ಹುಸೇನಿ ಬ್ರಾಹ್ಮಣರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಹುಸೇನಿ ಬ್ರಾಹ್ಮಣರು''' [[ಪಂಜಾಬ್]] ಪ್ರಾಂತ್ಯದ ಮೋಹ್ಯಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪ್ರಮುಖವಾಗಿ [[ಪಾಕಿಸ್ತಾನ|ಪಾಕಿಸ್ಥಾನ]]ದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್,[[ರಾಜಸ್ಥಾನ|ರಾಜಸ್ತಾನ]], [[ದೆಹಲಿ]], [[ಮಹಾರಾಷ್ಟ್ರ]]ಗಳಲ್ಲಿ ನೆಲೆಗೊಂಡಿದೆ. [[ಹಿಂದೂ ಧರ್ಮ|ಹಿಂದೂ]] ಮತ್ತು [[ಇಸ್ಲಾಂ ಧರ್ಮ]]ವನ್ನು ಬೆಸೆಯುವಂಥಹ ಸಂಸ್ಕೃತಿ ಹೊಂದಿರುವ ಈ ಸಮುದಾಯವು, ತಮ್ಮನ್ನು ತಾವು ಹಿಂದುಗಳೆಂದು ಗುರುತಿಸಿಕೊಳ್ಳುತ್ತಾರೆ.ಇವರು [[ಪ್ರವಾದಿ ಮುಹಮ್ಮದ್|ಮೊಹಮ್ಮದ]]ರನ್ನು ಹಿಂದೂ ದೇವರ ಒಂದು ಅವತಾರ ಎಂದೇ ಭಾವಿಸುತ್ತಾರೆ. ಆದ್ದರಿಂದ ಕೆಲವು ಇಸ್ಲಾಮಿನ ಆಚರಣೆಗಳನ್ನೂ ಅನುಸರಿಸುತ್ತಾರೆ. ಸುಮಾರು ೧೪೦೦ ಹುಸೇನಿ ಬ್ರಾಹ್ಮಣರು ಕರಬಲಾ ಯುದ್ಧ ನಡೆಯುವ ಸಂದರ್ಭದಲ್ಲಿ [[ಬಾಗ್ದಾದ್|ಬಾಗ್ದಾದಿ]]ನಲ್ಲಿ ನೆಲೆಸಿದ್ದರೆಂದು ತಿಳಿದು ಬರುತ್ತದೆ<ref>https://web.archive.org/web/20161017234420/http://en.shafaqna.com/news/38333</ref>. ಸುಮಾರು ೧೨೫ ಹುಸೇನಿ [[ಬ್ರಾಹ್ಮಣ]] ಕುಟುಂಬಗಳು [[ಪುಣೆ]]ಯಲ್ಲಿ ನೆಲೆಸಿರುವರು<ref>https://web.archive.org/web/20160127211246/http://epaper.timesofindia.com/Default/Layout/Includes/MIRRORNEW/ArtWin.asp?From=Archive&Source=Page&Skin=MIRRORNEW&BaseHref=PMIR%2F2010%2F12%2F19&ViewMode=HTML&EntityId=Ar00700&AppName=1</ref>. ದೆಹಲಿಯಲ್ಲಿ ನೆಲೆಗೊಂಡಿರುವ ಈ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಪ್ರತೀ ವರ್ಷ ಮೊಹರಂ ಆಚರಿಸುತ್ತಾರೆ.
 
== ಇತಿಹಾಸ ==
ಹುಸೇನೀ [[ಬ್ರಾಹ್ಮಣ|ಬ್ರಾಹ್ಮಣರು]] [[ಸಾಮಾನ್ಯ ಯುಗ]] ೬೮೦ ಸಮಯದಲ್ಲಿ ಪ್ರಸ್ತುತ [[ಇರಾಕ್|ಇರಾಕ್‍]]ನ ಯುಫರೇಟ್ ನದಿಯ ತಟದಲ್ಲಿರುವ ಅಲ್-ಹಿಂದಿಯಾ ಎಂದು ಕರೆಯಲಾಗುವ ಪ್ರದೇಶದಲ್ಲಿ ವಾಸವಿದ್ದರು. ಆ ಸಮಯದಲ್ಲಿ ಈ ಪ್ರದೇಶ ದೈರ್ ಅಲ್ ಹಿಂದಿಯಾ ಎಂದು ಕರೆಯಲ್ಪಡುತ್ತಿತ್ತು. ಅಂದರೆ ಹಿಂದೂ ಜನರ ವಾಸ ಸ್ಥಳ ಎಂಬುದಾಗಿ ಅರ್ಥೈಸಲಾಗುತ್ತದೆ.<ref name=":0">Mahdi Nazmi (1984). Reg-i-Surkh: Dut Brahman Imam Husain se Rabt o Zabt. Abu Talib Academy, New Delhi. pp. 63–71.</ref> ಕರಬಲ ಯುದ್ದದಲ್ಲಿ ಅಥವಾ ಮೊಹಮ್ಮದ ಹುಸೈನ್‍ರಿಗೆ ಬೆಂಬಲ ನೀಡಿದ ಬ್ರಾಹ್ಮಣ ಸಮುದಾಯದಕ್ಕೆ ಸೇರಿದ ಒಂದು ಪಂಗಡವನ್ನು ಹುಸೇನಿ ಬ್ರಾಹ್ಮಣರೆಂದು ಕರೆಯುತ್ತಾರೆ<ref>https://www.ichowk.in/society/amazing-story-of-hussaini-brahmin-who-fought-for-imam-hussain-in-karbala/story/1/12432.html</ref>. ಮೊಹಮ್ಮದ ಹುಸೈನ್‌ರನ್ನು ಹುಸೈನ್ ಇಬ್ನ ಅಲಿ ಎಂದೂ ಕರೆಯುತ್ತಾರೆ. ಇವರು ಪ್ರವಾದಿ ಮೊಹಮ್ಮದರ ಮೊಮ್ಮಗ, ಅಂದರೆ ಫಾತಿಮಾ ಅವರ ಮಗ. ಮೌಖಿಕ ಇತಿಹಾಸದ ಪ್ರಕಾರ [[ಸಾಮಾನ್ಯ ಯುಗ]] ೬೮೦ರ ಆಸುಪಾಸಿನಲ್ಲಿ ಬಾಗ್ದಾದ್‍ನಲ್ಲಿ ನೆಲೆಗೊಂಡಿದ್ದ ಬ್ರಾಹ್ಮಣ ಸಮುದಾಯ ಪ್ರಮುಖ ವ್ಯಕ್ತಿ, ರಹಾಬ್ ಸಿಧ್ ದತ್ತಾ ವಿವಾಹವಾಗಿ ಹಲವು ವರ್ಷಗಳ ಬಳಿಕವೂ ಮಕ್ಕಳಿಲ್ಲದೇ ಕೊರಗುತ್ತಿರುತ್ತಾರೆ. ಆಗ ಹುಸೈನ್ ಇಬ್ನ ಅಲಿ ಅವರು ದೇವರಲ್ಲಿ ದತ್ತಾ ಅವರ ಪರವಾಗಿ ಪ್ರಾರ್ಥಿಸಲು, ದತ್ತಾ ದಂಪತಿಗಳಿ ಏಳು ಸಂತಾನಗಳ ಪ್ರಾಪ್ತಿಯಾಯ್ತು ಎಂದು ತಿಳಿದು ಬರುತ್ತದೆ. ಈ ಘಟನೆಯಿಂದ ಇಸ್ಲಾಂ ಮತ್ತು ಹಿಂದೂ ಬ್ರಾಹ್ಮಣ ಪಂಗಡಗಳ ನಡುವೆ ನಿಕಟತೆ ಬೆಳೆಯಿತು. ಇದೇ ಕಾರಣಕ್ಕೆ ಈ ಬ್ರಾಹ್ಮಣ ಪಂಗಡದವರು ಕರಬಲಾ ಯುದ್ದದಲ್ಲಿ ಹುಸೈನರಿಗೆ ಬೆಂಬಲಿಸಿದರು. ಹುಸೈನ್ ಮತ್ತು ಖಲೀಫ ಯಾಜಿದ್ ನಡುವೆ ಭೀಕರ ಯುದ್ಧ ನಡೆಯಿತು. ಹುಸೇನ ಪರವಾಗಿ ತನ್ನ ಏಳು ಜನ ಮಕ್ಕಳು ಹಾಗೂ ೫೦೦ ಜನ ವೀರ ಸೈನಿಕರೊಂದಿಗೆ ರಹಾಬ್‌ ಸಿದ್ಧ ದತ್ತ ಯುದ್ದದಲ್ಲಿ ಪಾಲ್ಗೊಳ್ಳುತ್ತಾರೆ. [[ಮೊಹರಂ ಕುಣಿತ|ಮೊಹರಂ]] ಹತ್ತನೆಯ ದಿನದಂದು ಸಿದ್ಧ ದತ್ತನ ಏಳೂ ಜನ ಮಕ್ಕಳು ಹಾಗೂ ಅಲಿ ಅಕ್ಬರ, ಅಲಿ ಅಸ್ಗರ್ ಮುಂತಾದವರು ಯುದ್ಧದಲ್ಲಿ ಮರಣ ಹೊಂದುತ್ತಾರೆ. ವೀರಯುದ್ಧ ಮಾಡಿ ಮರಣಿಸಿದ ಈ ಸೈನಿಕರ ಸಂತಾನವನ್ನು ಹುಸೇನಿ ಬ್ರಾಹ್ಮಣರು ಎಂದೇ ಇಂದಿಗೂ ಗುರುತಿಸಲಾಗಿದೆ. ಯುದ್ಧಾನಂತರ ಅಳಿದುಳಿದವರೆಲ್ಲ ಭಾರತಕ್ಕೆ ಮರಳಿ ಪಂಜಾಬ್ ಮತ್ತಿತರ ಪ್ರದೇಶಗಳಲ್ಲಿ ನೆಲೆಯಾಗುತ್ತಾರೆ. ಇಂದಿಗೂ ಹುಸೇನಿ ಬ್ರಾಹ್ಮಣರು ಮೊಹರಂ ಆಚರಿಸುತ್ತಾರೆ. ತಾಝಿಯಾ ಸ್ವೀಕರಿಸಿ ಶೋಕಾಚರಣೆ ಮಾಡುತ್ತಾರೆ.
 
== ಇತರ ವಿವರಗಳು ==