ಮಹಿಳೆಯರಿಗೆ ಮನೆ ಔಷದಿ

ಮಹಿಳೆಯರಿಗೆ ಮನೆ ಔಷದಿ ಬದಲಾಯಿಸಿ

ಗರ್ಭಿಣಿಯರಲ್ಲಿ ತಲೆನೋವು ವಾಂತಿ ;

ಒಂದು ಟೀ ಚಮಚಕ್ಕೆ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹರೆದು ಒಂದು ಬಟ್ಟಲು ಅಕ್ಕಿ ತೊಳೆದ ನೀರಿನಲ್ಲಿ ಸಕ್ಕರೆ ಬೆರೆಸಿ ಸೇವಿಸುವುದರಿಂದ ವಾಂತಿ ನಿವಾರಣೆ ಯಾಗುತ್ತದೆ. ಮತ್ತು ಹಳೆಯ ಅಕ್ಕಿ ನುಚ್ಚನ್ನು ನೆನೆ ಹಾಕಿ ಚೆನ್ನಾಗಿ ನೀರಿನಲ್ಲಿ ಹಾಕಬೇಕು ತದನಂತರ ಅದನ್ನು ಚನ್ನಾಗಿ ಕಿವುಚಿ ನೀರನ್ನು ಬಳಸಿರಿ ಒಂದು ಬಟ್ಟಲು ಬಸಿದ ನೀರಿಗೆ ಕೊತ್ತಂಬರಿ ಬೀಜವನ್ನು ಹಾಕೆ ಅದನ್ನ ಹೊಟ್ಟೆ ಉಬ್ಬರದಿಂದ ಮಗು ನೋವು ಅನುಭವಿಸುತ್ತಿದ್ದರೆ ಹರಳೆಣ್ಣೆ ಸವರಿಸ ವಿಳ್ಯದೆಲೆಯನ್ನು ದೀಪದ ಶಾಖಕ್ಕೆ ಹಿಡಿದು ಬಿಸಿ ಮಾಡಿ ಆ ಎಲೆ ಇಂದ ಮಗುವಿನ ಹೊಟ್ಟೆಯ ಮೇಲೆ ಇಡಿಯಬೇಕು ಹಾಗಾದಲ್ಲಿ ಹೊಟ್ಟೆ ನೋವು ಶಾಂತವಾಗುವುದು. ಹಳಿ ತೇಗು ನಿವಾರಣೆ; ಮದ್ಯಮ ಗಾತ್ರದ ನಿಂಬೆ ಹಣ್ಣನ್ನು ಕತ್ತರಿಸಿ ರಸ ತೆಗೆದು ಆ ರಸವನ್ನು ಸೇವಿಸಿ. ಮಗು ಕುಡಿದ ಹಾಲು ಕಕ್ಕುವ ಅಬ್ಯಾಸ ವಿದ್ದರೆ; ಹಾಲಿನೊಂದಿಗೆ ಎಳೆನೀರು ಮಿಶ್ರಮಾಡಿ ಮಗುವಿಗೆ ಕೊಟ್ಟರೆ ಕಕ್ಕುವುದು ನಿಂತುಹೊಗುವುದು.                                                 

ಮಲಬದ್ದತೆ ನಿವಾರಣೆ ಬದಲಾಯಿಸಿ

ವೇಳೆಗೆ ಸರಿಯಾಗಿ ಅಗತ್ಯ ಪ್ರಮಾಣದ ಅಹಾರ ಸೇವಿಸಿ ತಾಜಾ ಹಣ್ಣನ್ನು ಮತ್ತು ಹಸಿ ಕಾಲೀ ಪಲ್ಲೆ ಧಾರಾಳವಾಗಿ ಸೇವಿಸಿ. ಯಥೇಚ್ಚವಾಗಿ ನೀರನ್ನು ಸೇವಿಸಿ, ಬೆಳಗ್ಗಿನ ಉಪಹಾರಕ್ಕೆ ಅರ್ಧ ಗಂಟೆ ಮುಂಚೆ ಒಂದು ಬಟ್ಟಲು ಬಿಸಿ ನೀರು ಮತ್ತು ರಾತ್ರಿ ಮಲಗುವುದಕ್ಕೆ ಅರ್ಧ ಗಂಟೆ ಮುಂಚೆ ಒಂದು ಬಟ್ಟಲು ಬಿಸಿ ನೀರು ತಪ್ಪದೇ ಸೇವಿಸಿ ರಾತ್ರಿ ವೇಳೆ ಒಂದು ಬಾಳೆ ಹಣ್ಣು ಅಥವ ಒಂದು ಹೋಳು ಪರಂಗಿ ಹಣ್ಣು ತಿನ್ನಿರಿ ಮಲಬದ್ದತೆ ನಿವಾರಣೇ ಆಗುವವರೆಗೂ ಇದೇ ಕ್ರಮವನ್ನು ಅನುಸರಿಸಿ.ದಿನಾಲು ನಿಯಮಿತ ವೇಳೆಯಲ್ಲಿ ಮಲವಿಸರ್ಜನೆ ಮಾಡುವುದನ್ನು ಅಬ್ಯಾಸ ಮಾಡಿಕೊಳ್ಳಿ.ಪರಂಗಿ ಹಣ್ಣುಗಳನ್ನು ಸಣ್ಣನೆ ಹೋಳುಮಾಡಿ ಆ ಹೋಳುಗಳಿಗೆ ಜೀರಿಗೆ ಪುಡಿ ಸೇರಿಸಿ ಚಿನ್ನಾಗಿ ಮಿಶ್ರಮಾಡಿ ಇದನ್ನು ಸೇವಿಸುವುದರಿಂದ ಮಲ ಬದ್ದತೆ ನಿವಾರಣೆ ಯಾಗುತ್ತದೆ.

ಮಗುವಿಗೆ ಮಲಬದ್ದತೆ ಉಂಟಾದರೆ ಬದಲಾಯಿಸಿ

ಒಂದು ಟೀ ಚಮಚ ಕರಿಬೇವಿನ ಸೊಪ್ಪಿನ ಕಷಾಯವನ್ನು ಹಾಲಿನೊಂದಿಗೆ ಸೇರಿಸಿ ಮಗುವಿಗೆ ಒಂದು ವಾರಗಳ ಕಾಲ ನೀಡಿ.

ಎಳೆಯ ಮಗುವಿಗೆ ಬೇದಿ ಉಂಟಾದಾಗ ಬದಲಾಯಿಸಿ

ಅಳಲೇ ಕಾಯಿ ಸಿಪ್ಪೆಯನ್ನು ನಿಣ್ಣಗೆ ಪುಡಿ ಮಾಡಿ ಒಂದು ಚಿಟಕಿ ಚೂರ್ಣವನ್ನು ಜೇನು ತುಪ್ಪದೊಂದಿಗರ ಬೆರೆಸಿ ಮಗುವಿನ ಕೊರಳಿನಲ್ಲಿ ಚಿಕ್ಕಿಸಿ ಹೀಗೆ ಒಂದು ವಾರಗಲ ಕಾಲ ಮಾಡುತ್ತಾ ಬನ್ನಿ ಮಗುವಿಗೆ ಅರಾಮ ವಾಗುತ್ತದೆ. ಜಂತು ಹುಳ ನಿವಾರಣೆ ಊಟಕ್ಕೆ ಮುಂಚೆ ಅಥವ ಊಟದ ನಂತರ ೨೦ ೨೫ ಪರಂಗಿ ಹಣ್ನೀನ ಬೀಜವನ್ನು ಸ್ವೀಕರಿಸಿ ಹಾಗೆ ಮಾಡಿದಲ್ಲಿ ಹಳ ಕಡಿಮೆ ಯಾಗುತ್ತದೆ.

ಮೂಲವ್ಯಾದಿ ಬದಲಾಯಿಸಿ

ಬಟ್ಟಲು ಬೆಣ್ಣೆ ತೆಗೆದ ಮಜ್ಜಿಗೆ ಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದು ಉತ್ತಮ. ಹಳಿ ಮಜ್ಜಿಗೆ ಯಾದರೆ ಬಹಳ ಒಳ್ಳೆಯದು. ಮೂಲ ವ್ಯಾದಿ ಇಂದ ನರಳುವವರು ಹೆಸರು ಕಾಳು ಅಥವ ಹುರುಳಿಕಾಳು ಬೇಯಿಸಿ ಬಸಿದ ಕಟ್ಟು ಮತ್ತು ಹಳೇ ಅನ್ನ ಊಟಮಾಡುವುದು ಲೇಸು. ಹಸಿ ಮೂಲಂಗಿ ಮತ್ತು ಮೂಲಂಗಿ ಸೊಪ್ಪನ್ನು ಎಷ್ಟು ಆಗುತ್ತದೋ ಅಷ್ಟು ಸೇವಿಸುವುದರಿಂದ ಈ ವ್ಯಾದಿ ನಿಂತು ಹೋಗುತ್ತದೆ. ಅತೀ ಹೆಚ್ಚಾಗಿ ನೀರನ್ನು ಸೇವಿಸುವುದನ್ನು ಮರೆಯಬೇಡ. ಪ್ರತೀ ದಿನ ರಾತ್ರಿ ಮಲಗುವ ಮುನ್ನ ಸಿಪ್ಪೆ ಸಮೇತವಾದ ಒಂದು ಏಲಕ್ಕಿ ಯನ್ನು ಕಳಿತ ಬಾಳೇಹಣ್ಣಿನೊಂದಿಗೆ ಸೇವಿಸಿ ಹೀಗೆ ಮಾಡುತ್ತಾ ಬಂದಲ್ಲಿ ಮೂಲವ್ಯಾದಿ ನಿವಾರಣೆಯಾಗುತ್ತದೆ. ಮೆಂತ್ಯವನ್ನು ಹುರಿದು ಕುಟ್ಟಿ ಮಡಿಮಾಡಿ ಒಂದು ಟೀ ಚಮಚ ಪುಟಿಯನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದು ಉತ್ತಮ. ಆಗತಾನೆ ಹಿಂಡಿದ ಹಸುವಿನ ನೊರೆ ಹಾಲಿಗೆ ನಿಂಬೆ ರಸ ಸೇರಿಸಿ ವಿಳಂಬ ಮಾಡದೆ ಸೇವಿಸಿ. ಈ ಚಿಕಿಸ್ಸೆ ಇಂದ ಒಂದು ವಾರದೊಳಗೆ ವ್ಯಾದಿ ಗುಣಮುಕ ಹೊಂದ ಬಹುದು. ===ಉರಿ ಮೂತ್ರಕ್ಕೆ ಚಿಕಿತ್ಸೆ=== ಹೆಚ್ಚಾದ ನೀರನ್ನು ಸೇವಿಸಲು ರೂಡಿಮಾಡಿ ಕೊಳ್ಳುವುದು ಉತ್ತಮ ಯಾಕೆಂದರೆ ನೀರಿನಲ್ಲಿ ಎಲ್ಲಾ ರೋಗವನ್ನು ನಿವಾರಣೆ ಮಾಡುವ ಶಕ್ಕಿ ಇದೆ, ಎಷ್ಟೇ ನೀರು ಸೇವಿಸಿದರೂ ನಮ್ಮ ದೇಹಕ್ಕೆ ಉತ್ತಮ, ದಿನಕ್ಕೆ ಏಳೆಟು ಬಟ್ಟಲಾದರೂ ನೀರನ್ನು ಸೇವಿಸಿ, ಇದಕ್ಕೆ ಬೇಕಾದರೆ ನಿಂಬೆ ರಸವನ್ನು ಸೇರಿಸಿ ಕೊಳ್ಳಬಹುದು ಒಂದು ಚಿಟಿಕಿ ರುಚಿಗೆ ತಕ್ಕ ಉಪ್ಪನ್ನು ಹಾಕಿ ಕೊಳ್ಳಿ ತದನಂತರ ಚೆನ್ನಾಗಿ ಬೆರಸಿ ಸೇವಿಸಿ. ಒಂದು ಬಟ್ಟಲು ಎಳೆ ನೀರಿಗೆ ಸ್ವಲ್ಪ ಬೆಲ್ಲಾ ಮತ್ತು ಅರ್ಧ ಚಿಟಕು ಟಿ ಪುಡಿ ಕೊತ್ತಂಬರೀ ಬೀಜದ ಚೂರ್ಣ ಸೇವಿಸಿ ಹೀಗೆ ಮಾಡುವುದರಿಂದ ಉರಿ ಮೂತ್ರದ ನಿವಾರಣೇಯಾಗುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ಮತ್ತು ಮಜ್ಜಿಗಯನ್ನು ಸಮಾಪ್ರಮಾಣದಲ್ಲಿ ಮಿಶ್ರ ಮಾಡಿ ಸೇವಿಸುವುದರಿಂದ ಉರಿಯನ್ನು ನಿವಾರಿಸ ಬಹುದಾದೆ.

ಮೂತ್ರದೊಂದಿಗೆ ತಕ್ತ ಬೀಳುವಿಕೆ ಬದಲಾಯಿಸಿ

ಬಲಿತ ನೆಲ್ಲಿಕಾಯಿಯನ್ನು ಜಜ್ಜಿ ನಿಣ್ಣಗೆ ಅರೆದು ನೀರಿನಲ್ಲಿ ಕದಡಿ ಶೋದಿಸಿ. ಈ ರಸಕ್ಕೆ ಸೇರಿಸಿ ನೆಲ್ಲಿಕಾಯಿ ಪಾನಕವನ್ನು ತಯಾರು ಮಾಡಿ ಹೀಗೆ ಮಾಡುವುದರಿಂದ ಮೂತ್ರದೊಂದಿಗಿನ ರಕ್ತವನ್ನು ನಿವಾರಣೆ ಕೂಡ ಮಾಡಬಹುದು.