ರಮಣ ಮಹರ್ಷಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Frankessay (ಚರ್ಚೆ | ಕಾಣಿಕೆಗಳು) No edit summary |
Frankessay (ಚರ್ಚೆ | ಕಾಣಿಕೆಗಳು) No edit summary |
||
೧೮ ನೇ ಸಾಲು:
== '''ಬೋಧನೆ''' ==
ಶ್ರೀ ರಮಣರು ಆತ್ಮ ವಿಚಾರವನ್ನು, ಅಂದರೆ, 'ನಾನು ಯಾರು' ಎಂಬ ಆತ್ಮಾನ್ವೇಷಣಾ ವಿಧಾನವನ್ನು ಆತ್ಮ ಜ್ಙಾನ ಪ್ರಾಪ್ತಿಗೆ ಮುಖ್ಯ ಸಾಧನವೆಂದು ಬೋಧಿಸುವರು
"...ನನ್ನ ಸೋದರಮಾವನ ಮನೆಯ ಮೊದಲನೆಯ ಮಾಳಿಗೆಯ ಒಂದು ಕೋಣೆಯಲ್ಲಿ ಹಾಗೆಯೇ ಕುಳಿತಿದ್ದೆ. ನಾನು ಅಪರೂಪಕ್ಕೆಲ್ಲೋ ಜ್ವರಕ್ಕೀಡಾಗುತ್ತಿದ್ದೆ, ಅಂದಂತೂ ನನ್ನ ಆರೋಗ್ಯದಲ್ಲಿ ಏನೇನೂ ತೊಂದರೆಯಿರಲಿಲ್ಲ. ಆದರೆ ಹಟಾತ್ತನೆ ಸಾವಿನ ಭಯ ನನ್ನನ್ನಾವರಿಸಿತು. ನನ್ನ ಆರೋಗ್ಯದಲ್ಲಿ ಇದಕ್ಕಾಗಿ ಅದಾವುದೇ ಕಾರಣವಿರಲಿಲ್ಲ, ಅಲ್ಲದೆ ಭಯಗ್ರಸ್ತನಾಗಲು ಕಾರಣವೇನಾದರೂ ಇರಬಹುದೆ ಎಂದು ಪರೀಕ್ಷಿಸಲೂ ನನ್ನಲ್ಲಿ ಸಂಕಲ್ಪವೇಳಲಿಲ್ಲ. ನಾನು ಸಾವಿಗೀಡಾಗುತ್ತಿದ್ದೇನೆಂದು ಅನಿಸಿತು ಮತ್ತು ಅದರ ವಿಷಯವಾಗಿ ಏನು ಮಾಡಬೇಕೆಂದು ಆಲೋಚಿಸತೊಡಗಿದೆ ... ಮರಣ ಭೀತಿಯ ಅಘಾತ ನನ್ನ ಮನಸ್ಸನ್ನು ಅಂತರ್ಮುಖಿಯಾಗುವಂತೆ ಮಾಡಿತು. ಯಾವುದೇ ಪದಗಳನ್ನುಪಯೋಗಿಸದೆ ನನಗೇ ನಾನು ಮಾನಸಿಕವಾಗಿ ಈ ರೀತಿ ಹೇಳಿಕೊಂಡೆ: 'ಈಗ ಸಾವು ಬಂದಿದೆ. ಹಾಗೆಂದರೇನು? ಸಾಯುತ್ತಿರುವುದು ಯಾವುದು? ಈ ದೇಹ ಸಾಯುತ್ತದೆ'. ತತ್ ಕ್ಷಣವೇ ನಾವು ಸಾವಿನ ಆಗುವಿಕೆಯನ್ನು ನಟಿಸಿದೆ. ದೇಹವು ಸೆಟೆದು ಕೊಂಡಿದೆಯೋ ಎಂಬಂತೆ ನಾನು ನನ್ನ ಕಾಲುಗಳನ್ನು ಚಾಚಿ ಅಲುಗಾಡದಂತಿದ್ದೆ, ಈ ವಿಚಾರಕ್ಕೆ ಹೆಚ್ಚು ವಾಸ್ತವ್ಯವನ್ನು ಕೊಡಲು ಶವವನ್ನು ಅನುಕರಿಸಿದೆ. ನನ್ನ ಉಸಿರನ್ನು ಹಿಡಿದುಕೊಂಡೆ, ತುಟಿಗಳನ್ನು ಬಿಗಿಯಾಗಿ ಯಾವುದೇ ಸದ್ದು ಬಾರದಂತೆ, ಅದು 'ನಾನು' ಎಂಬುದಾಗಲೀ ಅಥವಾ ಇನ್ನಾವುದೋ ಶಬ್ಧ ಆಗಲಿ ಬಾರದಂತೆ ಮುಚ್ಚಿಕೊಂಡೆ. ಆಗ ನನಗೇ ಹೇಳಿಕೊಂಡೆ: 'ಸರಿ ಹಾಗಾದರೆ, ಈ ದೇಹ ಸತ್ತುಹೋಗಿದೆ. ಸೆಟೆದುಕೊಂಡ ಹಾಗೆಯೇ ಅದನ್ನು ಕೊಂಡೊಯ್ದು ಸುಟ್ಟು ಭಸ್ಮ ಮಾಡಿಬಿಡುತ್ತಾರೆ. ಆದರೆ ಈ ದೇಹದ ಸಾವಿನಿಂದ ನಾನು ಸತ್ತೆನೇ? ಈ ದೇಹ 'ನಾನು' ಎಂಬುದೇ? ಅದು ಮೌನ ಮತ್ತು ಜಡ, ಆದರೆ ನಾನು ನನ್ನ ವ್ಯಕ್ತಿತ್ವದ ಸಂಪೂರ್ಣ ಶಕ್ತಿಯನ್ನು ಮತ್ತು ನನ್ನಲ್ಲಿನ 'ನಾನು' ಎಂಬ ಸ್ವರವೂ ಕೂಡ ಇದರಿಂದ ಬೇರೆ ಎಂಬ ಅನುಭವವನ್ನು ಪಡೆಯುತ್ತಿದ್ದೇನೆ, ಆದ್ದರಿಂದ ಈ ದೇಹವನ್ನು ಮೀರಿದ ಚೇತನ ನಾನು. ದೇಹ ಸಾಯುತ್ತದೆ, ಆದರೆ ಅದನ್ನು ಮೀರಿಸಿದ ಚೇತನವನ್ನು ಸಾವು ಮುಟ್ಟಲಾರದು. ಹಾಗೆಂದರೆ, ನಾನು ಸಾವಿಲ್ಲದ ಚೇತನ'. ಇದೆಲ್ಲವೂ ಮಂದ ಆಲೋಚನೆಗಳಲ್ಲ. ಅದು ನನ್ನಲ್ಲಿ ಆಲೋಚನೆಗಳೇ ಇಲ್ಲವೇನೋ ಎಂಬಂತೆ ಜೀವಂತ ಸತ್ಯಗಳಂತೆ ನನ್ನಲ್ಲಿ ಸುಸ್ಪಷ್ಟವಾಗಿ ಮಿಂಚಿ ಹಾದುಹೋಯಿತು. ನಾನು ಸತ್ಯವಾದುದಾವುದೋ ಆಗಿದ್ದೆ, ನನ್ನ ಪ್ರಸ್ತುತ ಸ್ಥಿತಿಯಲ್ಲಿನ ಒಂದೇ ಸತ್ಯತೆ ಯಾಗಿದ್ದೆ. ಮತ್ತು ದೇಹದೊಡನೆ ಪ್ರಜ್ಙಾಪೂರ್ವಕವಾಗಿ ಜೋಡಣೆಗೊಂಡಿದ್ದೆಲ್ಲವೂ ಆ 'ನಾನು' ಎಂಬುದರ ಮೇಲೆಯೇ ಕೇಂದ್ರೀಕೃತವಾಗಿತ್ತು. ಆ ಕ್ಷಣದ ನಂತರ, 'ನಾನು' ಅಥವಾ ಆತ್ಮವು, ಈ ಪ್ರಬಲ ವಿಸ್ಮಿತತೆಯಿಂದ ತನ್ನ ಮೇಲೆಯೇ ಗಮನವನ್ನು ಕೇಂದ್ರೀಕರಿಸಿತು. ಸಾವಿನ ಭಯವು ಎಂದೆಂದಿಗೂ ಮಾಯವಾಗಿಹೋಯಿತು. ಅಹಂ ಎಂಬುದು ಆತ್ಮ ಪ್ರಜ್ಙೆಯ ಮಹಾಪೂರದಲ್ಲಿ ಕಳೆದುಹೋಯಿತು. ಆ ಸಮಯದಿಂದ ಆತ್ಮ ಲೀನತೆಯು ಲುಪ್ತಿಯಿಲ್ಲದೆ ಮುಂದುವರೆಯಿತು. ಬೇರೆ ಆಲೋಚನೆಗಳು ಸಂಗೀತದ ನಾದಗಳಂತೆ ಬಂದು ಹೋಗಬಹುದು, ಆದರೆ 'ನಾನು' ಎಂಬುದು ಮೂಲಭೂತ ಶೃತಿಯಂತೆ ಮುಂದುವರೆಯಿತು, ಉಳಿದೆಲ್ಲ ನಾದಗಳ ಪಾಯದಲ್ಲಿದ್ದು ಉಳಿದೆಲ್ಲ ನಾದಗಳನ್ನು ಮಿಶ್ರಿಸುವ ಶೃತಿ"
|