ಆಂಧ್ರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
ಚು clean up, replaced: ನಗರ್ → ನಗರ (7) using AWB |
||
೧ ನೇ ಸಾಲು:
{{Infobox Indian Jurisdiction
|type = state
Line ೧೬ ⟶ ೧೫:
|legislature_strength = 175
|leader_title_1 = [[Governors of Andhra Pradesh|Governor]]
|leader_name_1 = [[
|leader_title_2 = [[Chief Ministers of Andhra Pradesh|Chief Minister]]
|leader_name_2 =
Line ೩೫ ⟶ ೩೪:
'''ಆಂಧ್ರ ಪ್ರದೇಶ ''' ({{lang-te|ఆంధ్ర ప్రదేశ్}}) ({{audio|Andhra.ogg|pronunciation}}, [[ಭಾಷಾಂತರ]]: '''ಆಂಧ್ರದ ಪ್ರಾಂತ್ಯ''' ), ಸಂಕ್ಷಿಪ್ತವಾಗಿ '''A.P. ''' ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದು[[ಭಾರತ|ಭಾರತದ]] ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು [[ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ಪಟ್ಟಿ|ವಿಸ್ತೀರ್ಣದಲ್ಲಿ ನಾಲ್ಕನೇ ಅತಿದೊಡ್ಡ ರಾಜ್ಯ]]ವಾಗಿದೆ ಮತ್ತು [[ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಪಟ್ಟಿ|ಜನಸಂಖ್ಯೆಯಲ್ಲಿ ಐದನೇ ಅತಿ ದೊಡ್ಡ ರಾಜ್ಯ]]ವಾಗಿದೆ. ಇದರ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ [[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]].
ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್ಗಡ ಮತ್ತು ಒರಿಸ್ಸಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "''ಭಾರತದ ಅನ್ನದ ಪಾತ್ರೆ'' " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.
ಇದರ <ref>http://www.irri.org/science/ricestat/data/may2008/WRS2008-Table07.pdf</ref> ಎರಡು ಪ್ರಮುಖ ನದಿಗಳಾದ [[ಗೋದಾವರಿ ನದಿ|ಗೋದಾವರಿ]] ಮತ್ತು [[ಕೃಷ್ಣಾ ನದಿ|ಕೃಷ್ಣಾ]] ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. [[ಪುದುಚೆರಿ]] (ಪಾಂಡಿಚೆರಿ) ರಾಜ್ಯದ [[ಯಾಣಂ (ಭಾರತ)|ಯಾಣಮ್]] ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ.
ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ''ಆಂಧ್ರಾಪಥ'' , ''ಆಂಧ್ರದೇಸ'' , ''ಆಂಧ್ರಾವನಿ '' ಮತ್ತು ''ಆಂಧ್ರ ವಿಷಯ'' ಎಂದು ಕರೆಯಲಾಗುತ್ತಿತ್ತು.
{| class="wikitable" border="1" cellspacing="1" style="float:right;width:260px;margin:0 0 1em 1em;background:#f4f5f6;border:1px #c6c7c8 solid;font-size:90%"
Line ೮೫ ⟶ ೮೪:
ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ.
ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.<ref>http://www.aponline.gov.in/quick links/hist-cult/history.html</ref>
ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ<ref>http://www.asiarooms.com/travel-guide/india/hyderabad/excursions-from-hyderabad/bhattiprolu.html</ref> ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು([[ಭಟ್ಟಿಪ್ರೊಲು|ಭಟ್ಟಿಪ್ರೊಲು)]] ಅವನ ರಾಜಧಾನಿಯಾಗಿತ್ತು. ಬಹುಶಃ ಇದು [[ಭಾರತ|ಭಾರತದಲ್ಲಿನ]] ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.
[[ಚಿತ್ರ:Kakateeya Sculpture.jpg|thumb|left|ವಾರಂಗಲ್ನಲ್ಲಿರುವ ಕಾಕತೀಯರ ಶಿಲ್ಪಕಲೆ
BCE ೧೪ನೇ ಶತಮಾನದಲ್ಲಿ [[ಮೌರ್ಯ|ಮೌರ್ಯರು]] ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. [[ಮೌರ್ಯ ಸಾಮ್ರಾಜ್ಯ|ಮೌರ್ಯ ಸಾಮ್ರಾಜ್ಯದ]] ಪತನಾನಂತರ ಆಂಧ್ರದ [[ಶಾತವಾಹನ|ಶಾತವಾಹನರು]] BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ [[ಇಕ್ಷ್ವಾಕು ಮನೆತನ]], [[ಪಲ್ಲವ|ಪಲ್ಲವರು]], [[ಆಂಧ್ರ ಗೋತ್ರಿಕ|ಆನಂದ ಗೋತ್ರಿಕರು]], [[ವಿಷ್ಣುಕುಂದಿನ|ವಿಷ್ಣುಕುಂದಿನರು]], [[ಪೂರ್ವದ ಚಾಲುಕ್ಯರು|ಪೂರ್ವದ ಚಾಲುಕ್ಯ]]ರು ಮತ್ತು [[ಚೋಳ|ಚೋಳರು]] ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ [[ತೆಲುಗು ಭಾಷೆ|ತೆಲುಗು ಭಾಷೆಯ]] ಶಾಸನಾಧಾರಗಳು <ref>ಇಂಡಿಯನ್ ಎಪಿಗ್ರಫಿ, ಆರ್.ಸಾಲೋಮನ್, ಆಕ್ಸ್ಫರ್ರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೮
ISBN ೦-೧೯-೫೦೯೯೮೪-೨, p. ೧೦೬</ref> ದೊರೆತವು. ಈ ಅವಧಿಯಲ್ಲಿ [[ಪ್ರಾಕೃತ]] ಮತ್ತು [[ಸಂಸ್ಕೃತ]] ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.
[[ಪಲ್ನಾಡು]] ಯದ್ಧದಿಂದಾಗಿ ಪೂರ್ವದ [[ಚಾಲುಕ್ಯ|ಚಾಲುಕ್ಯರ]] ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ [[ಕಾಕತೀಯ|ಕಾಕತೀಯಸಾಮ್ರಾಜ್ಯವು]] ಪ್ರವರ್ಧಮಾನಕ್ಕೆ ಬಂದಿತು. [[ವಾರಂಗಲ್]] ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು.
ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ [[ಸುಲ್ತಾನ್|ಸುಲ್ತಾನ]]ನಾದ ಘಿಯಾಜುದ್ದೀನ್ [[ತುಘಲಕ್|ತುಘಲಕ್ನು]] ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್ನ್ನು ವಶಪಡಿಸಿಕೊಳ್ಳಲು ಉಲುಘ್ ಖಾನ್ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.[[ಪ್ರತಾಪರುದ್ರ|ಪ್ರತಾಪರುದ್ರರಾಜನನ್ನು]] ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ [[ದೆಹಲಿ ಸುಲ್ತಾನರು|ದೆಹಲಿ ಸುಲ್ತಾನ]]ರಿಂದ ವಾರಂಗಲ್ನ್ನು ಪುನಃ ವಶಪಡಿಸಿಕೊಂಡ [[ಮುಸುನೂರಿ ನಾಯಕರು|ಮುಸುನೂರಿ ನಾಯಕ]]ರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು [[ಭಾರತ|ಭಾರತದ]] ಇತಿಹಾಸದಲ್ಲಿನ ಮಹಾನ್ ಚಕ್ರಾಧಿಪತ್ಯಗಳಲ್ಲಿ ಒಂದಾದ [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಸ್ಥಾಪನೆಯಾಯಿತು. ವಾರಂಗಲ್ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ [[ಹರಿಹರ]] ಮತ್ತು [[ಬುಕ್ಕ|ಬುಕ್ಕರು]] ಈ ಸಾಮ್ರಾಜ್ಯದ ಸಂಸ್ಥಾಪಕರು.
[[ಚಿತ್ರ:Charminar-Pride of Hyderabad.jpg|thumb|left|ಹೈದರಾಬಾದ್ನಲ್ಲಿನ ಚಾರ್ಮಿನಾರ್]]
[[ಚಿತ್ರ:Mecca.jpg|thumb|right|ಮೆಕ್ಕ ಮಸೀದಿ
[[ವಸಾಹತು ಭಾರತ|ವಸಾಹತು ಭಾರತದಲ್ಲಿ]] [[ಉತ್ತರದ ಸರ್ಕಾರ್ಗಳು]] ಬ್ರಿಟಿಷ್ ಆಳ್ವಿಕೆಯ [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯ]]ದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು [[ಕರಾವಳಿ ಆಂಧ್ರ]] ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ [[ನಿಜಾಮ್|ನಿಜಾಮ]]ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ [[ರಾಯಲಸೀಮ|ರಾಯಲಸೀಮಾ]] ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, [[ಹೈದರಾಬಾದ್ ರಾಜ್ಯ|ಹೈದರಾಬಾದ್]]ನ [[ರಾಜೋಚಿತ ರಾಜ್ಯ|ರಾಜೋಚಿತ ರಾಜ್ಯವಾಗಿ]] ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್ (ಯಾಣೋನ್)ನ್ನು [[ಫ್ರಾನ್ಸ್|ಫ್ರೆಂಚರು]] ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು.
೧೯೪೭ರಲ್ಲಿ ಯುನೈಟೆಡ್ ಕಿಂಗ್ಡಂನಿಂದ [[ಭಾರತದ ಸ್ವಾತಂತ್ರ್ಯ|ಭಾರತವು ಸ್ವತಂತ್ರಗೊಂಡಿತು]]. [[ಹೈದರಾಬಾದ್ನ ನಿಜಾಮ್|ಹೈದರಾಬಾದ್ನ ಮುಸ್ಲಿಂ ನಿಜಾಮ]]ನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ [[ಪೋಲೋ ಕಾರ್ಯಾಚರಣೆ|ಪೋಲೋ ಕಾರ್ಯಾಚರಣೆಗೆ]] [[ಹೈದರಾಬಾದ್ ರಾಜ್ಯ|ಹೈದರಾಬಾದ್]] ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು.
Line ೧೦೪ ⟶ ೧೦೩:
ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು.
== ವಿಭಾಗಗಳು ==
[[ಚಿತ್ರ:Andhra Pradesh districts map.svg|thumb|right|200px|ಆಂಧ್ರ ಪ್ರದೇಶದ ಜಿಲ್ಲೆಗಳ ನಕ್ಷೆ
ಆಂಧ್ರ ಪ್ರದೇಶವನ್ನು [[ಕರಾವಳಿ ಆಂಧ್ರ]], [[ರಾಯಲಸೀಮ|ರಾಯಲಸೀಮಾ]] ಮತ್ತು [[ತೆಲಂಗಾಣ]] ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು.<ref>[http://www.blonnet.com/2007/05/17/stories/2007051704252100.htm ನಾಲ್ಕು ಪ್ರಾದೇಶಿಕ ಯೋಜನಾ ಮಂಡಳಿಗಳಿಗೆ AP ಸಂಪುಟವು ಅನುಮೋದಿಸುತ್ತದೆ]</ref>
ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: [[ಅದಿಲಾಬಾದ್ ಜಿಲ್ಲೆ|ಅದಿಲಾಬಾದ್]], [[ಅನಂತಪುರ್ ಜಿಲ್ಲೆ|ಅನಂತಪುರ್]], [[ಚಿತ್ತೂರ್ ಜಿಲ್ಲೆ|ಚಿತ್ತೂರ್]], [[ಕಡಪ ಜಿಲ್ಲೆ|ಕಡಪ]], [[ಪೂರ್ವ ಗೋದಾವರಿ]], [[ಪಶ್ಚಿಮ ಗೋದಾವರಿ]], [[ಗುಂಟೂರ್ ಜಿಲ್ಲೆ|ಗುಂಟೂರ್]], [[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]], [[
ಪ್ರತಿ ಜಿಲ್ಲೆಯನ್ನೂ ವಿವಿಧ [[ತೆಹ್ಸಿಲ್|ಮಂಡಲ]]ಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.[[ಹೈದರಾಬಾದ್, ಆಂಧ್ರ ಪ್ರದೇಶ|ಹೈದರಾಬಾದ್]] ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ [[ಸಿಕಂದರಾಬಾದ್|ಸಿಕಂದರಾಬಾದ್ನ]] ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. [[ವಿಶಾಖಪಟ್ಟಣಂ|ವಿಶಾಖಪಟ್ಟಣ]]ವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ [[ಭಾರತೀಯ ನೌಕಾದಳ|ಭಾರತೀಯ ನೌಕಾಪಡೆ]]ಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. [[ವಿಜಯವಾಡ]] ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: [[ಕಾಕಿನಾಡ]], [[ವಾರಂಗಲ್|ವಾರಂಗಲ್]], [[ಗುಂಟೂರ್|ಗುಂಟೂರ್]], [[ತಿರುಮಲ-ತಿರುಪತಿ|ತಿರುಪತಿ]], [[ರಾಜಮುಂಡ್ರಿ]], [[ನೆಲ್ಲೂರ್|ನೆಲ್ಲೂರ್]], [[ಒಂಗೊಲ್|ಓಂಗೊಲ್]], [[ಕರ್ನೂಲ್]], [[ಅನಂತಪುರ್, ಆಂಧ್ರ ಪ್ರದೇಶ|ಅನಂತಪುರ್]], [[
== ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ ==
ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು [[ಮೂರನೆಯ ಸಾಲಾರ್ ಜಂಗರು]] (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'[[ಮುಸುಕಿನ ರೆಬೆಕ್ಕಾ]],'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.
Line ೧೬೨ ⟶ ೧೬೧:
[[ತೆಲುಗು ಭಾಷೆ|ತೆಲುಗು]] ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ.
ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ.
ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, [[ಕನ್ನಡ ಭಾಷೆ|ಕನ್ನಡ]] (೦.೯೪%), [[ಮರಾಠಿ]] (೦.೮೪%), [[ಒರಿಯಾ ಭಾಷೆ|ಒರಿಯಾ]] (೦.೪೨%), [[ಗೊಂಡಿ ಭಾಷೆ|ಗೊಂಡಿ]] (೦.೨೧%) ಮತ್ತು [[ಮಲಯಾಳಂ]] (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ [[ಗುಜರಾತಿ ಭಾಷೆ|ಗುಜರಾತಿ]] (೦.೦೯%), [[ಸಾವರ]] (೦.೦೯%), [[ಕೋಯ ಭಾಷೆ|ಕೋಯ]] (೦.೦೮%), ಜಟಪು (೦.೦೪%), [[ಪಂಚಾಬಿ ಭಾಷೆ|ಪಂಜಾಬಿ]] (೦.೦೪%), [[ಕೊಲಾಮಿ|ಕೊಳಮಿ]] (೦.೦೩%), ಕೊಂಡ (೦.೦೩%), [[ಗಡಬ ಭಾಷೆ|ಗಡಬ]] (೦.೦೨%), [[ಸಿಂಧಿ ಭಾಷೆ|ಸಿಂಧಿ]] (೦.೦೨%), [[ನೇಪಾಳಿ ಭಾಷೆ|ಗೋರ್ಖಾಲಿ/ನೇಪಾಳಿ]] (೦.೦೧%) ಮತ್ತು [[ಖೊಂಡ್]]/ಕೊಂಧ್(೦.೦೧%) ಸೇರಿವೆ.
ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ [[ತೆಲುಗು ಜನ]]; ಇವರು [[ಆರ್ಯರು]] ಮತ್ತು [[ದ್ರಾವಿಡರು|ದ್ರಾವಿಡರ]] ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ.
== ಆರ್ಥಿಕ ವ್ಯವಸ್ಥೆ ==
[[ಕೃಷಿ|ಕೃಷಿಯು]], ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ [[ಗೋದಾವರಿ ನದಿ|ಗೋದಾವರಿ]], [[ಕೃಷ್ಣಾ ನದಿ|ಕೃಷ್ಣ]], [[ಪೆನ್ನ ನದಿ|ಪೆನ್ನಾ]] ಮತ್ತು [[ತುಂಗಭದ್ರ ನದಿ|ತುಂಗಭದ್ರ]] ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.[[ಅಕ್ಕಿ]], [[ಕಬ್ಬು]], [[ಹತ್ತಿ]], [[ಮೆಣಸಿನ ಹಣ್ಣು|ಮೆಣಸಿನಕಾಯಿ]] (ಮೆಣಸಿನ ಹಣ್ಣು), [[ಮಾವು]] ಮತ್ತು [[ಹೊಗೆಸೊಪ್ಪು]] ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, [[ಸಸ್ಯಜನ್ಯ ಕೊಬ್ಬುಗಳು ಮತ್ತು ಎಣ್ಣೆಗಳು|ಸಸ್ಯಜನ್ಯ ತೈಲ]]ದ ಉತ್ಪಾದನೆಗೆ ಬಳಕೆಯಾಗುವ [[ಸೂರ್ಯಕಾಂತಿ]] ಮತ್ತು [[ಕಡಲೆಕಾಯಿ|ಕಡಲೆಕಾಯಿಯಂತಹ]] ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ [[ನಾಗಾರ್ಜುನ ಸಾಗರ ಜಲಾಶಯ]], [[ಗೋದಾವರಿ ನದೀಮುಖಜಭೂಮಿಯ ನೀರಾವರಿ ಯೋಜನೆಗಳು|ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆ]]ಗಳನ್ನು ಒಳಗೊಂಡಂತೆ ಹಲವು ಅಂತರರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.<ref>{{cite web|url=http://agri.ap.nic.in|title=Agriculture dept. of Andhra Pradesh}}</ref>
[[ಚಿತ್ರ:Hitec city.jpg|thumb|left|ರಾಜ್ಯದ ರಾಜಧಾನಿ ಮತ್ತು ರಾಜ್ಯದಲ್ಲಿನ ಅತಿ ದೊಡ್ಡ ನಗರವಾದ ಹೈದರಬಾದ್ನಲ್ಲಿನ ಸೈಬರ್ಗೋಪುರಗಳು
[[ಮಾಹಿತಿ ತಂತ್ರಜ್ಞಾನ]] ಮತ್ತು [[ಜೈವಿಕ ತಂತ್ರಜ್ಞಾನ]] ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು (೧,೮೦೦ ದಶಲಕ್ಷ $)ಇತ್ತು.
ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ [[ಸುಣ್ಣದಕಲ್ಲು|ಸುಣ್ಣದ ಕಲ್ಲು]]ಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್ ಟನ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. [[ಕೃಷ್ಣ ಗೋದಾವರಿ ಮುಖಜಭೂಮಿ|ಕೃಷ್ಣ ಗೋದಾವರಿ ಜಲಾನಯನ ಪ್ರದೇಶ]]ವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ.<ref name="dfljos"/>
[[ಅಳವಡಿಸಲ್ಪಟ್ಟ ವಿದ್ಯುತ್ ಸಾಮರ್ಥ್ಯದ ಆಧಾರದ ಮೇಲೆ ಭಾರತದ ರಾಜ್ಯಗಳು|ಜಲ ವಿದ್ಯುತ್ ಉತ್ಪಾದನೆ]]ಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ.
೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ''ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ'' ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ<ref>http://mospi.nic.in/6_gsdp_cur_9394ser.htm</ref> ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ.
{| class="wikitable" border="1"
|-
Line ೨೦೦ ⟶ ೧೯೯:
== ಸರ್ಕಾರ ಮತ್ತು ರಾಜಕೀಯ ==
ಆಂಧ್ರ ಪ್ರದೇಶ [[ವಿಧಾನಸಭಾ|ವಿಧಾನಸಭೆ]]ಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.[[ಭಾರತದ ಸಂಸತ್ತು|ಭಾರತದ ಸಂಸತ್]]ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ [[ರಾಜ್ಯ ಸಭೆ|ರಾಜ್ಯಸಭೆ]]ಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ [[ಲೋಕಸಭೆ|ಲೋಕಸಭೆಯಲ್ಲಿ]] ೪೨ ಮಂದಿ ಸದಸ್ಯರಿದ್ದಾರೆ.
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. [[ಕಾಸು ಬ್ರಹ್ಮಾನಂದ ರೆಡ್ಡಿ]] ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು [[N.T.ರಾಮ ರಾವ್|ಎನ್.ಟಿ.ರಾಮ ರಾವ್]]ರವರು ೧೯೮೩ರಲ್ಲಿ ಮುರಿದರು. [[P.V. ಪಿ.ವಿ.ನರಸಿಂಹರಾವ್|ಪಿ.ವಿ.ನರಸಿಂಹ ರಾವ್]]ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ [[ತಂಗುತೂರಿ ಪ್ರಕಾಶಂ|ತಂಗುತೂರಿ ಪ್ರಕಾಶಮ್]], ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ [[ಕಾಸು ಬ್ರಹ್ಮಾನಂದ ರೆಡ್ಡಿ]], [[ಮರ್ರಿ ಚೆನ್ನಾ ರೆಡ್ಡಿ]], [[ಜಲಗಂ ವೆಂಗಲ್ ರೆಡ್ಡಿ|ಜಲಗಂ ವೆಂಗಲ್ ರಾವ್]], [[ನೆದುರುಮಲ್ಲಿ ಜನಾರ್ಧನ ರೆಡ್ಡಿ]], [[ನಾದೇಂಡ್ಲ ಭಾಸ್ಕರ ರಾವ್]], [[ಕೋಟ್ಲ ವಿಜಯಭಾಸ್ಕರ ರೆಡ್ಡಿ|ಕೋಟ್ಲ ವಿಜಯ ಭಾಸ್ಕರ ರೆಡ್ಡಿ]], [[N.T. ರಾಮ ರಾವ್|ಎನ್.ಟಿ.ರಾಮ ರಾವ್]], [[ನಾರಾ ಚಂದ್ರಬಾಬು ನಾಯ್ಡು]] ಮತ್ತು [[Y.S. ರಾಜಶೇಖರ ರೆಡ್ಡಿ|ವೈ.ಎಸ್.ರಾಜಶೇಖರ ರೆಡ್ಡಿ]]ಯವರುಗಳು ಸೇರಿದ್ದಾರೆ.
[[ಚಿತ್ರ:Highcourt11.jpg|thumb|250px|right|ಹೈದರಾಬಾದ್ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ
೧೯೮೩ರಲ್ಲಿ [[ತೆಲುಗು ದೇಶಂ ಪಕ್ಷ|ತೆಲುಗು ದೇಶಮ್ ಪಕ್ಷ]]ವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು [[N.T. ರಾಮ ರಾವ್|ಎನ್.ಟಿ.ರಾಮ ರಾವ್]]ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್ ರಾವ್ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು.
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್. ಜನಾರ್ಧನ್ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು.
Line ೨೧೧ ⟶ ೨೧೦:
=== ಸಾಂಸ್ಕೃತಿಕ ಸಂಸ್ಥೆಗಳು ===
ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ [[ಅಮರಾವತಿ|ಅಮರಾವತಿಯಲ್ಲಿನ]] [http://asi.nic.in/asi_museums_amravati.asp ಪುರಾತತ್ವ ವಸ್ತುಸಂಗ್ರಹಾಲಯ], ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್ನಲ್ಲಿರುವ [[ಸಾಲಾರ್ ಜಂಗ್ ವಸ್ತುಸಂಗ್ರಹಾಲಯ]], ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; [[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್ ಬಂಗಲೆಯಲ್ಲಿದ್ದು [[ಮದ್ರಾಸ್ ಪ್ರೆಸಿಡೆನ್ಸಿ|ಮದ್ರಾಸ್ ಪ್ರಾಂತ್ಯದ]]ಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.
=== ಆಹಾರ ಪದ್ಧತಿ ===
{{Main|Andhra cuisine}}
[[ಚಿತ್ರ:India food.jpg|thumb|left|ಇತರೆ ಭಾರತೀಯ ಆಹಾರಗಳೊಂದಿಗೆ ಬಡಿಸುವ ಹೈದರಾಬಾದಿ ಬಿರಿಯಾನಿ
ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು [[ಭಾರತೀಯ ಆಹಾರ ಪದ್ಧತಿ|ಭಾರತದ ಆಹಾರ ಪದ್ಧತಿ]]ಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ.{{Citation needed|date=February 2009}} ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. [[ಭಾರತೀಯ ಉಪ್ಪಿನಕಾಯಿ|ಉಪ್ಪಿನಕಾಯಿ]]ಗಳು ಮತ್ತು [[ತೆಲುಗು]] ಭಾಷೆಯಲ್ಲಿ ''ಪಚ್ಚಡಿ '' ಎಂದು ಕರೆಯಲ್ಪಡುವ [[ಚಟ್ನಿ|ಚಟ್ನಿಗಳು]] ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.[[ಟೊಮ್ಯಾಟೊ]], [[ನೆಲಗುಳ್ಳ|ಬದನೆಕಾಯಿ]](ನೆಲಗುಳ್ಳ), [[ದಾಸವಾಳ ಜಾತಿಯ (ಗಿಡ)|ದಾಸವಾಳ ಜಾತಿಯ]](ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.''[[ಆವಕಾಯ]]'' ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು.
[[ಅಕ್ಕಿ|ಅಕ್ಕಿಯು]] ಇಲ್ಲಿನ [[ಮುಖ್ಯ ಆಹಾರ|ಪ್ರಮುಖ ಆಹಾರ]]ವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ [[ಮೇಲೋಗರ|ಮೇಲೋಗರದ]] ಜೊತೆ ಸೇವಿಸಲಾಗುತ್ತದೆ; ಇಲ್ಲವೇ, [[ಕಲಸಿದ ಹಿಟ್ಟು (ಅಡಿಗೆಯ)|ಕಲಸಿದ ಹಿಟ್ಟು]] ಮಾಡಿಕೊಂಡು [[ತೆಳುವಾದ ಬಟ್ಟೆ|ತೆಳುವಾದ ಬಟ್ಟೆಯಂತೆ]] ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ [[ಪೆಸರಟ್ಟು]] ಎಂಬ ತಿಂಡಿ)ಅಥವಾ [[ದೋಸೆ]] ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು.
[[ಮಾಂಸ]], [[ತರಕಾರಿ|ತರಕಾರಿಗಳು]], [[ಸೊಪ್ಪು ತರಕಾರಿ|ಸೊಪ್ಪು]]ಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು ([[ಮಸಾಲೆ]]) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ.
೧೪ನೇ ಶತಮಾನದಲ್ಲಿ [[ತೆಲಂಗಾಣ]] ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ.
Line ೨೨೮ ⟶ ೨೨೭:
=== ನೃತ್ಯ ===
[[ಚಿತ್ರ:Kuchi pudi dancers.jpg|thumb|right|150px|ಆಂಧ್ರ ಪ್ರದೇಶದ ಸಾಂಪ್ರದಾಯಿಕ ನೃತ್ಯವಾದ ಕೂಚಿಪುಡಿ]]
ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ ([[ಜಯಪ ನಾಯುಡು]]).
ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ.
ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. [[ಕೂಚಿಪುಡಿ|ಕೂಚಿಪುಡಿಯು]] ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ [[ಆಂಧ್ರ ಪ್ರದೇಶದ ನೃತ್ಯಪ್ರಕಾರಗಳು|ನೃತ್ಯ ಪ್ರಕಾರ]]ವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, [[ಕೂಚಿಪುಡಿ]], [[ಭಾಮಕಲಾಪಂ|ಭಾಮಕಲಾಪಮ್]], [[ಬುರ್ರ ಕಥಾ|ಬುರ್ರಕಥಾ]], [[ವೀರನಾಟ್ಯಂ]], [[ಬುಟ್ಟ ಬೊಮ್ಮಲು|ಬುಟ್ಟು ಬೊಮ್ಮಲು]], [[ದಪ್ಪು]], [[ತಪ್ಪೀಟ ಗುಲ್ಲು|ತಪ್ಪೆಟ ಗುಲ್ಲು]], [[ಲಂಬಾಡಿ]], ಬೊನಾಲು, [[ಧಿಂಸ]], [[ಕೋಲಾಟಂ]] ಮತ್ತು ಚಿಂಡು.
== ಹಬ್ಬಗಳು ==
Line ೨೬೨ ⟶ ೨೬೧:
=== ಚಲನಚಿತ್ರಗಳು ===
{{Main|Telugu Cinema}}
ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ.{{Citation needed|date=February 2007}} ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦{{Citation needed|date=February 2007}} ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್ ಥಿಯೇಟರ್ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ.
NTR ರವರು ಟಾಲಿವುಡ್ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ.
=== ಸಂಗೀತ ===
Line ೨೭೨ ⟶ ೨೭೧:
=== ಧರ್ಮ ===
ಎಲ್ಲ ಜಾತಿಗಳ [[ಹಿಂದೂ ಸಂತರು]] ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ [[ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿ|ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು]] ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, [[ದಲಿತ#
ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, [[ದ್ವೈತಾದ್ವೈತ]] ತತ್ವವನ್ನು ಸ್ಥಾಪಿಸಿದ [[ನಿಂಬರ್ಕ]], [[ಭಾರತದ ಸ್ವಾತಂತ್ರ್ಯ ಚಳುವಳಿ|ಭಾರತ ಸ್ವಾತಂತ್ರ್ಯ]]ದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ [[ಶ್ರೀ ಸತ್ಯ ಸಾಯಿ ಬಾಬ|ಶ್ರೀ ಸತ್ಯ ಸಾಯಿ ಬಾಬಾ]], ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್.
== ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು ==
[[ಚಿತ್ರ:Tirumalatemple.jpg|thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ
ಭಾರತದಾದ್ಯಂತ ಇರುವ ಹಿಂದೂಗಳಿಗೆ [[ತಿರುಮಲ-ತಿರುಪತಿ|ತಿರುಪತಿ ಅಥವಾ ತಿರುಮಲ]] ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು [[ವೆಂಕಟೇಶ್ವರ|ವೆಂಕಟೇಶ್ವರದೇವರಿಗೆ]] ಸಮರ್ಪಣೆಯಾಗಿದೆ. ತಿರುಪತಿಯು [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿದೆ. [[ಸತ್ಯನಾರಾಯಣ ಸ್ವಾಮಿ]] ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ.
[[ಸಿಂಹಾಚಲಂ]] ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, [[ಪ್ರಹ್ಲಾದ|ಪ್ರಹ್ಲಾದನನ್ನು]] ಅವನ ದುಷ್ಠ ತಂದೆ [[ಹಿರಣ್ಯಕಶಿಪು|ಹಿರಣ್ಯಕಶಿಪುವಿನಿಂದ]] ರಕ್ಷಿಸಿದ ಸಂರಕ್ಷಕ ದೇವರಾದ [[ನರಸಿಂಹ|ನರಸಿಂಹನ]] ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. [[ವಿಜಯವಾಡ]] ನಗರದಲ್ಲಿರುವ [[ಕನಕದುರ್ಗ ದೇವಸ್ಥಾನ|ಕನಕ ದುರ್ಗ ದೇವಸ್ಥಾನ]] ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. [[ಶ್ರೀ ಕಾಳಹಸ್ತಿ]] ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, [[ಚಿತ್ತೂರ್|ಚಿತ್ತೂರ್]] ಜಿಲ್ಲೆಯಲ್ಲಿನ [[ಸ್ವರ್ಣಮುಖಿ]] ನದಿಯ ದಡದಲ್ಲಿದೆ.
ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, [[ವಿಷ್ಣು|ವಿಷ್ಣುವಿನ]] ಅವತಾರಗಳಲ್ಲೊಂದಾದ [[ನರಸಿಂಹ ಸ್ವಾಮಿ|ನರಸಿಂಹ ಸ್ವಾಮಿಗೆ]] ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, [[ಚೋಳ|ಚೋಳರ]] ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒರಿಸ್ಸಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ [[ಶ್ರೀ ಕೃಷ್ಣದೇವ ರಾಯ|ಶ್ರೀ ಕೃಷ್ಣ ದೇವರಾಯ]]ನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ [[ತೆಲುಗು]] ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು.
[[ಚಿತ್ರ:Hussain Sagar lake, Hyderabad.jpg|thumb|250px|right|ಹುಸೇನ್ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ
[[ಶ್ರೀ ಶೈಲಂ]], ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು [[ಶಿವ]] ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ [[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]ಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ''[[ಸ್ಜಂದ ಪುರಾಣ|ಸ್ಕಂದ ಪುರಾಣ]]'' ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.[[ಆದಿ ಶಂಕರ|ಆದಿ ಶಂಕರರು]] ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "''[[ಶಿವಾನಂದ ಲಹರಿ]]'' "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು [[ಪಾರ್ವತಿ|ಪಾರ್ವತಿಯರು]] ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ [[ಮಹಾಕಾಳಿ]] ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ [[ಜ್ಯೋತಿರ್ಲಿಂಗಗಳು|ಜ್ಯೋತಿರ್ಲಿಂಗ]]ಗಳಲ್ಲಿ ಒಂದಾಗಿದೆ. [[ರಾಮ|ಶ್ರೀರಾಮ ಸ್ವಾಮಿ]]ಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು [[ಕರ್ನೂಲ್]] ಜಿಲ್ಲೆಯಲ್ಲಿದೆ.
[[ಚಿತ್ರ:vb211.jpg|thumb|left|250px|ಸಿಂಹಾಚಲಂ ದೇವಸ್ತಾನದಲ್ಲಿನ ಮಂಪಟ
[[ಭದ್ರಾಚಲಂ]] ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು [[ಗೋದಾವರಿ]] ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-[[ಕಂಚೆರ್ಲ ಗೋಪಣ್ಣ|ಕಂಚೇರ್ಲ ಗೋಪಣ್ಣ]]) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. [[ತ್ರೇತಾಯುಗ|ತ್ರೇತಾಯುಗದಲ್ಲಿ]] ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. [[ರಾಮ ದೇವರು|ಶ್ರೀರಾಮ]] ನು ಪತ್ನಿ [[ಸೀತೆ]] ಮತ್ತು ಸಹೋದರ [[ಲಕ್ಷ್ಮಣ|ಲಕ್ಷ್ಮಣರೊಡಗೂಡಿ]] ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು [[ಖಮ್ಮಮ್ ಜಿಲ್ಲೆ|ಖಮ್ಮಮ್ ಜಿಲ್ಲೆ]]ಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ [[ಶ್ರೀ ರಾಮ ನವಮಿ|ಶ್ರೀರಾಮ ನವಮಿ]]ಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ.
[[ಬಸರ್-ಸರಸ್ವತಿ ದೇವಸ್ಥಾನ|ಬಸರ್-ಸರಸ್ವತಿ ದೇವಸ್ಥಾನವು]], ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು [[ಅದಿಲಾಬಾದ್]] ಜಿಲ್ಲೆಯಲ್ಲಿದೆ. [[ಯಾಗಂಟಿ ಗುಹೆಗಳು]] ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ [[ಹಿಂದು|ಹಿಂದೂ]] [[ಬಿರ್ಲಾ ಮಂದಿರ್, ಹೈದರಾಬಾದ್|ಬಿರ್ಲಾ ಮಂದಿರ]], ಮತ್ತು [[ರಾಮಪ್ಪ ದೇವಸ್ಥಾನ]], [[ಮುಸ್ಲಿಂ|ಮುಸ್ಲಿಂರ]] [[ಮೆಕ್ಕ ಮಸೀದಿ|ಮೆಕ್ಕಾ ಮಸೀದಿ]] ಮತ್ತು [[ಚಾರ್ಮಿನಾರ್]], ಜೊತೆಗೆ [[ಹುಸೇನ್ ಸಾಗರ್|ಹುಸೇನ್ ಸಾಗರ್ ಜಲಾಶಯ]]ದ ಮೇಲಿರುವ [[ಗೌತಮ ಬುದ್ಧ|ಬುದ್ಧ]]ನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ.
[[ಚಿತ್ರ:Ramappa1.jpg|thumb|right|250px|ರಾಮಪ್ಪ ದೇವಸ್ಥಾನ
ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು.
ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು.
Line ೨೯೫ ⟶ ೨೯೪:
[[ಬಾಪು (ಕಲಾವಿದ)|ಬಾಪೂರವರ]] ಚಿತ್ರಕಲೆ, [[ನಂದೂರಿ ಸುಬ್ಬರಾವ್]] ಅವರ ''ಯೆಂಕಿ ಪಾಟಲು'' ,(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,([[ಮುಲ್ಲಪುಡಿ|ಮುಲ್ಲಪುಡಿಯವರಿಂದ]] ರಚನೆಯಾದ ಪಾತ್ರ), [[ಅನ್ನಮಾಚಾರ್ಯ|ಅನ್ನಮಯ್ಯನ]] ಹಾಡುಗಳು, [[ಆವಕಾಯ|ಅವಕಾಯ]] (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), [[ಗೊಂಗೂರ|ಗೊಂಗುರ]] (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ [[ಚಟ್ನಿ]]), ''ಅಟ್ಲ ತಡ್ಡಿ'' (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ''ದೂಡು ಬಸವಣ್ಣ'' (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು [[ಸಂಕ್ರಾಂತಿ|ಸಂಸ್ಕೃತಿ]]ಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ [[ಧಾರ್ಮಿಕ ದೃಷ್ಟಿಕೋನ|ವಿಗ್ರಹ]]ಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ [[ದುರ್ಗಿ|ದುರ್ಗಿಯ]] ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ', 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ.
== ಶಿಕ್ಷಣ ==
[[ಚಿತ್ರ:Ind school of business.jpg|thumb|350px|right|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್
ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ.
ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ [[ಮಾಸ್ಟರ್ ಆಫರ್ ಬಿಸಿನೆಸ್ ಅಡ್ಮಿನಿಷ್ಟ್ರೇಷನ್|MBA]] ಮತ್ತು [[ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್|MCA]] ಕಾಲೇಜುಗಳು; ೫೦೦ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ.
ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಹೈದರಾಬಾದ್ನಲ್ಲಿರುವ [[BITS ಪಿಲಾನಿ]] ಆವರಣ) ಮತ್ತು [[IIT ಹೈದರಾಬಾದ್|IIT ಹೈದರಾಬಾದ್ನಂತಹ]] ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ.
[[IIIT ಹೈದರಾಬಾದ್|ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಶನ್ ಟೆಕ್ನಾಲಜಿ , ಹೈದರಾಬಾದ್ (IIIT-H)]], [[ಹೈದರಾಬಾದ್ ವಿಶ್ವವಿದ್ಯಾಲಯ]](ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು [[ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್|ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್]] (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT) ಮತ್ತು ದಿ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಮ್ಯಾನೇಜ್ಮೆಂಟ್, ಕೇಟರಿಂಗ್ ಟೆಕ್ನಾಲಜಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್ ಇವೂ ಕೂಡ ಹೈದರಾಬಾದ್ನಲ್ಲಿವೆ. ಪ್ರತಿಷ್ಠಿತ [[ಒಸ್ಮಾನಿಯಾ ವಿಶ್ವವಿದ್ಯಾಲಯ]] ಕೂಡ ಇರುವುದು ಹೈದರಾಬಾದ್ನಲ್ಲೇ.
ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್.ಟಿ.ರಾಮ ರಾವ್ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು.
== ವೃತ್ತ ಪತ್ರಿಕೆಗಳು ==
ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ''[[ಈನಾಡು]]'' , ''[[ಆಂಧ್ರ ಜ್ಯೋತಿ]]'' , ''[[ಸಾಕ್ಷಿ]]'' , ''[[ಪ್ರಜಾಶಕ್ತಿ]]'' , ''[[ವಾರ್ತಾ]]'' , ''[[ಆಂಧ್ರಭೂಮಿ|ಆಂಧ್ರ ಭೂಮಿ]]'' , ''[[ವಿಶಾಲಾಂಧ್ರ]]'' ,'' [[ಸೂರ್ಯಾ]]'' , ಮತ್ತು ''[[ಆಂಧ್ರ ಪ್ರಭ]]'' , ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು.
ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ''[[ಸಿಯಾಸತ್ ಡೈಲಿ]]'' , ''[[ಮುನ್ಸಿಫ್ ಡೈಲಿ]]'' , ''[[ರೆಹ್ನುಮಾ-ಇ-ಡೆಕ್ಕನ್]]'' , ''[[ಇತಿಮದ್ ಉರ್ದು ಡೈಲಿ]]'' , ''[[ಆವಾಂ]]'' ಮತ್ತು ''[[ದಿ ಮಿಲಾಪ್ ಡೈಲಿ|ಮಿಲಾಪ್ ಡೈಲಿ]]''
ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ''[[ಡೆಕ್ಕನ್ ಕ್ರಾನಿಕಲ್
ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ''[[ಸ್ವತಂತ್ರ ವಾರ್ತಾ]]'' , ''[[ವಿಶಾಖಪಟ್ಟಣಂ]] ನಿಜಾಮಾಬಾದ್'' , ಮತ್ತು [[ಹೈದರಾಬಾದ್|ಹೈದರಾಬಾದ್ನಿಂದ]] ಪ್ರಕಟವಾಗುವ ಅತ್ಯಂತ ಹಳೆಯ [[ಹಿಂದಿ ವೃತ್ತಪತ್ರಿಕೆ|ಹಿಂದಿ ಪತ್ರಿಕೆ]]ಗಳಲ್ಲಿ ಒಂದಾದ ''[[ಹಿಂದಿ ಮಿಲಾಪ್]]'' .
== ಪ್ರವಾಸೋದ್ಯಮ ==
[[ಚಿತ್ರ:Araku-valley.gif|thumb|right|ಅರಕು ಕಣಿವೆ
[[ಚಿತ್ರ:vb125.jpg|thumb|right|ಬೊರ್ರ ಗುಹೆಗಳು (ಇಳಿಬಿದ್ದಿರುವ ನೀರ್ಗೋಲುಳು ಮತ್ತು ನೆಲದಿಂದ ಮೇಲೆದ್ದಿರುವ ನೀರ್ಗೋಲುಗಳು )]]
[[ಚಿತ್ರ:Cave entrance.jpg|thumb|right|ಬೆಲಂ ಗುಹೆಗಳು
ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "''ಭಾರತದ [[ಕೋಹಿನೂರ್|ಕೊಹಿನೂರ್]]'' " ಎಂದು ಬಿಂಬಿಸಿದೆ.
ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. [[ವೆಂಕಟೇಶ್ವರ ಸ್ವಾಮಿ|ವೆಂಕಟೇಶ್ವರ ಸ್ವಾಮಿಯ]] ನೆಲೆಬೀಡಾದ [[ತಿರುಮಲ ವೆಂಕಟೇಶ್ವರ ದೇವಸ್ಥಾನ|ತಿರುಪತಿ]]ಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. [[ನಲ್ಲಮಲ ಬೆಟ್ಟಗಳು|ನಲ್ಲಮಲ ಬೆಟ್ಟ]]ದಲ್ಲಿ ಸೇರಿಕೊಂಡಿರುವ {{Citation needed|date=December 2008}}[[ಶ್ರಿ ಶೈಲಂ|ಶ್ರೀ ಶೈಲಂ]] ಕ್ಷೇತ್ರವು ''ಶ್ರೀ ಮಲ್ಲಿಕಾರ್ಜುನ'' ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ''[[ಜ್ಯೋತಿರ್ಲಿಂಗಂ|ಜ್ಯೋತಿರ್ಲಿಂಗ]]'' ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, [[ಥೊಟ್ಲಕೊಂಡ]], ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ.
[[ಬಾದಾಮಿ ಚಾಲುಕ್ಯರು|ಬಾದಾಮಿ ಚಾಲುಕ್ಯ]]ರು ([[ಬಾದಾಮಿ|ಬಾದಾಮಿಯು]] [[ಕರ್ನಾಟಕ|ಕರ್ನಾಟಕದಲ್ಲಿದೆ]].) ೬ನೇ ಶತಮಾನದಲ್ಲಿ ನಿರ್ಮಿಸಿರುವ '''ಆಲಂಪುರ್ ಭ್ರಮಾ ದೇವಸ್ಥಾನಗಳು ''' <ref>{{cite web
Line ೩೨೪ ⟶ ೩೨೩:
|publisher=
|accessdate=2009-02-26
}}</ref>[[ಚಾಲುಕ್ಯ|ಚಾಲುಕ್ಯರ]] ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯವು]] ಅಸಂಖ್ಯಾತ ಸ್ಮಾರಕಗಳು, [[ಶ್ರೀಶೈಲಂ]] ದೇವಸ್ಥಾನ ಮತ್ತು [[ಲೇಪಾಕ್ಷಿ]] ದೇವಸ್ಥಾನಗಳನ್ನು ನಿರ್ಮಿಸಿತು.
[[ವಿಶಾಖಪಟ್ಟಣಂ|ವಿಶಾಖಪಟ್ಟಣಂನಲ್ಲಿರುವ]] ಗೋಲ್ಡನ್ ಬೀಚ್, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ [[ಅರಕು ಕಣಿವೆ]], ಹಾರ್ಸ್ಲೆ ಬೆಟ್ಟಗಳ ಗಿರಿಧಾಮಗಳು, ''ಪಾಪಿ ಕೊಂಡಾಲು'' ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು [[ತಲಕೊಂಡ|ತಲಕೋಣ]]ದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ ರಸ್ತೆಯನ್ನು ಹೊಂದಿರುವ ಯರಾಡ ಬೀಚ್, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು.
[[ಚಿತ್ರ:Borra-caves4 vzg.jpg|thumb|left|ಬೊರ್ರ ಗುಹೆಗಳು
[[ಚಿತ್ರ:RishikondaBeachmain.jpg|thumb|left|ರಿಷಿಕೊಂಡ ಬೀಚ್
[[ಬೊರ್ರ ಗುಹೆಗಳು]] ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್ ಭೂವಿಜ್ಞಾನಿಯಾದ ವಿಲಿಯಂ ಕಿಂಗ್ ಜಾರ್ಜ್, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ''ಬುರ್ರ'' ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು.
[[ಬೆಲಂ ಗುಹೆಗಳು]] ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ''ಬಿಲಂ '' ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ.
ತೆಲುಗಿನಲ್ಲಿ ಈ ಗುಹೆಗಳಿಗೆ ''ಬೆಲಂ ಗುಹಾಲು'' ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು{{convert|120|ft|m}} ಪ್ರವೇಶದ್ವಾರದಿಂದ ಇದ್ದು, ಅದನ್ನು ''ಪಾತಾಳಗಂಗಾ'' ಎಂದು ಕರೆಯಲಾಗುತ್ತದೆ.
೧,೨೬೫ ಮೀಟರ್ನಷ್ಟು ಎತ್ತರದಲ್ಲಿರುವ [[ಹಾರ್ಸ್ಲೆ ಬೆಟ್ಟಗಳು]], ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ.
[[ಚಾರ್ಮಿನಾರ್]], [[ಗೊಲ್ಕೊಂಡ ಸುಲ್ತಾನರು|ಗೋಲ್ಕೊಂಡ ಕೋಟೆ]], [[ಚಂದ್ರಗಿರಿ|ಚಂದ್ರಗಿರಿ ಕೋಟೆ]], [[ಚೌಮಹಲ್ಲ ಅರಮನೆ]], ಮತ್ತು [[ಫಲಕ್ನುಮ ಅರಮನೆ]] ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು.
[[ಕೃಷ್ಣ ಜಿಲ್ಲೆ|ಕೃಷ್ಣ ಜಿಲ್ಲೆಯಲ್ಲಿರುವ]] [[ವಿಜಯವಾಡ|ವಿಜಯವಾಡದಲ್ಲಿನ]] [[ಕನಕ ದುರ್ಗ ದೇವಸ್ಥಾನ]], ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ [[ವೆಂಕಟೇಶ್ವರ ದೇವಸ್ಥಾನ]] (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ [[ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ]]- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ.
== ಸಾರಿಗೆ ==
[[ಚಿತ್ರ:Map AP dist NH roads.png|thumb|left|ಆಂಧ್ರ ಪ್ರದೇಶದ ಪ್ರಮುಖ ರಸ್ತೆ ಸಂಪರ್ಕಗಳು
[[ಚಿತ್ರ:Vizag seaport.jpg|thumb|right|ವಿಶಾಖಪಟ್ಟಣಂ ಕಡಲ ಬಂದರು
[[ಚಿತ್ರ:Secunderabad Junction railway station in 2007.jpg|thumb|right|ಸಿಕಂದರಾಬಾದ್ ರೈಲ್ವೇ ನಿಲ್ದಾಣ, ದಕ್ಷಿಣ ಕೇಂದ್ರೀಯ ರೈಲ್ವೆಯ ಕೇಂದ್ರ ಕಾರ್ಯಾಲಯ
ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು.
ಆಂಧ್ರ ಪ್ರದೇಶದ ಸರ್ಕಾರದ ಒಡೆತನದ [[ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ|ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು]] (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್ ಮತ್ತು ಬೈಸಿಕಲ್ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ.
Line ೩೫೧ ⟶ ೩೫೦:
ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: [[ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ|ಹೈದರಾಬಾದ್]] (ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), [[ವಿಶಾಖಪಟ್ಟಣಂ]], [[ವಿಜಯವಾಡ]], [[ರಾಜಮುಂಡ್ರಿ]] ಮತ್ತು [[ತಿರುಮಲ-ತಿರುಪತಿ|ತಿರುಪತಿ]].ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, [[ನೆಲ್ಲೂರು|ನೆಲ್ಲೂರ್]], [[ವಾರಂಗಲ್]], [[ಕಡಪ]], [[ತಡೇಪಲ್ಲಿಗುಡೆಂ|ತಡೆಪಲ್ಲಿಗುಡೆಂ]] [[ರಾಮಗುಂಡಂ]] ಮತ್ತು [[ಒಂಗೊಲ್|ಒಂಗೊಲ್]]
ಆಂಧ್ರ ಪ್ರದೇಶವು [[ವಿಶಾಖಪಟ್ಟಣಂ]] ಮತ್ತು [[ಕಾಕಿನಾಡ|ಕಾಕಿನಾಡದಲ್ಲಿ]] ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ [[ಮಚಲೀಪಟ್ಟಣಂ|ಮಚಲೀಪಟ್ಣಂ]], [[ನಿಜಾಮ್ಪಟ್ಟಣಂ|ನಿಜಾಮ್ಪಟ್ಣಂ]]([[ಗುಂಟೂರ್|ಗುಂಟೂರ್]]) ಮತ್ತು [[ಕೃಷ್ಣಪಟ್ಟಣಂ|ಕೃಷ್ಣಪಟ್ಣಂ]]ಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ [[ಗಂಗಾವರಂ|ಗಂಗಾವರಂನಲ್ಲಿ]] ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ.
== ಆಂಧ್ರ ರಾಜಕೀಯ ಮತ್ತು ಆಡಳಿತ ==
Line ೩೬೫ ⟶ ೩೬೩:
| width="2%" | '''FMR''' (ಒಟ್ಟು ವಿಧಾನ ಸಭೆ ಸದಸ್ಯರು )
|-
| bgcolor="#C1E0FF" |
|೧.'''[[ವೈ. ಎಸ್. ರಾಜಶೇಖರ ರೆಡ್ಡಿ]]'''
೨.ಕೊನಿಜೇಟಿ ರೋಸಯ್ಯ ;
Line ೩೮೨ ⟶ ೩೮೦:
* ಕಮ್ಯನಿಸ್ಟ್ ಪಾಟಿ ಆಪ್‘ ಇಂಡಿಯಾ.--೧;
* [[ಕಮ್ಯನಿಸ್ಟ್ ಪಾಟಿ ಆಪ್ ಇಂಡಿಯಾ ಮಾರ್ಕಿಸ್ಟ್]]‘, -- ೧; ;
* [[ಇಂಡಿಯನ್ ನ್ಯಾಶನಲಿಸ್ಟ್ ಕಾಂಗ್ರೆಸ್]]
* [[ತೆಲಂಗಾಣಾ ರಾಷ್ಟ್ರ ಸಮಿತಿ]] ---೬೩ ;
* ತೆಲಗು ದೇಶಮ್ --೧೫;
Line ೪೨೯ ⟶ ೪೨೭:
[[:pnb:آندھراپردیش|pnb:آندھراپردیش]]
[[ವರ್ಗ:ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
[[ವರ್ಗ:ಆಂಧ್ರ ಪ್ರದೇಶ]]
|