ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
==ಜನನ, ಬಾಲ್ಯ, ವಿದ್ಯಾಭ್ಯಾಸ==
'[[ನಾವಲ್ ಹರ್ಮುಸ್ ಜಿ ಟಾಟಾ]]' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್ ಟಾಟಾ]]ರವರು. [[ಜೆ.ಎನ್.ಪೆಟಿಟ್ ಪಾರ್ಸಿ ಅನಾಥಾಲಯ]]ದಲ್ಲಿ, ಭರ್ತಿಮಾಡಿದರು. ಸನ್, ೧೯೧೮ ರಲ್ಲಿ, [[ಸರ್. ರತನ್ ಟಾಟಾ]]ರವರು, ತಮ್ಮ ೪೭ ನೇ ವಯಸ್ಸಿನಲ್ಲಿ ಅಚಾನಕ್ [[ಇಂಗ್ಲೆಂಡ್]] ನಲ್ಲಿ ನಿಧನರಾದರು. ಅವರ 'ಅಂತ್ಯಕ್ರಿಯೆ'ಗಳನ್ನು ಮಾಡುವ ಗಂಡುಸಂತಾನವಿಲ್ಲದೆ,[[ಲೇಡಿ ನವಾಜ್ ಬಾಯಿ]]ಯವರು, [[ನಾವಲ್ ಹರ್ಮುಸ್ ಜಿ]] ಯವರನ್ನು ದತ್ತುತೆಗೆದುಕೊಂಡರು. ಬೊಂಬಾಯಿ ವಿಶ್ವವಿದ್ಯಾಲಯದಿಂದ ಎಕೊನಾಮಿಕ್ಸ್ ನಲ್ಲಿ ಪದವಿಗಳಿಸಿದ ಬಳಿಕ ಇಂಗ್ಲೆಂಡ್ ಗೆ ಹೋಗಿ ಅಕೌಂಟಿಂಗ್ ನಲ್ಲಿ ಪ್ರಶಿಕ್ಷಣ ಪಡೆದರು. ಸನ್, ೧೯೩೦ ರಲ್ಲಿ '[[ಟಾಟ ಸಂಸ್ಥೆಗೆ ಪಾದಾರ್ಪಣೆ]]'ಮಾಡಿದರು. 'ಕಾಗದ-ಪತ್ರ ವಿಲೇವಾರಿ ಕಾರಕೂನ'ನಾಗಿ, ೧೩೦ ರೂಪಾಯಿಗಳ ವೇತತದಿಂದ ಪ್ರಾರಂಭಿಸಿದ ನಾವಲ್ ಟಾಟರವರು,
ತಮ್ಮ ಶ್ರದ್ಧೆ, ಪರಿಶ್ರಮ ಹಾಗೂ ಪ್ರಾಮಾಣಿಕತೆಗಳಿಂದಾಗಿ, ಸ್ವಲ್ಪ ಸಮಯದಲ್ಲೇ ’[[ಟಾಟ ಟೆಕ್ಸ್ ಟೈಲ್ ಮಿಲ್ಸ್]]’, ಮತ್ತು ೩ [[ಟಾಟ ಎಲೆಕ್ಟ್ರಿಕ್ ಪವರ್ ಕಂಪೆನಿ]]ಗಳ ಛೇರ್ಮನ್ ಆಗಿ ನಿಯುಕ್ತರಾದರು. ಕಾರ್ಮಿಕರ ಸಂಘಟನೆ ಹಾಗೂ ಅವರ ಒಳಿತಿಗೆ ಅನೇಕ ಉತ್ತಮ ಕೆಲಸಗಳನ್ನು ಕೈಗೊಂಡರು. ಅಂತಾರಾಷ್ಟ್ರೀಯ ಲೇಬರ್ ಯೂನಿಯನ್ ನ ಸದಸ್ಯರಾಗಿದ್ದ ಅವರು, ಅಂತಾರಾಷ್ಟ್ರೀಯ ಸಮಾಲೋಚನೆಗಳಲ್ಲಿ ಭಾರತದ ಶ್ರಮಿಕರ ಅಹವಾಲುಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರು. ಅಂತಾರಾಷ್ಟ್ರೀಯ ಗಿರಣಿಮಾಲೀಕರ ಸಂಸ್ಥೆಗೆ ಉಪಾಧ್ಯಕ್ಷರಾಗಿ ದುಡಿದರು.ಅಂತಾರಾಷ್ಟ್ರೀಯ ಗಳಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಮಂಡಳಿಯ ಆಡಳಿತ ಸಮಿತಿಯಲ್ಲಿದ್ದ ನಾವಲ್ ಟಾಟರವರು, ಕಾರ್ಮಿಕರ ಮತ್ತು ಗಿರಣಿ ಮಾಲೀಕರ ನಡುವಿನ ಭಿನ್ನಾಭಿಪ್ರಾಯಗಳು ಹಾಗೂ ಸಮಸ್ಯೆಗಳನ್ನು ಬಗೆಹರಿಸಿದ್ದರಿಂದ ಅನೇಕ ಪ್ರಶಸ್ತಿಗಳಿಗೆ ಭಾಜನರಾದರು. ಅವುಗಳಲ್ಲಿ ಮುಖ್ಯವಾದವುಗಳು :
* ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
 
==ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ==
ಮೊದಲನೆಯ ಹೆಂಡತಿ, [[ಸೂನಿ ಕಮಿಸಾರಿಯೆಟ್]] ಗೆ, [[ರತನ್]] ಹಾಗೂ [[ಜಿಮ್ಮಿ]] ಗಂಡು ಮಕ್ಕಳು. ಎರಡನೆಯ ಪತ್ನಿ, [[ಸಿಮೋನ್]] ರವರಿಗೆ, ಒಬ್ಬ ಮಗ, ’[[ನೋಯೆಲ್]].’ ೧೯೬೫ ರಲ್ಲಿ ’[[ಸರ್ ರತನ್ ಟಾಟ ಟ್ರಸ್ಟ್]]’ ಗೆ ಛೇರ್ಮನ್ ಆಗಿ, ೧೯೫೧ ನಲ್ಲಿ [[ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಚೇರ್ಮನ್]], ಜನರ ಕಷ್ಟಗಳನ್ನು ಸಮಚಿತ್ತದಿಂದ ಕೇಳಿ ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಅವರ ಸಹಾಯಕ್ಕಾಗಿ ಬರುವವರ ಸಂಖ್ಯೆ ಹೆಚ್ಚಿತ್ತು. ಭಾರತದಲ್ಲಿ ಕ್ರೀಡೆಗಳಿಗೆ ಅತಿಯಾದ ಪ್ರೋತ್ಸಹಕೊಟ್ಟು ಯುವಕರನ್ನು ಸಜ್ಜುಗೊಳಿಸುವಲ್ಲಿ ನೆರವಾದರು. ಭಾರತದ [[ಇಂಡಿಯನ್ ಕೌನ್ಸಿಲ್ ಆಫ್ ಸ್ಪೋರ್ಟ್ಸ್]] ಗೆ ಪ್ರಥಮ ಅಧ್ಯಕ್ಷರಾದರು. ಅವರ ನೆರವಿನಿಂದಾಗಿ ಹಾಕಿ ಆಟವನ್ನು ರಾತ್ರಿಯಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಆಡುವಂತಾಯಿತು. ೧೯೫೮ ಪ್ರಥಮಬಾರಿಗೆ, ಅವರ ಸಹಾಯ ಹಾಗೂ ಪ್ರೋತ್ಸಾಹದಿಂದಲೇ ಭಾರತ, ಲಂಡನ್ (೧೯೪೮), ಹೆಲ್ಸಿಂಕಿ, (೧೯೫೨), ಮತ್ತು ಮೆಲ್ಬೋರ್ನ್ 'ಒಲಂಪಿಕ್ ಕ್ರೀಡೆ'ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ನೆರವಾಯಿತು.