ಚಿತ್ರದುರ್ಗವು ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಬಯಲುಸೀಮೆಯ ಪ್ರದೇಶವಾಗಿದೆ.ಚಿತ್ರದುರ್ಗದವು ಮಧ್ಯೆ ಕರ್ನಾಟಕದ ಜಿಲ್ಲಾ ಕೇಂದ್ರ''.ಚಿತ್ರದುರ್ಗವು ರಾಜಧಾನಿ ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ[೧].ಮೊದಲು ಚಿತ್ರದುರ್ಗವನ್ನು ಚಿತ್ರದುರ್ಗ್,ಚಿತ್ತಾಲ್ ದುರ್ಗ್ ಎಂದು ಕರೆಯಲಾಗುತ್ತಿತ್ತು.ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಚಿತ್ತಾಲ್ ದುರ್ಗ್ ಎಂದು ಕರೆಯುತ್ತಿದ್ದರು. ಇಲ್ಲಿನ ಪ್ರವಾಸ ಸ್ಥಳಗಳು.ಚಿತ್ರದುರ್ಗದ ಕೋಟೆ, ವಾಣಿ ವಿಲಾಸ ಸಾಗರ ಅಣೆಕಟ್ಟು ಇದನ್ನು ಸ್ಥಳೀಯರು ಮಾರಿ ಕಣಿವೆ ಡ್ಯಾಮ್ ಎಂದು ಕೂಡ ಕರೆಯುತ್ತಾರೆ. ಚಂದ್ರವಳ್ಳಿ ತೋಟ, ಹಿರಿಯೂರು, ಜೋಗಿಮಟ್ಟಿ,ಕಲ್ಲಿನಕೋಟೆ,ಗಾಯತ್ರಿ ಜಲಾಶಯ, ಇತ್ಯಾದಿ..ಚಿತ್ರದುರ್ಗದ ಕೋಟೆಯು ಹದಿನೆಂಟನೇ ಶತಮಾನಕ್ಕೆ ಸೇರಿದೆ.ಈ ಕೋಟೆಯನ್ನು ಕಟ್ಟಿದವರು ಚಿತ್ರದುರ್ಗದ ನಾಯಕರು.ಗ್ರಾನೇಟ್ ಅಥವ ಖನಿಜ ಕಲ್ಲಿನ ಸಹಾಯದಿಂದ ಈ ಕೋಟೆಯನ್ನು ಕಟ್ಟಿದ್ದಾರೆ.[೨]

ವ್ಯುತ್ಪತ್ತಿ ಬದಲಾಯಿಸಿ

.ಆಂಗ್ಲ ಭಾಷೆಯಲ್ಲಿ ಚಿತ್ರ ಅಂದರೆ ಪಿಕ್ಚರ್ ಹಾಗು ದುರ್ಗ ಅಂದರೆ ಫೋರ್ತ್. ಇದನ್ನು ಕಲ್ಲಿನ ಕೊಟೆ ಎಂದು ಕರೆಯುತ್ತಾರೆ ಹಾಗು ಏಳು ಸುತ್ತಿನ ಕೊಟೆ ಎಂದು ಕರೆಯುತ್ತಾರೆ.ಇಲ್ಲಿ ೧೭೯೯ ರಲ್ಲಿ ನಾಯಕರು ಹಾಗು ಹೈದರಾಲಿಯ ನಡುವೆ ಯುದ್ಧ ನಡೆದಿತ್ತು[೩].ಬ್ರಿಟೀಷರು ಇದನ್ನು ಚಿತ್ತಾಲ್ ದುರ್ಗ್ ಎಂದು ಕರೆಯುತ್ತಿದ್ದರು.ಇದು ಚಿತ್ರದುರ್ಗದ ಮೊದಲನೆಯ ಪ್ರವಾಸ ಸ್ಥಳ ಎಂದು ಹೆಸರು ಪಡೆದಿದೆ.ಇದನ್ನು ಉಕ್ಕಿನ ಕೋಟೆ ಎಂದೂ ಕರೆಯುತ್ತಾರೆ.

ಭೌಗೋಳಿಕ ಬದಲಾಯಿಸಿ

ಚಿತ್ರದುರ್ಗದ ಕೋಟೆ ಬೃಹದಾಕಾರದ ಶಿಲೆಗಳು ಹಾಗೂ ಕಲ್ಲಿನ ಗೋಡೆಗಳಿಂದ ರೂಪುಗೊಂಡಿದೆ. ಕಣಿವೆಯ ಮಧ್ಯದಲ್ಲಿ ಇರುತ್ತದೆ. ಬೃಹತ್ ಕಲ್ಲು, ಬೆಟ್ಟಗಳು ಹಾಗು ದೃಶ್ಯ ಕಣಿವೆಗಳು ಸುತ್ತಮುತ್ತಲಿನಿಂದ ಕಂಡು ಬರುತ್ತವೆ. ಬೆಟ್ಟದ ಮೇಲೆ ಕೋಟೆಯ ಪ್ರಮುಖ ಭಾಗವಾಗಿದೆ. ಈ ಕೋಟೆಯನ್ನು ಕಟ್ಟಲು ರಾಷ್ಟ್ರಕೂಟರು,ಚಾಲುಕ್ಯರು ಹಾಗು ನಾಯಕರು ಸಹಾಯ ಮಾಡಿದ್ದಾರೆ. ನಾಯಕರು ಮುಖ್ಯವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ನಂತರ ಹೈದರಾಲಿ ಹಾಗು ಅವನ ಮಗ ಟಿಪ್ಪು ಸುಲ್ತಾನ ಕೋಟೆಯ ಆಳ್ವಿಕೆಯನ್ನು ನಡೆಸುತ್ತಿದ್ದರು.ಈ ಕೋಟೆಯನ್ನು ಏಳು ಗೋಡೆಗಳ ನಡುವೆ ಕಟ್ಟಲಾಗಿದೆ.ಈ ಕೋಟೆಯಲ್ಲಿ ಅನೇಕ ಅನುಕೂಲಗಳನ್ನು ಸಹ ಮಾಡಲಾಗಿದೆ.ಇಲ್ಲಿ ಮಸೀದಿ,ಗೋಧಾಮು ಹಾಗು ಹಳೆ ಕಾಲದ ದೇವಸ್ಥಾನಗಳಿವೆ.ಮೇಲಿನ ಕೋಟೆಯಲ್ಲಿ ಹದಿನೆಂಟು ದೇವಸ್ಥಾನಗಳಿವೆ ಹಾಗು ಕೆಳಗಿನ ಕೋಟೆಯಲಿ ಒಂದು ದೊಡ್ದ ದೇವಸ್ಥಾನವಿದೆ.ಹಿಡಿಂಬೇಶ್ವರ ದೇವಸ್ಥಾನ ತುಂಬ ಪ್ರಮುಖವಾದ ಹೆಸರು ಹೊಂದಿದೆ.ಹೈದರಾಲಿಯ ಸಮಯದಲ್ಲಿ ಮಸೀದಿಯನ್ನು ಕಟ್ಟಲಾಗಿತ್ತು.

ಕನ್ನಡದಲ್ಲಿ ಈ ಕೋಟೆಯನ್ನು ಕಲ್ಲಿನ ಕೋಟೆ,ಉಕ್ಕಿನ ಕೋಟೆ ಹಾಗು ಏಳು ಸುತ್ತಿನ ಕೋಟೆ ಎಂದು ಸಹ ಕರೆಯುತ್ತಾರೆ.ಕೋಟೆಯ ವಾಯುವ್ಯ ದಿಕ್ಕಿನಲ್ಲಿ ತುಂಗಭದ್ರ ನದಿ ಹರಿಯುತ್ತದೆ.ಇದು ಒಳ್ಳೆಯ ವೀಕ್ಷಣ ವಿಹಾರ ಸ್ಥಳ ಹಾಗು ದೊಡ್ದ ದೊಡ್ಡ ಕಲ್ಲುಗಳು ಮತ್ತು ಬಂಡೆಗಳನ್ನು ನೋಡಬಹುದು.ಈ ಕೋಟೆಯ ಎತ್ತರದ ಸ್ಥಳ ಅಲ್ಲಿಂದ ೫ ಕಿ.ಮೀ ದೂರ ಹಾಗು ದಕ್ಷಿಣ ದಿಕ್ಕಿನಲ್ಲಿರುವ ಜೋಗಿಮಟ್ಟಿಯಲ್ಲಿದೆ.[೪]

ಓಬವ್ವನ ಘಟನೆ ಬದಲಾಯಿಸಿ

ಈ ಕೋಟೆಯಲ್ಲಿ ನಡೆದ ಮುಖ್ಯವಾದ ಘಟನೆ ಕೆಚ್ಚೆದೆಯ ಮಹಿಳೆಯಾದ ಓಬವ್ವನ ಘಟನೆ.ಇವಳು ಮಹಿಳಾ ಹೋರಾಟಗಾರ್ತಿಯಾಗಿದ್ದಳು.[೫]ಒಂದು ದಿನ ಊಟದ ಸಮಯದಲ್ಲಿ ಮದ್ದ ಹನುಮಪ್ಪ ಎಂಬ ಸೈನಿಕನ ಹೆಂಡತಿಯಾದ ಓಬವ್ವ ಗೋಪುರವನ್ನು ಕಾವಲು ಕಾಯುತ್ತಿದ್ದಳು.ಅವಳು ಕೋಟೆಯ ಬಿರುಕು ಆರಂಭವನ್ನು ಕಾವಲು ಕಾಯುತ್ತಿದ್ದಳು.ಇಲ್ಲಿ ಒಬ್ಬರು ಮಾತ್ರ ರಹಸ್ಯವಾಗಿ ಬರುವಷ್ಟು ಸ್ಥಳವಿತ್ತು.ಇವಳ ಸಾಹಸ ಇಂದು ಒಂದು ಇತಿಹಾಸವಾಗಿ ಜನರ ಮನಸೆಳೆದಿದೆ.ಓಬ್ಬವ್ವ ನೀರು ತರಲು ಹೋದಾಗ ಕೆಲವು ಶತ್ರು ಸೈನಿಕರ ಕೆಳ ಧ್ವನಿಯಲ್ಲಿ ಮಾತಾಡುತ್ತಿರುವುದು ಅವಳಿಗೆ ಕೇಳಿಸಿತು.ಇದನ್ನು ಅರಿತ ಅವಳು ತಕ್ಷಣ ರಹಸ್ಯ ದಾರಿಯಿಂದ ಯಾರಿಗೂ ಕಾಣದ ಹಾಗೆ ಮರೆಯಾದಳು,ಮರೆಯಾಗಿ ಒಂದು ಒನಕೆಯನ್ನು ಕೈಯಲ್ಲಿ ಹಿದಿದು ನಿಂತಳು.ಈ ಸಂಧರ್ಭದಲ್ಲಿ ಅವಳು ಅನೇಕ ಸೈನಿಕರನ್ನು ಸಾಯಿಸಿದಳು.ಮದ್ದ ಹನುಮಪ್ಪನು ಊಟ ಮುಗಿಸಿ ಬರುವಷ್ಟರಲ್ಲಿ ಅನೇಕ ಶತ್ರು ಸೈನಿಕರನ್ನು ಕೊಂದು ರಕ್ತದ ಒಣಕೆಯನ್ನು ಕೈಯಲ್ಲಿ ಹಿಡಿದು ಸತ್ತ ಹೆಣಗಳ ಸುತ್ತ ನಿಂತಿದ್ದಳು.ಮದ್ದಪ್ಪ ನಾಯಕ ತುತ್ತೂರಿ ಊದಿ ಎಲ್ಲ ಸೈನಿಕರನ್ನು ಕರೆದನು ನಂತರ ಉಳಿದ ಶತ್ರು ಸೈನಿಕರನ್ನು ಕೊಲ್ಲಲಾರಂಭಿಸಿದರು.ಇವಳ ಈ ಸಾಹಸ ಆ ದಿನ ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನಿಕರ ದಾಳಿಯಿಂದ ನಿಷೇಧಿಸಿತು.ಅವಳ ಈ ಸಾಹಸಕ್ಕೆ ಚಿತ್ರದುರ್ಗದ ಅಧಿಕಾರಿಗಳ ಕಛೇರಿಯ ಮುಂದೆ ಅವಳ ಪ್ರಭಾವಶಾಲಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.ಚಿತ್ರದುರ್ಗದ ಕ್ರೀಡಾಂಗಣಕ್ಕೆ ಅವಳ ಹೆಸರು ಇಡಲಾಗಿತ್ತು.ಇವಳ ಈ ಸಾಹಸ ಇತಿಹಾಸದಲ್ಲಿ ಒಣಕೆ ಓಬವ್ವನ ಘಟನೆಯೆಂದು ಹೆಸರುವಾಸಿಯಾಗಿದೆ ಹಾಗು ಆ ರಹಸ್ಯ ಸ್ಥಳಕ್ಕೆ ಒನಕೆ ಕಿಂಡಿ ಎಂದು ಕರೆಯಲಾಗಿದೆ.[೬]

ಇತಿಹಾಸ ಬದಲಾಯಿಸಿ

ಕೋಟೆಯಲ್ಲಿ ನಡೆದ ಯುದ್ಧದಲ್ಲಿ ಹೈದರಾಲಿಯು ವೀರ ಮದಕರಿ ನಾಯಕನನ್ನು ಸೋಲಿಸಿದ. ಚಿತ್ರದುರ್ಗ ಫೋರ್ಟ್ ಟಿಪ್ಪುವಿನ ಸಾವನದುರ್ಗದ ಕೋಟೆ ಇವುಗಳಲ್ಲಿ ಕೆಲವು.ಈ ಕೋಟೆಯು ಹಂಪಿಯಿಂದ ೧೨೦ ಕಿ.ಮೀ ಹಾಗು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ.ಕೋಟೆಯ ಸುತ್ತ ಚಾಲುಕ್ಯರ ಶಾಸನಗಳನ್ನು ನೋಡಬಹುದು.ತಿಮ್ಮಪ್ಪ ನಾಯಕ ಎಂಬ ನಾಯಕ ವರ್ಗದವನು ಮೊದಲು ಚಿತ್ರದುರ್ಗದ ಕೋಟೆಯನ್ನು ಆಳುತ್ತಿದ್ದ.ಇವರು ಚಿತ್ರದುರ್ಗದ ಜೊತೆ ಅದ್ರ ಸುತ್ತ ಮುತ್ತ ಪ್ರದೇಶಗಳಾದ ದಾವಣಗೆರೆ,ಜಗ್ಲೂರು,ಹರಿಹರ ಪ್ರದೇಶಗಳ ಉಸ್ತುವಾರಿ ವಹಿಸಿದ್ದರು.ಇವರ ನಂತರ ಇವರ ಮಗನಾದ ಮದಕರಿ ನಾಯಕ ಕೋಟೆಯನ್ನು ಆಳುತ್ತಿದ್ದ.ಇವರ ನಂತರ ಭರಮಪ್ಪ ನಾಯಕ ತುಂಬ ಹೆಸರುವಾಸಿಯಾದ.ಇವನ ಸಮಯದಲ್ಲಿ ಅನೇಕ ಕೋಟೆಗಳು,ಅರಮನೆಗಳು,ದೇವಾಲಯಗಳು ಕಟ್ಟಲಾಗಿತ್ತು.ಮೈಸೂರಿನ ಹೈದರಾಲಿ ಕೋಟೆಯನ್ನು ಅನೇಕ ಬಾರಿ ಬಂಧಿಸಿದ್ದ.ಮೊದಲು ೧೭೬೦ ರಲ್ಲಿ,ಎರಡನೆ ಬಾರಿ ೧೭೭೦ ರಲ್ಲಿ ಹಾಗು ಕೊನೆಯದಾಗಿ ೧೭೭೯ ರಲ್ಲಿ ಬಂಧಿಸಿ ಮದಕರಿ ನಾಯಕನನ್ನು ಸೋಲಿಸಿದ.ಇದಾದ ನಂತರ ಕೋಟೆಯ ಜವಾಬ್ದಾರಿಯನ್ನು ಮೆಸೂರಿನ ಸರ್ಕಾರ ವಹಿಸಿತು.

ದಂತ ಕಥೆ ಬದಲಾಯಿಸಿ

ಜಾನಪದ ದಂತಕಥೆ ಮಹಾಭಾರತ ಕೋಟೆಯಿಂದ ಸುತ್ತಮುತ್ತ ಬೆಟ್ಟಗಳನ್ನು ಸಂಪರ್ಕಿಸುತ್ತದೆ.ಇದು ಹಿಡಿಂಬಸುರ ಎಂಬ ನರಭಕ್ಷಕ ದೈತ್ಯ ಚಿತ್ರದುರ್ಗ ಬೆಟ್ಟದ ಮೇಲೆ ವಾಸಿಸುತ್ತಿದ್ದರು.ಪಾಂಡವರು ತಮ್ಮ ಅಗ್ನಾತವಾಸದ ಸಮಯದಲ್ಲಿ ಅವರ ತಾಯಿ ಕುಂತಿಯ ಜೊತೆ ಬಂದಾಗ ಭೀಮ ಮಧು ನಡೆಸಿದ ದ್ವಂದ್ವ ಯುದ್ಧದ ಸಮಯದಲ್ಲಿಮಧು ಭೀಮ ಹತನಾಗುತ್ತಾನೆ ಹಾಗು ಶಾಂತಿ ಪ್ರದೇಷಕ್ಕೆ ಮರಳಿದರು.

ದೇವಸ್ಥಾನಗಳು ಬದಲಾಯಿಸಿ

ಮೇಲಿನ ಕೋಟೆಯಲ್ಲಿ ೧೮ ದೇವಸ್ಥಾನಗಳನ್ನು ಕಟ್ಟಳಾಗಿತ್ತು.ಇದರಲ್ಲಿ ಕೆಲವು ಹೆಸರುವಾಸಿಯಾದ ದೇವಸ್ಥಾನಗಳು ಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಏಕನಾಥೆ,ಫಾಲ್ಗುಣೇಶ್ವರ, ಗೋಪಾಲಕೃಷ್ಣ, ಹನುಮಂತನ ದೇವಸ್ಥಾನ, ಸುಬ್ಬರಾಯ ಹಾಗು ನಂದಿ. ಹಿಡಿಂಬೇಶ್ವರ ದೇವಸ್ಥಾನವು ರಾಕ್ಷಸನಾದ ಹಿಡಿಂಬನ ಹಲ್ಲನ್ನು ಪ್ರದರ್ಶಿಸುತ್ತದೆ.ಹಿಡಿಂಬ ಹಾಗು ತನ್ನ ಸೋದರಿಯಾದ ರಾಕ್ಶಸಿ ಹಿಡಿಂಬಿ ಇಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ.ಹಿಡಿಂಬಿ ಭೀಮನನ್ನು ಮದುವೆಯಾದಲು ಹಾಗು ಗಟೋಟ್ಕಚನಿಗೆ ಜನ್ಮ ನೀಡಿದಲು.ಕೋಟೆಯ ಪ್ರವೇಶದಲ್ಲಿ ಏಕಶಿಲೆಯ ಸ್ಥಂಭ ಹಾಗು ಎರಡು ಸ್ವಿಂಗ್ ಚೌಕಟ್ಟುಗಳನ್ನು ಕಾಣಬಹುದು.ಸಂಪಿಗೆ ಸಿದ್ದೇಶ್ವರನ ದೇವಸ್ಥಾನ ಬೆಟ್ಟದ ಬುಡದಲ್ಲಿದೆ.ಗೋಪಾಲಕೃಷ್ಣನ್ ದೇವಾಲಯದ ಶಾಸನಗಳು ಅಲ್ಲಿನ ವಿಗ್ರಹವನ್ನು ಹದಿನಾಲ್ಕನೇ ಶತಮಾನಕ್ಕೆ ಹೋಲಿಸುತ್ತದೆ.ಉತ್ಸವಾಂಬ ದೇವಾಲಯವನ್ನು ಕೋಟೆ ಸಂಕೀರ್ಣದ ಕಲ್ಲುಗಳ ಮಧ್ಯೆ ಕಟ್ಟಲಾಗಿದೆ.ಕೋಟೆಯಲ್ಲಿದ್ದ ಮುರುಗ ರಾಜೇಂದ್ರ ಮಠವು ಈಗ ಕೋಟೆಯಿಂದ ೨ ಕಿ.ಮೀ ಚಿತ್ರದುರ್ಗದ ವಾಯುವ್ಯ ದಿಕ್ಕಿನಲ್ಲಿದೆ.ಟಿಪ್ಪು ಸುಲ್ತಾನನ ಸಮಯದಲ್ಲಿ ಕೆಳಗಿನ ಕೋಟೆಯಲ್ಲಿ ಕಛೇರಿಯನ್ನು ಸೇರಿಸಲಾಗಿತ್ತು.ಇಲ್ಲಿ ಮದ್ದು ಬೀಸುವ ಕಲ್ಲನ್ನು ಟಿಪ್ಪು ಸುಲ್ತಾನ ಉಪಯೋಗಿಸುತ್ತಿದ್ದ.

ಚಲನ ಚಿತ್ರಗಳು ಬದಲಾಯಿಸಿ

ಅನೇಕ ಕನ್ನಡ ಸಿನಿಮಗಳ ಚಿತ್ರೀಕರಣ ಇಲ್ಲಿ ನಡೆದಿದೆ.ಈ ಕೋಟೆಯಲ್ಲಿ ಚಿತ್ರೀಕರಿಸಿದ ಪ್ರಮುಖ ಚಿತ್ರಗಳು ನಾಗರ ಹಾವು ಹಾಗು ಹಂಸೆ ಗೀತೆ.ವೀರ ಮದಕರಿ ನಾಯಕ ಎಂಬ ಚಿತ್ರದ ಮೂಲಕ ನಾಯಕರ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು.ವರದಿಯ ಉತ್ಪಾದನೆಯಲ್ಲಿ ಇನ್ನೊಂದು ಚಲನಚಿತ್ರ ನಾಯಕ ಸಾಮ್ರಾಜ್ಯದ ಕೊನೆಯ ದೊರೆ ಬಗ್ಗೆ, ವೀರ ಮದಕರಿ ನಾಯಕ ಆಗಿದೆ.[೭]

ಉಲ್ಲೇಖ ಬದಲಾಯಿಸಿ

  1. https://www.google.co.in/search?client=ms-android-lenovo&ei=jOyDW-TvHYvGvgSYt5PYBw&q=distance+between+chitradurga+to+bangalore&oq=distance+between+chitra&gs_l=mobile-gws-wiz-serp.1.0.0i19l5.13562.21244..22456...2.0..0.813.5955.0j2j7j5j0j1j2......0....1.......5..0j35i39j0i67j0i131j0i2i203j0i203j0i22i30i19.9tN667iNT30
  2. https://www.nativeplanet.com/travel-guide/chitradurga-fort-picturesque-fort-karnataka-001650-pg1.html
  3. https://www.google.co.in/search?client=ms-android-lenovo&ei=UO2DW_SIJoHhvgTkvrb4Bw&q=war+b%2Fw+madhakari+nayaka+and+hyderali&oq=war+b%2Fw+madhakari+nayaka+and+hyderali&gs_l=mobile-gws-wiz-serp.3..33i160.11225.97593..101940...32.0..2.1481.25526.2j0j40j24j3j0j2j3....2..0....1.......5..35i39j0i19j0i203j0i10i2i203j0i2i203j0i22i30j0i7i5i30i19j0i22i30i19j33i22i29i30j33i21j0i13i5i30i19j30i10j33i10i160.cGWwLNb-lsc
  4. "ಆರ್ಕೈವ್ ನಕಲು". Archived from the original on 2018-09-03. Retrieved 2018-08-27.
  5. Sarojini Shintri; Kurukundi Raghavendra Rao (1983). Women freedom fighters in Karnataka. Prasaranga, Karnatak University. p. 151. Retrieved 2009-06-17.
  6. "ಆರ್ಕೈವ್ ನಕಲು". Archived from the original on 2018-08-19. Retrieved 2018-08-27.
  7. https://www.google.co.in/search?q=movies+shot+in+chitradurga&oq=film+shooting+in+chitr&aqs=chrome.1.69i57j0.12184j0j7&client=ms-android-lenovo&sourceid=chrome-mobile&ie=UTF-8