ನಂಜಾಟೆ ಗಿಡ

ಶಾಖೋಪಶಾಖೆಗಳಿಂದೊಡಗೂಡಿ ಸಾಧಾರಣ ೬-೭ ಅಡಿ ಬೆಳೆಯುವ ಗಿಡ. ೨ ಅಂಗುಲ ಅಂತರದಲ್ಲಿ ಹಸಿರಾದ ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ.೬ಅಂಗುಲ ಉದ್ದ,೨ ಅಂಗುಲ ಅಗಲದ ಎಲೆಗಳು ದೀರ್ಘವೃತ್ತಾಕಾರವಾಗಿದೆ. ಬುಡ ಹಾಗೂ ತುದಿಯಲ್ಲಿ ಕಿರಿಯಗಲವಾಗಿದೆ. ಎಲೆಯನ್ನು ಚಿವುಟಿದಾಗ ಹಾಲು ಬರುತ್ತದೆ.ಗಿಡದ ತುಂಬಾ ೫ ದಳಗಳ ಬಿಳಿಯ ಹೂವು ಬರುವುವು. ನಳಿಕೆಯಂತೆ ಹೊರಭಾಗವು ದಳಗಳಿಂದ ಹರಡಿಕೊಂಡಿದೆ.ಹೂವು ಮೃದುವಾಗಿರುವುದರ ಜೊತೆಗೆ ಮಧುರವಾದ ಪರಿಮಳವೂ ಇದೆ.ನಂಜಾಟೆಯ ಹೂವುಗಳು ಔಷದೀಯ ಮೂಲವಾಗಿದೆ.ಇದರಲ್ಲಿ ವರ್ಷವಡೀ ಹೂವುಗಳಿರುತ್ತವೆ.ನಂಜಾಟೆಯಲ್ಲಿ ೩-೪ ವಿಧಗಳೂ ಇವೆ.

ಇದಕೆ ಹಲವಾರು ಹೆಸರುಗಳಿವೆ, ಅವೆಂದರೆ ಹಿಂದಿಯಲ್ಲಿ-ಚಾಂದನಿ, ಕೊಂಕಣಿಯಲ್ಲಿ-ಅನಂತ, ಕನ್ನಡದಲ್ಲಿ-ನಂದೀ ಬಟ್ಟಲು, ನಂಜಾಟೆ, ಮರಾಠಿಯಲ್ಲಿ-ಅನಂತ. ಇದರ ಸಸ್ಯಶಾಸ್ತ್ರೀಯ ಹೆಸರು-ಟ್ಯಾಬರ ನಿಮಾಂಟಾನಾ ಡಯವರಿಕೆಟ,ಕುಟುಂಬ-ಅಪೊಸೈನೇಸಿ

ಔಷಧೋಪಯೋಗ ಬದಲಾಯಿಸಿ

  • ಸರ್ಪಸುತ್ತಿಗೆ: ನಂಜಾಟೆ ಬೇರನ್ನು ಲಿಂಬೆ ರಸದಲ್ಲಿ ತೇಯ್ದು ಎರಡು ಚಮಚ ಗಂಧ ಸೇವಿಸಬೇಕು.ಅದೇ ಗಂಧವನ್ನು ಸರ್ಪಕಟ್ಟೆಗೆ ಲೇಪಿಸಬೇಕು.

ದಿನಕ್ಕೆ ೧ ಸಾರಿ ೮ ದಿವಸ

  • ಅಗ್ರಕ್ಕೆ: ನಂಜಾಟೆ ಬೇರು,ಸೇವಂತಿಗೆ ಮುಗುಳು,ಶ್ರೀಗಂಧವನ್ನು ನೀರಲ್ಲಿ ತೇಯ್ದು ಸೇವಿಸಿ ೩ ದಿವಸ ನಾಲಿಗೆಗೆ ಹಚ್ಚಬೇಕು.


  • ಪ್ರಸೂತಿಯಾದಾಗ ನಂಜೇರದಂತೆ: ನಂಜಾಟೆ ಬೇರು,ತೊಂಡಜ್ಜಿ ಬೇರು ಲಿಂಬೆ ರಸದಲ್ಲಿ ಸಮಪ್ರಮಾಣದಲ್ಲಿ ತೇಯ್ದು ೫ ಚಮಚ ಗಂಧ ಮಾಡಿ ಹಡೆದ ಒಂದು ತಾಸಿನ

ನಂತರ ಬಾಣಂತಿಗೆ ಕೊಡಬೇಕು.ದಿನಕ್ಕೆ ೨ಸಾರಿ ಸ್ವಲ್ಪ ಗಂಧವನ್ನು ೨ಕಾಲುಗಳ ಪಾದಕ್ಕೂ ೧೦ ದಿವಸ ತಿಕ್ಕಬೇಕು.


  • ಕಂಚಹಪ್ಯ್ರಾ ಹಾವು ಕಡಿದರೆ: ನಂಜಾಟೆ ಬೇರು ಹಾಗೂ ಹುಲ್ಲು ಸಾರಂಗ ಗಿಡದ ಬೇರು ಎರಡನ್ನೂ ಲಿಂಬೇರಸದಲ್ಲಿ ತೇಯ್ದು,೫ ಚಮಚ ಗಂಧ ಮಾಡಿ ಸೇವಿಸಲು ಕೊಡಬೇಕು.ಹಾಗೂ ಇದೇ ಗಂಧವನ್ನು ಹಾವು ಕಡಿದ ಜಾಗದಲ್ಲಿ ದಿನಕ್ಕೆ ಮೂರು ಬಾರಿ ಒಂದು ವಾರ ಹಚ್ಚಬೇಕು
  • ವಿಷ ಜೇಡ ಕಡಿದಾಗ: ನಂಜಾಟೆ ಬೇರನ್ನು ತೇಯ್ದು ಸೇವಿಸಬೇಕು,ಮತ್ತು ಗಂಧವನ್ನು ಗಾಯಕ್ಕೆ ಲೇಪಿಸಬೇಕು.


  • ಹಸಿ ಬಾಣಂತಿಯರಿಗೆ ನಂಜೇರದಂತೆ: ನಂಜಾಟೆ ಬೇರು,ಮಾದಾಳ(ಮಾವಲಿಂಗ)ದ ಬೇರು ಮತ್ತು ಗರುಡಪಾತಾಳದ ಬೇರನ್ನು ತೇಯ್ದು ೫ ಚಮಚ ಗಂಧಮಾಡಿ

ಹೆರಿಗೆಯಾದ ಒಂದು ತಾಸಿನ ನಂತರ ಸೇವಿಸಬೇಕು.ಅದೇ ಗಂಧವನ್ನು ದಿನಕ್ಕೆರಡು ಸಾರಿ ಮೂರು ದಿವಸ ಕೈ ಕಾಲು ಪಾದಕ್ಕೆ ಸವರಬೇಕು

ಇವು ನಂಜಾಟೆ ಗಿಡದ ಕೆಲವು ಔಷದೀಯ ಗುಣಗಳು

ಈ ಲೇಖನದ ಮೂಲ- ರಾಮಚಂದ್ರ ಎಂ ಶೇಟ ಸಿರ್ಸಿ ಉ.ಕ.,ನಿರಂತರ ಪ್ರಗತಿ