ರಂಗಯ್ಯನದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: <ref name="ಕನ್ನಡ ಪ್ರಭ">{{cite web | url=http://www.kannadaprabha.com/districts/davanagere/%E0%B2%B0%E0%B2%82%E0%B2%97%E0%B2%AF%E0%B3%8D%E0%B2%AF%E0%B2%A8%E0... |
No edit summary |
||
೧ ನೇ ಸಾಲು:
<ref name="ಕನ್ನಡ ಪ್ರಭ">{{cite web | url=http://www.kannadaprabha.com/districts/davanagere/%E0%B2%B0%E0%B2%82%E0%B2%97%E0%B2%AF%E0%B3%8D%E0%B2%AF%E0%B2%A8%E0%B2%A6%E0%B3%81%E0%B2%B0%E0%B3%8D%E0%B2%97-%E0%B2%95%E0%B3%8A%E0%B2%82%E0%B2%A1%E0%B3%81-%E0%B2%95%E0%B3%81%E0%B2%B0%E0%B2%BF-%E0%B2%B8%E0%B2%82%E0%B2%B0%E0%B2%95%E0%B3%8D%E0%B2%B7%E0%B2%BF%E0%B2%A4-%E0%B2%B5%E0%B2%B2%E0%B2%AF/61569.html | title=ರಂಗಯ್ಯನದುರ್ಗ ಕೊಂಡು ಕುರಿ ಸಂರಕ್ಷಿತ ವಲಯ | accessdate=9 ಅಕ್ಟೋಬರ್ 2016}}</ref>
'''’ರಂಗಯ್ಯನದುರ್ಗ'''(Rangayyanadurga) ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು ಹೊಂದಿರುವ ಅರಣ್ಯಪ್ರದೇಶ. ಅರಣ್ಯ ಪ್ರದೇಶವನ್ನು ಕೊಂಡು ಕುರಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವಂತೆ ಬಹಳ ಹಿಂದಿನಿಂದಲೂ ಜನತೆ, ಜನ ಪ್ರತಿನಿಧಿಗಳ ಬೇಡಿಕೆ ಇತ್ತು. ಕೊನೆಗೂ ಇದಕ್ಕೆ ಸ್ಪಂದಿಸಿರುವ ಸರ್ಕಾರ ಇದೀಗ
'''ವನ್ಯಜೀವಿ ರಕ್ಷಣೆ:''' ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಕೊಂಡು ಕುರಿಗಳೂ ಸೇರಿದಂತೆ ಹಲವಾರು ವನ್ಯಜೀವಿಗಳು ಇದ್ದು, ಅವುಗಳನ್ನು ಸಂರಕ್ಷಿಸಲು, ನಿರ್ವಹಿಸಲು ಸರ್ಕಾರವು ರಂಗಯ್ಯನ ದುರ್ಗವನ್ನು ಇದೀಗ ಪ್ರತ್ಯೇಕವಾಗಿ ಸೃಜಿಸಿ ಆದೇಶ ಹೊರಡಿಸಿದೆ. ಈ ವನ್ಯಜೀವಿ ವಲಯದ ಕೇಂದ್ರ ಸ್ಥಾನವು ಹೊಸಕೆರೆ ಗ್ರಾಮದಲ್ಲಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ.
80 ಚ.ಕಿ.ಮೀ. ವಿಸ್ತೀರ್ಣ ಹೊಂದಿರುವ ಇಲ್ಲಿ ಶ್ರೀಗಂಧ, ಹೊಳೆಮತ್ತಿ, ಕಮರಾ, ದಿಂಡಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ, ಬೆಟ್ಟದ ತಾವರೆಯಂತಹ ಗಿಡಮರಗಳಿದ್ದು, ಆಯುರ್ವೇದಕ್ಕೆ ಬಳಸುವ ಬೆಟ್ಟದ ನೆಲ್ಲಿ, ಕಾಡು ಕೊತ್ತಂಬರಿ, ಮಧುನಾಶಿನಿ, ಮೆಕ್ಕೆಗಿಡ (ಹೃದಯ ರೋಗಿಗಳಿಗೆ ದಿವ್ಯೌಷಧಿ), ಕಾಡು ಈರಳ್ಳಿ (ಪಶು ಚಿಕಿತ್ಸೆಗೆ ಬಳಸುತ್ತಾರೆ), ಆಲಿಕಾ-ಉಳ್ಳಿಕಾ, ತೊಟ್ಲುಕಾಯಿ, ಅಳಿಲು ಕಾಯಿ, ಧೂಪದಂತಹ ಔಷಧಿ ಸಸ್ಯಗಳು ಇವೆ. ಕೇರಳದ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಿಸುವ ‘ಲೆಮನ್ ಗ್ರಾಸ್’ನಂತಹ ಔಷಧಿ ಸಸ್ಯ ಸಮೃದ್ಧವಾಗಿ ಬೆಳೆದಿದೆ.
|