ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೦ ನೇ ಸಾಲು:
 
`[[ಸಂಯುಕ್ತ ಕರ್ನಾಟಕ]]' ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ೧೯೫೯ರ ಜನವರಿ ೨೬ರಂದು [[ಜಯಚಾಮರಾಜೆಂದ್ರ ಒಡೆಯರ್]] ಅವರು ಉದ್ಘಾಟಿಸಿದರು. ಆವೃತ್ತಿಯ ಆರಂಭಕ್ಕೂ ಮುನ್ನ ೧೯೫೮ರ ಸೆಪ್ಟಂಬರ್ ೧ರಿಂದಲೇ ನೇಮಕಗೊಂಡ ಹಿರಿಯ ಪತ್ರಕರ್ತರಲ್ಲಿ ಪ್ರಮುಖರಾದವರೆಂದರೆ ಹುಬ್ಬಳ್ಳಿ ಕಚೇರಿಯಿಂದ ವರ್ಗವಾದ [[ಕೆ.ಶಾಮರಾವ್]] ಹಾಗೂ [[ಸುರೇಂದ್ರ ಬಿ.ದಾನಿ]] ಮತ್ತು ‘[[ತಾಯಿನಾಡು]]’ ಪತ್ರಿಕೆಯಿಂದ ಬಂದ [[ಹೆಚ್.ಆರ್.ನಾಗೇಶರಾವ್]]. ಆವೃತ್ತಿಯ ಮುಖ್ಯಸ್ಥರಾಗಿ ಸಹಾಯಕ ಸಂಪಾದಕರ ಸ್ಥಾನದಲ್ಲಿದ್ದವರು ‘ಗ್ರಾಮಾಯಣ’ ಖ್ಯಾತಿಯ ಸಾಹಿತಿ [[ರಾವಬಹಾದ್ದೂರ]] (ಆರ್.ಬಿ.ಕುಲಕರ್ಣಿ). ‘[[ಪ್ರಜಾವಾಣಿ]]’ಯಿಂದ ಬಂದಿದ್ದ [[ಖಾದ್ರಿ ಶಾಮಣ್ಣ]] ಕೆಲಕಾಲ ಸುದ್ದಿ ಸಂಪಾದಕರಾಗಿದ್ದರು. ಇದೇ ಸಮಯದಲ್ಲಿ ‘ತಾಯಿನಾಡು’ ಪತ್ರಿಕೆಯ [[ಕೆ.ಅನಂತಸುಬ್ಬರಾವ್]] ಹಾಗೂ [[ಎಸ್.ವ್ಯಾಸರಾವ್]], ‘[[ಜನಪ್ರಗತಿ]]’ ಸಂಪಾದಕರಾಗಿದ್ದ [[ಬಿ.ಶ್ರೀನಿವಾಸಮೂರ್ತಿ]], ಕಥೆಗಾರ ‘[[ಭಾರತೀಪ್ರಿಯ]]’ (ಎಸ್.ವೆಂಕಟರಾವ್), ಕವಿ [[ಅರ್ಚಕ ವೆಂಕಟೇಶ]], ಯುವ ಬರಹಗಾರ [[ಮತ್ತೂರು ಕೃಷ್ಣಮೂರ್ತಿ]], ಅದೇ ತಾನೆ ವೃತ್ತಿಜೀವನ ಆರಂಭಿಸಿದ್ದ [[ನರಸಿಂಹ ಜೋಶಿ]] ಮತ್ತಿತರರು ‘[[ಸಂಯುಕ್ತ ಕರ್ನಾಟಕ]]’ದ ಬೆಂಗಳೂರು ಆವೃತ್ತಿಗೆ ಸೇರ್ಪಡೆಯಾಗಿ ಪತ್ರಿಕೆಯನ್ನು ಬೆಳೆಸಿದರು.
 
ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ತರಬೇತಿ ಪಡೆದು ಮುಂದೆ ವಿವಿಧ ಪತ್ರಿಕೆಗಳಲ್ಲಿ ಉನ್ನತ ಸ್ಥಾನ ಪಡೆದವರ ಪಟ್ಟಿ ಇಂತಿದೆ.
 
೧. [[ಪಿ.ರಾಮಣ್ಣ]] - [[ಕಿಡಿ ಶೇಷಪ್ಪ]]ನವರ ತಮ್ಮ, [[ಪ್ರಜಾವಾಣಿ]] ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ
 
೨. [[ಜಿ.ಎನ್.ರಂಗನಾಥರಾವ್]] - ಸಾಹಿತಿ, ಅನುವಾದಕ, ಪತ್ರಿಕೋದ್ಯಮ ವಿಷಯ ಬೋಧಕ, [[ಪ್ರಜಾವಾಣಿ]] ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ
 
೩. [[ಖಾದ್ರಿ ಎಸ್.ಅಚ್ಯುತನ್]] - [[ಖಾದ್ರಿ ಶಾಮಣ್ಣ]]ನವರ ತಮ್ಮ, ನಿವೃತ್ತ ಸುದ್ದಿ ಸಂಪಾದಕರು [[ದೂರದರ್ಶನ ಕೇಂದ್ರ]], [[ಬೆಂಗಳೂರು]]
 
೪. [[ವಿ.ಆರ್.ಶ್ಯಾಮ್]] - `[[ಇಂದಿರಾತನಯ]]' ಕಾವ್ಯನಾಮದ ಕಾದಂಬರಿಕಾರ, [[ಪ್ರಜಾವಾಣಿ]] ಪತ್ರಿಕೆಯ ಪುರವಣಿ ಸಂಪಾದಕರಾಗಿ ನಿವೃತ್ತ
 
೫. [[ಸೂ.ರಮಾಕಾಂತ]] - [[ಕನ್ನಡಪ್ರಭ]] ಹಾಗೂ [[ವಿಜಯ ಕರ್ನಾಟಕ]] ಪತ್ರಿಕೆಗಳನ್ನು ಆರಂಭದ ದಿನಗಳಲ್ಲಿ ರೂಪಿಸುವಲ್ಲಿ ಶ್ರಮಿಸಿದ ಹಿರಿಯ ಪತ್ರಕರ್ತರು
 
೬. [[ಕೆ.ಎಸ್.ನಾಗಭೂಷಣಂ]] - [[ಪದಬಂಧ]]ಗಳನ್ನು ಕನ್ನಡ ದಿನಪತ್ರಿಕೆಗಳಲ್ಲಿ ಜನಪ್ರಿಯಗೊಳಿಸಿದವರು, [[ಪ್ರಜಾವಾಣಿ]]ಯ ನಿವೃತ್ತ ಸುದ್ದಿ ಸಂಪಾದಕ
 
೭. [[ಎಸ್.ದಿವಾಕರ್]] - ಸಣ್ಣ ಕತೆಗಳ ಸಾಹಿತಿ, ಅನುವಾದಕ, [[ಸುಧಾ]] ಮತ್ತು [[ಪ್ರಜಾವಾಣಿ]] ಪತ್ರಿಕೆಗಳ ಫೀಚರ್ಸ್ ಎಡಿಟರ್ ಆಗಿ ನಿವೃತ್ತ
 
೮. [[ಜಿ.ಎಸ್.ಸದಾಶಿವ]] - ಕತೆಗಾರ, [[ಮಯೂರ]] ಮಾಸಪತ್ರಿಕೆಯ ಮಾಜಿ ಸಂಪಾದಕರು, [[ಕನ್ನಡಪ್ರಭ]] ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ (ಫೀಚರ್ಸ್)
 
==ಕೆಳಗಿನ ವಿಷಯಗಳನ್ನೂ ನೋಡಿ==
Line ೧೮ ⟶ ೩೬:
 
[[Category: ಕನ್ನಡ ದಿನಪತ್ರಿಕೆಗಳು]]
 
[[ವರ್ಗ:ಪತ್ರಕರ್ತರು|ಹೆಚ್.ಆರ್.ನಾಗೇಶರಾವ್]]
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ