ಜಯದೇವಿತಾಯಿ ಲಿಗಾಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ. |
|||
೯ ನೇ ಸಾಲು:
}}
'''ಜಯದೇವಿತಾಯಿ ಲಿಗಾಡೆ''' -
==ಜನನ, ಜೀವನ==
*ಜಯದೇವಿ ತಾಯಿ ಲಿಗಾಡೆಯವರು
*ಜಯದೇವಿಯವರ ತಂದೆ ಚನ್ನಮಲ್ಲಪ್ಪ. ತಾಯಿ ಸಂಗವ್ವ ಸ್ವತಃ ಹಾಡುಗಾರ್ತಿ, ಒಳ್ಳೆಯವಾಗ್ಮಿ, ಸೇವಾಕಾಂಕ್ಷಿ, ಪ್ರಶಾಂತ ಸ್ವಭಾವಿ. * ಮಡಕಿ ಚೆನ್ನಬಸಪ್ಪನವರದು ವೈಭವದ ಶ್ರೀಮಂತ ಜೀವನವಾದರೂ ಮಗಳದು ನಿರಾಡಂಬರ ಜೀವನ. ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಮರಾಠಿ ಶಾಲೆಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಬಡಜನ ಸೇವೆ ಮತ್ತು ಶರಣಭಾವದ ಭಕ್ತಿಶ್ರದ್ಧೆಗಳಲ್ಲಿ ಜಯದೇವಿ ಕನ್ನಡದ ಹೃದ್ಭಾವ ಮತ್ತು ಸಾಂಸ್ಕೃತಿಕ ಮನೋಭಾವಗಳನ್ನು ಮೈಗೂಡಿಸಿಕೊಂಡರು.
* ಮುಂದೆ ಅದೇ ಅವರ ಸಾಹಿತ್ಯ ರಚನೆಗೆ ದಾರಿದೀಪವಾಯಿತು. ==ಎಲ್ಲರಿಗೂ ತಾಯಿಯಾದ ಜಯದೇವಿ==
*ವೀರಶೈವ ಮಹಾಸಭೆಗಳಲ್ಲಿ ಜಯದೇವಿಯವರ ಭಾಷಣಗಳನ್ನು ಕೇಳಿದ ಬ್ರಿಟಿಷರು ‘ಲಿಂಗಾಯತ ಬಟಾಲಿಯನ್’ಗಾಗಿ ಭಾಷಣಮಾಡಲು ಕೇಳಿಕೊಂಡಾಗ ತಾಯಿಯವರು ನಿರಾಕರಿಸಿದರು. ಇದರಿಂದ ಮನೆಯಲ್ಲಿ ವಿರಸವುಂಟಾದರೂ ಅವರು ಒಪ್ಪಲಿಲ್ಲ. ಬರಬರುತ್ತಾ ‘ಮಹಿಳಾ ಜ್ಞಾನಮಂದಿರ’ಕ್ಕೆ ಅನಿವಾರ್ಯವೆನಿಸುವಷ್ಟು ಅದರ ಕಾರ್ಯ ಕಲಾಪಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.
*ಹೈದರಾಬಾದಿನಲ್ಲಿ ರಜಾಕಾರರ ಆಕ್ರಮಣದಿಂದ ಅನಾಥರಾದವರಿಗೆ ನಿರಾಶ್ರಿತರಾದವರಿಗೆ ಪ್ರೀತಿಯ ಆಶ್ರಯ ನೀಡಿದ ಜಯದೇವಿಯವರು ತಮ್ಮ ಸೇವಾ ಕಾರ್ಯದಿಂದಲೇ ‘ತಾಯಿ’ ಎನಿಸಿಕೊಂಡು ಆಗಿನಿಂದ ಜಯದೇವಿತಾಯಿಯಾದರು. ಅವರ ಸಮಾಜಸೇವೆ, ಹಲವಾರು ಕ್ಷೇತ್ರಗಳಲ್ಲಿ ಅವರ ದುಡಿಮೆಯನ್ನು ಗರಿಮೆಯನ್ನು ಗೌರವಿಸುವಂತಾಯಿತು. *ಸೊಲ್ಲಾಪುರದಲ್ಲಿ ಒಮ್ಮೆ ಕಾಲರಾ ದಾಳಿ ಮಾಡಿದಾಗ ಜಯದೇವಿ ತಾಯಿಯವರು ಅಲ್ಲಲ್ಲಿ ನಾಗರಿಕರ ಸಭೆ ಕರೆದು ಭಾಷಣಗಳ ಮೂಲಕ ಜನರಲ್ಲಿ ಧೈರ್ಯತುಂಬಿ ಅಗತ್ಯಸೇವೆಯನ್ನು ಒದಗಿಸಿದರು. ಗಾಂಧೀಜಿಯವರ ತತ್ವಗಳಿಗೆ ಮಾರುಹೋಗಿ ನೂಲುವ, ಸ್ವದೇಶಿ ಬಟ್ಟೆಯನ್ನು ತೊಡುವ ವ್ರತತೊಟ್ಟು ಜ್ಞಾನಮಂದಿರದಲ್ಲೂ ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದೂ ಮುಸಲ್ಮಾನ ಬಂಧುಗಳನ್ನೆಲ್ಲಾ ಒಂದೇ ರೀತಿಯಲ್ಲಿ ಕಾಣುತ್ತಿದ್ದ ಹೃದಯವಂತಿಗೆ ಮೆರೆದರು.▼
▲ಸೊಲ್ಲಾಪುರದಲ್ಲಿ ಒಮ್ಮೆ ಕಾಲರಾ ದಾಳಿ ಮಾಡಿದಾಗ ಜಯದೇವಿ ತಾಯಿಯವರು ಅಲ್ಲಲ್ಲಿ ನಾಗರಿಕರ ಸಭೆ ಕರೆದು ಭಾಷಣಗಳ ಮೂಲಕ ಜನರಲ್ಲಿ ಧೈರ್ಯತುಂಬಿ ಅಗತ್ಯಸೇವೆಯನ್ನು ಒದಗಿಸಿದರು. ಗಾಂಧೀಜಿಯವರ ತತ್ವಗಳಿಗೆ ಮಾರುಹೋಗಿ ನೂಲುವ, ಸ್ವದೇಶಿ ಬಟ್ಟೆಯನ್ನು ತೊಡುವ ವ್ರತತೊಟ್ಟು ಜ್ಞಾನಮಂದಿರದಲ್ಲೂ ಅದನ್ನು ಕಾರ್ಯರೂಪಕ್ಕೆ ತಂದರು. ಹಿಂದೂ ಮುಸಲ್ಮಾನ ಬಂಧುಗಳನ್ನೆಲ್ಲಾ ಒಂದೇ ರೀತಿಯಲ್ಲಿ ಕಾಣುತ್ತಿದ್ದ ಹೃದಯವಂತಿಗೆ ಮೆರೆದರು.
==ಸ್ತ್ರೀ ಶಿಕ್ಷಣ ಕ್ಷೇತ್ರದಲ್ಲಿ==
*ಸ್ತ್ರೀ ಶಿಕ್ಷಣದ ಕುರಿತು ಜಯದೇವಿ ತಾಯಿಯವರು ಅಪಾರ ಆಸಕ್ತಿ ಕಾಳಜಿ ಹೊಂದಿದ್ದರು. “ಸುವ್ಯವಸ್ಥಿತ ಸಮಾಜರಚನೆಗೆ ಸುಸಂಸ್ಕೃತ ಜನಾಂಗಬೇಕು. ಸುಸಂಸ್ಕೃತಿ ಸ್ತ್ರೀಶಿಕ್ಷಣದ ತವರು ಮನೆ. ಸುಖ – ಶಾಂತಿ ನೆಲೆಸುವಂತೆ ಮಾಡುವುದು ಧರ್ಮದ ಗುರಿ. ದುಃಖಕ್ಕೆ ಅಜ್ಞಾನ, ಬಡತನ ವರ್ಗಕಲಹ ಕಾರಣ. ಇವೆಲ್ಲ ಇಲ್ಲದಂತೆ ಸಮಾಜ ರಚನೆಯಾಗಲು ಶಿಕ್ಷಣ ಹೆಚ್ಚು ಮುಖ್ಯ” ಎಂದು ಜಯದೇವ ತಾಯಿಯವರು ತಮ್ಮ ಭಾಷಣಗಳಲ್ಲಿ ಯಾವಾಗಲೂ ಪ್ರಸ್ತಾಪಿಸುತ್ತಿದ್ದರು.
*‘ಮಹಿಳಾ ಜ್ಞಾನಮಂದಿರದ ಜಯದೇವಿ ಕನ್ಯಾಶಾಲಾ’ ಸ್ಥಾಪಿತವಾಗಿ ಅಲ್ಲಿ ಮರಾಠಿ ಬದಲು ಕನ್ನಡ ಕಲಿಯಲು ಹೆಣ್ಣುಮಕ್ಕಳಿಗೆ ಸಾಧ್ಯವಾದದ್ದು ತಾಯಿಯವರ ಪ್ರಯತ್ನದಿಂದ. ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲು ಶಾಲೆ-ಕಾಲೇಜುಗಳಲ್ಲಿ ನಗದು ಬಹುಮಾನ, ಪರ್ಯಾಯ *ಔದ್ಯೋಗಿಕ ಕೇಂದ್ರ ಸಂಸ್ಥೆಗಳಲ್ಲಿ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಜಯದೇವಿ ತಾಯಿಯವರು ನೇತ್ರತ್ವ ವಹಿಸಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಅಂತಹ ಕೇಂದ್ರಗಳ ಸ್ಥಾಪನೆಗಳಾಗಿದ್ದವು ಎಂದರೆ ಅದರ ವ್ಯಾಪ್ತಿಯ ಮಹತ್ವ ತಿಳಿಯುತ್ತದೆ. ಕನ್ನಡದ ಈ ಅಭಿವೃದ್ಧಿಯ ಬಗ್ಗೆ ವಿಚಲಿತರಾದ ಮರಾಠಿ ಪರ ಆಡಳಿತಗಾರರು ಕನ್ನಡ ಸಾಕ್ಷರತಾ ಕೇಂದ್ರಗಳಿಗೆ ಬೆಂಬಲವಾಗಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸಿ ಕಿರುಕುಳ ಕೊಡುತ್ತಿದ್ದರು.
==ಅಸ್ಪೃಶ್ಯತೆ ನಿವಾರಣೆ==
ಬಸವ ಮತ್ತು ಗಾಂಧೀತತ್ವಗಳ ಅನುಸರಣೆಯಾಗಿ ಅಸ್ಪೃಶ್ಯರ ಸೇವೆಯನ್ನು ತಾಯಿ ಮನಮುಟ್ಟಿಮಾಡಿದ್ದಾರೆ. ಸೊಲ್ಲಾಪುರ ಮತ್ತು ಬಾರ್ಶಿಗಳಲ್ಲಿದ್ದ ರಿಮ್ಯಾಂಡ್ ಹೋಂ, ಹರಿಜನಸಂಘ, ಗಾಂಧೀ ವಸ್ತ್ರಾಲಯಗಳಿಗೆ ಜಯದೇವಿತಾಯಿಯವರ ಪ್ರೇರಣೆ – ಬೆಂಬಲಗಳು ಮುಖ್ಯವಾಗಿದ್ದವು. ಯಾವ ಊರಿಗೇ ಹೋಗಲಿ ಹರಿಜನ ಕೇರಿಯನ್ನು ಭೇಟಿಯಾಗಿ ಬರುತ್ತಿದ್ದರು.
==ನಿರಾಶ್ರಿತರಿಗಾಗಿ ಕಾರ್ಯ==
ರಜಾಕಾರರ ದೌರ್ಜನ್ಯದ ದಿನಗಳಲ್ಲಿ ನಿರಾಶ್ರಿತರಿಗಾಗಿ ಅವರು ತಮ್ಮ ನಲವತ್ತು ಎಕರೆಯ ಹೊಲದಲ್ಲಿ ಶಿಬಿರಗಳನ್ನು ಹಾಕಿಕೊಟ್ಟರು.
==ಕನ್ನಡಕ್ಕಾಗಿ ಕೈಂಕರ್ಯ==
*ಕನ್ನಡಿಗರು ಎಲ್ಲಾ ರೀತಿಯಲ್ಲೂ ಹೆಚ್ಚಾಗಿದ್ದಾರೆ ಎಂದು ಸರ್ವವೇದ್ಯವಾಗಿದ್ದರೂ ಸೊಲ್ಲಾಪುರ ಕರ್ನಾಟಕಕ್ಕೇ ಸೇರಬೇಕೆಂಬ ಜಯದೇವಿ ತಾಯಿಯವರ
*ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು.
▲ಹೈದರಾಬಾದ್ ಪ್ರಾಂತ್ಯದ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ.
==ಸಾಹಿತ್ಯ ರಚನೆ==
ಜಯದೇವಿತಾಯಿಯವರ ಚೈತನ್ಯ ಅವರನ್ನು ಸಾಹಿತ್ಯ ರಚನೆಗೂ ಪ್ರೇರೇಪಿಸಿತು.
=== ಕನ್ನಡ ಕೃತಿಗಳು=== # ಜಯಗೀತೆ, # ತಾಯಿಯ ಪದಗಳು, # ಶ್ರೀ ಸಿದ್ಧರಾಮ ಪುರಾಣ, # ತಾರಕ ತಂಬೂರಿ, # ಬಂದೇವು ಕಲ್ಯಾಣಕೆ, # ಸಾವಿರದ ಪದಗಳು, # ಅರುವಿನಾಗರದಲ್ಲಿ. ===ಮರಾಠಿ ಕೃತಿಗಳು
# ಸಿದ್ಧವಾಣಿ, # ಬಸವದರ್ಶನ, # ಸಮೃದ್ಧ ಕರ್ನಾಟಕಾಂಬೆ ರೂಪರೇಷೆ, # ಮಹಾಯೋಗಿನಿ, # ಸಿದ್ಧರಾಮಾಂ ಚಿ ತ್ರಿವಧಿ, # ಬಸವವಚನಾಮೃತ, # ಶೂನ್ಯ ಸಂಪಾದನೆ. ಜಯಗೀತೆ ೪೦ ಸುಂದರ ಸುಮಧುರ ಗೀತೆಗಳ ಗೊಂಚಲು. ‘ಮಂಗಳದ ಮಹಿಮೆ’ ಎಂಬ ಕವಿತೆಯಲ್ಲಿ –
<poem>
ಮನದ ಮದವೆಲ್ಲ
ಮುರಿದು ತಾ ಎಲ್ಲ ಪೃಥಿವಿಯಲ್ಲಿ ಅಣುವಿನೊಳು ಒಂದು ಅಣುವು
ಗೂಡಿ ತಿರುಗುತಿದೆ ಶಕ್ತಿರೂಪ
ಅಳಿಸಿ ಜೀವವ್ಯಾಪ ತನ್ನ ತಾಪಲೋಪ
</poem>
ಅಣು ಅಣುವಿನೊಡಗೂಡಿ ಒಂದಾಗಿ ಹೊಸೆದ ಮಹತ್ತು ಭಕ್ತಿಯಾಗಿ ಪರಿಣಮಿಸುವಂತೆ ಅವರ ಭಾವ ಭಕ್ತಿಮಯವಾಗಿದೆ ಎನ್ನುತ್ತಾರೆ.
<poem>
ತಾರಕ್ಕ ತಂಬೂರಿಯ, ನಾನದಕೆ ನುಡಿಸುವೆ. ತಾರ ತಂಬೂರಿಯ
ಗುರುವಿನ ಅಗಣಿತ ಮಹಿಮೆಯ ಸಾರುವೆ. ತಾರ ತಂಬೂರಿಯ
</poem>
ಎಂದು ಹಾಡಿದ ತಾಯಿಯವರ ‘ತಾರಕ ತಂಬೂರಿ’ ಕೃತಿಯು ‘ಜಯಸಿದ್ಧರಾಮಾ’ ಅಂಕಿತದಲ್ಲಿ ಪಲ್ಲವಿಸಿದ ಅನುಭವಜನ್ಯ ಕವನಗಳ ಭಾವತೀವ್ರತೆಯ ಸಂಕಲನವಾಗಿದೆ.
<poem>
ನಿತ್ಯದಾಸೋಹದ ಮನೆಯ ತೊತ್ತು ಕೆಲಸದಿ ಮನವ
ಅತ್ತಿತ್ತ ಸುಳಿಯದಂತೆ ಸಲವು ಸಿದ್ಧರಾಮ.
ಕುಲಭೇದವ ಬಿಡಿಸಿ ಛಲ ಸತ್ಯಾಚಾರದ ಹಿಡಿಸಿ
ಶೀಲದ ಮರ್ಮವ ತಿಳಿಸಿ ಸಲವು ಸಿದ್ಧರಾಮ.
</poem>
ಇಲ್ಲಿ ತಾಯಿಯವರ ಅಂತರಾಳದ ಆರ್ತಭಕ್ತಿಯ ಪರಾಕಾಷ್ಟೆಯನ್ನು ಕಾಣಬಹುದಾಗಿದೆ.
Line ೬೬ ⟶ ೮೩:
ಶಿವಶರಣ – ಶರಣೆಯರ ಬಗ್ಗೆ ಹೇಳುವಾಗ ಬಸವಣ್ಣನವರಿಗೆ ಯಾವಾಗಲೂ ತಾಯಿಯವರು ಪ್ರಥಮ ಸ್ಥಾನ ನೀಡಿದ್ದಾರೆ.
<poem>
ಬಸವ ತುಳಿದ ದಾರಿ
ವಸುಧೀಗೆ ಉಪಕಾರಿ
ದೆಸೆದಿಕ್ಕುಗಳಲ್ಲಿ ಕೀರುತಿ ಹರಡಿತ್ತು
ಶಶಿಧರನ ಹೊತ್ತ ಬಸವಣ್ಣ
</poem>
ಎಂದು ಮನದುಂಬಿ ಬಸವಣ್ಣನವರನ್ನು ತಾಯಿ ಕೊಂಡಾಡುತ್ತಾರೆ. ತಾಯಿಯವರ ವ್ಯಕ್ತಿತ್ವದ ಅನೇಕ ಆಯಾಮಗಳಲ್ಲಿ ಅವರ ಮಾತೃಭಾಷೆಯ ಅಭಿಮಾನವು ಒಂದು. ಸೊಲ್ಲಾಪುರವನ್ನು ಕರ್ನಾಟಕಕ್ಕೆ ಸೇರಿಸುವಲ್ಲಿ ಅವರು ಬದುಕನ್ನೇ ಮುಡಿಪಾಗಿಟ್ಟರು.
<poem>
ಸೊಲ್ಲಾಪುರದೊಳಗ ಸೊಲ್ಲಾ ಅಡಗಿಸಬ್ಯಾಡೋ
ನಿಲ್ಲೆಂದು ತಾಯಿನುಡಿ ನಿಲ್ಲಿಸು. ಸಿದ್ಧರಾಮ
ಅಲ್ಲಗಳೆದವರಿಗೆ ತಿಳಿಹೇಳು.
</poem>
ಇನ್ನೊಂದು ಕಡೆ
<poem>
ಕನ್ನಡತಾಯಿ ನುಡಿ, ಮನ್ನಿಸಿ ಮಾತನಾಡು
ಅನ್ಯಕ್ಕೆ ಮರುಳಾಗದಿರು, ಮರುಳೇ ನೀ
ಕನ್ನಡಿಗನೆಂದು ಮರೀಬೇಡ.
</poem>
ಎಂದು ಕನ್ನಡತನದ ಬಗ್ಗೆ ಕನ್ನಡಿಗನ ಬಗ್ಗೆ ಎಚ್ಚರದ ಮಾತುಗಳನ್ನು ಬಹಳ ಕಳಕಳಿಯಿಂದ ಹೇಳಿದ್ದಾರೆ. ತಾಯಿಯವರು ತಮ್ಮ ‘ಸಿದ್ಧರಾಮ ಪುರಾಣ’ದ ತ್ರಿಪದಿ ಮಾಧ್ಯಮಕ್ಕೆ ಸರ್ವಜ್ಞನೇ ಕಾರಣ ಎನ್ನುತ್ತಾರೆ. ಒಂದು ಭಾಗದಲ್ಲಿ ಅವನನ್ನು ಕುರಿತು
<poem>
ತಾಯಿಯ ಪದಗಳು, ರಾಯಸಿದ್ಧನ ಕಾವ್ಯ
ಹಾಯಾಗಿ ನಿನ್ನ ಧಾಟಿ ನಡೆಸಿದೆ, ಸರ್ವಜ್ಞ
ಛಾಯೆ ಇರಲಿ ನಿನ್ನ ಕಡೆತನಕ.
</poem>
‘ತಾಯಿಯ ಪದಗಳು’ ತಾಯ್ತನದ ಹಿರಿಮೆಯಿಂದ ಕೂಡಿದ ಈ ಪದಗಳು ಮಾನವ ಕುಲಕ್ಕೆ ನೀಡಿದ ಸಂಹಿತೆಗಳು. ‘ತಾಯಿಯ ಪದಗಳು’ ರಚನೆಯ ಸಾರಸಂಗ್ರಹವನ್ನೇ ಡಾ. ಚೆನ್ನಾಂಬಿಕ ಪಾವಟೆಯವರ ಮಾತುಗಳು ಹೇಳುತ್ತವೆ:
<poem>
ವರವಾದ ಪರಸಾದ ಕರೆದು ನಾ ನೀಡುವೆ
ವರಭಕ್ತೀಲಿ ನೀವು ಉಣಬೇಕು. ಅದು ನಿಮಗ
ಪರತರ ಸುಖವ ಕೊಟ್ಟೀತ.
</poem>
‘ಶ್ರೀಸಿದ್ಧರಾಮ ಪುರಾಣ’ದಲ್ಲಿ ತಾಯಿಯವರು
<poem>
‘ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ
ಬಲ್ಲವರ ಪಾದ ಹಿಡಿಯುವೆ – ಬಲ್ಲಿದರು
ಕಲಿಸಿರಿ ಮತ್ತೆ ನುಡಿಸಿರಿ’.
</poem>
ಎಂದು ತಮ್ಮ ವಿನೀತಭಾವವನ್ನೇ ಮೆರೆದಿದ್ದರೂ ಶ್ರೀ ಸಿದ್ಧರಾಮ ಪುರಾಣವು ಕನ್ನಡದ ಅಪರೂಪ ಕೃತಿಗಳಲ್ಲಿ ಒಂದು ಎಂಬುದರಲ್ಲಿ ಅನುಮಾನವಿಲ್ಲ.
|