ಮಲೆಕುಡಿಯ ಜನಾಂಗವು ಪ್ರಾಚೀನ ಜನಾಂಗಗಳಲ್ಲಿ ಒಂದು ,ತುಳುನಾಡಿನ ಮೂಲ ನಿವಾಸಿಗಳು ಮಲೆಕುಡಿಯರು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹೆಚ್ಚಾಗಿ ಈ ಸಮುದಾಯದ ಜನರು ವಾಸವಾಗಿದ್ದಾರೆ ದಕ್ಷಿಣಕನ್ನಡ ಉಡುಪಿ , ಚಿಕ್ಕಮಗಳೂರು , ಮಡಿಕೇರಿ , ಕಾಸರಗೋಡು ಭಾಗಗಳಲ್ಲಿ ಮಲೆಕುಡಿಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕುಕ್ಕೆ ಸುಬ್ರಮಣ್ಯದಲ್ಲಿ ರಥ ಕಟ್ಟುವ ಕೆಲಸವನ್ನು ತುಳುನಾಡಿನ ಪ್ರಮುಖ ದೇವಾಲಯಗಳಲ್ಲಿ ದೇವರ ಸೇವೆಯನ್ನು ಮಾಡುವುದು ಕೂಡ ಇದೇ ಸಮುದಾಯದ ಜನರು , ಕುಕ್ಕೆ ಸುಬ್ರಮಣ್ಯದಲ್ಲಿ ದೇವರು ಸಿಕ್ಕಿದ್ದೇ ಮಲೆಕುಡಿಯರಿಗೆ ಎಂಬ ಪ್ರತೀತಿ ಕೂಡ ಇದೆ ಹಾಗಾಗಿ ಮಲೆಕುಡಿಯರು ಇಲ್ಲದೆ ಅಲ್ಲಿ ಯಾವುದೇ ದೇವತಾ ಕಾರ್ಯ ರಥೋತ್ಸವ ನಡೆಯುವುದಿಲ್ಲ . ಶ್ರಮ ಜೀವಿಗಳಾದ ಇವರು ಕಾಡೋತ್ಪತ್ತಿ ಸಂಗ್ರಹ , ನಾಟಿ ಮದ್ದು ನೀಡುವುದು , ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇತ್ತೀಚಿನ ದಿನಗಳಲ್ಲಿ  ಈ ಸಮಾಜವು ಅನೇಕ ಮುಂದುವರಿದ ಸಮುದಾಯಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿ ಆಗುತ್ತಿದೆ ಬ್ಯಾಂಕ್ ಉದ್ಯೋಗಿಗಳು ,ಸರಕಾರಿ ನೌಕರರು , ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು ಈ ಸಮುದಾಯದಲ್ಲಿ ಇದ್ದಾರೆ , ಹುಲಿ ಯೋಜನೆಯಂತಹ ಜನವಿರೋಧಿ ಯೋಜನೆಗಳು ಪ್ರಸ್ತಾಪ ಆದಾಗ ಶ್ರೀಧರ್ ಗೌಡ ರಂತಹ ಮಲೆಕುಡಿಯ ಸಮುದಾಯದ ಮುಖಂಡರು ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದ್ದಾರೆ.  

ಪರಿವಿಡಿ ಬದಲಾಯಿಸಿ

೧)ಕಲೆ ೨)ನಂಬಿಕೆ ೩)ಆಚರಣೆ ೪)ಪಂಗಡ