೧೨ನೇ [[ಶತಮಾನ]]ದಲ್ಲಿನ ವಚನಕಾರರಲ್ಲಿ ಬಹಳ ಪ್ರಸಿದ್ದರಾದವರೆಂದರೆ ಅಲ್ಲಮಪ್ರಭು.[[ ಶಿವಮೊಗ್ಗ]] ಜಿಲ್ಲೆಯ ಬಳ್ಳಿಗಾವೆ ಇವರ ಜನ್ಮಸ್ಥಳ. ತಂದೆ ನಿರಹಂಕಾರ, ತಾಯಿ ಸುಜ್ಞಾನಿ. ಗುರು ಅನಿಮಿಷಯೋಗಿ. ಅತ್ಯಂತ ನಿಷ್ಠುರವಾದಿ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಅಧ್ಯಕ್ಷರು. ಇವರ ಅಂಕಿತನಾಮ "ಗುಹೇಶ್ವರ". ಆಧ್ಯಾತ್ಮಲೋಕದಲ್ಲಿ ಅತ್ಯುನ್ನತ ಸ್ಥಾನದಲ್ಲಿದ್ದು, ಎಲ್ಲಾ ಶರಣ ಸಾಧಕರಿಗೆ ನಿತ್ಯವೂ ಮುಕ್ತಿಯ ಮಾರ್ಗವನ್ನು ತಿಳಿಸುವ ಅಲ್ಲಮಪ್ರಭು ಕರ್ನಾಟಕದ ಪ್ರಮುಖ ವಚನಕಾರರು.ಇವರು ಸಾಮಾಜಿಕ ಸಂಪ್ರದಾಯಗಳು ಹಾಗು ಆಚರಣೆಗಳ ಬಗ್ಗೆ ವಿಮರ್ಷೆ ಮಾಡಿದ್ದಾರೆ.ಇವರು ಕವನಗಳ ರೂಪದಲ್ಲಿ ತಮ್ಮ ವಚನಗಳನ್ನು ಬರೆಯುತ್ತಿದ್ದರು.