ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೪ ನೇ ಸಾಲು:
ಅದೇ ರೀತಿ ಉಷ್ಣಯಂತ್ರಗಳಲ್ಲಿ ಊಡಿಸಿದ ಒಟ್ಟು ಶಕ್ತಿಯ ಒಂದು ಭಾಗ ಮಾತ್ರ ಯಾಂತ್ರಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ . ಅಂದರೆ ಯಂತ್ರದ ಸಾಮರ್ಥ್ಯ ಯವಾಗಲೂ ಶೇಕಡ ನೂರಕ್ಕಿಂತ ಕಡಿಮೆ. ಸೈದ್ಧಾಂತಿಕವಾಗಿ ಶೇಕಡ ನೂರು ಸಾಮರ್ಥ್ಯದ ಉಷ್ಣಯಂತ್ರವನ್ನು ನಿರ್ಮಿಸುವುದು ಅಸಾಧ್ಯ. ನಾವು ವಾಸ್ತವದಲ್ಲಿ ಏನು ಸಾಧಿಸಬಹುದು ಎಂಬುದರ ಮೇಲೆ ನಿಸರ್ಗ ಒಡ್ಡುವ ಮಿತಿ . ಇದು ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಕ್ರಿಯೆಯಲ್ಲಿನ ಈ ಆಂತರಿಕ ಮಿತಿಗೆ ಥರ್ಮೋಡೈನಮಿಕ್ಸ್-ನ ಎರಡನೇ ನಿಯಮ ಎನ್ನುತ್ತಾರೆ . ಈ ಮಿತಿಗೆ ಕಾರಣ ಘರ್ಷಣೆ (Friction). ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಲ್ಮೈಗಳಲ್ಲಿ ಒಂದು ಇನ್ನೊಂದರ ಮೇಲೆ ಸರಿಯಲು ಯತ್ನಿಸಿದಾಗ ಆ ಚಲನೆಗೆ ಎದುರಾಗುವ ಪ್ರತಿರೋಧವೇ ಘರ್ಷಣೆ . ಹಾಗಾಗಿ ಘರ್ಷಣೆಯನ್ನು ನಿವಾರಿಸಲು ಹೊಡಿದ ಶಕ್ತಿಯ ಸ್ವಲ್ಪಬಾಗ ವ್ಯಯವಾಗುವುದು ಅನಿವಾರ್ಯ ಆದ್ದರಿಂದ ಪೂರೈಸಿದ ಶಕ್ತಿಗೆ ಸಮನಾದ ಉಪಯುಕ್ತ ಶಕ್ತಿ ಎಂದಿಗೂ ಲಭಿಸಲಾರದು .
 
ವಿಶ್ವವನ್ನು ವ್ಯವಸ್ಥೆಯಿಂದ ಅವ್ಯವಸ್ಥೆಯೆಡೆಗೆ ತಳ್ಳುತ್ತದೆ. ಹಾಗಾಗಿ ವಿಶ್ವದ ಅಂತಿಮ ಗುರಿಯೇ ಅತ್ಯಂತ ಅವ್ಯವಸ್ಥೆ (Supreme chaos) ಎಂಬತೆ ತೋರುತ್ತದೆ.
 
ಈ ಪ್ರಸಂಗದಲ್ಲಿ ಅವ್ಯವಸ್ಥೆ ಎಂದರೆ ಏನು ಎಂಬುದನ್ನು ಪರಿಶೀಲಿಸೋಣ. (Chaos theory ಯಲ್ಲಿ ಇದಕ್ಕೆ ಒಂದು ವಿಶಿಷ್ಟ ಅರ್ಥವಿದೆ) ಪ್ರಸ್ತುತದಲ್ಲಿ, ಅನೇಕ ಉಪಭಾಗಗಳಿರುವ ಯಾವುದೇ ವ್ಯವಸ್ಥೆಯಲ್ಲಿ, ಆ ಉಪಭಾಗಗಳ ನಡುವಿನ ಅಸಮರೂಪಕತೆಯನ್ನು (Inhomogeneity). ಅದು ಸೂಚಿಸುತ್ತದೆ ವ್ಯವಸ್ಥಿತವಾಗಿ ಜೋಡಿಸಿರುವ ಇಸ್ಪೀಟು ಕಾರ್ಡಿನ ಗುಂಪನ್ನು ಕಲಸಿದಾಗ ನಾವು ಅಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತೇವೆ. ಕಾಫಿಗೆ ಸಕ್ಕರೆ ಬೆರಸಿದಾಗ ಅದರಲ್ಲಿ ಅವ್ಯವಸ್ಥೆಯನ್ನು ಹೆಚ್ಚಿಸುತ್ತೇವೆ.
 
ವ್ಯವಸ್ಥೆಯಲ್ಲಿನ ಅವ್ಯವಸ್ಥೆಯನ್ನು ಅಳೆಯಲು ಭೌತವಿಜ್ಞಾನದಲ್ಲಿ ಒಂದು ವಿಧಾನವಿದೆ. ಆದಕ್ಕೆ ಎಂಟ್ರೊಪಿ (Entropy) ಎನ್ನುತ್ತಾರೆ. ಎಂಟ್ರೊಪಿಯ ಅಂಶವನ್ನು ಅಳೆಯಲು ಎರಡು ವಿಧಾನಗಳಿವೆ. ಯಾವುದೇ ಒಂದು ವ್ಯವಸ್ಥೆಯ ಎಂಟ್ರೊಪಿ ಅಧಿಕವಾಗಿದೆ ಎಂದು ಭೌತವಿಜ್ಞಾನಿಯು ಹೇಳಿದರೆ, ಅದರಲ್ಲಿನ ಉಪಭಾಗಗಳನಡುವೆ ಅವ್ಯವಸ್ಥೆಯ ಅಂಶ ಜಾಸ್ತಿಯಾಗಿದೆ ಎಂದು ಅರ್ಥ. ಭೌತಜಗತ್ತಿನ ಒಂದು ಮೂಲಭೂತ ನಿಯಮವೇನೆಂದರೆ ಯಾವುದೇ ವ್ಯವಸ್ಥೆಯಲ್ಲಿ, ಉಷ್ಣಕ್ಕೆ ಸಂಬಂದಪಟ್ಟಂತೆ ಏನೇ ಸಂಭವಿಸಿದರೂ ಅದರ ಅಂತಿಮ ಪರಿಣಾಮ ಆ ವ್ಯವಸ್ಥೆಯ ಎಂಟ್ರೊಪಿಯನ್ನು ಹೆಚ್ಚಿಸುವುದು,
 
ಉಷ್ಣಶಕ್ತಿ ಮತ್ತು ಯಾಂತ್ರಿಕ ಶಕ್ತಿ ಇದು ಒಂದಕ್ಕೊಂದು ಸಮಾನವಾದರೂ ಅವುಗಳ ನಡುವೆ ವ್ಯತ್ಯಾಸವಿದೆ ಕ್ರಮಬದ್ದವಾದ ಚಲನೆಯಿಂದ ಯಾಂತ್ರಿಕ ಶಕ್ತಿ ಮೂಡುತ್ತದೆ; ಅಣು ಪರಮಾಣುಗಳ ಯಾದೃಚ್ಛಿಕ ಚಲನೆಯಿಂದಾಗಿ ಉಷ್ಣಶಕ್ತಿ ಉತ್ಪಾದನೆಯಾಗುತ್ತದೆ. ಒಂದು ಸಾವಿರ ಸೈನಿಕರು ಕ್ರಮಬದ್ದವಾಗಿ ಚಲಿಸುತ್ತಿದ್ದರೆ ಅದು ಯಾಂತ್ರಿಕ ಶಕ್ತಿಯ ಸಾದೃಶ್ಯ. ಸ್ಟೋಟ ಸಂಭವಿಸಿ ಸೈನಿಕರು ಚೆಲ್ಲಾಪಿಲ್ಲಿಯಾಗಿ ಓಡಿದರೆ ಅದು ಆವ್ಯವಸ್ಥಿತ ಚಲನೆ. ವ್ಯವಸ್ಥಿತ ಚಲನೆಯನ್ನು ಆವ್ಯವಸ್ಥಿತಚಲನೆಯಾಗಿ ಪರಿವರ್ತಿಸುವುದು ಸುಲಭ. ಅದರೆ, ಅ ಆವ್ಯವಸ್ಥಿತ ಚಲನೆಯನ್ನು ವ್ಯವಸ್ಥಿತ ಚಲನೆಯಾಗಿ ಪರಿವರ್ತಿಸುವುದು ಅಷ್ಟು ಸುಲಭವಲ್ಲ -ಅದೂ ಕೋಟ್ಯಂತರ ಪರಮಾಣುಗಳು ಅಂತರಕ್ರಿಯಿಸುತ್ತಿರುವಾಗ. ಈ ಕಾರಣದಿಂದಲೇ ಉಷ್ಣಶಕ್ತಿಯನ್ನು ಶೇಕಡ ನೂರು ಪಾಲು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲು ಸಾಧ್ಯವಾಗುವುದಿಲ್ಲ.
 
ಅಣು, ಪರಮಾಣುಗಳ ಚಲನೆಯ ಅವ್ಯವಸ್ಥಿತ ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಿಂದ ಬೇರ್ಪಡಿಸುತ್ತದೆ. ಲಕ್ಷಾನುಲಕ್ಷ ಅಣುಗಳು , ಎಲ್ಲ ಒಂದೇ ದಿಕ್ಕಿನಲ್ಲಿ ಕ್ರಮಬದ್ಧವಾಗಿ ಚಲಿಸುತ್ತಿದ್ದರೆ .ಅದು ಉಷ್ಣಶಕ್ತಿ ಎನಿಸುವುದಿಲ್ಲ . ಅನಿಲದ ಪರಮಾಣುಗಳು ಭ್ರಮರಗಳ ಸಮುದಾಯದಂತೆ ಯದ್ವಾತದ್ವ ಚಲಿಸುತ್ತ , ಒಂದಕ್ಕೊಂದು ಡಿಕ್ಕಿಹೊಡೆಯುತ್ತ , ನಿರಂತರವಾಗಿ ಬೆರೆತುಕೊಳ್ಳುತ್ತಿರುತ್ತವೆ. ಈ ಕಾರಣದಿಂದಲೇ ಕೊಠಡಿಯ ಒಂದು ಮೂಲೆಯಲ್ಲಿ ಗಾಳಿಯಲ್ಲಿನ ಆಕ್ಸಿಜನ್ ಅಣುಗಳೂ, ಮತ್ತೊಂದು ಮೂಲೆಯಲ್ಲಿ ನೈಟ್ರೊಜನ್ ಅಣುಗಳೂ, ಹೀಗೆ ಸಾಂದ್ರೀಕೃತವಾಗುವುದಿಲ್ಲ . ಇಸ್ಪೀಟಿನ ಎಲೆಗಳನ್ನು ಬೆರಸಿದಾಗ ಎಲ್ಲ ಕಳಾವರ್ಗಳೂ ಸಮೂಹದ ಮೇಲ್ಬಾಗದಲ್ಲೇ ಸಂಗ್ರಹವಾಗುವುದಿಲ್ಲವಲ್ಲ ಎಂಟ್ರೊಪಿ ಪರಿಕಲ್ಪನೆಯಿಂದ ನಮಗೆ ಲಭ್ಯವಾಗಿರುವ ಒಂದು ಅತ್ಯಂತ ಮುಖ್ಯವಾದ ತಿಳುವಳಿಕೆ ಎಂದರೆ ಸಮಗ್ರ ವಿಶ್ವದ ಎಂಟ್ರೊಪಿ ನಿರಂತರವಾಗಿ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ ಎಂಬ ಸತ್ಯದೊಂದಿಗೆ ಕಾಲದ ದಿಕ್ಕು (Direction of time) ನಿಕಟವಾಗಿ ಹೆಣೆದುಕೊಂಡಿದೆ ಎಂಬುದು ಹಾಗಾಗಿ ಕಾಲವೆಂಬ ಪ್ರವಹ ಒಂದೇ ದಿಕ್ಕಿನಲ್ಲಿ ಚಲಿಸುತ್ತದ್ದೆ , ಅದನ್ನು ತಿರುಗಿಸುವುದು ಸಾಧ್ಯವಿಲ್ಲ .ಈ ಅರಿವೇ ವಿಶ್ವದ ಎಂಟ್ರೊಪಿ ನಿರಂತರವಾಗಿ ಏರುತ್ತಿದೆ ಎಂಬ ಸತ್ಯದ ಪ್ರಾಯೋಗಿಕ ಸೂಚಕ .
 
ಮುಚ್ಚಿದ ವ್ಯವಸ್ಥೆಗಳು (Closed systems ) ಮತ್ತು ಅವುಗಳಲ್ಲಿನ ಅಂತರ ಸಂಪರ್ಕಗಳು ; ಇಡೀ ವಿಶ್ವವು ಒಂದು ವ್ಯೂಹ ಅಥವಾ ಮುಚ್ಚಿದ ವ್ಯವಸ್ಥೆ ಆದರೆ ಅದರಲ್ಲಿನ ಉಪವ್ಯವಸ್ಥೆಗಳ ನಡುವೆ ಸಂಪರ್ಕವಿದೆ.
 
ಒಂದು ಕಟ್ಟಡ, ಅದರ ಕಿಟಕಿ ಬಾಗಿಲುಗಳೆಲ್ಲಾ ಮುಚ್ಚವೆ. ಯಾರೂ ಹೊರಗೆ ಹೋಗಲಾಗುವುದಿಲ್ಲ . ಅಂದರೆ, ಮನುಷ್ಯನಿಗೆ ಸಂಬಂಧಿಸಿದಂತೆ ಅದೊಂದು ಮುಚ್ಚಿದ ವ್ಯವಸ್ಥೆ - A Closed System .ಆದರೆ , ಸಂದಿಗೊಂದಿಗಳಿಂದ ನುಸುಳುವ ಗಾಳಿಗೂ, ಕಿಟಕಿಯ ಗಾಜಿನ ಮೂಲಕ ತೊರುವ ಬೆಳಕಿಗೂ ಅದೊಂದು ತೆರೆದ ವ್ಯವಸ್ಥೆ -An open system. ಯಾವುದಾದರೂ ವಸ್ತುವಿಗೆ ಸಂಬಂಧಿಸಿದಂತೆ ಒಂದು ವ್ಯವಸ್ಥೆ ಮುಚ್ಚಿದೆ ಎಂದರೆ ಆ ವಸ್ತು ವ್ಯವಸ್ಥೆಯನ್ನು ಹೊರಗಿನಿಂದ ಪ್ರವೇಶಿಸಲಾಗದು , ಒಳಗಿನಿಂದ ಹೊರಗೆ ಹೋಗಲಾಗದು . ಅದು ಸಾಧ್ಯವಾದಾಗ ಅದು ತೆರೆದ ವ್ಯವಸ್ಥೆ . ಥರ್ಮಾಸ್ ಘ್ಲಾಸ್ಕ್ ನಲ್ಲಿ ಬಿಸಿ ಕಾಫಿ ಹಾಕಿ ಭದ್ರವಾಗಿ ಮುಚ್ಚಿದಾಗ ಅದು ಕಾಫಿ ಹಾಗೂ ಶಾಖಕ್ಕೆ ಮುಚ್ಚಿದ ವ್ಯವಸ್ಥೆ ಆದರೆ, ಭೂಮಿ ಒಂದು ತೆರೆದ ವ್ಯವಸ್ಥೆ . ದ್ರವ್ಯ ಮತ್ತು ಶಕ್ತಿ ಅದರ ಮೇಲೆ ನಿರಂತರವಾಗಿ ಸುರಿಯುತ್ತಿರುತ್ತವೆ, ಹಾಗೂ ಅದರಿಂದ ಹೊರಗೆ ಹೋಗುತ್ತಿರುತ್ತವೆ.
 
ವಿಶ್ವೆದಲ್ಲಿ ಅಸಂಖ್ಯಾತ ವಿದ್ಯಮಾನಗಳು ನಡೆಯುತ್ತಿರುತ್ತವೆ . ಅವೆಲ್ಲವುಗಳ ಜಾಡುಹಿಡಿಯಲು ಸಾಧ್ಯವಿಲ್ಲ . ಸದಾಕಾಲವೂ ಚಲನೆಯಲ್ಲಿ ಬದಲಾವಣೆಯಾಗುತ್ತಿರುತ್ತದೆ; ನಿರಂತರವಾಗಿ ಶಕ್ತಿ ಪರಿವರ್ತನೆಯಾಗುತ್ತಿರುತ್ತದೆ . ಇವೆಲ್ಲದರ ಮಧ್ಯೆ ಬದಲಾಗದಿರುವುದು ಯಾವುದಾದರೂ ಉಂಟೆ? ಉದಾಹರಣೆಗೆ ,ಒಂದು ಕಟ್ಟಡವನ್ನೇ ಪರಿಗಣಿಸಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ,ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಜನ ಓಡಾಡುತ್ತಿರುತ್ತಾರೆ. ಒಬ್ಬರೊಡನೊಬ್ಬರು ವಿವಿಧ ರೀತಿಯಲ್ಲಿ ಅಂತರಕ್ರಿಯಿಸುತ್ತಿರಬಹುದು ಮಾತುಗಳನ್ನು ಉಡುಗೊರಗಳನ್ನು ತಿಂಡಿಯನ್ನು , ಯೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿರಬಹುದು. ಆದರೆ , ಇವೆಲ್ಲದರ ನಡುವೆ ಬದಲಾಗದಿರುವುದು ಯಾವುದು ? ಕಟ್ಟಡ ಮುಚ್ಚಿದ್ದರೆ ಅಲ್ಲಿನ ಜನಸಂಖ್ಯಾಯಲ್ಲಿ ಏನೂ ಬದಲಾವಣೆ ಇಲ್ಲ (ಈ ಅವಧಿಯಲ್ಲಿ ಜನನ - ಮರಣಗಳೇನೂ ಸಂಭವಿಸದಿದ್ದರೆ ) ಎಂದು ಹೇಳಬಹುದು . ಆ ದೃಷ್ಟಿಯಲ್ಲಿ ಅದೊಂದು ಮುಚ್ಚಿದ ವ್ಯವಸ್ಥೆ . ಮುಚ್ಚಿದ ವ್ಯವಸ್ಥೆ ಎಂದು ಯಾವುದನ್ನಾದರೂ ಪರಿಗಣಿಸಿದರೆ ಅದರ ಉದ್ದೇಶ್ಯ ಅಲ್ಲಿ ಎಲ್ಲ ವಿಧವಾದ ಬದಲಾವಣೆಗಳಾಗುತ್ತಿದ್ದಾಗ್ಯೂ , ಭೌತಿಕ ಸತ್ಯದ ಯಾವ ವಿಷಯ ಆ ಬದಲಾವಣೆಗಳ ಪರಣಾಮಕ್ಕೆ ಒಳಗಾಗಿಲ್ಲ ಎಂಬುದನ್ನು ಗುರುತಿಸುವುದಕ್ಕೋಸ್ಕರ .
 
ತೆರೆದ ವ್ಯವಸ್ಥೆಯಲ್ಲಿ ಹೊರಗಿನಿಂದ ಮುಕ್ತ ವಿನಿಮಯವಿರುತ್ತದೆ. ಆದ್ದರಿಂದ ಯಾವ ವಸ್ತು ಸಂರಕ್ಷಿತವಾಗುತ್ತದೆ ಎಂದು ಹೇಳುವುದು ಕಷ್ಟ . ವಾಸ್ತವವಾಗಿ ಎಲ್ಲ ವ್ಯವಸ್ಥೆಗಳೂ ಒಂದಲ್ಲೊಂದು ರೀತಿಯಲ್ಲಿ ತೆರದ ವ್ಯವಸ್ಥೆಗಳೇ , ಏಕೆಂದರೆ, ಒಂದು ವ್ಯವಸ್ಥೆಯನ್ನು ಮತ್ತೊಂದರಿಂದ ಸಂಪೂರ್ಣವಾಗಿ ಬೇರ್ಪಡಿಸಲಾಗುವುದಿಲ್ಲ . ಬೇರ್ಪಟ್ಟಂತೆ ತೋರುವ ವ್ಯವಸ್ಥೆಗಳೂ ಹೊರಗಿನೊಂದಿಗೆ ಸೂಕ್ಷ್ಮಸಂಪರ್ಕ ಹೊಂದಿರುತ್ತವೆ . ಇದನ್ನೇ ಅಂತರಸಂಪರ್ಕ (Interconnectedness) ಎನ್ನುವುದು . ವಿಶ್ವದಲ್ಲಿ ಎಲ್ಲವೂ ಒಂದರೊಡನೊಂದು , ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಸಂಪರ್ಕಹೊಂದಿರುತ್ತವೆ.
 
ಅಂತರಸಂಪರ್ಕ ಎಂಬುದು ಒಂದು ಮಹತ್ವದ ಪರಿಕಲ್ಪನೆ ಈಚನ ಶತಮಾನದಲ್ಲಿ ಮೂಡಿ ಬಂದಿರುವ ಪ್ರಮುಖ ಪರಿಕಲ್ಪನೆಗಳಲ್ಲಿ ಇದೂ ಒಂದು ಇದಕ್ಕೆ ವೈದೃಶ್ಯವಾಗಿ ಮುಂಚಿನ ಕಾಲದ ಭೌತವಿಜ್ಜಾನದಲ್ಲಿ ಬೇರ್ಪಡೆಗೇ ಆದ್ಯತೆ ಇತ್ತು. ವಿಶ್ವದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಒಂದಕ್ಕೊಂದು ಸಂಪರ್ಕವಿಲ್ಲದ , ಬೇರೆ ಬೇರೆ ವಿಷಯಗಳೆಂದು ಪರಿಗಣಿಸಿ ವಿಶ್ಲೇಷಿಸಬೇಕಾಗಿತ್ತು , ಗೋಚರ ಸತ್ಯದ ಅನೇಕ ಬೇರುಗಳನ್ನು ಅರಿಯಲು ಈ ವಿದಾನ ಪರಿಣಾಮಕಾರಿಯಾಗಿತ್ತು .
 
ಆದರೆ ಅಂತಹ ತುಂಡುತುಂಡಾದ ವಿಶ್ವೇಷಣೆಗಳಿಂದ ಸತ್ಯದ ಅರಿವು ಸ್ವಲ್ಪಮಟ್ಟಿಗೆ ದೊರೆತರೂ ,ಅದು ಸಮಗ್ರ ಚತ್ರವನ್ನು ನೀಡಲಾರದು ಎಂದು ಈಗ ತಿಳಿದಿದೆ ನಾವು ವಿಶ್ವವನ್ನು ಅದರ ಎಲ್ಲ ಅಂತರಸಂಪರ್ಕಗಳೂ ಸೇರಿದಂತೆ ಒಟ್ಟಾರೆಯಾಗಿ ವಿಶ್ಲೇಷಿಸಬೇಕು ಭೌತಜಗತ್ತಿಗಿಂತಲೂ ಜೀವಜಗತ್ತಿನಲ್ಲಿ ಅಂತರಸಂಪರ್ಕಗಳು ಮಹತ್ವದ ಪಾತ್ರ ವಹಿಸುತ್ತವೆ . ಅದನ್ನು ಅರ್ಥಮಾಡಿಕೊಂಡರೆ ಜಗತ್ತನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ವಹಿಸಬಹುದು.
 
ವಿಶ್ವದ ಅಂತಿಮ ವಿಧಿ; ಅಂತಿಮವಾಗಿ ವಿಶ್ವ ಉಷ್ಣದಿಂದ ನಾಶವಾಗುತ್ತದೆ(Heat death) .
ಸಂಪೂರ್ಣವಾಗಿ ಗೊಂದಲಮಯವಾಗುವುದೇ ವಿಶ್ವದ ಹಣೆಬರಹ , ಗರಿಷ್ಟ ಎಂಟ್ರೊಪಿ ಸ್ಥಿತಿಗೆ ತಲಪುವುದೇ ಅದರ ಗುರಿ . ಇದಕ್ಕೆ Cosmic uniformizing principle ಎಂದು ಹೇಳಬಹುದು . ಇದು ಆದಿಯಿಂದಲೇ ಮೌನವಾಗಿ ಮುನ್ನಡೆಯುತ್ತಿದೆ - ದೈತ್ಯ ಗಡಿಯಾರವೊಂದು ಅಂತಿಮ ಗಳಿಗೆಯೆಡೆಗೆ ನಿಧಾನವಾಗಿ "ಟಿಕ್-ಟಿಕ್" ಎನ್ನುವಂತೆ .
 
Rudolf clausius ಮತ್ತು Hermann Helmholts ಅವರುಗಳು ಥರ್ಮೋಡೈನಮಿಕ್ಸ್ ನ ಎರಡನೇ ನಿಯಮದ ಗಂಭಿರ ಅಧ್ಯಯನ ಮಾಡಿ ಒಂದು ಭಯಾನಕ ನಿರ್ಧಾರಕ್ಕೆ ಬಂದರು ಅಂತಿಮವಾಗಿ ಸಮಗ್ರ ವಿಶ್ವವು ಅತ್ಯಂತ ಗೊಂದಲ ಸ್ಥಿತಿಯನ್ನು ತಲಪುತ್ತದೆ . ಆಗ ಎಲ್ಲ ಕಾಯಗಳೂ ಒಂದೇ ನಮನಾದ ತಾಪ ಹೊಂದಿದ್ದು ಅವುಗಳಲ್ಲಿ ಯಾವ ರೀತಿಯ ಕ್ರಿಯಾಶೀಲತೆಯೂ ಉಳಿದಿರುವುದಿಲ್ಲ . ಅದೇ ವಿಶ್ವದ "ತಾಪಮರಣ" Heat death ಎಂಬ ಸ್ಥಿತಿ ಎಂತಹ ಭಯಂಕರ ಭವಿಷ್ಯವಾಣಿ ಅದು ಯಾವ ಭೂಕಂಪ , ಜ್ವಾಲಾಮುಖಿಯ ಸ್ಪೋಟ, ಪ್ಲೇಗ್ ಅಥವಾ ಪ್ರಳಯಕ್ಕಿಂತಲೂ ಭೀಕರ ಸೂರ್ಯ , ಚಂದ್ರ , ಭೂಮಿ , ನಕ್ಷತ್ರಗಳು ಎಲ್ಲವೂ ಸೇರಿದಂತೆ ಸರ್ವನಾಶ . ಅದೊಂದು ವೈಚಾರಿಕ , ವೈಜ್ಞಾನಿಕ ನಿರಾಶಾವಾದ .
 
 
ಭೌತವಿಜ್ಞಾನದ ಎರಡು ಶತಮಾನಗಳ ಗಂಭೀರ ಅಧ್ಯಯನದ ನಂತರದ ತೀರ್ಮಾನವೇ ಇದು ? ಗ್ರಹ , ನಕ್ಷತ್ರಗಳ ರಹಸ್ಯವನ್ನು ಬಹಿರಂಗಪಡಿಸಿದ ಬಡಾಯಿ ಸಾಲದೆಂಬಂತೆ ಕಾಮನಬಿಲ್ಲು ಸೂರ್ಯನ ಬೆಳಕು ಮೋಡದ ಮೂಲಕ ಹಾದುಬರುವಾಗ ಅದರ ದಿಶೆಯಲ್ಲಾಗುವ ಪಲ್ಲಟದ ಪರಿಣಾಮವಷ್ಟೆ ಎಂಬ ನೀರಸ ವ್ಯಾಖ್ಯಾನ ಬೇರೆ . ಧೂಮಕೇತುಗಳು ಆಕಾಶದಲ್ಲಿ ಅಂಡಾಕಾರದ ಕಕ್ಷೆಗಳಲ್ಲಿ ಸುತ್ತುವ ದ್ರವ್ಯದ ತುಂಡುಗಳು ಮಾತ್ರ ಎಂದು ಹೇಳಿದುದೇನೋ ಒಳ್ಳೆಯದೇ ಆಯಿತು . ಅದರಿಂದ ಅವು ಅಪಶಕುನದ ಸೂಚಕವೆಂಬ ಭಯ ದೂರವಾಯಿತು . ಆದರೆ , ಕಡೆಗೊಂದುದಿನ ಸೂರ್ಯ ಮಾಸಿಹೋಗುತ್ತದೆ, ನಕ್ಷತ್ರಗಳೆಲ್ಲಾ ಕಳೆಗುಂದುತ್ತವೆ. ಸರ್ವವೂ ಚೈತನ್ಯರಹಿತವಾಗುತ್ತವೆ ಎಂದು ಭವಿಶ್ಯ ನುಡಿಯುವುದಕ್ಕಿಂತ ಕ್ರೂ
"https://kn.wikipedia.org/wiki/ಸದಸ್ಯ:Keerthi_340/sandbox" ಇಂದ ಪಡೆಯಲ್ಪಟ್ಟಿದೆ