ಗುಡಿಬಂಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ದೇವಾಲಯದ ಕಲ್ಲು
Content deleted Content added
(~~~~)
( ಯಾವುದೇ ವ್ಯತ್ಯಾಸವಿಲ್ಲ )

೦೪:೨೩, ೨೯ ಸೆಪ್ಟೆಂಬರ್ ೨೦೦೯ ನಂತೆ ಪರಿಷ್ಕರಣೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕ ತಾಲ್ಲೂಕು, ’ಗುಡಿಬಂಡೆ’. ’ಹಾವಳಿ ಬೈರೆ ಗೌಡರ’, ಕಾಲದಲ್ಲಿ ರೂಪುಗೊಂಡು, ಪಾಳೇಗಾರರ ಆಡಳಿಕ್ಕೆ ಒಳಪಟ್ಟಿತ್ತು. ಅವರು ಕಟ್ಟಿಸಿದ ಸುಂದರ ಕೋಟೆಗಳನ್ನು ಇಂದಿಗೂ ಕಾಣಬಹುದು. ಈ ಊರಿನ ಬೃಹದಾಕಾರದ ಬಂಡೆಯೊಂದರ ಮೇಲೆ ಗುಡಿಯಿರುವುದರಿಂದ ಇದಕ್ಕೆ ಗು ಎಂದು ಹೆಸರು ಬಂದಿದೆ. ಜಿಲ್ಲಾ ಕೇಂದ್ರದಿಂದ ೩೫ ಕಿ. ಮೀ ದೂರದಲ್ಲಿದ್ದು ಬೆಂಗಳೂರಿಗೆ ೯೦ ಕಿ. ಮೀ ದೂರದಲ್ಲಿದೆ. ಚಿಕ್ಕಬಳ್ಳಾಪುರದಿಂದ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಬಾಗೇಪಲ್ಲಿ, ಪೆರೇಸಂದ್ರ ಗ್ರಾಮ [ಹೆದ್ದಾರಿ ೭ ರಲ್ಲಿ] ಎಡಕ್ಕೆ ತಿರುಗಿದರೆ, ೧೪ ಕಿ. ಮೀ ಅಂತರದಲ್ಲಿ ಇದೆ. ಸರ್ಕಾರಿ, ಹಾಗೂ ಖಾಸಗೀ ಬಸ್ ಗಳು, ದಿನವಿಡೀ ಸಿಗುತ್ತವೆ. ಈ ತಾಲ್ಲೂಕಿನ ೨ ಕಸಬಾಗಳಿವೆ. ೧. ಗು ಕಸಬಾ ೨. ಸೋಮೇನಹಳ್ಳಿ ೨ ಹೋಬಳಿಗಳು ೧೦೨ ಗ್ರಾಮಗಳು ಈ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತವೆ. ನೀರಾವರಿ ವ್ಯವಸ್ತ್ಯೆಯಿಂದಾಗಿ ಅರೆ ಭೂಮಿ ಕೃಷಿಗೆ ಲಭ್ಯವಿದೆ. ಭತ್ತ, ಕಡಲೆಕಾಯಿ, ರಾಗಿ, ಜೋಳ ಇಲ್ಲಿಯ ಪ್ರಮುಖ ಬೆಳೆಗಳು. ತರಕಾರಿ ಪಾಳೆಗಾರ ಕಾಲದಲ್ಲಿ ನಿರ್ಮಿಸಲಾದ ’ಬೃಹದ್ ಅಮಾನಿ ಬೈರಸಾಗರದ ಕೆರೆ ಏರಿ, ಏರಿ ಬರಬೇಕು. ಇದು ಜಿಲ್ಲೆಯ ಅತಿ ದೊಡ್ಡಕೆರೆ. ಪಟ್ಟಣಕ್ಕೆ ಬರುವ ಮೊದಲು, ಗು. ತಾ ನಲ್ಲಿ ೮೫ ನಿವಾಸಿತ ಮತ್ತು ೨೦ ಅನಿವಾಸಿತರೂ ಸೇರಿದಂತೆ ಒಟ್ಟು ೨೩೯ ಗ್ರಾಮಗಳಿವೆ. ಗ್ರಾಮಾಂತರ ಪ್ರದೆಶದಲಿ೪೩,೦೨೧ ಮತ್ತು ನಗರ ಪ್ರದೇಶದಲ್ಲಿ ೮,೮೦೭ ಮಂದಿ ಸೇರಿದಂತೆ ೫೧,೮೨೮ ಮಂದಿ ಜನಸಂಖ್ಯೆ ಯನ್ನು ಹೊಂದಿದೆ. ವಿಸ್ತೀರ್ಣ ೨೨೫.೪೩ ಚ. ಕಿ. ಮೀ. ದ ಉತ್ತರಕ್ಕೆ ಸುಂದರವಾದ ಐತಿಹಾಸಿಕ ಮಹತ್ವದ ಬೆಟ್ಟ ’ಸುರಸದ್ಮಗಿರಿ’. ಬೃಹದಾಕಾರದ ೭ ಸುತ್ತಿನ ಕೋಟೆಯನ್ನು ನಿರ್ಮಿಸಲಾಗಿದೆ. ಶ್ರೀರಾಮನಿಂದ ಪ್ರತಿಷ್ಠಾಪಿಸಲಾಗಿದೆಯೆಂದು ಹೇಳುವ ’ಶ್ರೀ ರಾಮೇಶ್ವರ ದೇವಾಲಯ’ ವಿದೆ. ಇಲ್ಲಿ ನೀರನ್ನು ಸಂಗ್ರಹಮಾಡಲು ೧೯ ಕೊಳಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ಕೋಟೆ-ಕೊತ್ತಲಗಳ ಜೊತೆಗೆ,ಸಿಪಾಯಿಗಳ ವಾಸದ ತಾಣಗಳು, ಶ್ರೀರಾಮ ದೋಣಿ, ಸೀತಾದೋಣಿ, ಲಕ್ಷ್ಮಣ ದೋಣಿ, ಉಪದೋ, ಆಂಜನೇಯನ ದೋ, ಉಪದೋ, ಸಿಹಿನೀರಿನ , ಉಪ್ಪಿನ ದೋಣಿಗಳಿವೆ. ಬೆಟ್ಟ ಹತ್ತಲು ಸುಲಭ. ರಾಮದೋ ನೀರು ಪವಿತ್ರ ತೀರ್ಥ. ಸ್ನಾನಮಾಡಿದರೆ ಯಾವುದೇ ರೋಗರುಜಿನಗಳಿಲ್ಲ. ನಿವಾರಣೆ, ಆಷಾಢಮಾಸದಲ್ಲಿ ವಿಶೇಷವಾಗಿ ಕುಂಬಾಭಿಷೇಕ ನಡೆಯುತ್ತದೆ.

ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರ

ಮಧ್ಯಭಾಗದಲ್ಲಿರುವ ಮಂದಿರ ದ್ವೈತ ಅದ್ವೈತ, ವಿಶಿಷ್ಟಾದ್ವೈತರ ಶಿಷ್ಟ ಸಂಗಮ. ಗಾಯತ್ರಿದೇವಿಯವರ ಸನ್ನಿಧಿಯಲ್ಲಿ, ಶಂಕರ, ಮಾಧ್ವ, ರಾಮಾನುಜರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದಲ್ಲಿ ಪ್ರಾಚೀನದೇವಾಲಯ, ’ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ’. ಅತ್ಯಂತ ಸುಂದರವಾಗಿ ದಶಾವತಾರವನ್ನು ಕೆತ್ತಲಾಗಿದೆ. ಪಂಚಗಿರಿ, ಪಂಚಲಿಂಗ, ಪಂಚಕಲ್ಯಾಣಿ, ಪಂಚ ಆಂಜನೇಯರಿಗೆ ಪ್ರಸಿದ್ಧಿ. ಜೈನ ಬಸದಿಗಳಿವೆ. ಪಾರ್ಶ್ವನಾಥ, ದಿಗಂಬರ ಬಸದಿಗಳು ಪಟ್ಟಣದಲ್ಲಿವೆ.

’ಕೂರ್ಮಗಿರಿ ಶ್ರೀ ಲಕ್ಷ್ಮೀಆದಿನಾರಾಯಣ’

ತಾಲ್ಲೂಕಿನ ಎಲ್ಲೋಡು ಗ್ರಾಮ ’ಕೂರ್ಮಗಿರಿ’ ಪುಣ್ಯ ಕ್ಷೇತ್ರ. ಪ್ರಮುಖ ಯಾತ್ರಾಸ್ಥಳ. ಬೆಟ್ಟದಮೇಲೆ ದೇವಸ್ಥಾನಲ್ಲಿ ಉದ್ಭವ ಮೂರ್ತಿಯಿದೆ. ಭಕ್ತರು ಎಲ್ಲಾ ಕಡೆಗಳಿಂದ ಬಂದು ಸೇವೆಯನ್ನು ಮಾಡಿಸುತ್ತಾರೆ. ಕೆರೆ ತುಂಬಿದಾಗ ಕೆಂಪುನೀರು ಎಲ್ಲೆಡೆ ಏರಿಯಮೇಲೆ ’ವಡ್ಡಮ್ಮನ ಗುಡಿ’ . ಪಂಚಮಹಾ ವೈಶಿಷಿಠ್ಯಗಳಲ್ಲೊಂದಾದ, ಪಂಚಲಿಂಗಗಳಲ್ಲಿ ’ಸೋಮೇಶ್ವರ ಸ್ವಾಮಿ ಗುಡಿ,’ , ’ಗಂಗಾಧರೆಶ್ವರ ಸ್ವಾಮಿಯ ದೇವಾಲಯ,’ ಗಳಿವೆ. ಬೆಟ್ಟದಮೇಲೆ, ರಾಮೇಶ್ವರ ’ಚಂದ್ರಮೌಳೇಶ್ವರ ದೇವಾಲಯ’, ಊರಿನಲ್ಲಿದೆ. ಗ್ರಾಮದೇವತೆ, ಚರ್ಚ್, ಮಸೀದಿ, ಬಸದಿ, ಸ್ಥಳೀಯ ಪುರಾಣ ತಾಳೆಗರಿಗಳಿವೆ.


ಸೋಮೇನಹಳ್ಳಿಯಲ್ಲಿ ಪುರಾತನ ಲಕ್ಷ್ಮೀ ವೆಂಕಟೇಶದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಪ್ರಸನ್ನಾಂಜನೇಯ, ಪ್ರಮುಖ ಆಕರ್ಶಣೆಗಳು. ಗಡಿಭಾಗದಲ್ಲಿ ವೀರಾಪುರ ಗ್ರಾಮದ ಪಕ್ಷಿಧಾಮ ಹೆಸರುವಾಸಿ. ತಾಲ್ಲುಕು ಕೇಂದ್ರದಿಂದ ೧೫ ಕಿ. ಮೀ ದೂರದಲ್ಲಿದೆ. ನೈಜೀರಿಯ, ಆಷ್ಟ್ರಿಯ, ಮುಂತಾದ ರಾಷ್ಟ್ರಗಳ ಪಕ್ಷಿಗಳು ಸಂತಾನೋತ್ಪತ್ತಿಗೆ, ವಲಸೆಬರುತ್ತವೆ. ಸುತ್ತಮುತ್ತಲ ಅರಣ್ಯ, ಗಳಲ್ಲಿ ಜಿಂಕೆ, ನವಿಲು, ಮುಂತಾದ ಕಾಡು-ಮೃಗಗಳಿವೆ.