ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
ಹಿಂದಿನ ರಾಷ್ಟ್ರಪತಿ, ’[[ಡಾ. ಎ. ಪಿ. ಜೆ. ಅಬ್ದುಲ್ ಕಲಾಂ]]’ ಕೂಡ ಸುಖೋಯ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಪ್ರತಿಭಾ ಪಾಟೀಲ್ ರು ಎರಡನೆಯ ರಾಷ್ಟ್ರಪತಿಯಾಗಿದ್ದಾರೆ. ಹಾರಾಟಕ್ಕೆ ಪೂರ್ವಭಾವಿಯಾಗಿ ಪಾಟೀಲ್ ರಿಗೆ, ವಿಶ್ರಾಂತಿ-ಗೃಹದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿ, ಅವರ ಆರೋಗ್ಯ ಹಾರಲು ಅನಾನುಕೂಲವಿಲ್ಲವೆಂಬುದನ್ನು ಖಾತ್ರಿಮಾಡಲಾಗಿತ್ತು. ಇಂದಿನ ಪ್ರಸಕ್ತ ಸಂದರ್ಭದಲ್ಲಿ ದೊರೆಯುತ್ತಿರುವ ರಕ್ಷಣಾ-ಸಂಪನ್ಮೂಲಗಳು ಮತ್ತು ನಮ್ಮ ದೇಶದ ವಾಯುಪಡೆಯ ಪೈಲೆಟ್ ಗಳ ವಾಯುಯಾನದ ಸಾಮರ್ಥ್ಯವನ್ನು ಅವರು ಮೆಚ್ಚಿ ಕೊಂಡಾಡಿದರು. ಅದೊಂದು ಅಧ್ಬುತ ಅನುಭವಾಗಿತ್ತೆಂದು ಅವರು ಪತ್ರಿಕಾಕರ್ತರಿಗೆ ತಿಳಿಸಿದರು.
==ರಾಷ್ಟ್ರಪತಿ ಪ್ರತಿಭಾಸಿಂಗ್ ಪಾಟೀಲ್, ’ಹೆಲಿಕಾಪ್ಟರ್ ಅಪಘಾತ’ದಿಂದ ಪಾರು==
ಪುರಿಯಲ್ಲಿ ರಾಷ್ಟ್ರಪತಿಯವರು, [[’ಅರ್ಬನ್ ಹಾಟ್]],’ ಒಂದನ್ನು ೨೦೦೯ ರ, ದಿಸೆಂಬರ್ ೯, ರಂದು, ಉದ್ಘಾಟಿಸಿ, ಹೆಲಿಕಾಪ್ಟರ್ ನಲ್ಲಿ ಭುವನೇಶ್ವರಕ್ಕೆ ಹಿಂದಿರುಗಿದ ವೇಳೆ ಹೆಲಿಕಾಪ್ಟರ್ ನ ೩ ಬ್ಲೇಡ್ ಗಳೂ " [[ಬಿಜುಪಟ್ನಾಯಕ್ ವಿಮಾನ ನಿಲ್ದಾಣ]]" ದ ಶೆಡ್ ವೊಂದರ ಛಾವಣಿಗೆ ಬಡಿದಾಗ್ಯೂ, ಒಳಗಿದ್ದವರೆಲ್ಲಾ ಕೂದಲೆಳೆಯ ಅಂತರದಿಂದ ವಿಪತ್ತಿನಿಂದ, ಯಾವ ಸಾವುನೋವಿನ ಅಪಾಯವಿಲ್ಲದೆ ಪಾರಾದರು. ೧೬ ಸೀಟರ್ ಹೆಲಿಕಾಪ್ಟರ್ ನಲ್ಲಿ ರಾಷ್ಟ್ರಪತಿ ಪ್ರತಿಭಾಸಿಂಗ್, ಹಾಗೂ ಅವರ ಪತಿ, 'ದೇವಿಸಿಂಗ್ ಶಿಖಾವತ್', ಮತ್ತು ಒರಿಸ್ಸಾ ರಾಜ್ಯಪಾಲ, 'ಎಂ. ಸಿ. ಭಂಡಾರಿ'ಯವರೂ ಉಪಸ್ಥಿತರಿದ್ದರು.
 
೧೨ ನೇ ಶತಮಾನದಲ್ಲಿ ಕಟ್ಟಲಾಗಿರುವ ’ಜಗನ್ನಾಥ್ ದೇವಾಲಯ’ದಲ್ಲಿನ ದೇವಾಲಯದ ’ಲೆಕ್ಕ ಪತ್ರಗಳು,’ ಮತ್ತು ’ದಸ್ತಾವೇಜ್’ ಗಳು ಅತ್ಯುತ್ತಮವಾಗಿ ಇಂದಿಗೂ ಉಪಯೋಗದಲ್ಲಿಡಲಾಗಿದೆ. ಪ್ರತಿಭಾಪಾಟೀಲರ ತಂದೆ, ’[[ನಾರಾಯಣ್ ಸಿಂಗ್ ಮಾಡೆ]]’, ಸನ್, ೧೯೩೧ ರಲ್ಲಿ ದೇವಸ್ಥಾನಕ್ಕೆ ಯಾತ್ರಾರ್ಥಿಯಾಗಿ ಆಗಮಿಸಿದ್ದ ಸಮಯದಲ್ಲಿ ಮಾಡಿದ ಸಹಿಯನ್ನು ’ಪ್ರತಿಭಾ ಪಾಟೀಲ್’ ನೋಡಿ ಆನಂದಿಸಿದರು.
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ