ಸ್ವಚ್ಛ ಭಾರತ ಅಭಿಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
==ಸ್ವಚ್ಛ ಭಾರತ ಅಭಿಯಾನ: ಆಗಬೇಕಾದ್ದೇನು?==
* ಅಕ್ಟೋಬರ್ ೨ರ ಗಾಂಧಿ ಜಯಂತಿ­ಯಂದು ದೇಶದ ಪ್ರಧಾನಿ ನರೇಂದ್ರ ಮೋದಿ­ಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛ­ಗೊಳಿಸಿ, ಸ್ವಚ್ಛ ಭಾರತ ಅಭಿಯಾನ­ಕ್ಕೆ ಚಾಲನೆ­ ನೀಡುವ ಮೂಲಕ ದೇಶದ ಜನ­ರಲ್ಲಿ ರೋಮಾಂಚ­­ನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವ­­ಜನಿಕ ಪ್ರದೇಶಗಳಲ್ಲಿ ಕೊಳೆ, ಕಸ­ಗಳನ್ನು ನೋಡಿ ನೋಡಿ ತಾವೇನೂ ಮಾಡ­ಲಾ­ಗದೇ, ಅವು­ಗಳಿಗೆ ಅನಿವಾರ್ಯವಾಗಿ ಹೊಂದಿ­ಕೊಂಡಂತಿದ್ದ ಬಹ­ಳಷ್ಟು ಜನರಲ್ಲಿ ಆಶಾ­ಭಾವನೆಗಳು ಚಿಗುರೊ­ಡೆದಿವೆ.
* ಮೋದಿಯವರು ಸಾರ್ವ­ಜನಿಕರಿಗೆ ತಮ್ಮ ಪ್ರದೇಶ­­ಗಳನ್ನು ಸ್ವಚ್ಛ­ವಾಗಿಸ್ವಚ್ಛವಾಗಿ­ಟ್ಟುಕೊಳ್ಳಲು ಕರೆ ನೀಡು­­ವುದರ ಜೊತೆ ಅಂಬಾನಿ, ಸಚಿನ್‌ ತೆಂಡೂಲ್ಕರ್‌­ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶ­ವನ್ನು ಸ್ವಚ್ಛ­ಗೊಳಿ­ಸುವುದು ಹಾಗೂ ಇನ್ನಿತ­ರ­ರಿಗೂ ಅದೇ ರೀತಿ ಮಾಡು­ವಂತೆ ಕರೆ ನೀಡುವ ಮೂಲಕ ಅಭಿ­ಯಾನ ಕ್ಕೆ ಕೈಜೋಡಿಸಲು ಆಹ್ವಾನಿ­ಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.
* ಹೆಚ್ಚಿನವರು ಸಾರ್ವ­ಜನಿಕ­­ವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತ­ಪಡಿ­ಸುತ್ತಿದ್ದಾರೆ. ಸ್ವತಃ ಪ್ರಧಾನಿ­ಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾ­ರೇತರ ಸಂಸ್ಥೆ­ಗಳ ಬೆಂಬಲ, ಸಾರ್ವಜನಿಕರ ಸಹ­ಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛ­ತೆಯ ವಿಷಯದ ಕುರಿತ ಪ್ರಚಾರ. ಈ ರೀತಿಯ ಕ್ರಮ­ಗಳು ಕಸ ನಿರ್ವ­ಹಣೆಯ ಹೊಣೆ ಹೊತ್ತಿ­ರುವ ಸ್ಥಳೀಯ ಆಡಳಿತಗಳಿಗೆ ಹಾಗೂ ಎಲ್ಲೆಂದ­ರಲ್ಲಿ ಕಸವನ್ನು ಬಿಸಾ­ಡುತ್ತಿದ್ದ ಜನರಿಗೂ ಒಂದಷ್ಟು ಒತ್ತಡ ಉಂಟುಮಾಡಿವೆ.
* ಆದರೆ ಇವಿಷ್ಟೇ ಸ್ವಚ್ಛ ಭಾರತ ಕಲ್ಪನೆ­ಯನ್ನು ಸಾಕಾರ­ಗೊಳಿ­ಸುತ್ತವೆಯೇ? ಎಂಬುದು ಪ್ರಮುಖ ಪ್ರಶ್ನೆ­. ಸ್ವಚ್ಛ ಭಾರತ ಅಭಿಯಾನ ಮೊದಲು ನಗರ ಪ್ರದೇಶಗಳಲ್ಲಾಗಬೇಕು. ನಾಗರಿಕರು ಮೊದಲು ಜಾಗೃತರಾಗಿ ಹಾದಿ-ಬೀದಿಯಲ್ಲಿ ಕಸಹಾಕುವ ಚಾಳಿಯನ್ನು ಬಿಡಬೇಕು. ಜನರ ಮನದೊಳಗೆ ಸ್ಚಚ್ಛತೆಯ ಪರಿಕಲ್ಪನೆ ಮೂಡುವವರೆಗೂ ಈ ಅಭಿಯಾನ ಯಶಸ್ವೀಯಾಗಲಾರದು!