫ ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - '''೩೫°C-೪೨°C ಡಿಗ್ರಿ''' ಸೆಲ್ಸಿಯಸ್
* <big>ಚಳಿಗಾಲ</big> ಮತ್ತು
* <big>ಮಳೆಗಾಲ</big> - '''೧೮°C-೨೮°C ಡಿಗ್ರಿ''' ಸೆಲ್ಸಿಯಸ್.
* ಮಳೆ - ಪ್ರತಿ ವರ್ಷ ಮಳೆ '''೩೦೦ - ೬೦೦ಮಿಮಿ''' ಗಳಸ್ಟು ಆಗಿರುತ್ತದೆ.
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
=='''ಜನಸಂಖ್ಯೆ'''==
ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''2500''' ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.
=='''ಸಾಂಸ್ಕೃತಿಕ'''==
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>'''ಜೋಳದ ರೊಟ್ಟಿ'''</big>,, '''ಸೇಂಗಾ ಚಟ್ನಿ,''', '''ಎಣ್ಣಿ ಬದನೆಯಕಾಯಿ ಪಲ್ಯ''',, '''ಕೆನೆಮೊಸರು''' ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
=='''ಕಲೆ ಮತ್ತು ಸಂಸ್ಕೃತಿ'''==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>'''ಉತ್ತರ ಕರ್ನಾಟಕ'''</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''[[ಇಲಕಲ್ಲ ಸೀರೆ]]''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
=='''ಧರ್ಮ'''==
ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
=='''ಭಾಷೆ'''==
ಗ್ರಾಮದ ಪ್ರಮುಖ ಭಾಷೆ '''[[ಕನ್ನಡ]]'''. ಇದರೊಂದಿಗೆ [[ಹಿಂದಿ]] ಹಾಗೂ [[ಮರಾಠಿ]] ಭಾಷೆಗಳನ್ನು ಮಾತನಾಡುತ್ತಾರೆ.
=='''ದೇವಾಲಯ'''==
* ಶ್ರೀ ಮಹಾಲಕ್ಷ್ಮಿ ದೇವಾಲಯ
=='''ಮಸೀದಿ'''==
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ '''ದರ್ಗಾ''' ಹಾಗೂ '''ಮಸೀದಿ''' ಇದೆ.
=='''ನೀರಾವರಿ'''==
ಗ್ರಾಮದ ಪ್ರತಿಶತ '''50''' ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''' , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
=='''ಕೃಷಿ ಮತ್ತು ತೋಟಗಾರಿಕೆ'''==
ಗ್ರಾಮದ ಪ್ರಮುಖ ಉದ್ಯೋಗವೇ '''ಕೃಷಿ''' ಮತ್ತು '''ತೋಟಗಾರಿಕೆ'''ಯಾಗಿದೆತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು '''೭೫%''' ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ '''೧೫%''' ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ '''೮೫%''' ಭೂಮಿ ಮಳೆಯನ್ನೇ ಅವಲಂಭಿಸಿದೆ.
=='''ಆರ್ಥಿಕತೆ'''==
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆತರಗತಿಯಲ್ಲಿದೆ.
=='''ಉದ್ಯೋಗ'''==
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''೭೦%''' ಜನಸಂಖ್ಯೆ '''ಕೃಷಿ'''ಯಲ್ಲಿಕೃಷಿಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯುಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
=='''ಬೆಳೆ'''==
<big>'''ಆಹಾರ ಬೆಳೆಗಳು'''</big>
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
<big>'''ವಾಣಿಜ್ಯ ಬೆಳೆಗಳು'''</big>
'''ದ್ರಾಕ್ಷಿ''', '''ಕಬ್ಬು''', ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
<big>'''ತರಕಾರಿ ಬೆಳೆಗಳು'''</big>
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
=='''ಸಸ್ಯ'''==
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
=='''ಪ್ರಾಣಿ'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
=='''ಹಬ್ಬ'''==
ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
=='''ಶಿಕ್ಷಣ'''==
ಗ್ರಾಮದಲ್ಲಿ '''ಸರಕಾರಿ ಹಿರಿಯ ಪ್ರಾಥಮಿಕ ಶಾಲೆ''' ಇದೆ.
=='''ಸಾಕ್ಷರತೆ'''==
ಗ್ರಾಮದ '''ಸಾಕ್ಷರತೆಯ ಪ್ರಮಾಣ''' ಸುಮಾರು '''೬೭%'''. ಅದರಲ್ಲಿ '''೭೫% ಪುರುಷರು''' ಹಾಗೂ '''೫೫% ಮಹಿಳೆಯರು''' ಸಾಕ್ಷರತೆ ಹೊಂದಿದೆ.
=='''ರಾಜಕೀಯ'''==
ಗ್ರಾಮವು '''[[ಬಿಜಾಪುರ ಲೋಕಸಭಾ ಕ್ಷೇತ್ರ]]'''ದ ವ್ಯಾಪ್ತಿಯಲ್ಲಿ ಬರುತ್ತದೆ.
|