ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
* 'ಶ್ರೀ ಹಾಲುರಾಮಪ್ಪನ ದೇವಸ್ಥಾನ',(ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ)
ಹೀಗೆ ಅನೇಕ ದೇವಿ-ದೇವತೆಗಳ ದೇವಾಲಯಗಳನ್ನು ನಾವು ಇಲ್ಲಿ ಕಾಣುತ್ತೇವೆ.
==/ಕೋಡೆಪ್ಳರ ಮನೆತನದ ಮುಳ್ಳಿನ ಹಾವಿಗೆ ಸೇವೆ (ಮುಳ್ಳಾವುಗೆ) ==
ಕೋಡೆಪ್ಳರಮನೆತನವು ಪರಂಪರಾನುಗತವಾಗಿ ಪೀಳಿಗೆಯಿಂದ ಪೀಳಿಗೆಗೆ ತಾಳ್ಯದ ಆಂಜನೇಯ ಸ್ವಾಮಿಯ ಆರಾಧಕರಾಗಿದ್ದು ಸದರಿ ಮನೆತನದ ವ್ಯಕ್ತಿಯೊಬ್ಬರು ದಾಸಯ್ಯನಾಗಿ ಆಂಜನೇಯ ಸ್ವಾಮಿಯ ಮುದ್ರಾ ಲಾಂಛನ ಹಾಕಿಸಿಕೊಂಡಿರುತ್ತಾರೆ ಅವರು ಮೂರು ಹಗಲು ಮೂರು ರಾತ್ರಿಯೆಲ್ಲಾ ಉಪವಾಸವಿದ್ದು ಜಾತ್ರೆಯ ದಿನ ಆಂಜನೇಯಸ್ವಾಮಿ ನೇಮ ನ್ಯೆಮಿತ್ಯಗಳಿಂದ ಗರ್ಭಗುಡಿಯ ಒಳಗೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವೇಳೆ ಮೂರ್ಛೆಹೋಗುತ್ತಾರೆ.ಆಗ ಭಕ್ತ ವೃಂದದ ಮುಗಿಲು ಮುಟ್ಟುವ ಆಂಜನೇಯ ಸ್ವಾಮಿಯ ನಾಮಾವಳಿಗಳೋಂದಿಗೆ ಸದರಿ ದಾಸಯ್ಯನವರಿಗೆ ಮುಳ್ಳಿನ ಹಾವಿಗೆಯನ್ನು ತೊಡಿಸುತ್ತಾರೆ,ಆಗ ಕೋಡಪ್ಳರ ಮನೆತನದ ದಾಸಯ್ಯನವರು ಮೂರ್ಚಾ ಸ್ಥಿತಿಯಲ್ಲೇ ಗುಡಿಗೆ ಪ್ರಧಕ್ಷಿಣೆ ಹಾಕಿ ತೇರಿನ ಬಲವಂದು ಮರಳಿ ಭಕ್ತ ವೃಂದವು ಆಂಜನೇಯಸ್ವಾಮಿಯ ನಾಮಾವಳಿಗಳನ್ನೂ ಕೂಗುತ್ತಿರಲು ದೇವಾಲಯಕ್ಕೆ ಮರಳುತ್ತಾರೆ. ಈ ವಿಧಿಯನ್ನುಮುಳ್ಳಾವುಗೆ ಎಂದು ಕರೆಯುತ್ತಾರೆ. ಮೋರ್ಛೆಗೊಂಡ ಭಕ್ತರು ಎಚ್ಚರಗೊಳ್ಳುವುದು ಸ್ವಾಮಿಯಸನ್ನಿಧಿಯಲ್ಲಿ ತೀರ್ಥ ಪ್ರೋಕ್ಷಿಸಿದ ಬಳಿಕವೇ. [[ಮುಳ್ಳಾವುಗೆ]] ಧರಿಸಿರುತ್ತಾರೆ.ಅದೇದಿನದ ರಾತ್ರಿ ಊರಿನ ಜನರಿಂದ ದೊಡ್ಡೆಡೆ ದೇವಾಲಯದ ಮುಂದೆ ನಡೆಯುತ್ತದೆ. ಹೂವಿನ ಪಲ್ಲಕ್ಕಿ ಉತ್ಸವ ಸಹಾ ಏರ್ಪಾಡಾಗಿರುತ್ತದೆ, ಮತ್ತೊಂದು ದೊಡ್ಡೆಡೆ ಮಾರನೆಯ ದಿನ ನಡೆಯುತ್ತದೆ ಇದರ ಸೇವಾಕರ್ತರು, ಮುದ್ದು ರಂಗಪ್ಳರ ಮನೆಯವರು.
==ಜಾತ್ರೆಯ ಇತರ ಕಾರ್ಯಕ್ರಮಗಳು==
ನಂತರ ದಿನಗಳಲ್ಲಿ ಕ್ರಮವಾಗಿ ವೈದಿಕರಿಂದ ಓಕಳಿಯಾಡುವ ಪದ್ಧತಿ. ಶಯನೋತ್ಸವದ ಸೇವೆ ಕೊನೆಯ ದಿನ ನಂತರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
==ಇತರೆ ವಿವರ==
ಬೃಹದಾಕಾರದ ಮೂರ್ತಿ, ಮಲಸಿಂಗನಹಳ್ಳಿ ಹಾಗೂ ಕಿಟ್ಟದಹಳ್ಳಿ ಯಲ್ಲಿರುವ ಹನುಮನ ಮೂರ್ತಿಗಳನ್ನು ಸಮೀಪದ ’ಹಾಲುರಾಮನ ಮಟ್ಟಿ’ಯೆಂಬ ಜಾಗದಲ್ಲಿದ್ದ ಒಂದೇ ಭಾರಿ ಶಿಲೆಯಿಂದ ಕಡೆಯಲಾಗಿದೆ. ಎತ್ತರ ೧೦ ಅಡಿ. ದಶಾವತಾರದ ಭಂಗಿಗಳು, ಅಷ್ಟ ದಿಗ್ಪಾಲಕರು, ಆದಿಶಕ್ತಿ ಮತ್ತು ರಾಮ ಪಟ್ಟಾಭಿಷೇಕ, ರಾಮಾಯಣದ ಚಿತ್ರಣ ಸುಂದರವಾಗಿ ಮೂಡಿಬಂದಿದೆ. ಅರಣ್ಯಕಾಂಡದ ಚಿತ್ರಗಳು, ಸಭಾಂಗಣದ ಕಂಭಗಳಲ್ಲಿ ಶಿವ, ಪಾರ್ವತಿ, ನಂದಿ, ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ೪೦೦ ವರ್ಷಗಳಷ್ಟು ಪುರಾತನ.
ಪ್ರತಿ ಶನಿವಾರವೂ ವಿಶೇಷ ಪೂಜೆ ಇದ್ದು ಭಕ್ತರುಗಳ ಅಪಾರ ಕೊಡುಗೆಗಳಿಂದಾಗಿ ದೇಗುಲವು ಕಂಗೊಳಿಸುತ್ತದೆ. ಬೆಂಗಳೂರಿನಲ್ಲಿ ಜರುಗುವ ಕರಗದ ಇದೇ ದಿನ ನಡೆಯುತ್ತದೆ.
[[ಹೊಸೂರಿನ ನಂದನ ರಾಜ]]ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ವೇಳೆ ಬೇರೆಬೇರೆ ಸ್ಥಳಗಳಲ್ಲಿ ಆಚರಿಸುವ ಪರಿಪಾಠವಿದೆ.
ಗುಡದಪ್ಪನ ಮನೆಯಲ್ಲಿ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆಮಾಡುತ್ತಿದ್ದರು. ೧೯೩೯ ರಲ್ಲಿ ಒಂದು ಸಂಘವನ್ನು ಸ್ಥಾಪಿಸಲಾಯಿತು. ಮಾರುತಿ ಬ್ರಾಹ್ಮಣ ಸಂಘ. ಜಾಜೂರಿನ ಭಕ್ತಮಂಡಳಿಯವರು ಕಾಲಾನುಕ್ರಮದಲ್ಲಿ ಮುಂದೆಬಂದು ಬ್ರಹ್ಮರಥೋತ್ಸವದ ಒಂದು ದಿನದ ವೆಚ್ಚವನ್ನು ವಹಿಸಿಕೊಂಡರು. ಚಿತ್ರದುರ್ಗದ ಅನಂತಪ್ಪ ಶೆಟ್ಟರು. ಮದ್ದೇರು ಶ್ಯಾನುಭೋಗ ಶ್ರೀ ಹನುಮಂತರಾಯರು ಜಾತ್ರೆಯಕಾಲದಲ್ಲಿ ಐದುದಿನ ಅನ್ನ ಸಂತರ್ಪಣೆಯ ವಿಧಿ ಸತತವಾಗಿ ನಡೆದುಕೊಂಡುಬರುತ್ತಿದೆ.
 
(ಸಂಪಾದನೆ-ಶ್ರೀಧರ ತಾಳ್ಯ)
 
==ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲ್ಯಾಣಮಂಟಪ, ಧರ್ಮೋಪನಯನ, ವಸತಿಗೃಹ, ಇತಿಹಾಸ==