ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೩೭ ನೇ ಸಾಲು:
==ಕನ್ನಡಕ್ಕಾಗಿ ಕೈಂಕರ್ಯ==
*ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ ನಿರಂತರ ಯತ್ನಗಳು ಮರಾಠಿಗರ ಕುತಂತ್ರದಿಂದ ಮತ್ತು ಕನ್ನಡಿಗರ ನಿಷ್ಕ್ರಿಯತೆಯಿಂದ ಫಲಕೊಡಲಿಲ್ಲ. ಈ ಕಾಯಕ್ಕಾಗಿ ಅವರು ಎಲ್ಲಾ ಮಂತ್ರಿಗಳು, ಕಡೆಗೆ ಇಂದಿರಾಗಾಂಧಿಯವರನ್ನು ಭೇಟಿ ಮಾಡಿ ಮಹಾಜನ ಆಯೋಗದ ಶಿಫಾರಸ್ಸು ಅನ್ವಯಿಸಿ ಸೊಲ್ಲಾಪುರ ಕರ್ನಾಟಕದ ಭಾಗವಾಗಬೇಕೆಂದು ಮನವಿಸಲ್ಲಿಸಿ ಅವರಿಂದ ಆಶ್ವಾಸನೆ ಪಡೆದುಕೊಂಡರೂ ಕನ್ನಡದ ಮಂತ್ರಿಗಳ ಮತ್ತು ಶಾಸಕರ ಔದಾಸೀನ್ಯ ಅದನ್ನು ಆಗಗೊಡ ಲಿಲ್ಲ.
*ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ.
==ಅಪರೂಪವಾದ ಸಾಧನೆ==
ಒಬ್ಬಳು ಹೆಣ್ಣುಮಗಳು, ಒಂದು ಜೀವಮಾನದಲ್ಲಿ ಅದೂ ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲೇ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ. ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ. ತಾಯಿಯವರು ಜುಲೈ ೨೫, ೧೯೮೬ರಲ್ಲಿ ನಿಧನರಾದರು.
 
==ಸಾಹಿತ್ಯ ರಚನೆ==
Line ೮೦ ⟶ ೮೩:
ಇಲ್ಲಿ ತಾಯಿಯವರ ಅಂತರಾಳದ ಆರ್ತಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದಾಗಿದೆ.
 
೧೯೮೬ರಲ್ಲಿ ‘ಸಾವಿರದ ಪದಗಳು’ ಸಂಕಲನದ ರೂಪದಲ್ಲಿ ಪ್ರಕಟಗೊಂಡಿದೆ. ತಾಯಿಯವರು ರಚಿಸಿದ ನಾಲ್ಕುಸಾವಿರ ಪದ್ಯಗಳಲ್ಲಿ ಸಾವಿರ ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಈ ಸಂಕಲನವನ್ನು ರೂಪಿಸಲಾಗಿದೆ. ಇಲ್ಲಿ ದೈವದ ಕುರಿತಾಗಿ ಭಕ್ತಿಗೀತೆಗಳು, ಶಿವಶರಣ-ಶರಣೆಯಾರ ಕುರಿತು ಭಾವಗೌರವ ನುಡಿಗಳು ಮತ್ತು ಶ್ರೇಷ್ಠ ಜೀವಿಗಳ ಪುಣ್ಯಸ್ಮರಣೆಗಳು ಹೀಗೆ ಮೂರುವಿಧದಲ್ಲಿ ಇದು ಮುಪ್ಪುಗೊಂಡಿದೆ. ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.
 
ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.
<poem>
ಬಸವ ತುಳಿದ ದಾರಿ
Line ೧೨೨ ⟶ ೧೨೩:
 
==ಹಿರಿಯರ ಪ್ರಶಂಸೆ==
# ಡಾ. ವಿ.ಕೃ. ಗೋಕಾಕರು ಈ ಕೃತಿಯನ್ನು ಕುರಿತು “ಮಹಿಳಾ ಹೃದಯದ ರಸಾನುಭವ ತನ್ನ ಸಂಪತ್ತನ್ನೆಲ್ಲಾ ಈ ಕೃತಿಯಲ್ಲಿ ಸೂರೆಮಾಡಿಕೊಂಡಿದೆ. ಹಿಂದೆ ಅನಾಮಧೇಯವಾಗಿ ತನ್ನ ದುಃಖ ಸುಖ, ಭಕ್ತಿಗಳನ್ನು ಜಾನಪದ ತ್ರಿಪದಿಯಲಿ ತೋಡಿಕೊಂಡ ತಾಯಿಯ ಹೃದಯ ಇಂದು ಪ್ರಜ್ಞಾಪೂರ್ವಕವಾಗಿ ಅದೇ ಸೊಗಸಿನ ಹಾಡನ್ನು ಹಾಡಿದೆ. ಜಯದೇವಿ ತಾಯಿಯವರ ಈ ಕೃತಿ ಘನವಾದುದು. ಅದಕ್ಕೂ ಘನತರವಾಗಿ ಹಿಂದೆ ಚಾರಿತ್ರ್ಯ ನಿಂತಿದೆ” ಎಂದಿದ್ದಾರೆ.
# ಡಾ. ಜಿ. ಪಿ. ರಾಜರತ್ನಂ ಅವರು “ತಾಯಿ ಜಯದೇವಿಯವರು ಹತ್ತು ವರ್ಷಗಳ ತಪಸ್ಸಿನಿಂದ ಆರುನೂರು ಪುಟಗಳ ಈ ಬೃಹತ್ ಕೃತಿಯನ್ನು ರಚಿಸಿದ್ದಾರೆ. ಇಂಥ ಕಾವ್ಯಗಳಲ್ಲಿ ಮೊದಲನೆಯದು ಮಾಸ್ತಿಯವರ ‘ನವರಾತ್ರಿ’, ಎರಡನೆಯದು ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ಮೂರನೆಯದು ‘ಶ್ರೀ ಸಿದ್ಧರಾಮ ಪುರಾಣ’, ಕವಯತ್ರಿ ಸೊಲ್ಲಾಪುರದ ಕನ್ನಡ ಕೋಟೆಯ ತಾಯಿ ಜಯದೇವಿ, ಇವರು ಸಂಚಿಯ ಹೊನ್ನಮ್ಮನ ನಂತರ ಕಾವ್ಯರಚನೆಯಲ್ಲಿ ಯಶಸ್ಸು ಸಾಧಿಸಿದವರು. ಇನ್ನೂ ಒಂದು ವಿಶೇಷವೆಂದರೆ ಸರ್ವಜ್ಞ ಕವಿಯ ತ್ರಿಪದಿ ಛಂದಸ್ಸಿನಲ್ಲಿ ನಾಲ್ಕು ಸಾವಿರ ಪದ್ಯಗಳ ಮಹಾಕಾವ್ಯ ರಚಿಸಿದವರು ಎಂಬುದರಲ್ಲಿ ಸಂದೇಹವಿಲ್ಲ” ಎಂದು ಮನಸಾರೆ ಮೆಚ್ಚಿಕೊಂಡಾಡಿದ್ದಾರೆ.
 
==ವಿವಿಧ ಕ್ಷೇತ್ರಗಳಲ್ಲಿ ಸೇವೆ==
ತಾಯಿಯವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ವಹಿಸಿ ಕಾರ್ಯ ನಿರತರಾಗಿದ್ದರು. ಅದರ ಸಾಧನೆಯ ಹೆಗ್ಗುರುತು ಸಾಹಿತ್ಯ ಕ್ಷೇತ್ರ. ಮಹಿಳಾ ಸಂಘಟನೆಗಳು, ಸೇವಾದಳ, ಲಿಂಗಾಯತ ಪರಿಷತ್ತು, ಸಾಕ್ಷರತಾ ಮಂಡಲಿ, ಕರ್ನಾಟಕದ ವಿದ್ಯಾವರ್ಧಕ ಸಂಘ, ವಿಶ್ವವಿದ್ಯಾಲಯಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಕ್ರಿಯಾಶೀಲರಾಗಿದ್ದರು.
 
==ಪ್ರಶಸ್ತಿ ಗೌರವಗಳು==
# ರಾಜ್ಯ ಸಾಹಿತ್ಯ ಮತ್ತು ಲಲಿತಕಲಾ ಅಕಾಡೆಮಿಗಳ ಪ್ರಶಸ್ತಿ,
# ೧೯೭೪ರಲ್ಲಿ ಮಂಡ್ಯದಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
# ಕರ್ನಾಟಕದ ವಿಶ್ವವಿದ್ಯಾಲಯದ ಜಾನಪದ ಸಮ್ಮೇಳನದ ಅಧ್ಯಕ್ಷತೆ,
# ಕರ್ನಾಟ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿ ಮೊದಲಾದ ಪ್ರಶಸ್ತಿ ಗೌರವಗಳು ತಾಯಿಯವರಿಗೆ ಸಂದಿವೆ.
 
==ಅಪರೂಪವಾದ ಸಾಧನೆ==
ಒಬ್ಬಳು ಹೆಣ್ಣುಮಗಳು, ಒಂದು ಜೀವಮಾನದಲ್ಲಿ ಅದೂ ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲೇ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ. ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ. ತಾಯಿಯವರು ಜುಲೈ ೨೫, ೧೯೮೬ರಲ್ಲಿ ನಿಧನರಾದರು.
 
==ಮಾಹಿತಿ ಕೃಪೆ==
Line ೧೩೭ ⟶ ೧೪೦:
 
 
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ: ಸಮಾಜ ಸೇವಕರು]]
[[ವರ್ಗ: ಸಮಾಜ ಸೇವಕಿಯರು]]
[[ವರ್ಗ:ಸಾಹಿತಿಗಳು|ಜಯದೇವಿತಾಯಿ ಲಿಗಾಡೆ]]
[[Category:ಲೇಖಕಿಯರು|ಜಯದೇವಿತಾಯಿ ಲಿಗಾಡೆ]]