ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Haldodderi (ಚರ್ಚೆ | ಕಾಣಿಕೆಗಳು) No edit summary |
Haldodderi (ಚರ್ಚೆ | ಕಾಣಿಕೆಗಳು) No edit summary |
||
೯ ನೇ ಸಾಲು:
'''ಸಂಯುಕ್ತ ಕರ್ನಾಟಕ''' [[ಹುಬ್ಬಳ್ಳಿ]] ಮತ್ತು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿರುವ ಪ್ರಮುಖ ಕನ್ನಡ ದಿನಪತ್ರಿಕೆ.
[[ಕರ್ಮವೀರ]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. [[ದತ್ತೋಪಂತ ಬೆಳವಿ]],[[ನಾರಾಯಣರಾವ್ ಜೋಷಿ]],[[ದಾತಾರ ಬಳವಂತರಾವ್]],[[ಗೋಖಲೆ ಕೇಶವರಾವ್]] ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ [[ಬಾಗಲಕೋಟೆ]]ಯ [[ಕನ್ನಡಿಗ]], [[ಬೆಳಗಾವಿ]]ಯ [[ಅರುಣೋದಯ]] ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ [[ಹುಬ್ಬಳ್ಳಿ]]ಯಿಂದ [[ವಿ.ಬಿ.ಪುರಾಣಿಕ]]ರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ [[ಲೋಕಮತ]]. [[ನಾರಾಯಣರಾವ್ ಕಲ್ಲೆ]], ಮಾಜಿ ಮಂತ್ರಿ [[ಕಲ್ಲನಗೌಡ ಪಾಟೀಲ]]ರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಇದನ್ನು ಕಂಡು [[ಬೆಳಗಾವಿ]]ಯಿಂದ ಪ್ರಕಟವಾಗುತ್ತಿದ್ದ [[ಸಂಯುಕ್ತ ಕರ್ನಾಟಕ]]ವು ಹುಬ್ಬಳ್ಳಿಗೆ ಬಂತು. [[ರಂಗನಾಥ ದಿವಾಕರ]] ಧರ್ಮದರ್ಶಿತ್ವದಲ್ಲಿ, [[ಮೊಹರೆ ಹಣಮಂತರಾಯ]]ರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ
`[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ೧೯೫೯ರ ಜನವರಿ ೨೬ರಂದು [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಆವೃತ್ತಿಯ ಆರಂಭಕ್ಕೂ ಮುನ್ನ ೧೯೫೮ರ ಸೆಪ್ಟಂಬರ್ ೧ರಿಂದಲೇ ನೇಮಕಗೊಂಡ ಹಿರಿಯ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ ಹುಬ್ಬಳ್ಳಿ ಕಚೇರಿಯಿಂದ ವರ್ಗವಾದ [[ಕೆ.ಶಾಮರಾವ್]] ಹಾಗೂ [[ಸುರೇಂದ್ರ ಬಿ.ದಾನಿ]] ಮತ್ತು ‘[[ತಾಯಿನಾಡು]]’ ಪತ್ರಿಕೆಯಿಂದ ಬಂದ [[ಹೆಚ್.ಆರ್.ನಾಗೇಶರಾವ್]]. ಆವೃತ್ತಿಯ ಮುಖ್ಯಸ್ಥರಾಗಿ ಸಹಾಯಕ ಸಂಪಾದಕರ ಸ್ಥಾನದಲ್ಲಿದ್ದವರು ‘ಗ್ರಾಮಾಯಣ’ ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] (ಆರ್.ಬಿ.ಕುಲಕರ್ಣಿ). ‘[[ಪ್ರಜಾವಾಣಿ]]’ಯಿಂದ ಬಂದಿದ್ದ [[ಖಾದ್ರಿ ಶಾಮಣ್ಣ]] ಕೆಲಕಾಲ ಸುದ್ದಿ ಸಂಪಾದಕರಾಗಿದ್ದರು. ಇದೇ ಸಮಯದಲ್ಲಿ ‘ತಾಯಿನಾಡು’ ಪತ್ರಿಕೆಯ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]], ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]], ಕಥೆಗಾರ ‘[[ಭಾರತೀಪ್ರಿಯ]]’ (ಎಸ್.ವೆಂಕಟರಾವ್), ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]], ಅದೇ ತಾನೆ ವೃತ್ತಿಜೀವನ ಆರಂಭಿಸಿದ್ದ [[ನರಸಿಂಹ ಜೋಶಿ]] ಮತ್ತಿತರರು ‘[[ಸಂಯುಕ್ತ ಕರ್ನಾಟಕ]]’ದ ಬೆಂಗಳೂರು ಆವೃತ್ತಿಗೆ ಸೇರ್ಪಡೆಯಾಗಿ ಪತ್ರಿಕೆಯನ್ನು ಬೆಳೆಸಿದರು.
|