ನಾಲ್ವಡಿ ಕೃಷ್ಣರಾಜ ಒಡೆಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
'''ನಾಲ್ವಡಿ ಕೃಷ್ಣರಾಜ ಒಡೆಯರು''' ([[ಜೂನ್ ೪]], [[೧೮೮೪]] - [[ಆಗಸ್ಟ್ ೩]], [[೧೯೪೦]]) [[ಮೈಸೂರು ಸಂಸ್ಥಾನ|ಮೈಸೂರು ಸಂಸ್ಥಾನದ]] [[ಒಡೆಯರ್| ಒಡೆಯರ್ ರಾಜಸಂತತಿಯ]] ೨೪ನೇ ರಾಜರು. ಇವರ ಆಳ್ವಿಕೆ [[೧೯೦೨]] ರಿಂದ [[೧೯೪೦]] ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು [[೧೮೯೫]]ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ [[ವಾಣಿ ವಿಲಾಸ ಸನ್ನಿಧಾನ]]ದವರು [[ರೀಜೆಂಟ]]ರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.
 
==ಜನನ/ ಜೀವನ==
* ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜ ಶ್ರೀ ಚಾಮರಾಜ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಪುತ್ರರಾಗಿ ೧೮೮೪ ಜೂನ್ ೪ರಂದು ಜನಿಸಿದರು. ಇವರಿಗೆ ಜಯಲ್ಷಮ್ಮಣ್ಣಿ ಮತ್ತು ಕೃಷ್ಣರಾಜಮ್ಮಣ್ಣಿ ಎಂಬ ಅಕ್ಕಂದಿರು, ಚೆಲುವಾಜಮ್ಮಣ್ಣಿ ಎಂಬ ತಂಗಿ ಹಾಗೂ ಕಂಠೀರವ ನರಸಿಂಹರಾಜ ಒಡೆಯರ್ ಎಂಬ ತಮ್ಮ ಇದ್ದರು. ೧೮೯೨ರಲ್ಲಿ ರಾಯಲ್ ಸ್ಕೂಲ್‍ನಲ್ಲಿ ತಮ್ಮ ಶಿಕ್ಷಣ ಆರಂಭಿಸಿದರು. ಇವರಿಗೆ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಭಾಷೆಗಳು ತಿಳಿದಿದ್ದವು.
* ಇವರು ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ ವಿಷಯಗಳ ಬಗ್ಗೆ ಆಳವಾದ ಪರಿಜ್ಞಾನ ಹೊಂದಿದ್ದರು. ಇವರ ಸಹಪಾಠಿಗಳು ಮಿರ್ಜಾಇಸ್ಮಾಯಿಲ್, ಕಾಂತರಾಜೇ ಅರಸ್, ಟಿ.ಗುಂಡಪ್ಪ ಮೊದಲಾದವರು. ತಂದೆ ಚಾಮರಾಜ ಒಡೆಯರ್ ನಿಧನರಾದ ಮೇಲೆ ೧೮೯೫ನೇ ಫೆಬ್ರವರಿ ೧ನೇ ತಾರೀಖು ನಾಲ್ವಡಿಯವರಿಗೆ ಪಟ್ಟಾಭಿಷೇಕವಾಯಿತು. ಇವರು ಅಪ್ರಾಪ್ತ ವಯಸ್ಕರಾದುದರಿಂದ ತಾಯಿ ರಾಜಮಾತೆ ಕೆಂಪನಂಜಮ್ಮಣ್ಣಿ ಅವರು ರಾಜಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದರು.
* ಜೂನ್ ೬,೧೯೦೦ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ೧೬ನೇ ವಯಸ್ಸಿನಲ್ಲಿ ಕಾಥೇವಾಡದ ರಾಣಾಶ್ರೀ ವಿನಯಸಿಂಹರ ಪುತ್ರಿ ಶ್ರೀ ಪ್ರತಾಪಕುಮಾರಿದೇವಿ ಅವರನ್ನು ವಿವಾಹವಾದರು. ೧೯೦೨ ಆಗಸ್ಟ್ ೮ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಮಹಾರಾಜರಾಗಿ ಅಧಿಕಾರ ಸ್ವೀಕರಿಸಿದರು.
 
==ಮಾದರಿ ಮೈಸೂರು==
* [[೧೯೦೨]]ರ [[ಆಗಸ್ಟ್ ೮]]ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. [[ಕೆ. ಶೇಷಾದ್ರಿ ಐಯ್ಯರ್]] ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು.