ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
==ವೈವಾಹಿಕ ಜೀವನ==
 
ಇವರ ವಿವಾಹವು ಬಂಟ್ವಾಳದಲ್ಲಿಯೇ ನೆಲೆಸಿರುವ ಗುರುಪುರ್ ವೆಂಕಟ್ರಾಯ ಪ್ರಭುರವರ ಹಿರಿಯ ಪುತ್ರಿ ರಮಾ ಇವರೊಂದಿಗೆ ೧೯೨೫ ರಂದು ದೇವಳದ ಶಾಲೆಯ ಪಕ್ಕದಲ್ಲಿರುವ ತಮ್ಮ ಸ್ವಗೃಹದಲ್ಲಿ ಬಹಳ ವಿಜೃಂಬಣೆಯಿಂದ ನೆರವೇರಿತು. ೧೯೨೬ರಲ್ಲಿ ಮೊದಲ ಗಂಡು ಮಗು ಜನನವಾಯಿತು. ಅದಕ್ಕೆ ವೈಕುಂಠ ಎಂದು ನಾಮಕರಣ ಮಾಡಿದರು. ನಂತರ ೧೯೩೧ರಂದು ಹೆಣ್ಣು ಮಗುವಿನ ಜನನವಾಯಿತು. ಅದೇ ಸಮಯದಲ್ಲಿ ಭಾರತ ಸ್ವಾತಂತ್ರ್ಯಸಂಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದು ಇವರು ಕೂಡ ಇದರಲ್ಲಿ ಭಾಗವಹಿಸಿರುವ ಕಾರಣ ದೇಶದ ಮೇಲಿನ ಅಭಿಮಾನದಿಂದ ಮಗುವಿಗೆ ಭಾರತಿ ಎಂದು ಹೆಸರಿಡಲಾಯಿತು.
ಮುಂದೆ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ೧೯೩೦-೩೨ರ ನಡುವಿನ ಸಮಯದಲ್ಲಿ ಜೈಲುವಾಸವನ್ನು ಕೂಡಾ ಅನುಭವಿಸಿದರು. ಅದೇ ಸಮಯದಲ್ಲಿ ಅಂದರೆ ೧೯೩೨ರಂದು ಗಂಡು ಮಗುವಿನ ಜನನವಾಯಿತು. ಅದಕ್ಕೆ ಗಾಂಧೀಜಿಯವರ ಹೆಸರಾದ ಮೋಹನದಾಸ ಎಂಬುದಾಗಿ ಇಡಲಾಯಿತು. ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿ ವ್ಯವಹಾರ ಹಾಗೂ ಸಂಸಾರವನ್ನು ಕಡೆಗಣಿಸಿ ತುಂಬಾ ಕಷ್ಟ,ನಷ್ಟಗಳನ್ನು ಅನುಭವಿಸಿದರು. ೧೯೩೮ರಲ್ಲಿ ರತ್ನಾ ಎಂಬ ಹೆಣ್ಣು ಮಗುವಿನ ಜನನವಾಯಿತು, ಹೀಗೆ ನಂತರ ಕ್ರಮವಾಗಿ ೧೯೪೨ ಲಕ್ಷ್ಮಣ,೧೯೪೪ (ಯಶವಂತ)ವೆಂಕಟ್ರಾಯ,೧೯೪೭ ವಾಮನ,೧೯೪೯ ನಿರ್ಮಲಾ ಹಾಗೂ ೧೯೫೩ರಲ್ಲಿ ನಾಗವೇಣಿಯ ಜನನವಾಯಿತು. ಹೀಗೆ ತುಂಬು ಸಂಸಾರ.
 
==ಸ್ವಾತಂತ್ರ್ಯ ಹೋರಾಟಗಾರ==
೧೯೨೮ರಿಂದ ಸ್ವಾತಂತ್ರ್ಯ ಚಳುವಳಿಯ ಕಡೆಗೆ ಗಮನಹರಿಸಲಾರಂಬಿಸಿದರು. ಮಹಾತ್ಮಾ ಗಾಂಧೀಜಿಯವರು ಕರೆಕೊಟ್ಟ ಎಲ್ಲಾ ಚಳುವಳಿಗಳಲ್ಲಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದರು. ನಂತರ ಬಂದ ಕಷ್ಟ ನಷ್ಟಗಳನ್ನು ಸಹಿಸಲಾಗದೆ ತನ್ನ ಹಿರಿಯಕ್ಕ ಯಶೋದಾರವರನ್ನು ಬೊಂಬಾಯಿಗೆ (ಈಗಿನ. ಮುಂಬಯಿ)ಹಡಗಿನಲ್ಲಿ ಕಳುಹಿಸಲು ಬಂದವರು ಯಾರಿಗೂ ತಿಳಿಸದೆ ತಾವೂ ಮುಂಬಯಿಗೆ ಪಲಾಯನ ಮಾಡಿದರು. ಅಲ್ಲಿ ಸುಮಾರು ಮೂರು ವರುಷ ತುಂಬಾ ಕಷ್ಟದ ಜೀವನವನ್ನು ನಡೆಸಿ ೧೯೪೧ರಲ್ಲಿ ಬಂಟ್ವಾಳಕ್ಕೆ ಹಿಂತಿರುಗಿದರು. ಬಂಟ್ವಾಳಕ್ಕೆ ಹಿಂತಿರುಗಿದ ನಂತರ ಮುಂಬಯಿಯಲ್ಲಿರುವಾಗ ಕೆಲಸ ಮಾಡಿದ ಜವುಳಿ ಅಂಗಡಿಯ ಶೇಟ್ ಇವರ ಆರ್ಥಿಕ ಸಹಾಯದಿಂದ ಬಂಟ್ವಾಳದಲ್ಲಿ ಅವರ ಹೆಸರಿನಲ್ಲಿ ವ್ಯಾಪಾರವನ್ನು ಪ್ರಾರಂಭಿಸಿದರು. ಇದರಲ್ಲಿ ಕೂಡಾ ನಷ್ಟ ಅನುಭವಿಸಿ, ಮಂಗಳೂರಿನ ಸ್ವದೇಶೀ ಸ್ಟೋರ್ಸ್ ನ ಮಾಲಕ ತನ್ನ ಪತ್ನಿಯ ತಂದೆಯ ಸಹೋದರರ ಮಗನಾದ ಗುರುಪುರ್ ಮುಕುಂದ ಪ್ರಭುರವರ ಸಹಾಯದಿಂದ ಖಾದಿ ಭಂಡಾರವನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಹೋರಾಟದ ಒಂದು ಅಂಗವಾದ ಸ್ವದೇಶೀ ಚಳುವಳಿಗಾಗಿ ಮನೆಮನೆಗಳಲ್ಲಿ ಖಾದಿಯ ನೂಲನ್ನು ನೇಯಲು ಅಗತ್ಯವಾದ ಚರಕವನ್ನು ತಯಾರಿಸಲು ಮಗ್ಗದ ಕೈಗಾರಿಕಾ ಘಟಕವನ್ನು ಬಂಟ್ವಾಳದ ಭಂಡಾರಿಬೆಟ್ಟಿನಲ್ಲಿರುವ ದೇವಳದ ಖಾಲಿ ಇರುವ ಕಟ್ಟಡವನ್ನು