ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೯ ನೇ ಸಾಲು:
==ಶರಣರ ವಚನಗಳಲ್ಲಿ ಸಾವಿನ ಪರಿಕಲ್ಪನೆ==
ಶರಣರು ಮರಣವೇ ಮಾನವಮಿ ಎಂದರು. ಹಾಗಾಗಿ ಅವರ ವಚನಗಳಲ್ಲಿ ಮರಣ ವಿಶೇಷವಾಗಿ ಬಿತ್ತರಗೊಂಡಿದೆ. ಅವರ ದೃಷ್ಟಿಯಲ್ಲಿ- “ಮರಣವೆಂದರೆ ಸರ್ವನಾಶವಲ್ಲ; ಒಂದರಿಂದ ಇನ್ನೊಂದರ ಮಾರ್ಪಾಡು. ಮರಣವು ನವಜನ್ಮದ ತಾಯಿ; ನವಜೀವನದ ಬಸಿರು; ಮುಂದುವರಿಯುವ ಜೀವನಕ್ಕೆ ಹೊಸ ಏರ್ಪಾಡು; ಮರಣದಿಂದ ಹಳೆಯ ಭೂಮಿಕೆಯ ಸೀಮೆದಾಟಿ, ಹೊಸಸೀಮೆಯಲ್ಲಿ ಕಾಲಿರಿಸಿಸುವ ಬದಲಾವಣೆ".
==ಉಲ್ಲೇಖ==
<poem>
ಅಯ್ಯಾ, ಚಂದ್ರನಿಂದಾದ ಕಲೆ ಚಂವ್ರನ ಬೆರಸಿ ಚಂದ್ರನಾದಂತೆ.
ಸೂರ್ಯನಿಂದಾದ ಕಿರಣ ಸೂರ್ಯನ ಬೆರಸಿ ಸೂರ್ಯನಾದಂತೆ.
ಅಗ್ನಿಯಿಂದಾದ ಕಾಂತಿ ಅಗ್ನಿಯ ಬೆರಸಿ ಅಗ್ನಿಯಾದಂತೆ
ದೀಪದಿಂದಾದ ಬೆಳಕು ದೀಪವ ಬೆರಸಿ ದೀಪವಾದಂತೆ
ಸಮುದ್ರದಿಂದಾದ ನದಿ ಸಮುದ್ರವ ಬೆರಸಿ ಸಮುದ್ರವೇ ಆದಂತೆ
ಪರಶಿನ ನಿರವಯ ಶೂನ್ಯಮೂರ್ತಿ ಸಂಗನಬಸವಣ್ಣನ
ಚಿದ್ರೂಪ ರುಚಿತೃಪ್ತಿಯೊಳಗೆ ಶುದ್ಧ-ಸಿದ್ಧ -ಪ್ತಸಿದ್ಧನಾಗಿ ಜನಿಸಿ
ಮತ್ತೆಂದಿನಂತೆ ಗುಹೇಶ್ವರಲಿಂಗಪ್ರಭು ಎಂಬ
ಉಭಯನಾಮವಳಿದು, ಸತ್ತು .ಚಿತ್ತಾನಂದ
ನಿತ್ಯಪರಿಪೂರ್ಣ ಅವಿರಳ ಪರಶಿವ
ಶೂನ್ಯಮೂರ್ತಿ ಸಂಗನಬಸನಣ್ಣನ ಜಿದ್ರೂಪು
ರುಚಿತೃಪ್ತಿ ಪಾದೋದಕ-ಪ್ರಸಾದವಪ್ಪುದು ತಪ್ಪದು
ನೋಡಾ ಚೆನ್ನಬಸವಣ್ಣ.
</poem>
 
 
<poem>
ಎಮ್ಮವರಿಗೆ ಸಾವಿಲ್ಲ, ಎಮ್ಮವರಿಗೆ ಸಾವನರಿಯರು.
ಸಾವೆಂಬುದು ಸಾವಲ್ಲ.
ಅಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ
ಬೇರೆ ಮತ್ತೊಂದೆಡೆ ಇಲ್ಲ.
ಕೂಡಲಸಂಗಮವೇವರ ಶರಣ ಸೊಡ್ಣಲಬಾಚರಸನು
ನಿಜಲಿಂಗದ ಒಡಲೊಳಗೆ ಬಗೆದು ಹೊಕ್ಕಡೆ
ಉಪಮಿಸಬಲ್ಲವರ ಕಾಣೆನು.
</poem>
 
 
<poem>
ಎಂದಿಗೂ ಸಾವು ತಪ್ಪದೆಂದರಿದು, ಮತ್ತೆ
ವ್ರತಭಂಗಿತನಾಗಿ,
ಅಂದಿಗೆ ಸಾಯಲೇತಕ್ಕೆ ?
ನಿಂದೆಗೆಡೆಯಾಗದ ಮುನ್ನವೇ ಅಂಗವ ಹಾರೆ
ಚಿತ್ತ ನಿಜಲಿಂಗವನೆಯ್ದಿ, ಮನಕ್ಕೆ
ಮನೋಹರ ಶಂಬೇಶ್ವರ ಲಿಂಗವ ಕೂಡಿ.
</poem>
 
 
<poem>
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಗ್ಯತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲೇತಕೋ ಲೋಕವಿಗರ್ಭಣೆಗೆ?
ಅಳಕಲೇತಕೋ ಕೂಡಲಸಂಗಮದೇವಾ
ನಿಮಗಾಳಾಗಿ.
</poem>
 
 
<poem>
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು, ಇದರಾರಳಕುವರು?
ಜಾತಸ್ಯಮರಣಂ ಧೃವಂ ಎಂಬುದಾಗಿ.
ನಮ್ಮ ಕೂಡಲಸಂಗಮದೇವ ಬರೆದ ಬರಹ
ತಸ್ಬಿಸುವರೆ ಹರಿಬ್ರಹ್ಮಾದಿಗಳವಲ್ಲ.
</poem>
 
==ಸಾವಿನ ಕವನ==
"https://kn.wikipedia.org/wiki/ಮರಣ" ಇಂದ ಪಡೆಯಲ್ಪಟ್ಟಿದೆ