ತಾಳ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೧ ನೇ ಸಾಲು:
ಚಿತ್ರದುರ್ಗ ಜಿಲ್ಲೆಯ ಉಳಿದ ತಾಲ್ಲೂಕುಗಳಂತೆ ಹೊಳಲ್ಕೆರೆ ತಾಲ್ಲೋಕಿನ [[ತಾಳ್ಯ]] ವೂ ಒಂದು ಚಿಕ್ಕ ಪ್ರದೇಶ.ಇದು ಹೋಬಳಿಯ ಮುಖ್ಯ ಕೇಂದ್ರ . ಇದು ಎಲ್ಲರ ಗಮನಸೆಳೆಯುತ್ತಿರುವುದು, ಅಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ. ಮಳೆಯೇ ಬರದ ಬಂಜರು ಪ್ರದೇಶ ತಾಳ್ಯ. ಬರಗಾಲ ಪ್ರದೇಶವೆಂದು ಇದನ್ನು ಘೋಶಿಸುವುದು ಅಗತ್ಯ.
==
ತಾಳ್ಯ ಹೋಬಳಿಗೆ ಸೇರಿದ ಹೊರಕೆರೆ ದೇವರಪುರ , ಅಲ್ಲಿನ ಲಕ್ಶ್ಮೀರಂಗನಾಥ ಸ್ವಾಮಿ ದೇವಾಲಯದಿಂದ ಪ್ರಸಿದ್ದವಾದುದು. ಇಡೀ ದೇವಾಲಯವನ್ನು ಅಗ್ನಿ ಶಿಲೆಯಿಂದ ಕಟ್ಟಲಾಗಿದೆ .ಇದೊಂದು ಚಿತ್ರದುರ್ಗ ಜಿಲ್ಲೆಯ ಅತ್ಯಂತ ಬೃಹತ್ ಶಿಲಾ ದೇವಾಲಯ , ದೇವಾಲಯದಲ್ಲಿ ಲಕ್ಷ್ಮೀ,ಭೂದೇವಿಯರ ಸೇವೆಯಲ್ಲಿ ಶಯನಿಸಿರುವರಂಗನಾಥನ ಅಪೂರ್ವ ಶಿಲ್ಪವಿದೆ .ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಇಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿನ ಪ್ರಮುಖ ಜಾತ್ರೆಗಳಲ್ಲೊಂದು . ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಗುಂಡಿನ ಸೇವೆಯ ಪವಾಡ ಅತ್ಯಂತ ಪ್ರಸಿದ್ದವಾದುದು . ಇಲ್ಲಿನ ಕಲ್ಯಾಣಿ ಈಗ ಬತ್ತಿದ ಸ್ಥಿತಿಯಲ್ಲಿದ್ದರೂ ಒಂದು ಕಾಲದಲ್ಲಿ ನೀರಿನ ಸೆಲೆಯಿಂದ ತುಂಬಿ ತುಳುಕುತ್ತಿತ್ತು . ನೋಡಲು ಈಗಲೂ ಸುಂದರವಾಗಿದೆ . 'ಹೊರಕೆರೆ ದೇವರಪುರ' ಮತ್ತು ಸುತ್ತಣ ಗ್ರಾಮಗಳು 'ವೀಳ್ಯದ
=='ಐತಿಹಾಸಿಕ ಊರು', 'ನಂದನ ಹೊಸೂರು',ಪ್ರಾಚೀನ ದೇವಸ್ಥಾನಗಳಿಗೆ ಹೆಸರು ವಾಸಿಯಾಗಿದೆ.==
ಹೊರಕೆರೆದೇವರಪುರದ ಸಮೀಪದ ಇನ್ನೊಂದು ಐತಿಹಾಸಿಕ ಊರು, ನಂದನ ಹೊಸೂರು. ಇಲ್ಲಿ ಪ್ರಾಚೀನ ಕಾಲದ ದೇವಸ್ಥಾನಗಳಿವೆ .ಇಲ್ಲಿನ ಸ್ಥಳ ಮಹಾತ್ಮೆಯ ಬಗ್ಗೆ ತುಂಬಾ ಜಾನಪದೀಯ ಅಂಶಗಳನ್ನೊಳಗೊಂಡ ಕಥಾನಕಗಳು ಚಾಲ್ತಿಯಲ್ಲಿವೆ. ಅದರಲ್ಲಿ ನಂದನಹೊಸೂರು ಒಂದು ಪಾಳೆಯ ಪಟ್ಟಾಗಿತ್ತೆಂದೂ ,ಅದರ ಆಡಳಿತಗಾರನಾದ ನಂದರಾಯನೆಂಬುವನು ಇಲ್ಲಿನ ಹೊರಕೇರಿದೇವರಪುರದ ರಂಗನಾಥಸ್ವಾಮಿಯ ಭಕ್ತನಾದ ದಾಸಯ್ಯನಿಗೆ ಅವಮಾನ ಮಾಡಿದನೆಂದೂ, ಇದರಿಂದ ಕ್ರೋಧಗೊಂಡ ಸ್ವಾಮಿಯು, ನಂದರಾಯನ ಪಟ್ಟಣವನ್ನು ತನ್ನ ಉರಿ ನೇತ್ರದಿಂದ ಭಸ್ಮವಾಗುವಂತೆ ಮಾಡಿದನೆಂದೂ ,ಆಗ ಜನರ ಹಾಹಾಕಾರ ಕಂಡು ಕಡು ನೊಂದ ,ನಂದನಹೊಸೂರಿನ ಬಾಸಿಂಗದವರೆಂಬ ಮನೆಯವರ ಹಸಿ ಬಾಣಂತಿಯೋರ್ವಳು, ತನ್ನ ಹಸುಗೂಸನ್ನು ಸುಟ್ಟು ಊರನ್ನು ಉಳಿಸಲು ರಂಗನಾಥ ಸ್ವಾಮಿಯನ್ನು ಪ್ರಾರ್ಥಿಸಿದಳೆಂದೂ ,ಈ ಹೆಣ್ಣುಮಗಳ ತ್ಯಾಗಕ್ಕೆ ಮನಸೋತ ಸ್ವಾಮಿಯು ,ಆಕೆಯನ್ನೂ ಆಕೆಯ ಕಂದನನ್ನೂ ಹರಸಿ ಶಾಂತನಾದನೆಂದೂ ,ಊರು ಉಳಿಯಿತೆಂದೂ ಸ್ಥಳೀಯವಾಗಿ ತುಂಬಾ ಪ್ರಸಿದ್ದಿಯಲ್ಲಿರುವ ಜಾನಪದ ಕತೆ ಇದೆ .
|