ನಂದಗಡ[] : ಖಾನಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರದ ಆಗ್ನೇಯ ದಿಕ್ಕಿಗೆ ೧೦ ಕಿಮೀ ದೂರದಲ್ಲಿದೆ. ಇದನ್ನು ಕಸಬಾ ನಂದಗಡ ಎಂದೂ ಕರೆಯುವರು. ಹಿಂದೆ ಇದೊಂದು ಪ್ರಸಿದ್ಧ ವ್ಯಾಪಾರೀ ಪಟ್ಟಣವಾಗಿತ್ತು. ಮಲ್ಲಸರ್ಜ ದೇಸಾಯಿ ಪೇಶವೆ ಬಾಜಿರಾವ್‌ನಿಂದ ದೊರೆತ ಪ್ರತಾಪರಾವ್ ಎಂಬ ಬಿರುದಿನ ಸಂತೋಷದ ಸ್ಮಾರಕವಾಗಿ ಈ ಗ್ರಾಮದಲ್ಲಿ ಒಂದು ಕೋಟೆ ಕಟ್ಟಿಸಿ ಅದನ್ನು ಪ್ರತಾಪಗಡ ಎಂದು ಕರೆದ. ಈಗ ಅದರ ಅವಶೇಷವಿದೆ. ಕಿತ್ತೂರಿನ ದೊರೆ ಖಾನಪುರದ ವ್ಯಾಪಾರಿಗಳನ್ನು ನಂದಗಡದಲ್ಲಿ ನೆಲೆಸಲು ಪ್ರೋತ್ಸಾಹಿಸುತ್ತಿದ್ದ. ವೀರ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು 1831ಜನೆವರಿ 26ರಂದು ಈ ಗ್ರಾಮದಲ್ಲೆ ಗಲ್ಲಿಗೇರಿಸಿದರು. ಸಂಗೊಳ್ಳಿ ರಾಯಣ್ಣ ತೋರಿಸಿದ ಸ್ಥಳದಲ್ಲೆ ಆತನನ್ನು ಸಮಾಧಿ ಮಾಡಲಾಯಿತು. ಆ ಸ್ಥಳದಲ್ಲಿ ಈಗ ಬೃಹತ್ ಆಕಾರದ ಆಲದ ಮರ ಬೆಳೆದಿದೆ. ಜನರು ಸಂತಾನ ಪಡೆಯಲು, ಸುಖ ಶಾಂತಿಯನ್ನು ಬೇಡಿಕೊಳ್ಳಲು ಆ ಗಿಡಕ್ಕೆ ಭಕ್ತಿಯಿಂದ ಪೂಜಿಸುತ್ತಾರೆ. ನಂದಗಡದ ಸಮೀಪದಲ್ಲಿ ಷಂಷೇರ್‌ಗಡ ಎಂಬ ಇನ್ನೊಂದು ಕೋಟೆ ಇದೆ.

ನಂದಗಡದಲ್ಲಿ ಶಾಲೆ ಮತ್ತು ಅಂಚೆ ಮುಂತಾದ ಸೌಲಭ್ಯವಿದ್ದು ಉತ್ತಮ್ ಮಾರ್ಗವಿದ್ದು ಇತರ ಗ್ರಾಮದೊಡನೆ ಮತ್ತು ಬೆಳಗಾವಿಗೆ ನೇರ ವಾಹನ ಸಂಪರ್ಕ ಹೊಂದಿದೆ.

"https://kn.wikipedia.org/w/index.php?title=ನಂದಗಡ&oldid=942483" ಇಂದ ಪಡೆಯಲ್ಪಟ್ಟಿದೆ