ಸದಸ್ಯ:Bhimappa Shivappa Badakannavara/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
==ಬಾಹ್ಯ ಸಂಪರ್ಕ==
*[[ಪ್ರಜಾವಾಣಿ ಪತ್ರಿಕೆಯ ಜಾಲತಾಣ]]
 
ಕರಾವಳಿ ಕರ್ನಾಟಕದ ಕಾದಂಬರಿಗಳಲ್ಲಿ ಪ್ರಾದೇಶಿಕತೆ [ಮೈನರ್ ರಿಸರ್ಚ್ ಪ್ರೋಜೆಕ್ಟ್]
ಒಂದನೇ ವರದಿ,
ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಎಂದು ವಿಶಾಲಾರ್ಥದಲ್ಲಿ ಕರೆಯಬಹುದಾದ ರಚನೆ ವ್ಯಾಪಕವಾಗಿ ಕಾಣಿಸಿಕೊಂಶಿದ್ದು ಚಾರಿತ್ರಿಕ ಕಾದಂಬರಿಗಳಲ್ಲಿಯೇ. ಕರ್ನಾಟಕದಲ್ಲಿ ವಸಹತುಶಾಹಿಯ ಪ್ರಮುಖ ಹೊಡೆತವಂದರೆ ನಾಡಿನ ಚಿದ್ರೀಕರಣ ವಿಜಯನಗರ ಅವನತಿಯ ಹೊತ್ತಿನಲ್ಲಿ ಪ್ರಾರಂಭವಾಗಿದ್ದ ಪ್ರಕ್ರಿಯೆ ದುರಂತ ರೀತಿಯಲ್ಲಿ ಪೂರ್ಣಗೊಂಡಿದ್ದು ಇಲ್ಲಿಯೆ. ಬಹುಶ: ಭಾರತದ ಉಳಿದಾವ ಪ್ರದೇಶವು ಇಷ್ಟೊಂದು ಆಘಾತವನ್ನು ಅನುಭವಿಸಿರಲಿಲ್ಲ. ಇದರ ಪರಿಣಾಮ ಹಲವಷ್ಟು
ಚಾರಿತ್ರಿಕ ಕಾದಂಬರಿಗಳು ಹುಟ್ಟಿಕೊಂಡವು. ಇದು ಕರ್ನಾಟಕದ ಸಮಷ್ಟಿಯ ಹುಡುಕಾಟದೊಡನೆ ಪ್ರಬುದ್ಧ ಸ್ಥಿತಿಗೆ ಬಂತು ಎನ್ನುವುದಾಗಿ ಡಿ.ಆರ್. ನಾಗರಾಜ್ ಅವರು ಕನ್ನಡ ಕಾದಂಬರಿ ಪರಂಪರೆ ಮತ್ತು ಕರ್ನಾಟಕ ಎಂಬ ಲೇಖನದಲ್ಲಿ ಅಭಿಪ್ರಾಯ ಪಡುತ್ತಾರೆ.
ಬಿದರ ಹಳ್ಳಿ ನರಸಿಂಹ ಮೂರ್ತಿಯವರು ಹೇಳುವಂತೆ ಪ್ರಾದೇಶಿಕತೆ ಒಂದು ಪ್ರದೇಶದ ಸಾಂಸೃತಿಕ ವಿಭಿನ್ನತೆಯನ್ನು ಆ ಜನ ಸಮುದಾಯದ ಸಾಮೂಹಿಕ ಚೆಲುವನ್ನು ಎತ್ತಿ ಹಿಡಿಯುವ ಪರಿಕಲ್ಪನೆ,ವೈಯಕ್ತಿಕ ಅಭಿವ್ಯಕ್ತಿಗಿಂತ ಇಲ್ಲಿ ಸಾಮೂಹಿಕ ಅಭಿವ್ಯಕ್ತಿ ಮಹತ್ವದ್ದಾಗಿದೆ. ಪ್ರತಿ ಜನ ಸಮುದಾಯವೂ ಬದುಕನ್ನು ದಕ್ಕಿಸಿಕೊಳ್ಳುವ ಒಂದು ಪ್ರಾದೇಶಿಕ ಶೈಲಿಯನ್ನು ಹೊಂದಿರುತ್ತದೆ. ಪ್ರತ್ತಿ ಪ್ರದೇಶಕ್ಕೂ ತನ್ನದೇ ಆದ ಜಾನಪದ ಛಾಪು ಮತ್ತು ಧಾತಿ ಇದ್ದೇ ಇರುತ್ತದೆ. ಇದನ್ನೇ ಪ್ರಾದೇಶಿಕತೆ ಎನ್ನುತ್ತಾರೆ. ವಿಶಿಷ್ಟ ,ಭಾಷಿಕ ಭಿನ್ನತೆ ಹಾಗೂ ಸಾಂಸೃತಿಕ ಸಂಲಗ್ನತೆಗಳು ಇದ್ದಗ ಮಾತ್ರ ಅದು ಪ್ರಾದೇಶಿಕತೆ ಎನ್ನಿಸಿಕೊಳ್ಳುವುದು.
ಪ್ರಾದೇಶಿಕತೆಯನ್ನು ರೂಪಿಸುವ ಮತ್ತೊದು ಅಂಶ ಸಂಸೃತಿ. ಸಂಸೃತಿ ರೂಪುಗೊಳ್ಳಲು ಆಯಾ ದೇಶ,ಕಾಲ ಚರಿತ್ರೆಗಳು ಕಾರಣವಾಗಿದೆ.ಪ್ರತಿ ಒಂದು ಸಂಸೃತಿಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಸಂಸ್ಕಾರವು ಪ್ರಧಾನವಾಗಿರುತ್ತದೆ. ವಸಾಹತುಶಾಹಿ ಸಂದರ್ಭದಲ್ಲಿ ಪ್ರಾದೇಶಿಕತೆ ಎಂಬುದು ರಾಷ್ಟ್ರ ಪ್ರೇಮ ಎಂಬ ಅರ್ಥವನ್ನು ಕೊಡುತ್ತದೆ.
೨೦ನೇ ಶತಮಾನದ ಪೂರ್ವದಲ್ಲಿ ರಾಷ್ಟ್ರೀಯತೆ ವಸಾಹತುಶಾಹಿಯ ವಿರೋಧದ ಧ್ವನಿ ಎಂದು ಭಾವಿಸಲಾಗಿತ್ತು. ಧರ್ಮ,ರಾಜ್ಯ,ದೇಶಗಳ ಬಗ್ಗೆ ಅತೀವವಾದ ಆಕಾಂಕ್ಷೆ, ಜನರಲ್ಲಿದ್ದಂತೆ ಕಾಣುತ್ತದೆ. ಯಾರಾದರೂ ಇದರ ಬಗ್ಗೆ ಧ್ವನಿ ಎತ್ತಿದ್ದರೆ ಹಾಗೂ ಯುವಕರಕಲ್ಲಿ ನವ ಚೈತನ್ಯವನ್ನು ತುಂಬಲು ಕಾದಂಬರಯೇ ಪ್ರಮುಖ ಆಕರವೆಂದು ತಿಳಿಸಿದ್ದರು.
 
ಸುಧಾ ಕುಮಾರಿ
ಉಪನ್ಯಾಸಕರು
ಸಂತ ಅಲೋಶಿಯಸ್ ಕಾಲೇಜು
ಮಂಗಳೂರು