ಕರಿಮೆಣಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು v2.04 - lint
ಚು replaced [[Category: → [[ವರ್ಗ: , general fixes enabled
೨೧ ನೇ ಸಾಲು:
ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ.
ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು.
ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.
 
ಕರಿಮೆಣಸಿಗೆ [[ಆಂಗ್ಲ]] ಭಾಷೆಯ ಪದ ''ಪೆಪ್ಪರ್'' ಎಂಬುದು [[ಸಂಸ್ಕೃತ|ಸಂಸ್ಕೃತದ]] ಪದ ''ಪಿಪ್ಪಲಿ'' ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.
೩೨ ನೇ ಸಾಲು:
[[Image:Peppercorn-varieties.jpg|right|thumb|250px|ಹಸಿರು, ಕೆಂಪು ಹಾಗೂ ಒಣಗಿದ ಕಪ್ಪು ಕರಿಮೆಣಸು]]
 
ಮೆಣಸು ಕಾಳುಗಳನ್ನು ಅದರ ಮೂಲವನ್ನವಲಂಬಿಸಿ ವರ್ಗೀಕರಿಸಲಾಗುತ್ತದೆ. ಎರಡು ಬಹಳ ಜನಪ್ರಿಯ ತಳಿಗಳು [[ಭಾರತ|ಭಾರತದ]] [[ಮಲಬಾರ್]] ತೀರದಲ್ಲಿ ದೊರೆಯುವ ತಳಿಗಳು: ಮಲಬಾರ್ ಮೆಣಸು ಹಾಗೂ [[ತೆಲ್ಲಿಚೆರಿ]] ಮೆಣಸು. ತೆಲ್ಲಿಚೆರಿ ತಳಿ ದೊಡ್ಡ ಗಾತ್ರದ ಹೆಚ್ಚು ಹಣ್ಣಾದ ಒಳ್ಳೆಯ ಜಾತಿಯ ತಳಿಯೆಂದು ಹೇಳಲಾಗುತ್ತದೆ. [[ಸರವಾಕ]] ಎಂಬ ತಳಿಯ ಮೆಣಸು [[ಮಲೇಶಿಯ|ಮಲೇಶಿಯದ]] ಬೋರ್ನಿಯೋ ಪ್ರಾಂತ್ಯದಲ್ಲಿ, ಹಾಗೂ ಲ್ಯಾಂಪೋಂಗ್ ಎಂಬ ತಳಿ [[ಇಂಡೋನೇಶಿಯ|ಇಂಡೋನೇಶಿಯದ]] [[ಸುಮಾತ್ರ ದ್ವೀಪ|ಸುಮಾತ್ರ ದ್ವೀಪದಲ್ಲಿ]] ದೊರಕುತ್ತವೆ. ಬಿಳಿಯ [[ಮುಂಟೋಕ್]] ಮೆಣಸು ಇಂಡೋನೇಶಿಯದ ಮತ್ತೊಂದು ಉತ್ಪಾದನೆ, ಬಾಂಗ್ಕಾ ದ್ವೀಪದಲ್ಲಿ ದೊರೆಯುವಂತದ್ದು. <ref>ಕರಿಮೆಣಸಿನ ವಿಧಗಳ ಬಗ್ಗೆ ಮಾಹಿತಿ: [http://www.cookswares.com/discussions/peppercorns.asp A Cook's Wares]. [[ನವೆಂಬರ್ ೬]], [[೨೦೦೫|೨೦೦೫ರಂದು]] ಪಡೆದದ್ದು.</ref>
==ಮೆಣಸಿನ ಗಿಡ==
[[Image:Piper nigrum drawing 1832.jpg|left|thumb|''ಪೈಪರ್ ನೀಗ್ರಮ್'' [[೧೮೩೨|೧೮೩೨ರ]] ಮುದ್ರಣವೊಂದರಿಂದ.]]
೪೦ ನೇ ಸಾಲು:
ಕರಿಮೆಣಸಿನ ಗಿಡವು ತೀರ ಶುಷ್ಕವಲ್ಲದ ಹಾಗು [[ಪ್ರವಾಹಕ್ಕೆ]] ಒಳಗಾಗದಂಥಹ, ತೇವಾಂಶಸಹಿತ, ಹೀರಿಕೊಳ್ಳುವಂಥಹ ಹಾಗೂ ಸಾವಯವ ಕೂಡಿತ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಗಿಡವನ್ನು ೪೦ - ೫೦ ಸೆ.ಮೀ ಉದ್ದದ ತುಂಡುಗಳಿಂದ, ಸುಮಾರು ೨ ಮೀ ದೂರದಲ್ಲಿರುವ ಒರಟಾದ ಮೇಲ್ಮೈ ಉಳ್ಳ ಮರಗಳ ಸಹಾಯದಿಂದ ಬೆಳೆಸಲಾಗುತ್ತದೆ. ಬಳ್ಳಿ ಚೆನ್ನಾಗಿ ಬೆಳೆಯಲು ನುಣುಪಾದ ಮೇಲ್ಮೈಗಿಂತ ಒರಟಾದ ಮೇಲ್ಮೈ ಅನುಕೂಲವಾಗಿರುತ್ತದೆ. ಅಕ್ಕ ಪಕ್ಕದ ಮರಗಳು ಅನತಿ ದೂರದಲ್ಲಿದ್ದು ಬಳ್ಳಿಗೆ ಬೇಕಾದ ನೆರಳು ಹಾಗು ವಾತಾಯನ ಕೊಡುತ್ತದೆ. ಬೇರುಗಳು [[ಕೊಳೆತ]] ಎಲೆಗಳಿಂದ ಹಾಗೂ [[ಗೊಬ್ಬರದಿಂದ]] ಆವೃತವಾಗಿದ್ದು, ಕಾಂಡಗಳನ್ನು ವರ್ಷಕ್ಕೆರಡು ಬಾರಿ ಕತ್ತರಿಸಿ ಅಚ್ಚುಕಟ್ಟಾಗಿರಿಸಲಾಗುತ್ತದೆ. ಶುಷ್ಕ ವಾತಾವರಣದಲ್ಲಿ ೩ ವರ್ಷದ ವರೆಗೆ ನವ ಸಸ್ಯಗಳಿಗೆ ಶುಷ್ಕ ಮಣ್ಣಿನಲ್ಲಿ ಪ್ರತಿ ಎರಡು ದಿನಕ್ಕೊಮ್ಮೆ ನೀರುಣಿಸಬೇಕಾಗುತ್ತದೆ. ತಮ್ಮ ೪ನೇ ಅಥವಾ ೫ನೇ ವರ್ಷದಲ್ಲಿ ಸಸ್ಯಗಳಲ್ಲಿ ಹಣ್ಣು ಬಿಡುತ್ತವೆ ಹಾಗೂ ಅಲ್ಲಿಂದ ಸುಮಾರು ೭ ವರ್ಷಗಳ ವರೆಗೂ ಫಲ ಕೊಡುತ್ತವೆ. ನೆಡಲಿಕ್ಕಾಗಿ ಬಳ್ಳಿಯ ತುಂಡುಗಳನ್ನು, ಇಳುವರಿ ಮತ್ತು ಹಣ್ಣಿನ ಗುಣಮಟ್ಟವನ್ನು ಆಧರಿಸಿ ಆಯ್ಕೆಮಾಡಿದ ತಳಿಗಳಿಂದ ಸಾಧಾರಣವಾಗಿ ಪಡೆದುಕೊಳ್ಳಲಾಗುತ್ತದೆ.
ಒಂದು ಕಾಂಡದಲ್ಲಿ ಸುಮಾರು ೨೦ ರಿಂದ ೩೦ ಫಲ ಕೊಡುವ ಶೀರ್ಷಕಗಳಿರುತ್ತವೆ. ಶೀರ್ಷಕಗಳ ಮೂಲ ಕೆಂಪಗಿನ ಬಣ್ಣ ಬರಲಾರಂಭಿಸಿದಾಗಲಿಂದ ಹಣ್ಣಾಗುವ ಮೊದಲು ಕುಯಿಲು ಮಾಡಲಾಗುತ್ತದೆ, ಆದರೆ ಪೂರ್ತಿ ಬೆಳೆದ ಹಾಗೂ ಗಟ್ಟಿಯಾದ ಫಲವನ್ನು ಹಣ್ಣಾಗಲು ಬಿಟ್ಟರೆ ಅದು ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು , ನಂತರ ಉದುರಿ ಹೋಗಿ ಹಾಳಾಗುತ್ತದೆ. ಇವುಗಳನ್ನು ಸಂಗ್ರಹಿಸಿ ಶುಷ್ಕ ಬಿಸಿಲಿನಲ್ಲಿ ಒಣಗಿಸಿದಾಗ ಕಾಳುಮೆಣಸು ಸುಲಿದುಕೊಂಡು ಹೊರಬರುತ್ತವೆ.
 
 
==ಇತಿಹಾಸ==
Line ೪೭ ⟶ ೪೬:
ಕರಿಮೆಣಸಿನ ಪುರಾತನ ಇತಿಹಾಸ ಆಗಾಗ, ಒಣಗಿದ ಫಲವಾದ "ಪೈಪರ್ ಲೋಗಂ"ಗೆ ಹತ್ತಿರವಾದ [[ಹಿಪ್ಪಲಿಯ]] ಇತಿಹಾಸದೊಂದಿಗೆ ಸಂಬಂಧ ಹೊಂದಿರುತ್ತದೆ ಅಥವಾ ತಪ್ಪಾಗೆ ತಿಳಿಯಲ್ಪಡುತ್ತದೆ. ರೋಮನರಿಗೆ ಎರಡರ ಬಗ್ಗೆಯೂ ತಿಳಿದಿದ್ದು ಎರಡನ್ನೂ ಅವರು "ಪೈಪರ್" ಎಂದು ಕರೆಯುತ್ತಿದ್ದರು. ವಸ್ತುತಃ ಹೊಸ ಜಗತ್ತಿನ ಖಾರ ಮೆಣಸಿನ ಪ್ರಸಿದ್ಧಿಯ ಮುನ್ನ ಹಿಪ್ಪಲಿಯ ಖ್ಯಾತಿ ಪತನವಾಗಿರಲಿಲ್ಲ. ಒಣಗಿಸಿದಾಗ ಹಿಪ್ಪಲಿಯ ರುಚಿಗೆ ಹಾಗು ಆಕಾರಕ್ಕೆ ಹೊಂದುವ ಖಾರ ಮೆಣಸನ್ನು [[ಯೂರೋಪ್|ಯೂರೋಪಿನ]] ಅನೇಕ ಸ್ಥಳಗಳಲ್ಲಿ ಬೆಳೆಸುವುದು ಸುಲಭವಾಗಿತ್ತು.
 
ವಾಸ್ತವವಾಗಿ, [[ಮಧ್ಯಮ ಯುಗದ]] ಅಂತ್ಯದ ನಂತರದವರೆಗೂ ಎಲ್ಲ ಕರಿಮೆಣಸೂ ಸಹ ಯೂರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಹಾಗೂ ನಂತರದಲ್ಲಿ ಭಾರತದ ಮಲಬಾರ್ ಪ್ರದೇಶದಲ್ಲಿ ಕಾಣಸಿಗುತ್ತಿತ್ತು. ೧೬ನೇ ಶತಮಾನದ ಹೊತ್ತಿಗೆ ಮೆಣಸನ್ನು [[ಜಾವ (ದ್ವೀಪ)|ಜಾವ]], [[ಸುಂದ ದ್ವೀಪ|ಸುಂದ]], [[ಸುಮಾತ್ರ]], [[ಮಡಗಾಸ್ಕರ್]], ಮಲೇಷ್ಯ ಮತ್ತು ಇತರ ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು, ಆದರೆ ಈ ಪ್ರದೇಶಗಳು ಮುಖ್ಯವಾಗಿ ಚೀನಾ ಜೊತೆಗೆ ವ್ಯಾಪಾರ ಮಾಡುತ್ತಿದ್ದವು ಅಥವಾ ಪ್ರಾದೇಶಿಕವಾಗಿ ಉಪಯೋಗಿಸುತ್ತಿದ್ದವು. <ref>Dalby p. 93.</ref>. ಮಲಬಾರ್ ಪ್ರದೇಶ ಬಂದರುಗಳು ಹಿಂದೂ ಮಹಾ ಸಾಗರದ ದೂರಪ್ರಾಚ್ಯಗಳಿಂದ ಇತರ ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ಕೇಂದ್ರಸ್ಥಾನವಾಗಿ ಆಧರಿಸಿತ್ತು.
===ಪೂರ್ವ ಕಾಲದಲ್ಲಿ===
[[ಅಲೆಗ್ಸಾಂಡರ್|ಅಲೆಕ್ಸಾಂಡರಿನ]] ಕಾಲಕ್ಕಾಗಲೆ ಗ್ರೀಕರಿಗೆ ಭಾರತದ ಮೆಣಸಿನ ಬಗ್ಗೆ ತಿಳಿದಿತ್ತು. ಅವರಲ್ಲಿ ಹಿಪ್ಪಲಿಯ ಬಳಕೆಯೂ ಇತ್ತು. [[ದಕ್ಷಿಣ ಭಾರತ|ದಕ್ಷಿಣ ಭಾರತದ]] ಮೆಣಸು ಪಶ್ಚಿಮ ಸಮುದ್ರದ (ಅರಬ್ಬಿ ಸಮುದ್ರದ) ತೀರದ ಗುಂಟ ಸಾಗುತ್ತಿದ್ದ ವ್ಯಾಪಾರ ನೌಕೆಗಳಲ್ಲಿ ಗ್ರೀಸನ್ನು ತಲುಪುತ್ತಿತ್ತು. ಆದರೆ ವಾಯವ್ಯ ಭಾರತದ ಬೆಳೆಯಾದ ಹಿಪ್ಪಲಿಯನ್ನು ಭೂಮಾರ್ಗದಲ್ಲಿ ಸಾಗಿಸುತ್ತಿದರು. ಅಂತಲೆ ಗ್ರೀಕರಿಗೆ ಮೆಣಸಿಗಿಂತಲೂ ಹಿಪ್ಪಲಿಯು ಸುಲಭವಾಗಿ ಕೊಳ್ಳಲು ಬರುತ್ತಿತ್ತು. ಆದರೂ ಇವೆರಡೂ ತುಟ್ಟಿಯ ಪದಾರ್ಥಗಳಾಗಿದ್ದಿರಲೂ ಜನಸಾಮಾನ್ಯರ ಎಟುಕಿಗೆ ಮೀರಿ ಇದ್ದರಲೂ ಸಾಕು.
 
[[ಈಜಿಪ್ಟ್|ಈಜಿಪ್ಟಿನ]] ಎರಡನೆಯ ರಾಮ್‌ಸೀಸ್ ದೊರೆಯ ಗೋರಿಯನ್ನು ಅಗೆದು ತೆಗೆದಾಗ ಶವದ ಮೂಗಿನ ಹೊಳ್ಳೆಗಳಲ್ಲಿ ಮೆಣಸುಕಾಳುಗಳು ಇದ್ದದ್ದು ಕಂಡುಬಂದಿತು. ಶವದ ರಕ್ಷಣೆಯ ಅಂಗವಾಗಿ ಇವನ್ನು ಇಟ್ಟಿರಬಹುದು. ಇದರಿಂದ ಈಜಿಪ್ಟಿನವರಿಗೆ ಮೆಣಸಿನ ಬಗ್ಗೆ ತಿಳಿದಿತ್ತು ಎಂದಾಯಿತಾದರೂ ಅವರಲ್ಲಿ ಮೆಣಸಿನ ಬಳಕೆಯ ಬಗ್ಗೆಯಾಗಲಿ ಭಾರತದೊಂದಿಗೆ ಮೆಣಸಿನ ವ್ಯಾಪಾರದ ಬಗ್ಗೆಯಾಗಲಿ ನಮಗೆ ಬೇರೇನೂ ತಿಳಿಯದು.
Line ೫೭ ⟶ ೫೬:
[[Roman Empire|ರೋಮ್ ಸಾಮ್ರಾಜ್ಯದಲ್ಲೂ]] ಮೆಣಸನ್ನು ಬಳಸುತ್ತಿದ್ದರು. ಸಾಮಾನ್ಯ ಶಕೆಯ ೩ನೆಯ ಶತಕಕ್ಕೆ ಸೇರಿದ ಅಡುಗೆಯ ಪುಸ್ತಕದಲ್ಲಿ ಕೊಟ್ಟಿರುವ ಬಹುತೇಕ ಅಡುಗೆಗಳಿಗೆ ಮೆಣಸು ಬೇಕು. [[Edward Gibbon|ಗಿಬ್ಬನ್]] ತನ್ನ ''[[The History of the Decline and Fall of the Roman Empire|ರೋಮ್ ಸಾಮ್ರಾಜ್ಯದ ಅವನತಿಯೂ ಪತನವೂ]]'' ಗ್ರಂಥದಲ್ಲಿ ಹೇಳುವಂತೆ ಮೆಣಸು ಅಲ್ಲಿಯ ಮೇಲ್‍ಸ್ತರದ ಬಾಣಸಿಗರಗೆ ಅಚ್ಚುಮೆಚ್ಚಿನ ಸಾಂಬಾರ ಪದಾರ್ಥವಾಗಿತ್ತು.
 
ಜೂಲಿಯಸ್ ಸೀಸರಿನ ಕಾಲದ ಹೊತ್ತಿಗೆ ಪಶ್ಚಿಮ ಸಮುದ್ರವನ್ನು ನಡುಭಾಗದಲ್ಲಿ ದಾಟುವುದು ಸರ್ವೇಸಾಮಾನ್ಯವಾಗಿ ಹೋಗಿತ್ತು. ಈ ನೌಕಾಯಾನದ ವಿವರಗಳು [[ಎರಿತ್ರೆಯ ಸಮುದ್ರದ ಪೆರಿಪ್ಲಸ್]] ಎಂಬ ನೌಕಾಯಾನದ ಕೈಪಿಡಿಯಲ್ಲಿ ದಾಖಲಾಗಿವೆ. ನೈಋತ್ಯ ಮುಂಗಾರಿನ ಬಿರುಗಾಳಿಗಳ ಬೆನ್ನೇರಿ ಹಡಗುಗಳು ಭಾರತದ ಪಡುಕರಾವಳಿಯನ್ನು ಸೇರುತ್ತಿದ್ದವು. ಹಿಂದಿರುಗುತ್ತ ಕೆಂಪು ಸಮುದ್ರದ ಉದ್ದಕ್ಕೂ ಸಾಗಿ [[ನೈಲ್ ನದಿ|ನೈಲ್ ನದಿಯ]] ಕಾಲುವೆಯ ಮೂಲಕ ನೈಲ್ ನದಿಗೂ ಅಲ್ಲಿಂದ ತೆಪ್ಪಗಳ ಮೇಲೆ ಅಲೆಕ್ಸಾಂಡ್ರಿಯಾಗೂ ಅದರಾಚೆ [[ರೋಮ್|ರೋಮ್‌ಸಾಮ್ರಾಜಕ್ಕೂ]] ಸರಕನ್ನು ಸಾಗಿಸುತ್ತಿದ್ದರು. ವರ್ಷೇ ವರ್ಷೇ ೧೨೦ ಹಡಗುಗಳು ರೋಮ್ ಸಾಮ್ರಾಜ್ಯದಿಂದ ಭಾರತಕ್ಕೆ ಬರುತ್ತಿದ್ದವೆಂದು ಚರಿತ್ರಕಾರ [[ಸ್ಟ್ರಾಬೋ]] ತಿಳಿಸುತ್ತಾನೆ.
 
ಸಮುದ್ರತೀರದ ಗುಂಟ ಹಾಯದೆ ನೇರವಾಗಿ ನಡುಭಾಗದಲ್ಲಿ ದಾಟಿದ್ದೆ, ಮೆಣಸು ಬೇಗನೆ ಮಾರುಕಟ್ಟೆ ತಲುಪಲಾರಂಭಿಸಿತು. ಬೆಲೆಗಳು ಇಳಿದವು. ಸಾಮಾನ್ಯ ಶಕೆಯ ೭೭ನೆ ವರ್ಷದ ಸುಮಾರಿಗೆ "ಹಿಪ್ಪಲಿಯ ಬೆಲೆ ತೂಕವೊಂದಕ್ಕೆ ೧೫ ದೀನಾರಗಳು. ಬಿಳಿಮೆಣಸು ೭ ದೀನಾರಗಳಾದರೆ ಕರಿಮೆಣಸಿನ ಬೆಲೆ ತೂಕಕ್ಕೆ ೪ ದೀನಾರಗಳು" ಇದ್ದವು ಎನ್ನುತ್ತಾನೆ ಚರಿತ್ರಕಾರ ಹಿರಿಯ ಪ್ಲಿನಿ. "ಭಾರತ ರೋಮ್ ಸಾಮ್ರಾಜ್ಯದಿಂದ ೫ ಕೋಟಿ ಸೆಸ್ಟರ್ಸೆಸ್ ಮೊತ್ತದ ಹಣವನ್ನು ಹೀರದ ವರ್ಷವಿಲ್ಲ" ಎಂದು ಕೊರಗುತ್ತಾನೆ. ಅಲ್ಲಿಗೆ ನಿಲ್ಲದೆ <blockquote>''ಮೆಣಸನ್ನು ಬಳಸುವುದೆ ಒಂದು ಸೋಜಿಗ. ಅದೇನು ಸಿಹಿಯೆ? ಅಥವಾ ನೋಡಲಿಕ್ಕಾದರೂ ಅಂದವೆ? ಇತ್ತ ಹಣ್ಣಲ್ಲ ಅತ್ತ ಕಾಯಲ್ಲ. ತಿಂದರೆ ಹೊಟ್ಟೆ ತುಂಬುವುದಿಲ್ಲ. ಅದಕ್ಕಿರುವುದೊಂದೆ ಗುಣವೆಂದರೆ ಅದರ ಖಾರ. ಆದರೂ ಆ ರುಚಿಗೆಂದೆ ನಾವು ದೂರದ ಭಾರತದಿಂದಲಾದರೂ ಸರಿ, ತರಿಸಿಕೊಳ್ಳುತ್ತೇವೆ! ಮೆಣಸನ್ನು ಮೊದಲಬಾರಿಗೆ ತಿಂದ ಆ ಮಹಾನುಭಾವನಾದರೂ ಯಾರೋ! ಅಷ್ಟೇಕೆ, ಹಸಿವನ್ನು ಸಹಿಸದೆ ತಿನ್ನಲು ತೊಡಗಿದವನಾದರೂ ಯಾರೋ!<ref>ಬಾಸ್ಟಾಕ್ ಮತ್ತು ರಿಲೇಯವರ [[೧೮೫೫|೧೮೫೫ರಲ್ಲಿನ]] ಅನುವಾದ: [http://www.perseus.tufts.edu/cgi-bin/ptext?doc=Perseus%3Atext%3A1999.02.0137&query=head%3D%23741 Text online].</ref>
</blockquote> ಎಂದು ದೂರುತ್ತಾನೆ.
=== ಐರೊಪ್ಯ ದೇಶಗಳ ಗತ ವೈಭವ ಕಾಲದಲ್ಲಿ ===
ಐರೋಪ್ಯ ದೆಶಗಳಲ್ಲಿ ಮೆಣಸಿಗೆ ಎಷ್ಟು ಬೆಲೆ ಇತ್ತೆಂದರೆ ಆ ಕಾಲದ ಜನ ಅದನ್ನು ಹಣದ ಹಾಗೆ ಹಾಗೂ ಗಿರವಿ(ಅಡ) ಇಟ್ಟುಕೊಳ್ಳುವ ವಸ್ತುವಾಗಿ ಉಪಯೋಗಿಸುತಿದ್ದರು. ಮೆಣಸಿನ ಉಲ್ಲೇಖ(ಮುಖ್ಯವಾಗಿ ಇದರ ಹಣದ ಬೆಲೆಗಾಗಿ) ರೋಮ್ ಸಾಮ್ರಾಜ್ಯದ ಗತ ವೈಭವದಲ್ಲೂ ಇದೆ. ಸುಮಾರು ಕ್ರಿ.ಶ ೫ನೇ ಶತಮಾನದಲ್ಲಿ [[ಹೂಣ]] ದೊರೆ [[ಅಟ್ಟಿಲ(Attila)]] ಮತ್ತು [[ವಿಸಿಗೋತ ರ(Visigoth)]] ರಾಜ ೧ನೆ [[ಅಲರಿಕ್(Alaric I)]] ರೋಮನ್ನು ಆಕ್ರಮಿಸಿದಾಗ ಅದರ ತೆರವಿಗಾಗಿ ಸುಮಾರು ಒಂದು(೧) ಟನ್ನಿಗೂ ಮಿಗಿಲಾಗಿ ಕಪ್ಪು ಮೆಣಸನ್ನು ಕೇಳಿದರಂತೆ. ರೋಮ್ ಸಾಮ್ರಾಜ್ಯದ ಪತನದ ನಂತರ ಸಾಂಬಾರ ಪದಾರ್ಥಗಳ ವ್ಯಾಪಾರವನ್ನು ಮೊದಲು ಭೈಜಾನಿಗಳು(Byzantium) ತದನಂತರ ಅರಬ್ಬರು ಮುಂದುವರೆಸಿದರು. ಯುರೋಪಿನ ಪೂರ್ವ ಮಧ್ಯಯುಗದ ಅಂಚಿನಲ್ಲಿ, ಯುರೋಪಿನ ಮಧ್ಯ ಭಾಗಗಳಲ್ಲಿ ಸಾಂಬಾರ ಪದಾರ್ಥಗಳ ವ್ಯವಹಾರ ಸಂಪೂರ್ಣವಾಗಿ ಮುಸಲ್ಮಾನರ ಬಿಗಿ ಹಿಡಿತದಲ್ಲಿತ್ತು . ಮೆಡಿಟೆರೇನಿಯನ್ ಭಾಗಗಳಲ್ಲಿ ಇದು ಇಟಲಿಯನ್ನರ,ಅದರಲ್ಲಿಯೂ ವೆನಿಸ್ ಮತ್ತು ಜಿನೀವಾ, ಏಕಸ್ವಾಮ್ಯದಲ್ಲಿತ್ತು . ಈ ನಗರಗಳ / ದೇಶದ ಅಭಿವೃದ್ಧಿಗೆ ಹಣ ಸರಬರಾಜು ಆಗುತ್ತಿದ್ದದ್ದು ಬಹುತೇಕ ಸಾಂಬಾರ ವ್ಯಾಪಾರದಿಂದಲೇ.
 
೭ನೇ ಶತಮಾನದ ಸ್ಯಾಲಿಸ್ಬರಿಯ ಬಿಷಪ್ [[ಸೇ.ಅಲ್ಧೆಲ್ಮ್]] ಕರಿಮೆಣಸಿನ ಮೇಲೆ ಒಂದು [[ಒಗಟು|ಒಗಟನ್ನೇ]] ಬರೆದಿದ್ದಾನೆ. ಇದು [[ಇಂಗ್ಲೆಂಡ್|ಇಂಗ್ಲೆಂಡಿನಲ್ಲಿ]] ಆ ಕಾಲದಲ್ಲಿ ಮೆಣಸಿಗಿದ್ದ ಪ್ರಾಮುಖ್ಯತೆಯನ್ನು ತೋರಿಸುತ್ತದೆ :
Line ೭೫ ⟶ ೭೪:
ಮಧ್ಯಯುಗದಲ್ಲಿ ಮೆಣಸಿನಕಾಳನ್ನು ಹಳಸುತ್ತಿರುವ ಮಾಂಸದ ರುಚಿಯನ್ನು ಮರೆಮಾಚಲು ಉಪಯೋಗಿಸಲಾಗುತ್ತಿತ್ತು ಎಂಬ ಸಾಮಾನ್ಯ ಪ್ರತೀತಿಯಿದೆ. ಇದಕ್ಕೆ ಪುಷ್ಟಿಕೊಡುವಂತಹ ಯಾವುದೇ ಆಧಾರವಿಲ್ಲ . ಇತಿಹಾಸಕಾರರು ಕೂಡಾ ಇದು ಅಸಂಭವ ಎಂದು ಅಭಿಪ್ರಾಯಪಡುತ್ತಾರೆ. ಮಧ್ಯಯುಗದಲ್ಲಿ ಮೆಣಸು ಬರಿಯ ಶ್ರೀಮಂತರಿಗಷ್ಟೇ ಎಟುಕುವಂತಹ ಐಷಾರಾಮಿ ವಸ್ತುಗಳಲ್ಲಿ ಒಂದಾಗಿತ್ತು. ಅಂಥ ಶ್ರೀಮಂತರಿಗೆ ಹಳಸಲು ಮಾಂಸ ತಿನ್ನುವ ಅಗತ್ಯವೇನಿದ್ದೀತು ! <ref>ಡಾಲ್ಬಿ ಪುಟ. ೧೫೬; ಹಾಗೂ ಟರ್ನರ್ ಪುಟ. ೧೦೮-೧೦೯, ಆದರೆ ಟರ್ನರ್ ಮಸಾಲೆ ಪದಾರ್ಥಗಳ ಬಗ್ಗೆ ಬರೆಯುತ್ತಾ(ಪ್ರತ್ಯೇಕವಾಗಿ ಕರಿಮೆಣಸಿನ ಬಗ್ಗೆ ಬರೆಯದೆ), [[ವೈನ್]] ಮತ್ತು [[ಬೀರ್|ಬೀರ್‌ಗಳ]] ನಿಜಸ್ವರೂಪವನ್ನು ಮರೆಮಾಚಲು ಮಸಾಲೆ ಪದಾರ್ಥಗಳನ್ನು ಬಳಸಲಾಗುತಿತ್ತು ಎಂದಿದ್ದಾನೆ.</ref>
 
ಇದೇ ರೀತಿ ಆಹಾರ ಶೇಖರಿಸಲು ಮೆಣಸನ್ನು ಉಪಯೋಗಿಸುತಿದ್ದರು ಎಂಬ ಸುದ್ದಿ ಪ್ರಶ್ನಾರ್ಥಕವಾಗಿದೆ: ಮೆಣಸಿಗೆ ಖಾರ ಕೊಡುವ ಪೈಪರೈನ್ನಲ್ಲಿ ಅತೀ ಸೂಕ್ಷ್ಮ ರೋಗಾಣುಗಳ ವಿರುದ್ದ ಹೋರಾಡುವ ಶಕ್ತಿ ಇದೆ ಅನ್ನುವುದು ಸತ್ಯವಾದರೂ, ಅದನ್ನು ಸಾಂಬಾರ ಪದಾರ್ಥಗಳಲ್ಲಿ ಬಳಸುವ ಸಾಂದ್ರತೆಯನ್ನು ಲೆಕ್ಕಕ್ಕಿರಿಸಿಕೊಂಡರೆ ರೋಗಾಣುಗಳ ಮೇಲೆ ಇದರ ಪರಿಣಾಮ ಬಹಳ ಕಮ್ಮಿ.<ref> ಹೆಚ್.ಜೆ.ಡಿ.ಡಾರ್ಮನ್ ಮತ್ತು ಎಸ್.ಜಿ.ಡೀನ್ಸ್ ಬರೆದಿರುವ "Antimicrobial agents from plants: antibacterial activity of plant volatile oils" ಎಂಬ ಗ್ರಂಥ. [http://doi.org/10.1046/j.1365-2672.2000.00969.x ಪೂರ್ಣಪಾಠ]. </ref>
ಮೆಣಸಿಗೆ ಹೋಲಿಸಿದರೆ [[ಉಪ್ಪು]] ಶೇಖರಣೆಯಲ್ಲಿ ಹೆಚ್ಚು ಪರಿಣಾಮಕಾರಿ ,ಉದಾಹರಣೆಗೆ ಚಳಿಗಾಲದಲ್ಲಿ ಮಾಂಸಕ್ಕೆ ಉಪ್ಪನ್ನು ಸವರಿ ಅದು ಕೆಡದಂತೆ ಶೇಖರಿಸುವುದು. ಆದರೂ ಮೆಣಸು ಮತ್ತು ಇತರ ಸಾಂಬಾರ ಪದಾರ್ಥಗಳು ಬಹಳ ದಿನಗಳ ಕಾಲ ಶೇಖರಿಸಿಡುವ ಮಾಂಸದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
 
Line ೮೬ ⟶ ೮೫:
ಮಧ್ಯ ಯುಗದಲ್ಲಿ ಮೆಣಸು ಕೇವಲ ಶ್ರೀಮಂತರಿಗಷ್ಟೆ ಸೀಮಿತವಾಗಿತ್ತು ಆದರೆ ಕ್ರಮೇಣ ಅದು ಸಾಮಾನ್ಯ ಜನರಿಗೂ ನಿಲುಕುವಂತಾಯಿತು. ಈಗ ಪ್ರಪಂಚದ ಒಟ್ಟು ಸಾಂಬಾರ ಪದಾರ್ಥಗಳ ವ್ಯವಹಾರದಲ್ಲಿ ಸುಮಾರು ೧/೫ ರಷ್ಟು ಮೆಣಸಿನದಾಗಿದೆ.<ref>ಜಾಫೀ ಪುಟ. ೧೦</ref>
===ಚೀನಾದಲ್ಲಿ===
ಸಂಶೋಧಕ ಟಾಂಗ್ ಮೇಂಗನ ಪುರಾತನ ಕಾವ್ಯಗಳು ಸರಿಯಾಗಿದ್ದರೆ, ಸುಮಾರು ಕ್ರಿ.ಪೂ. ೨ನೇ ಶತಮಾನದಲ್ಲೆ ಕರಿಮೆಣಸು [[ಚೀನಾ|ಚೀನಾದಲ್ಲಿತ್ತೆಂದಾಗುತ್ತದೆ]]. ನೈರುತ್ಯ [[ಚೀನಾ|ಚೀನಾದ]] [[ಚಕ್ರವರ್ತಿ ವೂ]] ಟಾಂಗ್ ಮೇಂಗನಿಗೆ ಒಂದು ಪದಾರ್ಥವನ್ನು ಕಳುಹಿಸಿದ್ದನು ಅದನ್ನು ಅವರು 'ಜುಜಿಯಾಂಗ್' ಅಥವಾ 'ವಿಳ್ಳೆ ಎಲೆ - ದ್ರವ್ಯ' ಎಂದು ಕರೆಯುತಿದ್ದರು.ಅವನಿಗೆ ಇದು [[ಶು]] ಮಾರುಕಟ್ಟೆ ಪ್ರದೇಶದಿಂದ(ಈಗಿನ ಶಿಚುಯನ್ ಪ್ರಾಂತ್ಯ) ಬಂತೆಂದು ಹೇಳಲಾಗಿತ್ತು. ಇತಿಹಾಸಕಾರರ ಸಾಂಪ್ರದಾಯಿಕ ದೃಷ್ಟಿಯಿಂದ ಅದು ವಿಳ್ಳೆ ಎಲೆಯಿಂದ ಮಾಡಲ್ಪಟ್ಟ ದ್ರವ್ಯವಾಗಿತ್ತು, ಆದರೆ ವಾದ-ವಿವಾದಗಳು ಅದು ಕಪ್ಪು ಅಥವ ಉದ್ದ ಮೆಣಸಿನಿಂದ ಮಾಡಲಾಗಿತ್ತೆಂದು ತಿಳಿಯಪಡುತ್ತದೆ. <ref>ಡಾಲ್ಬಿ ಪುಟಗಳು ೭೪-೭೫. </ref>
 
ಕ್ರಿ.ಶ.೩ ನೇ ಶತಮಾನದಲ್ಲಿ ಚೀನಾದ ಪುಸ್ತಕಗಳಲ್ಲಿ ಪ್ರಥಮ ಬಾರಿಗೆ ಕರಿಮೆಣಸಿನ ಉಲ್ಲೇಖವಾಯಿತು. ಅದನ್ನು ಅವರು 'ಹುಜಿಯಾವ್' ಅಥವಾ 'ವಿದೇಶಿ ಮೆಣಸು' ಉಲ್ಲೇಖಿಸಿದ್ದರು. ಮೆಣಸು ಆಗಿನ ಕಾಲದಲ್ಲಿ ಅಷ್ಟಾಗಿ ಎಲ್ಲರಿಗೂ ತಿಳಿದಿರಲಿಲ್ಲ ಏಕೆಂದರೆ ೪ನೇ ಶತಮಾನದಲ್ಲಿ ಚೀನಾದ ಸಾಂಬಾರ ಪದಾರ್ಥಗಳ ಒಂದು ಪ್ರಭಂದದಲ್ಲಿ ಮೆಣಸಿನ ಉಲ್ಲೇಖವಿರಲಿಲ್ಲ.<ref>ಡಾಲ್ಬಿ ಪುಟ ೭೭</ref> ಆದರೆ ಕರಿಮೆಣಸು ಪ್ರಸಿದ್ದಿಯಾಗಿದ್ದು ೧೨ನೇ ಶತಮಾನದಲ್ಲಿ, ಇದು ಅನೇಕ ಶ್ರೀಮಂತರ ಹಾಗು ಪ್ರಭಾವಿತರ ಭೋಜನಗಳಲ್ಲಿ ನೆಲೆ ಮಾಡಿತ್ತು, ಬಹಳಷ್ಟು ಬಾರಿ ಚೀನಾದ ಪ್ರಸಿದ್ದ [[ಶಿಚುಯನ್ ಮೆಣಸು]](ನಾಲಿಗೆ ಜಡ ಬರಿಸುವ ಒಂದು ಗಿಡದ ಹಣ್ಣು).
೧೩ನೇ ಶತಮಾನದಲ್ಲಿ ಚೀನಾದ ಕಿನ್ಸಾಯ್([[ಝೆಜಿಯಾಂಗ್]]) ಮೆಣಸಿಗಿದ್ದ ಜನಪ್ರಿಯತೆಯನ್ನು [[ಮಾರ್ಕೊ ಪೋಲೊ]] ಹೀಗೆ ಬಣ್ಣಿಸುತ್ತಾನೆ : "...ಗ್ರೇಟ್ ಖಾನ್ ನ ಒಬ್ಬ ಸುಂಕಾಧಿಕಾರಿ , ಕಿನ್ಸಾಯ್ ಪಟ್ಟಣದಲ್ಲಿ ಒಂದು ದಿನದಲ್ಲಿ ಸುಮಾರು ೪೩ ಲೋಡುಗಳಷ್ಟು(ಒಂದು ಲೋಡು ಅಂದರೆ ೨೨೩ ಪೌಂಡು)ಮೆಣಸು ಖರ್ಚಾಗುತ್ತದೆ, ಎಂದು ಹೇಳುವುದನ್ನು ಮಾರ್ಕೊ ಕೇಳಿದ್ದನಂತೆ ."<ref>''The Travels of Marco Polo: The Complete Yule-Cordier Edition, Vol. 2'' ಕೃತಿಯಿಂದ ಅನುವಾದಿಸಿದ್ದು, Dover. ISBN 0486275876. ಪುಟ. ೨೦೪.</ref>
 
[[ಚೀನಾ|ಚೀನಾದ]] ಮಟ್ಟಿಗೆ ಮಾರ್ಕೊ ಪೋಲೊನನ್ನು ಒಬ್ಬ ನಂಬಿಕಸ್ಥ ಮೂಲ ಅಥವಾ ಆಕರ ಎಂದು ಪರಿಗಣಿಸಲಾಗುವುದಿಲ್ಲ, ಅದರಲ್ಲೂ ಇನ್ನೊಬ್ಬರಿಂದ ಕೇಳಿದ್ದು ಎನ್ನುವುದು ಹೆಚ್ಚಿನ ಸಂಶಯಕ್ಕೆ ಎಡೆ ಮಾಡೀಕೊಡುತ್ತದೆ, ಆದರೂ ಒಂದು ದಿನಕ್ಕೆ ಒಂದು ಪಟ್ಟಣದಲ್ಲಿ ೧೦,೦೦೦ ಪೌಂಡು(೪೫೦೦ ಕೇ.ಜಿ)ಖರ್ಚಾಗುತಿತ್ತು ಎನ್ನುವುದು ನಿಜಾಂಶಕ್ಕೆ ಹತ್ತಿರವಾಗಿದೆ.
Line ೯೭ ⟶ ೯೬:
ಎಲ್ಲಾ ಪೌರಾತ್ಯ ಸಾಂಬಾರ ಪದಾರ್ಥಗಳಂತೆ, ಕರಿಮೆಣಸನ್ನೂ ಸಹ ಸಾಂಬಾರ ಪದಾರ್ಥವಾಗಿ ಅಷ್ಟೇ ಅಲ್ಲದೇ ಔಷಧವಾಗಿಯೂ ಬಳಸುವ ಕ್ರಮ ಹಿಂದಿನಿಂದಲೂ ಬಂದಿದೆ. [[ಹಿಪ್ಪಲಿ|ಹಿಪ್ಪಲಿಯನ್ನು]] ಮುಖ್ಯವಾಗಿ ಔಷದಗಳಿಗೆ ಪ್ರಸ್ತಾಪಿಸದ್ದರು ಕರಿಮೆಣಸು ಕೂಡ ಔಷಧಿವಾಗಿ ಉಪಯೋಗಿಸುವರು.
 
ಭಾರತದಲ್ಲಿ [[ಆಯುರ್ವೇದ ]], [[ಸಿದ್ಧ ]] ಮತ್ತು [[ಯುನಾನಿ ]] ವೈದ್ಯಕೀಯ ಪದ್ಧತಿಗಳಲ್ಲಿ ಕರಿಮೆಣಸನ್ನು ಔಷಧಿಯಾಗಿ ಉಪಯೋಗಿಸುವುದು ಕಂಡುಬರುತ್ತದೆ. ೫ನೇ ಶತಮಾನದ ''ಸಿರಿಯಾಕ್ ಬುಕ್ ಆಫ್ ಮೆಡಿಸಿನ್ಸ್'' ಎಂಬ ಪುಸ್ತಕವು ಮೆಣಸನ್ನು [[ಮಲಬದ್ಧತೆ ]], [[ಅತಿಸಾರ]], [[ಕಿವಿನೋವು ]], [[ವ್ರಣ]], [[ಹೃದಯ ವಿಕಾರಗಳು(ಹೃದ್ರೋಗ) ]], [[ಹರ್ನಿಯಾ ]], ಗಂಟಲ ಬೇನೆ, [[ಅಜೀರ್ಣ ]], ಕೀಟ ವಿಷಭಾದೆ, [[ನಿದ್ರಾಹೀನತೆ ]], ಕೀಲು ನೋವು , [[ಯಕೃತ್ತಿನ]] ತೊಂದರೆ, [[ಪುಪ್ಪುಸ(ಶ್ವಾಶಕೋಶ)|ಪುಪ್ಪುಸ(ಶ್ವಾಶಕೋಶ)ದ]] ಕಾಯಿಲೆಗಳು , [[ಬಾಯಿ ಹುಣ್ಣು ]], [[ಚರ್ಮರೋಗ]], [[ಹುಳುಕು ಹಲ್ಲು]], ಮತ್ತು [[ಹಲ್ಲು ನೋವು ]] ಗಳಿಗೆ ಔಷಧಿಯಂತೆ ಉಪಯೋಗಿಸಬಹುದೆಂದು ತಿಳಿಸುತ್ತದೆ .<ref>ಟರ್ನರ್ ಪುಟ. ೧೬೦.</ref> ೫ನೇ ಶತಮಾನದ ನಂತರದ ಅನೇಕ ಗ್ರಂಥಗಳು ಮೆಣಸಿನ ಮಲಾಮು ಹಾಗೂ ಪಟ್ಟಿಗಳನ್ನು ಕಣ್ಣಿನ ತೊಂದರೆಗಳಿಗೂ ಉಪಯೋಗಿಸಬಹುದೆಂದು ಹೇಳುತ್ತವೆ. ಆದರೆ ಈ ಚಿಕಿತ್ಸೆಗೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲ. ಮೆಣಸನ್ನು ಕಣ್ಣಿಗೆ ನೇರವಾಗಿ ಲೇಪಿಸುವುದರಿಂದ ಕಣ್ಣು ಹಾಳಾಗುವ ಸಾಧ್ಯತೆಗಳೂ ಇದೆ. <ref>ಟರ್ನರ್ ಪುಟ. ೧೭೧.</ref>
 
ಕರಿಮೆಣಸು [[ಸೀನು|ಸೀನುವಿಕೆಯನ್ನು]] ಉಂಟು ಮಾಡುತ್ತದೆಂದು ಬಹುಕಾಲದಿಂದಲೂ ನಂಬಲಾಗಿದೆ. ಇದನ್ನು ನಿಜ ಎಂದು ಈಗಲೂ ನಂಬುತ್ತಾರೆ . ಕೆಲವು ಮೂಲಗಳ ಪ್ರಕಾರ ಮೆಣಸಿನಲ್ಲಿರುವ ಪಿಪರೀನ್ ಎಂಬ ಧಾತು ಮೂಗಿನ ಹೊಳ್ಳೆಗಳಿಗೆ ಉದ್ರೇಕಿಸಿ ಸೀನುಂಟು ಮಾಡುತ್ತದೆ ಎಂದು ಹೇಳುತ್ತವೆ.<ref>ಅಮೇರಿಕಾ ಗ್ರಂಥಾಲಯ ಪರಿಷತ್ತಿನ ವಿಜ್ಞಾನ ವಿಭಾಗದಲ್ಲಿನ "ಪ್ರತಿದಿನದ ವಿಸ್ಮಯಗಳು", [http://www.loc.gov/rr/scitech/mysteries/pepper.html ಮೆಣಸು ಏಕೆ ನಿಮ್ಮನ್ನು ಸೀನುವಂತೆ ಮಾಡುತ್ತದೆ?]. ಮಾಹಿತಿ ಪಡೆದ ದಿನಾಂಕ: [[ನವೆಂಬರ್ ೧೨]], [[೨೦೦೫]].</ref> ಇನ್ನೂ ಅನೇಕರ ಪ್ರಕಾರ ಈ ಸೀನುವಿಕೆಯು ಮೆಣಸಿನ ಸಣ್ಣ ಹುಡಿ ರೂಪದಿಂದ ಉಂಟಾಗುತ್ತದೆಯೆಂದೂ, ಮೆಣಸು ಅಷ್ಟು ಶಕ್ತಿಯುತವಾದ ಸೀನು ಉತ್ಪಾದಕವಲ್ಲವೆಂದೂ ಹೇಳುತ್ತಾರೆ. ಈ ದಿಕ್ಕಿನಲ್ಲಿ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ.
Line ೧೦೬ ⟶ ೧೦೫:
 
ಈ ಮೆಣಸು ಗಾಳಿಗೊಡ್ಡಿದರೆ ತನ್ನ ಸ್ವಾದ ಹಾಗೂ ಪರಿಮಳವನ್ನು ಕಳೆದುಕೊಳ್ಳುತ್ತದೆ, ಆದ್ಧರಿಂದ ಶೇಖರಿಸವಾಗ ಗಾಳಿಯಾಡದ ಜಾಗದಲ್ಲಿ ಶೇಖರಿಸಬೇಕು. ಅಂತಹ ವಾತಾವರಣದಲ್ಲಿ ಮೆಣಸು ದೀರ್ಘಕಾಲ ತನ್ನ ಸಾಂಬಾರ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಮೆಣಸನ್ನು ದೀರ್ಘಕಾಲ ಬೆಳಕಿಗೊಡ್ಡಿದಾಗ ತನ್ನ ಸ್ವಾದಿಷ್ಟತೆಯನ್ನು ಕಳೆದುಕೊಳ್ಳುತ್ತದೆ, ಏಕೆಂದರೆ ಬೆಳಕಿನಲ್ಲಿ [[ಪೈಪರೈನ್]] ಧಾತುವು ರುಚಿಯಿರದ [[ಇಸೊಚವಿಸಿನ್]] ಆಗಿ ಪರಿವರ್ತನೆ ಹೊಂದುತ್ತದೆ .<ref>''ibid''.</ref><br>
ಒಮ್ಮೆ ಪುಡಿಮಾಡಿದ ನಂತರ ಮೆಣಸಿನ ಸುಗಂಧ ಬಹಳ ಬೇಗನೆ ಆವಿಯಾಗಿ ಹೋಗುತ್ತದೆ. ಇದೇ ಕಾರಣಕ್ಕಾಗಿ ಅನೇಕ ಅಡುಗೆ ವಿಧಾನಗಳಲ್ಲಿ ಮೆಣಸನ್ನು ಪುಡಿ ಮಾಡಿದ ಒಡನೆಯೇ ಉಪಯೋಗಿಸಲಾಗುತ್ತದೆ. ಅನೇಕ ಬಾರಿ ಚಿಕ್ಕ ಮೆಣಸು ಹುಡಿ ಮಾಡುವ ಕೈ-ಯಂತ್ರವನ್ನು ಮೊದಲೇ ಪುಡಿಮಾಡಿ ಶೇಖರಿಸಿರುವ ಮೆಣಸಿಗೆ ಬದಲಾಗಿ ಉಪಯೋಗಿಸುತ್ತಾರೆ. ೧೪ನೇ ಶತಮಾನದಿಂದಲೇ ಈ ರೀತಿಯ ಕೈ-ಯಂತ್ರಗಳು [[ಯೂರೋಪ್]] ಹಾಗೂ [[ಭಾರತ|ಭಾರತದಲ್ಲಿ]] ಅನೇಕ ಕಡೆ ಪ್ರಚಲಿತವಾಗಿತ್ತು. ಇಂದಿಗೂ ಈ ಯಂತ್ರಗಳು ಬಳಕೆಯಾಗುತ್ತಾ ಬಂದಿವೆ. <ref>{{cite book | author=Montagne, Prosper | title=Larousse Gastronomique | publisher=Hamlyn | year=2001 | id=ISBN 0600602354 | pages=726}} "Mill".</ref>
<div style="clear:both"/>
==ಪ್ರಪಂಚದ ಸಾಂಬಾರ ಪದಾರ್ಥ ವ್ಯಾಪಾರದಲ್ಲಿ ಕರಿಮೆಣಸು ==
Line ೧೧೬ ⟶ ೧೧೫:
{{commons|Piper nigrum}}
 
{{Reflist}}
<div class="references-small">
<references />
</div>
ಕರಿಮೆಣಸು ಒಂದು ಅಪ್ಪು ಸಸ್ಯ. ಬಳ್ಳಿಯ ಗಂಟುಗಳಲ್ಲಿ ಬೇರು ಮೂಡುತ್ತವೆ. ಬೇರುಗಳು ಒಂದೊ ಆಧಾರ ಸಸ್ಯವನ್ನು ಅಪ್ಪುತ್ತವೆ ಅಥವಾ ಮಣ್ಣಿನಲ್ಲಿ ಇಳಿಯುತ್ತವೆ. ಈ ಬೇರುಗಳು ಮಣ್ಣು ಅಥವಾ ಮರದಕಾಂಡದಿಂದ ಪೋಷಕಾಂಶಗಳನ್ನು ಪಡೆಯುತ್ತವೆ. ಹೂವುಗಳು ಸೂಕ್ಷ್ಮವಾಗಿದ್ದು ಗೆರೆಗಳ ಮೇಲೆ ಮೂಡುತ್ತವೆ. ಗೆರೆಗಳು ಎಳತಾದ ಎಲೆಯ ಸಂದಿಯಲ್ಲಿ ಹುಟ್ಟುತ್ತವೆ. ಎಳೆ ಗೆರೆಗಳು ೪ ರಿಂದ ೮ ಸೆಂ.ಮೀ ಉದ್ದವಾಗಿದ್ದು ಪೂರ್ಣ ಬೆಳೆದ ಗೆರೆಯು ೭ ರಿಂದ ೧೫ ಸೆಂ.ಮೀ ಉದ್ದವಾಗಿರುತ್ತವೆ. ಬಳ್ಳಿಯು ಫಲವತ್ತಾದ ಹಾಗು ಪಸೆ ಇರುವ ಮಣ್ಣಿನಲ್ಲಿ ಬೆಳೆಯುತ್ತದೆ. ಸ್ವಾಭಾವಿಕವಾಗಿ ಹಣ್ಣಿನಿಂದ ಹಾಗು ಕಾಂಡದಿಂದ ಬರುವ ಬಳ್ಳಿಯಿಂದ ಸಂತಾನಭಿವೃದ್ಧಿಯಾಗುತ್ತದೆ. ಕೃಷಿ ಮಾಡುವವರು ಬಳ್ಳಿಯನ್ನು ೧ ಮೀ ಉದ್ದಕ್ಕೆ ಕತ್ತರಿಸಿ ನಾಟಿ ಮಾಡುತ್ತಾರೆ. ಗಟ್ಟಿ ಕಾಂಡದ ಸಸ್ಯಗಳ ಮೇಲೆ ಇವು ಬೇಗ ಬೆಳೆಯುತ್ತವೆ. ಉತ್ತಮ ಗಾಳಿ ಬೆಳಕು ಬಳ್ಳಿಗೆ ಅವಶ್ಯ, ಹಾಗೇಯೆ ಸ್ವಲ್ಪ ನೆರಳು ಕೂಡ ಅವಶ್ಯ. ಬಳ್ಳಿಯು ೪ರಿಂದ ೫ ವರ್ಷಗಳಲ್ಲಿ ಫಲ ನೀಡಲು ಪ್ರಾರಂಭಿಸುತ್ತದೆ. ಗೆರೆಯಲ್ಲಿ ಒಂದೆರಡು ಕಾಳುಗಳು ಹಣ್ಣಾದಾಗ ಕೊಯ್ಲು ಪ್ರಾರಂಭಿಸಬಹುದು. ಕಾಳು ಹಣ್ಣಾದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕೊಯ್ಲು ಮಾಡಿದ ಗೆರೆಗಳಿಂದ ಕಾಳನ್ನು ಬೇರ್ಪಡಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಮೂರು ನಾಲ್ಕು ಬಿಸಿಲಿನ ನಂತರ ಕಾಳುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕರಿಮೆಣಸಿಗೆ ಆಂಗ್ಲ ಭಾಷೆಯ ಪದ ಪೆಪ್ಪರ್ ಎಂಬುದು ಸಂಸ್ಕೃತದ ಪದ ಪಿಪ್ಪಲಿ ಎಂಬ ಪದದ ಗ್ರೀಕ್ (ತನ್ಮೂಲಕ ಲ್ಯಾಟಿನ್) ಬಳಕೆಯಿಂದ ಬಂದಿದೆ ಎಂದು ನಂಬಲಾಗಿದೆ.
 
Line ೧೩೬ ⟶ ೧೩೩:
<!-- Languages -->
 
[[Categoryವರ್ಗ:ಸಾಂಬಾರು ಬೆಳೆ]]
 
[[Categoryವರ್ಗ:ಸಾಂಬಾರು ಪದಾರ್ಥ]]
 
[[Categoryವರ್ಗ:ತೋಟಗಾರಿಕ ಬೆಳೆಗಳು]]
[[Category:ಸಾಂಬಾರು ಬೆಳೆ]]
[[Category:ಸಾಂಬಾರು ಪದಾರ್ಥ]]
[[Category:ತೋಟಗಾರಿಕ ಬೆಳೆಗಳು]]
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕರಿಮೆಣಸು" ಇಂದ ಪಡೆಯಲ್ಪಟ್ಟಿದೆ