ಭಾರಶಿವ ರಾಜವಂಶ (ಸು. ಕ್ರಿ.ಶ. 170–350) ಗುಪ್ತ ಪೂರ್ವ ಕಾಲದ ಅತ್ಯಂತ ಪ್ರಬಲ ರಾಜವಂಶವಾಗಿತ್ತು. ವೀರಸೇನನ ನೇತೃತ್ವದಲ್ಲಿ ವಿದೀಶಾದ ನಾಗರು ಮಥುರಾಕ್ಕೆ ಸ್ಥಳಾಂತರಗೊಂಡು ಇತರ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಆರಂಭಿಸಿದರು. ಅವರು ಪದ್ಮಾವತಿ ಪವಾಯಾ, ಕಾಂತಿಪುರಿ ಮತ್ತು ವಿದೀಶಾವನ್ನು ತಮ್ಮ ರಾಜಧಾನಿಗಳನ್ನಾಗಿ ಮಾಡಿಕೊಂಡು, ಈ ರಾಜ್ಯಗಳ ಅರಸರಾಗಿ ತಮ್ಮ ಕುಟುಂಬ ಸದಸ್ಯರನ್ನು ಇರಿಸಿದರು. ಒಬ್ಬ ವಿದ್ವಾಂಸನ ಪ್ರಕಾರ ಮಥುರಾದ ನಾಗರು ಭಾರಶಿವದ ರಾಜವಂಶದ ಅಧಿಪತಿಗಳಾಗಿದ್ದರು.[೧]

ಮಥುರಾದ ನಾಗರು ಬದಲಾಯಿಸಿ

ಕುಷಾಣರ ಪತನದ ಕಾರಣ, ರಾಜ ವೀರಸೇನನ ನೇತೃತ್ವದಲ್ಲಿ ಮಥುರಾದ ನಾಗರು ಸ್ವಾತಂತ್ರ್ಯ ಪಡೆದು ಭಾರಶಿವ ರಾಜವಂಶವನ್ನು ಸ್ಥಾಪಿಸಿದರು. ಭಾರಶಿವ ಪ್ರಾಂತ್ಯಗಳು ಮಾಲ್ವಾದಿಂದ ಪೂರ್ವ ಪಂಜಾಬ್‍ವರೆಗೆ ವಿಸ್ತರಿಸಿದ್ದವು, ಮತ್ತು ಮಥುರಾ, ಕಾಂತಿಪುರಿ ಹಾಗೂ ಪದ್ಮಾವತಿಗಳಲ್ಲಿ ಮೂರು ರಾಜಧಾನಿಗಳನ್ನು ಹೊಂದಿದ್ದವು.[೨]

ವೀರಸೇನ ನಾಗನ ನಂತರ, ಪದ್ಮಾವತಿಯ ಕುಟುಂಬ ಅವನ ಉತ್ತರಾಧಿಕಾರಿಯಾಗಿ ಸ್ವಲ್ಪಕಾಲ ಇಡೀ ಭಾರಶಿವ ಸಾಮ್ರಾಜ್ಯವನ್ನು ಆಳಿದರು, ನಂತರ ಅದನ್ನು ಮೂರು ಭಾಗಗಳಾಗಿ ವಿಭಜಿಸಲಾಯಿತು.[೩]

ಉಲ್ಲೇಖಗಳು ಬದಲಾಯಿಸಿ

  1. Jayaswal KP. p. 16.
  2. A Panorama of Indian Culture: Professor A. Sreedhara Menon Felicitation Volume edited by K. K. Kusuman, p. 153
  3. Dimensions of Human Cultures in Central India: Professor S.K. Tiwari, p. 148