ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೪ ನೇ ಸಾಲು:
==ಜನನ, ಬಾಲ್ಯ, ವಿದ್ಯಾಭ್ಯಾಸ==
'[[ನಾವಲ್ ಹರ್ಮುಸ್ ಜಿ ಟಾಟಾ]]' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್ ಟಾಟಾ]]ರವರು. [[ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯ]]ದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, [[ಸರ್. ರತನ್ ಟಾಟಾ]]ರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ [[ಇಂಗ್ಲೆಂಡ್]] ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,[[ಲೇಡಿ ನವಾಜ್ ಬಾಯಿ]]ಯವರು, [[ನಾವಲ್ ಹರ್ಮುಸ್ ಜಿ]] ಯವರನ್ನು ದತ್ತುತೆಗೆದುಕೊಂಡರು. ಬೊಂಬಾಯಿ ವಿಶ್ವವಿದ್ಯಾಲಯದಿಂದ ಎಕೊನಾಮಿಕ್ಸ್ ನಲ್ಲಿ ಪದವಿಗಳಿಸಿದ ಬಳಿಕ ಇಂಗ್ಲೆಂಡ್ ಗೆ ಹೋಗಿ ಅಕೌಂಟಿಂಗ್ ನಲ್ಲಿ ಪ್ರಶಿಕ್ಷಣ ಪಡೆದರು. ಸನ್, ೧೯೩೦ ರಲ್ಲಿ '[[ಟಾಟ ಸಂಸ್ಥೆಗೆ ಪಾದಾರ್ಪಣೆ]]'ಮಾಡಿದರು. 'ಕಾಗದ-ಪತ್ರ ವಿಲೇವಾರಿ ಕಾರಕೂನ'ನಾಗಿ, ೧೩೦ ರೂಪಾಯಿಗಳ ವೇತತದಿಂದ ಪ್ರಾರಂಭಿಸಿದ ನಾವಲ್ ಟಾಟರವರು,
ತಮ್ಮ ಶ್ರದ್ಧೆ, ಪರಿಶ್ರಮ ಹಾಗೂ ಪ್ರಾಮಾಣಿಕತೆಗಳಿಂದಾಗಿ, ಸ್ವಲ್ಪ ಸಮಯದಲ್ಲೇ ’[[ಟಾಟ ಟೆಕ್ಸ್ ಟೈಲ್ ಮಿಲ್ಸ್]]’, ಮತ್ತು ೩ [[ಟಾಟ ಎಲೆಕ್ಟ್ರಿಕ್ ಪವರ್ ಕಂಪೆನಿ]]ಗಳ ಛೇರ್ಮನ್ ಆಗಿ ನಿಯುಕ್ತರಾದರು. ಕಾರ್ಮಿಕರ ಸಂಘಟನೆ ಹಾಗೂ ಅವರ ಒಳಿತಿಗೆ ಅನೇಕ ಉತ್ತಮ ಕೆಲಸಗಳನ್ನು ಕೈಗೊಂಡರು. ಅಂತಾರಾಷ್ಟ್ರೀಯ ಲೇಬರ್ ಯೂನಿಯನ್ ನ ಸದಸ್ಯರಾಗಿದ್ದ ಅವರು, ಅಂತಾರಾಷ್ಟ್ರೀಯ ಸಮಾಲೋಚನೆಗಳಲ್ಲಿ ಭಾರತದ ಶ್ರಮಿಕರ ಅಹವಾಲುಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರು. ಅಂತಾರಾಷ್ಟ್ರೀಯ ಗಿರಣಿಮಾಲೀಕರ ಸಂಸ್ಥೆಗೆ ಉಪಾಧ್ಯಕ್ಷರಾಗಿ ದುಡಿದರು.
* ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
==ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ==
ಮೊದಲನೆಯ ಹೆಂಡತಿ, [[ಸೂನಿ ಕಮಿಸಾರಿಯೆಟ್]] ಗೆ, [[ರತನ್]] ಹಾಗೂ [[ಜಿಮ್ಮಿ]] ಗಂಡು ಮಕ್ಕಳು. ಎರಡನೆಯ ಪತ್ನಿ, [[ಸಿಮೋನ್]] ರವರಿಗೆ, ಒಬ್ಬ ಮಗ, ’[[ನೋಯೆಲ್]].’ ೧೯೬೫ ರಲ್ಲಿ ’[[ಸರ್ ರತನ್ ಟಾಟ ಟ್ರಸ್ಟ್]]’ ಗೆ ಛೇರ್ಮನ್ ಆಗಿ, ೧೯೫೧ ನಲ್ಲಿ [[ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಚೇರ್ಮನ್]], ಜನರ ಕಷ್ಟಗಳನ್ನು ಸಮಚಿತ್ತದಿಂದ ಕೇಳಿ ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಅವರ ಸಹಾಯಕ್ಕಾಗಿ ಬರುವವರ ಸಂಖ್ಯೆ ಹೆಚ್ಚಿತ್ತು. ಭಾರತದಲ್ಲಿ ಕ್ರೀಡೆಗಳಿಗೆ ಅತಿಯಾದ ಪ್ರೋತ್ಸಹಕೊಟ್ಟು ಯುವಕರನ್ನು ಸಜ್ಜುಗೊಳಿಸುವಲ್ಲಿ ನೆರವಾದರು. ಭಾರತದ [[ಇಂಡಿಯನ್ ಕೌನ್ಸಿಲ್ ಆಫ್ ಸ್ಪೋರ್ಟ್ಸ್]] ಗೆ ಪ್ರಥಮ ಅಧ್ಯಕ್ಷರಾದರು. ಅವರ ನೆರವಿನಿಂದಾಗಿ ಹಾಕಿ ಆಟವನ್ನು ರಾತ್ರಿಯಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಆಡುವಂತಾಯಿತು. ೧೯೫೮ ಪ್ರಥಮಬಾರಿಗೆ, ಅವರ ಸಹಾಯ ಹಾಗೂ ಪ್ರೋತ್ಸಾಹದಿಂದಲೇ ಭಾರತ, ಲಂಡನ್ (೧೯೪೮), ಹೆಲ್ಸಿಂಕಿ, (೧೯೫೨), ಮತ್ತು ಮೆಲ್ಬೋರ್ನ್ 'ಒಲಂಪಿಕ್ ಕ್ರೀಡೆ'ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ನೆರವಾಯಿತು.
|