ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:1-Shimoga visit (2012-13) HP 156.JPG||thumb|right|300px|'ತಾಳ್ಯದ ಆಂಜನೇಯಸ್ವಾಮಿ'(೨೦೧೩)]]
[[ಚಿತ್ರ:1-Shimoga visit (2012-13) HP 142.JPG|thumb|right|300px|'ತಾಳ್ಯದ ಆಂಜನೇಯಸ್ವಾಮಿ']]
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.ಹೊಳಲ್ಕೆರೆ ಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ.
೫ ನೇ ಸಾಲು:
==ದೇವಸ್ಥಾನದ ವೈಶಿಷ್ಟ್ಯಗಳು==
ಸುಮಾರು ೪೦೦ ವರ್ಷಗಳ ಹಿಂದೆ, ಚಿತ್ರದುರ್ಗದ ಪಾಳೇಗಾರರು ಆಂಜನೇಯ ಸ್ವಾಮಿಗೆ ನಡೆದು ಕೊಳ್ಳುತ್ತಿದ್ದರು ಎನ್ನುವುದನ್ನು ಬಿಟ್ಟರೆ, ಈ ದೇವಾಲಯ ಸ್ಥಾಪಕರಾರು ಎನ್ನುವುದಕ್ಕೆ ಯಾವ ಆಧಾರಗಳು ದೊರೆತಿಲ್ಲ. ಅಜಾನುಬಾಹುವಾಗಿ ನಿಂತಿರುವ ಸ್ವಾಮಿಯ ವಿಗ್ರಹ, ಸುಮಾರು ೧೧ ಅಡಿ ಎತ್ತರವಿದೆ. ಪಕ್ಕದಲ್ಲಿ ದಶಾವತಾರದ ಭಂಗಿಗಳಿವೆ. ಅಷ್ಟದಿಕ್ಪಾಲಕರು, ಆದಿಶಕ್ತಿ, ಮತ್ತು ಶ್ರೀರಾಮ ಪಟ್ಟಾಭಿಷೇಕ, 'ರಾಮಾಯಣದ ಅರಣ್ಯಕಾಂಡದ ಚಿತ್ರಣ'ಗಳು ಸುಂದರವಾಗಿಮೂಡಿಬಂದಿವೆ. ಸಭಾಂಗಣದ ಕಂಭಗಳಲ್ಲಿ ಶಿವ,ಪಾರ್ವತಿ,ನಂದಿ ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ಹತ್ತಿರದಲ್ಲೇ ಇರುವ 'ಹಾಲುರಾಮೇಶ್ವರ ಮಟ್ಟಿ'ಯಿಂದ 'ಮಲಸಿಂಗನಹಳ್ಳಿ'ಯ 'ಕಿಟ್ಟದಹಳ್ಳಿ'ಯ ಮೂರ್ತಿಗಳು ಒಂದೇ ಬೃಹತ್ ಬಂಡೆಯಿಂದ ನಿರ್ಮಿಸಲ್ಪಟ್ಟಿವೆ. 'ತಾಳ್ಯದ ಮೂರ್ತಿ'ಯು 'ವೀರ ಭಾವ'ವನ್ನು ಹೊಂದಿದ್ದು, 'ಕಿಟ್ಟದ ಹಳ್ಳಿಯ ಮೂರ್ತಿ', 'ಶಿಶು'ವಿನಂತೆ ಮತ್ತು ಮಲಸಿಂಗನಹಳ್ಳಿಮೂರ್ತಿ, 'ನರ'ನಂತೆ ಕಾಣಬರುತ್ತದೆ. ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆಯಲ್ಲಿ ಮಾಡಿಸಿದ ರಾಮಾಯಣದ ಚಿತ್ತಾರಗಳನ್ನು ಹೊರಸೂಸುವ ತಗಡನ್ನು ೧೯೧೬ ರಲ್ಲಿ ಅಳವಡಿಸಿದ್ದಾರೆ. ಮಹಾದ್ವಾರದ ಬಳಿ 'ಬಾಣಪ್ಪ ದೇವರ ಚಿಕ್ಕಗುಡಿ'ಯಿದೆ. ಈ ದೇವತೆ ಭೂತ ಪ್ರೇತ ಪಿಶಾಚಿಗಳ, ಮತ್ತು ರೋಗಗಳನ್ನು ವಾಸಿಮಾಡಲು, ಕಷ್ಟಗಳನ್ನು ಪರಿಹರಿಸಲು 'ನಂದನ ಹೊಸೂರಿನ ರಾಜ'ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. [['ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ', ತಾಳ್ಯ]] ಜಾತ್ರೆಯ ಸಮಯದಲ್ಲಿ ಮತ್ತು ವರ್ಷದ ಇತರ ಸಮಯದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ಸಹಾಯಮಾಡುತ್ತಿದೆ.
 
==ಹನುಮಪ್ಪನ ತೇರಿನ ವಿವರಗಳು ==
ಪ್ರತಿವರ್ಷವೂ ಚೈತ್ರ ಶುದ್ಧ ಚಿತ್ರ ಪೂರ್ಣಿಮೆಯದಿನ ಶ್ರೀ ಆಂಜನೇಯನಿಗೆ ಬ್ರಹ್ಮ ರಥೋತ್ಸವ (ಆನೆ ಉತ್ಸವ) ಜರುಗುವುದು. ಅಂಕುರಾರ್ಪಣದ ಬಳಿಕ ಕುದುರೆ ವಾಹನ, ಸಿಂಹವಾಹನ, ಇಂದ್ರಜಿತು ವಾಹನ, ನಂತರ ಆನೆ ವಾಹನೋತ್ಸವ ಅಥವ ಬ್ರಹ್ಮರಥೋತ್ಸವ ಜರುಗುತ್ತದೆ. ಆಂಜನೇಯ ಸ್ವಾಮಿಯ ಜಾತ್ರೆಯಂದು ಗುಡ್ಡದ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರವೇ ಮೊದಲ ದಿನ ವಿಪ್ರಬಂಧುಗಳಿಂದವಿಶೇಷ ಪೂಜೆ-ಪ್ರಾರ್ಥನೆಗಳನಂತರ ಹಾಗೂ ಶ್ರೀಗುಡ್ಡದ ತಿಮ್ಮಪ್ಪನ ಉತ್ಸವಮೂರ್ತಿಗಳನ್ನು ಬ್ರಹ್ಮರಥದಲ್ಲಿ ಅಲಂಕೃತಗೊಳಿಸಿ ಗ್ರಾಮದ ಸುತ್ತಲೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಆದಿನ ರಾತ್ರಿ ರಥಕ್ಕೆ ಎಣ್ಣೆ ಎರೆಯಲಾಗುತ್ತದೆ.
Line ೧೬ ⟶ ೧೫:
=='ನೂರೊಂದೆಡೆಯ ಸೇವೆ'==
ಇದರ ಸಂಖ್ಯೆ ೧೦೧. ನೂರೊಂದೆಡೆಯ ಹರಕೆ, ವಿಶೇಷ ವಿಶೇಷ ಮಹತ್ವದ್ದು. ನೂರೊಂದು ಸೂರ್ಯ ನಮನಗಳು,ನೂರೊಂದು ಕಾಯಿಒಡೆಸುವುದು,ನೂರೊಂದು ದೇವತೆಗಳನ್ನು ಒಟ್ಟಾಗಿಸೇರಿಸಿ ಆ ಪ್ರದೇಶದ ಅಧಿದೇವರಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಸನ್ನಿಧಿಯಲ್ಲಿ ನೂರೊಂದು ದೇವತೆಗಳಿಗೆ, ನೂರೊಂದು ಉಂಡೆಗಳನ್ನು ಮಾಡಿ ಪೂಜಿಸಿ ಎಲ್ಲದೇವರುಗಳಿಗೆ ಸಮರ್ಪಿಸುತ್ತಾರೆ. ನೈವೇದ್ಯ, ಅಡ್ಡ ಹೂವಿನ ಪಲ್ಲಕ್ಕಿಯಲ್ಲಿ ತಾಳ್ಯದ ಗ್ರಾಮಸ್ತರು ಕೆರೆಯ ಕೋಡಿಯಲ್ಲಿ ಬರಮಾಡಿಕೊಂಡು ವಿಶೇಷ ಪೂಜೆ, ಧೂಪದ ಸೇವೆ,ಬಾನೋತ್ಸವ ಸೆವೆ,ಮತ್ತು ಕೊನೆಯಲ್ಲಿ ಅನ್ನಸಂತರ್ಪಣೆ ಸಲ್ಲಿಸುತ್ತಾರೆ. ಗ್ರಾಮದ ಪರವಾಗಿ ದಾಸಯ್ಯನ ಭವನಾಸಿಯಲ್ಲಿ ನೈವೇದ್ಯ ಅರ್ಪಿಸುತ್ತಾರೆ. ೧೯೭೨ ರಲ್ಲಿ ಮತ್ತೆ ೧೯೯೩ ರಲ್ಲಿ ನಡೆದ ನೂರೊಂದೆಡೆಯ ಮಹೋತ್ಸವ ವಿಶೇಷವಾಗಿದ್ದು, ನಾಡಿನ ಹಾಗೂ ವಿದೇಶಗಳ ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡಿದ್ದರು.
 
==ಬಾರೆಹಳ್ಳಿ ಮನೆತನ, ಮತ್ತು ಕೋಡೆಪ್ಳರ ಮನೆತನದ ಭಕ್ತರ ಸೇವೆಗಳು==
[[ಬಾರೆಹಳ್ಳಿ ಮನೆತನ]]ದವರು ರಥದ ಮುಂದೆ ಇದ್ದು ದೊಡ್ಡ ಸೇವೆಗೆ ಭಾಗಿಯಾಗುತ್ತಾರೆ. ಇಲ್ಲಿ ನಡೆಯುವ [[ದೊಡ್ಡೆಡೆ]] ಅತಿ ಪ್ರಮುಖವಾದ ವಿಧಿಗಳಲ್ಲೊಂದು. ಬಾಳೆ ಎಲೆಯಲ್ಲಿ ಅನ್ನ, ಹಾಲು, ಮೊಸರು, ತುಪ್ಪ, ಬೆಲ್ಲದ ಹಾಲು, ಬಾಳೆಹಣ್ಣುಗಳನ್ನು ಮಿಶ್ರಣಮಾಡಿ ಪೂಜೆ ಸಲ್ಲಿಸಿ ಭಕ್ಷಿಸುವ ಪ್ರಥದಲ್ಲಿ ಕೇಕೆಹಾಕುತ್ತಾ ಸಾಗುತ್ತಾರೆ.
Line ೩೭ ⟶ ೩೫:
* 'ಶ್ರೀ ಹಾಲುರಾಮಪ್ಪನ ದೇವಸ್ಥಾನ',(ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ)
ಹೀಗೆ ಅನೇಕ ದೇವಿ-ದೇವತೆಗಳ ದೇವಾಲಯಗಳನ್ನು ನಾವು ಇಲ್ಲಿ ಕಾಣುತ್ತೇವೆ.
 
==ಪವಾಡ ಬೀಳುವ ಪ್ರಕ್ರಿಯೆ==
[[ಕೋಡೆಪ್ಳರ ಮನೆತನದ ಭಕ್ತ]]ರೊಬ್ಬರು ರಾತ್ರಿಯೆಲ್ಲಾ ಉಪವಾಸವಿದ್ದು ಪೂಜೆ ಸಲ್ಲಿಸಿದ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವೇಳೆ ಮೂರ್ಛೆಹೋಗುತ್ತಾರೆ. ಈವಿಧಿಯನ್ನು ಕರೆಯುತ್ತಾರೆ. ಮೋರ್ಛೆಗೊಂಡ ಭಕ್ತರು ಎಚ್ಚರಗೊಳ್ಳುವುದು ಸ್ವಾಮಿಯಸನ್ನಿಧಿಯಲ್ಲಿ ತೀರ್ಥ ಪ್ರೋಕ್ಷಿಸಿದ ಬಳಿಕವೇ. [[ಮುಳ್ಳಾವುಗೆ]] ಧರಿಸಿರುತ್ತಾರೆ.ಅದೇದಿನದ ರಾತ್ರಿ ಊರಿನ ಜನರಿಂದ ದೊಡ್ಡೆಡೆ ದೇವಾಲಯದ ಮುಂದೆ ನಡೆಯುತ್ತದೆ. ಹೂವಿನ ಪಲ್ಲಕ್ಕಿ ಉತ್ಸವ, ಮತ್ತೊಂದು ದೊಡ್ಡೆಡೆ ಮಾರನೆಯದಿನದ ಸೇವಾಕರ್ತರು, ಮುದ್ದು [[ರಂಗಪ್ಳರ ಮನೆಯವರು]]. ವೈದಿಕರಿಂದ ಓಕಳಿಯಾಡುವ ಪದ್ಧತಿ. ಶಯನೋತ್ಸವದ ಸೇವೆ ಕೊನೆಯ ದಿನ ನಂತರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
Line ೪೪ ⟶ ೪೧:
[[ಹೊಸೂರಿನ ನಂದನ ರಾಜ]]ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ವೇಳೆ ಬೇರೆಬೇರೆ ಸ್ಥಳಗಳಲ್ಲಿ ಆಚರಿಸುವ ಪರಿಪಾಠವಿದೆ.
ಗುಡದಪ್ಪನ ಮನೆಯಲ್ಲಿ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆಮಾಡುತ್ತಿದ್ದರು. ೧೯೩೯ ರಲ್ಲಿ ಒಂದು ಸಂಘವನ್ನು ಸ್ಥಾಪಿಸಲಾಯಿತು. ಮಾರುತಿ ಬ್ರಾಹ್ಮಣ ಸಂಘ. ಜಾಜೂರಿನ ಭಕ್ತಮಂಡಳಿಯವರು ಕಾಲಾನುಕ್ರಮದಲ್ಲಿ ಮುಂದೆಬಂದು ಬ್ರಹ್ಮರಥೋತ್ಸವದ ಒಂದು ದಿನದ ವೆಚ್ಚವನ್ನು ವಹಿಸಿಕೊಂಡರು. ಚಿತ್ರದುರ್ಗದ ಅನಂತಪ್ಪ ಶೆಟ್ಟರು. ಮದ್ದೇರು ಶ್ಯಾನುಭೋಗ ಶ್ರೀ ಹನುಮಂತರಾಯರು ಜಾತ್ರೆಯಕಾಲದಲ್ಲಿ ಐದುದಿನ ಅನ್ನ ಸಂತರ್ಪಣೆಯ ವಿಧಿ ಸತತವಾಗಿ ನಡೆದುಕೊಂಡುಬರುತ್ತಿದೆ.
 
==ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲ್ಯಾಣಮಂಟಪ, ಧರ್ಮೋಪನಯನ, ವಸತಿಗೃಹ, ಇತಿಹಾಸ==
ಸ್ವಾಮಿ ದೇವಾಲಯವು ಹದಿನಾರನೆ ಶತಮಾನದಲ್ಲಿ [[ಶ್ರೀವೈಷ್ಣವ ಆಳ್ವಾರರ ಪ್ರೇರಣೆ]]ಯಿಂದ ಆಗಿರಬಹುದೆಂದು ಮತ್ತು ಸಂತೆ ಬೆನ್ನೂರಿನ ನಾಯಕರು ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರಬಹುದೆಂದೂ ಊಹಿಸಲಾಗಿದೆ. ಸೆವೂಣರು, ಹೊಯ್ಸಳರು, ನೊಳಂಬರು, ವಿಜಯನಗರದರಸರು, ಮೈಸೂರಿನ ರಾಜರು, ಚಿತ್ರದುರ್ಗದ ಪಾಳೆಗಾರರು, ಹೈದರಾಲಿ, ಸಂತೆಬೆನ್ನೂರಿನನಾಯಕರು, ಹಾಗೂ ಬ್ರಿಟಿಷರು ಆಳಿದ್ದಾರೆ. ಶಾಸನಗಳು ಲಭ್ಯವಾಗಿಲ್ಲ. ಬ್ರಿಟಿಷ್ ಶಾಸನತಜ್ಞ ಬಿ.ಎಲ್.ರೈಸರು, ಎಪಿಗ್ರಾಫಿಯ ಕರ್ನಾಟಕ ಸಂಪುಟ-೧೧ ರಲ್ಲಿ ಇಲ್ಲಿನ ಶಾಸನ ಸಂಪತ್ತನ್ನು ಗುರುತಿಸಿ ದಾಖಲಿಸಿದ್ದಾರೆ. ಹಾಗಾಗಿ, ಆದಿ ಹಳೇಯುಗದ ಹಾಗೂ ಬೃಹತ್ ಶಿಲಾಯುಗದ ಸಾಂಸ್ಕೃತಿಕ ನೆಲೆಯೆಂಬ ಮಾತನ್ನು ಪುಷ್ಟೀಕರಿಸಲು ೧೯೧೬ ರಲ್ಲಿ [[ರಾಬರ್ಟ್ ಬ್ರಸ್ ಫೂಟ್]] ಎಂಬ ವ್ಯಕ್ತಿ, ಪತ್ತೆಹಚ್ಚಿದ್ದರು. ತಮ್ಮ ಸಂಶೋಧನೆಗಳ ಫಲಿತಗಳನ್ನು ’Indian Prehistoric and Proto-Historic Antiquities, Madras' ಎಂಬ ಕೃತಿಯಲ್ಲಿ ಪಟ್ಟಿಮಾಡಿದ್ದಾರೆ. ಅನೇಕ ಶಿಲಾಯುಧಗಳು ಕಪ್ಪು ಮತ್ತು ಕೆಂಪು ವರ್ಣದ ಮಡಕೆಗಳ ಅವಶೇಷಗಳು ಇಲ್ಲಿ ದೊರೆತಿವೆ.
 
==ಶಾಸನಗಳು==
ದೇವಾಲಯದ ನಿರ್ಮಾಣದ ಕುರಿತು ಯಾವುದೆ ಶಾಸನಗಳು, ದಾಖಲೆಗಳು, ಮಾಹಿತಿಗಳು ಲಭ್ಯವಿಲ್ಲ. ವಾಸ್ತುಶೈಲಿಯನ್ನು ಆಧರಿಸಿ ಕಾಲವನ್ನು ನಿರ್ಧರಿಸಬಹುದು. ದೊರೆತ ಶಾಸನಗಳೊಂದರಲ್ಲಿ ಧಾರ್ಮಿಕ ಮನೋಭಾವದಿಂದ ಹಾಗೂ ದಾನ ಶಾಶ್ವತವಾಗಿ ಮುಂದುವರೆಯಲು ಹಾಕಿಸುತ್ತಿದ್ದರು. ಕೆರೆಕೋಡಿಯ ಬಳಿ ಮತ್ತೊಂದು ಶಾಸನವಿದೆ. ಇದು 'ಹೊರಕೆದೇವಪುರದ ಲಕ್ಷ್ಮೀನರಸಿಂಹ ದೇವಸ್ಥಾನ'ಕ್ಕೆ ಭೂದಾನ ಮಾಡಿದ್ದರ ಬಗ್ಗೆ ತಿಳಿಸುತ್ತದೆ. ಕ್ರಿ.ಶ. ೧೫೭ ರಲ್ಲಿ, ೭ ಸಾಲುಗಳ ಈ ಚಿಕ್ಕ ಶಾಸನದಲ್ಲಿ ಬಹುಧಾನ್ಯ ಸಂವತ್ಸರದ, ಭಾದ್ರಪದ ಒಂದರಲ್ಲಿ ಹೊರಕೆ ದೇವಪುರದ ಲಕ್ಷ್ಮೀನರಸಿಂಹ ದೇವರ ನೈವೇದ್ಯಕ್ಕೆ' ಕೋಡಿಹಳ್ಳಿಗ್ರಾಮ'ವನ್ನು 'ಸಂತೆಬೆನ್ನೂರ ಹನುಮಂತನಾಯಕ'ನ ಶ್ರೇಯಸ್ಸಿಗಾಗಿ 'ಬಾಲಿನಾಯಕ'ನೆಂಬಾತನು ದಾನನೀಡಿದನೆಂಬ ದಾಖಲಿಸಿದ್ದಾರೆ.
 
==ಎರಡನೆಯ ಶಾಸನ==
ಮತ್ತೊಂದು ಶಾಸನ ಇದೇಗ್ರಾಮದ 'ವೀರಭದ್ರ ದೇವಸ್ಥಾನದ ಇಂಜಾಮಿನ ಮೂಲೆ'ಯಲ್ಲಿ ಲಭ್ಯವಾಗಿತ್ತು. ಆದರೆ ಇದು ತೃಟಿಗೊಂಡಿದ್ದು ಈಗ ; ಅಭ್ಯವಿಲ್ಲ. ಆದರೆ ಚಿತ್ರದುರ್ಗದ ಶಾಸನ ಸಂಪುಟದಲ್ಲಿ ೬ ಸಾಲಿನ ಶಾನಸನದಲ್ಲಿ ದಾಖಲಿಸಲಾದ ಪಂಕ್ತಿಗಳು ಹೀಗಿವೆ. ’[[ಸಾಧಾರಣ ಸಂವತ್ಸರದ ಜ್ಯೇಷ್ಠ ಬಹುಳ ೪]], [[ಮಂಗಳವಾರ...(ಕಾಮಗೇತಿ) ಕಸ್ತೂರಿ ಬರಮಣ್ಣ ನಾಯಕರು]], [[ಮದಕರಿ ನಾಯಕರು]], [[ಬಾಗೂಹಾರಲಿ ಬಸ]]'.. ಎಂದು ಮಾತ್ರ ಕಾಣಿಸುತ್ತದೆ, ಬಾಕಿ ವಿಷಯಗಳು ಛಿದ್ರವಾಗಿವೆ. ಚಿತ್ರದುರ್ಗ ನಾಯಕರ ಆಡಳಿತದಲ್ಲಿದ್ದಿತು ಎಂದು ನಿಸ್ಸಂಶಯವಾಗಿ ಹೇಳಬಹುದು. 'ದ್ರಾವಿಡ ಶೈಲಿ', 'ಮಿಶ್ರಿತ ಪ್ರಾದೇಶಿಕ ಶೈಲಿ'ಯಲ್ಲಿದೆ. 'ವಿಜಯ ನಗರದ ಸಾಮ್ರಾಜ್ಯ'ದ ಅವನತಿಯ ಸಮಯ ಇಲ್ಲವೇ ಪಾಳೇಗಾರರ ಕಾಲದಲ್ಲಿ 'ಕಣಶಿಲೆ'ಯನ್ನು ಬಳಸಿ ಗ್ರಾನೈಟ್, ಇಟ್ಟಿಗೆ ಗಾರೆಗಳ ಬಳಕೆಯಾಗಿದೆ.
 
==ತಳ ವಿನ್ಯಾಸ==
ಗರ್ಭಗೃಹ ಮತ್ತು ಅದಕ್ಕೆ ಹೊಂದಿದಂತಹ ಅಂತರಾಳ ಮತ್ತು ರಂಗಮಂಟಪಗಳನ್ನು ಹೊಂದಿದೆ. ತಳವಿನ್ಯಾಸ ಸಾಮಾನ್ಯ ಮಾದರಿಯಲ್ಲಿದೆ. ಹತ್ತಿರದ ಹಾಲುರಾಮೇಷ್ವರ ಮಟ್ಟಿಯಿಂದ ಮೂರ್ತಿಯನ್ನು ಕೆತ್ತನೆಮಾಡಿ ತರಲಾಗಿದೆ. ರಂಗಮಂಟವು ೪ ಬೃಹತ್ ಗಾತ್ರದ ಕಂಬಗಳನ್ನು ಹೊಂದಿದೆ. ಕಂಬಗಳ ಕಾಂಡ ಭಾಗವು ಚಚ್ಚೌಕಾರವಾಗಿದೆ. ಹಾಗೂ 'ನಾಗಬಂಧ'ಗಳನ್ನು ಒಳಗೊಂಡಿದೆ. ಕಂಬಗಳು ಅನೇಕ ಉಬ್ಬುಶಿಲ್ಪಗಳಿಂದ ಅಲಂಕೃತವಾಗಿದೆ. ’ಬೋದಿಗೆಗಳು’ ಇಳಿಬಿದ್ದ ಬಾಳೆಗೊನೆಯಂತಿವೆ. ಕಂಬಗಳ ಮೇಲೆ ಶಿವಲಿಂಗ, ಪಾರ್ವತಿ, ವೀರಭದ್ರ, ದ್ವಾರಪಾಲಕರು, ಗರುಡ, ನಂದಿ, ವಟಪತ್ರಶಾಹಿಕೃಣ, ಈಹಾಂ ಮೃಗ,ಶಿವಲಿಂಗವನ್ನು ಪೂಜಿಸುತ್ತಿರುವ ಕೆತ್ತನೆಗಳಿವೆ. ಮೆಟ್ಟಿಲುಗಳ ಬದಿಯಲ್ಲಿ ಸುರುಳಿಯಾಳಿಯ ಕೆತ್ತನೆಯು ಇದೆ.
 
==’ಲಜ್ಜಾ ಗೌರಿ'==
ದೇವಾಲಯದ ಹೊರಭಾಗ ಸಾಧಾರಣ. ತಳಭಾಗದ ಆದಿಷ್ಠಾನವು ಚಚ್ಚೌಕಾರದ ಅಲಂಕಾರವಿಲ್ಲದ ಮೌಲ್ಡ್ ಗಳಿಂದ ಸೇರಿಸಲ್ಪಟ್ಟಿದೆ. ಭಿತ್ತಿಯ ಭಾಗಗಳು ಸಾಧಾರಣ. ಚಜ್ಜದ ಭಾಗ ಇಳಿಜಾರಾಗಿದೆ. ದೇವಾಲಯದ ಹೊರಭಾಗದಲ್ಲಿ ಉಬ್ಬುಶಿಲ್ಪದಲ್ಲಿ 'ನಗ್ನ ಹೆಣ್ಣೊಬ್ಬಳು' ತಾನೆ ಹೆರಿಗೆ ಮಾಡಿಕೊಳ್ಳುತ್ತಿರುವ, ’ಲಜ್ಜಾಗೌರಿ' ವಿಗ್ರಹವಿದೆ. ಹಿಂದೆ ಇಲ್ಲಿನ ಮನೆಗಳಲ್ಲಿ ಹೆರಿಗೆ ಸಂಕಷ್ಟದಲ್ಲಿರುವವರಿಗೆ ಈ ವಿಗ್ರಹವನ್ನು ಪೂಜಿಸಿ ಅದರ ಮೇಲಿನ ನೀರನ್ನು ಕುಡಿಸಿದರೆ ಹೆರಿಗೆ ಸುಲಭವಾಗಿ ಆಗುವುದೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಮೇಲಿನ ಗೋಪುರ, ಅಥವಾ ವಿಮಾನವು ಗಚ್ಚುಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂರ್ತಿ ಶಿಲ್ಪಗಳಿವೆ. ವಿಮಾನ ಮಧ್ಯಭಾಗದಲ್ಲಿ ಎರಡು ಹಂತಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳ ಮಾದರಿಯ ಗೂಡುಗಳಿವೆ. ತನ್ನದೇ ಆದ ವಿಶಿಷ್ಟ ಲಕ್ಷಣಳ ಜೊತೆಗೆ ಹೊಂದಿಸಿರುವ, ಪ್ರಾದೇಶಿಕ ಶೈಲಿಗೆ ಇದೊಂದು ಅತ್ಯುತ್ತಮ ಉದಾಹರಣೆ.