Chaithra Pillareddy
Joined ೨೦ ಜೂನ್ ೨೦೧೫
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೧ ನೇ ಸಾಲು:
ನನ್ನ ಹೆಸರು ಚೈತ್ರ. ಚೈತ್ರ ಎಂದರೆ, ನಮ್ಮ ಕನ್ನಡ ಸಂಪ್ರದಾಯದ ಮೊದಲ ತಿಂಗಳು. ನಾನು ಬೆಂಗಳೂರು ಜಿಲ್ಲೆಯ,ಆನೇಕಲ್ ತಾಲುಕಿನ ಸರ್ಜಾಪುರದ ವಿ.ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆ. ನಮ್ಮ ಊರು ಬಹಳ ಸುಂದರ ಮತ್ತು ಹಸಿರು ವತಾವರಣದಿಂದ ಕೂಡಿದೆ. ನನ್ನ ತಂದೆಯ ಹೆಸರು ಪಿಲ್ಲಾರೆಡ್ಡಿ ಮತ್ತು ನನ್ನ ತಾಯಿಯ ಹೆಸರು ಸುಶೀಲ. ನನ್ನ ತಂದೆಯ ವೃತ್ತಿ ವ್ಯಾವಸಯ.ನನಗೆ ಬಬ್ಬಳೆ ತಂಗಿ,ಅವಳ ಹೆಸರು ಭಾವನೆ. ಅವಳು ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು,ನೃತ್ಯ ಮಾಡುವುದು ಮುಂದಾದವು.ನನಗೆ ಆದರ್ಶವಾದವರು ಎ.ಪಿ.ಜೆ.ಅಬ್ದೂಲ್ ಕಾಲಂರವರು. ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು.
ನಾನು ನನ್ನ ವಿದ್ಯಾಭ್ಯಾಸವನ್ನು ಸರ್ಜಾಪುರದ ನ್ಯೂ ಆಕ್ಸ್ಫರ್ಡ್ ಶಾಲೆಯಲ್ಲಿ ಮಾಡಿದೆ. ನಾನು ಈ ಶಾಲೆಯಲ್ಲಿ ಹನ್ನೆರಡು ವರುಷಗಳವರೆಗೆ ಓದಿದೆ. ನನಗೆ ಈ ಶಾಲೆಯ ಜೊತೆ ಬಹಳ ಒಳ್ಳೆಯ ನಂಟು.
ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ.
ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
|