ಧರ್ಮಪುರಿ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
svg map |
Navamadi.s (ಚರ್ಚೆ | ಕಾಣಿಕೆಗಳು) No edit summary |
||
೮ ನೇ ಸಾಲು:
== ಇತಿಹಾಸ==
[[ಚಿತ್ರ:Adhiyaman avvaikku nellikani vazhanguthal.jpg|thumb|ಅವ್ವೈಯಾರ್]]
ಸಂಗಮ ಯುಗದ ಆರಂಭದಲ್ಲಿ ತಗಡೂರನ್ನು ಆಳಿದ ನಾಯಕ ಅದಿಯಮಾನ್ ನಡುಮಾನ್ ಅಂಜಿ, ಅವರು ಪ್ರೋತ್ಸಾಹಗೊಂಡ ಅವ್ವೈಯಾರ್, ಆಸ್ಥಾನದಲ್ಲಿ ಕವಯಿತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವ್ವೈಯಾರ್'ರವರು ತಮಿಳಿನ ಪ್ರಸಿದ್ದ ಕವಯಿತ್ರಿಯಾಗಿದ್ದಾರೆ. ೮ನೇ ಶತಮಾನದಲ್ಲಿ ಪಲ್ಲವರ ಪ್ರಭುತ್ವದಲ್ಲಿ ಈ ಪ್ರದೇಶವನ್ನು ನಿಯಂತ್ರಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಪ್ರಸ್ತುತ ಧರ್ಮಪುರಿ ಜಿಲ್ಲೆಯು [[ಸೇಲಂ|ಸೇಲಂ ಜಿಲ್ಲೆ]]ಯ ಭಾಗವಾಗಿತ್ತು. ನಮ್ಮ ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಿಂದ ೧೯೪೭ರ ತನಕ ಧರ್ಮಪುರಿ, ಸೇಲಂ ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿತ್ತು. ೨ನೇ ಅಕ್ಟೋಬರ್, ೧೯೬೫ರಿಂದ ಧರ್ಮಪುರಿ ಜಿಲ್ಲೆಯನ್ನು ಒಂದು ಪ್ರತ್ಯೇಕ ಜಿಲ್ಲೆಯಾಗಿ ರೂಪಿಸಲಾಯಿತು. ಶ್ರೀ.ಜಿ.ತಿರುಮಾಲ್, ಐಎಎಸ್, ಧರ್ಮಪುರಿ ಜಿಲ್ಲೆಯ ಮೊದಲ ಕಲೆಕ್ಟರಾಗಿದ್ದರು. ೨೦೦೪ರಲ್ಲಿ ಧರ್ಮಪುರಿ ಜಿಲ್ಲೆಯನ್ನು ಇಂದಿನ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಾಗಿ ಎರಡು ಭಾಗ ಮಾಡಲಾಯಿತು.<ref name="hstry">{{cite web | url=http://www.dharmapuri.tn.nic.in/history.
==ಭೂಗೋಳಶಾಸ್ತ್ರ==
೪೧ ನೇ ಸಾಲು:
==ಪ್ರವಾಸೋದ್ಯಮ(ಟೂರಿಸಮ್)==
ಧರ್ಮಪುರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗವಾಗಿ ವಿಸ್ತರಿಸಿ ಬರುವ ಉದ್ಯಮವಾಗಿದೆ. ಕಾವೇರಿ ನದಿಯು ಧರ್ಮಪುರಿ ಜಿಲ್ಲೆಯಲ್ಲಿ ಹರಿದು, ಹೊಗೆನ್ಕಲ್ ಮೂಲಕ ತಮಿಳುನಾಡನ್ನು ಪ್ರವೇಶಿಸುತ್ತದೆ. ಹೊಗೆನ್ಕಲ್ ಧರ್ಮಪುರಿಯಿಂದ ಸುಮಾರು 46 ಕಿ.ಮೀ. ದೂರದಲ್ಲಿ ನೆಲೆಗೊಂಡಿರುವ ಒಂದು ಪಟ್ಟಣ. ಅಲ್ಲಿ ಕಾವೇರಿ ನದಿ ಬೀಳುವ ದೃಶ್ಯ ಸುಂದರವಾದ ಜಲಪಾತವಾಗಿ ರೂಪಗೊಂಡಿದೆ. ರಾಜ್ಯದ ಮತ್ತೊಂದು ಪ್ರಮುಖ ಪ್ರವಾಸಿ ತಾಣ, ಹರೂರ್ ತಾಲ್ಲೂಕಿನ ತೀರ್ಥಮಲೈ ಬೆಟ್ಟದ ದೇವಾಲಯ. ಇದು ಹಿಂದೂಗಳಿಗೆ ಪವಿತ್ರ ಧಾರ್ಮಿಕ ಸ್ಥಳವಾಗಿದೆ, ಮತ್ತು ಇದು ಚೋಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಿಂದಲೂ ಉಳಿದು ಬಂದಿದೆ. ಧರ್ಮಪುರಿ ಮತ್ತು ಅದಿಯಮಾನ್ಕೋಟೆಯಲ್ಲಿ ಗಂಗಾ ಸಾಮ್ರಾಜ್ಯವು ನಿರ್ಮಿಸಿದ ದೇವಾಲಯಗಳಿವೆ. ಅದರಲ್ಲಿ ಧರ್ಮಪುರಿಯ ಮಲ್ಲಿಕಾರ್ಜುನ ದೇವಾಲಯದ ಜೊತೆಗೆ ವಿಶೇಷವಾಗಿ ಪ್ರಸ್ತಾಪಿಸಿದ ಬೈರವ, ಅಷ್ಟದಿಕ್ ಪಾಲಕಗಳು ಇತ್ಯಾದಿ ಮತ್ತು ಅದಿಯಮಾನ್ಕೋಟೆಯ ಹಳೆಯ ಬಸದಿಯ ದೇವಾಲಯವು ಇದೆ. <ref name="ttdc">{{cite web | url=http://www.tamilnadutourism.org/places/CitiesTowns/Dharmapuri.aspx?catid=010116P01
|