ಚರ್ಚೆಪುಟ:ಬುಕ್ಕ ರಾಯ I

ಕ್ಷತ್ರಿಯ ಕುರುಬರ ಧರ್ಮ : ಹಿಂದೂಧರ್ಮ

ಪೋಷಕರು : ಹಕ್ಕ ಬುಕ್ಕರು. ಕನಕದಾಸರು. ಕಾಳಿದಾಸರು. ಸಂಗೋಳಿ ರಾಯಣ್ಣ , ಚಂದ್ರಗುಪ್ತ ಮೌರ್ಯ ,ಅಶೋಕ ಚಕ್ರವರ್ತಿ, ಹೊಯ್ಸಳ , ಕೌರವರು - ಪಾಂಡವರು, ಕದಂಬರು

ಅನೇಕರು


ಕುರುಬ ಜನಾಂಗ ಪುರಾತನವಾದ ಜನಾಂಗ. ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ.


ಪೂರ್ವ ಇತಿಹಾಸ ಸಂಪಾದಿಸಿ ಕುರುಬಗೌಡ/ಹಾಲುಮತ ಗೌಡ ಜನಾಂಗ ತುಂಬಾ ಪುರಾತನವಾದ ಜನಾಂಗ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲ್ಲಿದ್ದ ಗೆಡ್ಡೆ, ಗೆಣಸು ತಿನ್ನುತಿದ್ದ. ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವುದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸತೊಡಗಿದ. ಕುರುಬರು ಈ ಎಲ್ಲ ಮಾನವನ ಆಯಾಮಗಳನ್ನು ದಾಟಿದವರು. ಅತಿ ಪುರಾತನವಾದ ಈ ಸಮುದಾಯದಿಂದ ಕಾಲ ಕ್ರಮೇಣ ಇತರೆ ಜನಾಂಗದವರು ಬೇರೆಯಾಗ ತೊಡಗಿದರು. ಉದಾಹರಣೆಗೆ ಒಕ್ಕಲುತನ ಮಾಡುವನು ಒಕ್ಕಲಿಗನಾದ, ಬೇಟೆಯಾಡುವವನು ಬೇಡನಾದ, ಮಡಿಕೆ ಮಾಡುವವನು ಕುಂಬಾರನಾದ, ಈ ಇತರೆ ಜನಾಂಗದವರು ಮಾನವನ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮಾಡತೊಡಗಿದರು. ಹೀಗೆ ಪುರಾತನವಾದ ಕುರುಬ ಮತ್ತು ಯಾದವ ವಂಶಗಳಿಂದ ಸಣ್ಣ ಪುಟ್ಟ ಜಾತಿಗಳು ಹುಟ್ಟಿಕೊಂಡವು.

ಕುರುಬರಿಗೆ ಅತ್ಯಂತ ಪ್ರಾಚೀನವಾದ ಚರಿತ್ರೆಯಿದೆ.

ಸುದೀರ್ಘ ಚರಿತ್ರೆಯಲ್ಲಿ ಕುರುಬ ಮಹಿಳೆ ಕಾಣದಿರುವುದು ವಿಷಾದದ ಸಂಗತಿ. ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಪೂ. 4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ.

ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಸಂಬಾ ಜೋಶೀ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ ಇಲಿಯಟ್ ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್.

ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟ ದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ. ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ.


ವಿಜಯನಗರ ಸಾಮ್ರಾಜ್ಯದ ಸ್ಥಾಪನೆ:

ಹಕ್ಕ ಬುಕ್ಕರಾಯರು ಕುರುಬಜನಾಂಗದವರು ಮೊದಲಿಗೆ ಹಕ್ಕ ಬುಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್ರ್ನುವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆಗೆ ಮಣಿಯದೆ ಮಲ್ಲಿಕಾಪ್ರ್ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು. ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ, ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು, ವೀರಪುತ್ರರೆಂದು, ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು. ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು, ವೈಷಮ್ಯವನ್ನು, ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನ ಹರಿಸದೆ ಈ ಜನಾಂಗದ ಪುರಾಣ, ಇತಿಹಾಸ, ಜ್ಞಾನ, ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು. ಕರುಬ ಜನಾಂಗದವರು ತಮ್ಮ

ಸಂಸ್ಕ್ರತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕ ುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ.

ಹೆಸರುಗಳು ಸಂಪಾದಿಸಿ ಕುರುಬ, ಕುರುಬ ಗೌಡ, ಹೆಗ್ಗಡೆಗಳು

ಕುರುಬರು ಸಂಪಾದಿಸಿ ಕುರುಬರು

ಸಂಪ್ರದಾಯ ಸಂಪಾದಿಸಿ ಪೂಜಿಸುತ್ತಾರೆ


ಕೆರೆಸಂತೆ ಶ್ರೀ ಲಕ್ಕಮ್ಮ ದೇವಿ ದೊಡ್ಡ ಜಾತ್ರೆ. ಕೆರೆಸಂತೆ ಕಡೂರ್(ತಾ) ಶ್ರೀರೇವಣ ಸಿದ್ಡೇಶ್ವರ ಜಾತ್ರೆ ಹೊಳೆ ಸೇವೆ ಶ್ರೀ ಮದ್ ಶಾಂತ ಸಿಂಹಾಸನ ಅಣತಿ ಮಠದ ರೇಣುಕ ಜಯಂತಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ ಮೈಲಾರ ಜಾತ್ರೆ ಮಾದೇಶ್ವರ ಜಾತ್ರೆ ಬೀರೆದೇವರ ಜಾತ್ರೆ ಕನಕದಾಸ ಜಯಂತಿ ಕಾರ್ಣಿಕೋತ್ಸವ ಮಾರಿ ಹಬ್ಬ ಬಿಳಿಗಿರಿ ರಂಗನಾಥ ಸ್ವಾಮಿ ಜಾತ್ರೆ ದೊಡ್ಡ ದ್ಯವರ ಜಾತ್ರೆ ತೆಂಗಿನಕಾಯಿ ಪವಾಡ ಬೂದಿ ಮುಚ್ಚಿದ ಕೆಂಡ ಶ್ರೀ ಬಂದೂರು ಬೀರಲಿಂಗೇಶ್ವರ ಸ್ವಾಮಿಿ ಜಾತ್ರೆ, ಜಾವಗಲ್ ಹೋಬಳಿ ಅರಸೀಕೆರೆ ತಾಲ್ಲೂಕು ಹಾಸನ ಜಿಲ್ಲೆ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನ,ಕುರುವಂಕ,ಅರಸೀಕೆರೆ(ತಾ) ಹಾಸನ(ಜಿ). ಕುರುಬ ಉಪ ಜಾತಿಗಳು ಸಂಪಾದಿಸಿ ಕಾಡು ಕುರುಬ ಜೇನು ಕುರುಬ ಸಂಚಾರಿ ಕುರುಬ ಗೊಂಡ ಕುರುಬ ಬೆಟ್ಟ ಕುರುಬ ದೊಡ್ಡ ಕುರುಬ ಹೆಗ್ಗಡೆಗಳು ಕುರುಬ ಇತಿಹಾಸ ಕತೆಗಳು ಸಂಪಾದಿಸಿ ಹಾಲುಮತ ಕುರುಬ ಪುರಾಣ ಮಾದೇಶ್ವರ ಪುರಾಣ ಕಾಟಮರಾಜುವಿನ ಕಥೆ ಕುರುಬ ಜನಪದ ಕಲೆಗಳು ಸಂಪಾದಿಸಿ ಕಂಸಾಳೆ ಭಜನೆ ಗೀತೆಗಳು ಕೋಲಾಟ ಡೊಳ್ಳು ಕುಣಿತ ಗೊರವರ ಕುಣಿತ ಬೀರೆದೇವರ ಕುಣಿತ ವೀರಗಾಸೆ ಕುರುಬ ಧರ್ಮಕ್ಷೇತ್ರಗಳು ಸಂಪಾದಿಸಿ ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಸರವೂರು, ಬಿಜಾಪುರ ಜಿಲ್ಲೆ. ಮಾಳಿಂಗರಾಯನ ಮುಂಡಾಸ (ಶೀವ ಪಾರ್ವತಿಯಿಂದ) ಮಹೋತ್ಸವ 🐅 ಹುಲಿಜಂತಿ, ಮಹಾರಾಷ್ಟ್ರ. ಶ್ರೀ ಗುರು ಗೌರಿ ಸೋಮಲಿಂಗೇಶ್ವರ ಮಾಯಿ ಮಖಣಾಪುರ. ಶ್ರೀ ಯೋಗಿ ಅಮೋಘಸಿದ್ಧೇಶ್ವರ, ಮಮ್ಮೇಟ ಗುಡ್ಡ, ಜಾಲಗೇರಿ, ವಿಜಯಪುರ ಜಿಲ್ಲಾ. apur. ಶ್ರೀ ಹಾಲ ಮರಡಿಸಿದ್ದೇಶ್ವರ ದೇವಸ್ಥಾನ ಹೊನವಾಡ

ಶ್ರೀ ರೇಣುಕಾಚಾರ್ಯರ ಮಹಾ ಸಂಸ್ಥಾನ, ಅಣತಿ, ಹಾಸನ ಜಿಲ್ಲೆ ಶ್ರೀ ಬೀರಲಿಂಗೇಶ್ವರ ಸ್ವಾಮಿ {ಮಜ್ಜಗೆ ಹಳದ ಅಯ್ಯ}ಕಕ್ಕೆಹಳ್ಳಿ, ಚನ್ನರಾಯಪಟ್ಟಣ ತಾ ಹಾಸನ ಜಿಲ್ಲೆ. ಶ್ರೀ ಲಕ್ಷೀದೇವಿ ದೇವಸ್ಥಾನ ಕೆರೆಸಂತೆ ಕಡೂರು ತಾ ಚಿಕ್ಕಮಗಳೂರು ಜಿ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟ ಬಿಳಿಗಿರಿ ರಂಗನಾಥ ಸ್ವಾಮಿ ಬೆಳಕು ಮಾ ದಶಮಿಯ ಬೆಟ್ಟ ಮೈಲಾರ ಕಾಗಿನೆಲೆ ಹಂಪಿ ಶ್ರೀ ಹಿರೇಬೀರಲಿಂಗೇಶ್ವರ ಸ್ವಾಮಿ ದೇವಾಲಯ, ದೇವರ ಆದಿಹಳ್ಳಿ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಶ್ರಿ ರಂಗನಾಥ [[ಗುಡ್ಡದ ಮಲ್ಲಯ್ಯ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು)]] ಬಲ್ಲೂರಪ್ಪ, ಹಲ್ಹಹಾರ್ವಿ ಗ್ರಾಮ ಮತ್ತು ಮಂಡಲೆ, ಆಲೂರು ತಾಲುಕು, ಕರ್ನುಲ್ ಜಿಲ್ಲೆ, ಆಂದ್ರಾಪ್ರದೇಶ್ (ಗಡಿನಾಡು) ಶ್ರೀ ಸೋಮೇಶ್ವರ ದೇವಸ್ಥಾನ ಕಡೂರು ಚಿಂಚಲ್ಲಿ ಮಾಯವ್ವ ಶ್ರೀ ಹಳ್ಳದ ಬೀರಲೀಂಗೇಶ್ವರ ದೇವಾಸ್ಥನ, ಶಂಕರನಹಳ್ಳಿ, ಜಾವಗಲ್ ಶ್ರೀ ಬೀರಲಿಂಗೇಶ್ವರ, ಲಕ್ಕಿಹಳ್ಳಿ, ಮುಗಲಿಕಟ್ಟೆ, ಕಡೂರು. ಬೂದಿ ಮುಚ್ಚಿದ ಕೆಂಡ ಶ್ರೀ ಬೀರಲಿಂಗೇಶ್ವರ ಸ್ವಾಮಿ ಬಂದೂರು , ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು,ಹಾಸನ ಜಿಲ್ಲೆ. ಕುರುಬ ಇತಿಹಾಸ ಪುರುಷರು ಸಂಪಾದಿಸಿ Learn more ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. ಶ್ರೀ ಗುರು ರೇವಣಸಿದ್ದೇಶ್ವರರು

ಜಗದ್ಗುರು ಶಾಂತ ಮುತ್ತಯ್ಯ (ಶಾಂತಿಮಯ್ಯ)ಒಡೆಯರ್ ಮಹಾಕವಿ ಕಾಳಿದಾಸ ದಾಸ ಶ್ರೇಷ್ಟ ಕನಕದಾಸ ಕ್ರಾಂತಿ ವೀರಸಂಗೊಳ್ಳಿ ರಾಯಣ್ಣ ಮಹಾತ್ಮಾ ಬೋಮ್ಮಗೊಂಡೇಶ್ವರ ವೀರಮಾತೆ ಅಹಿಲ್ಯಾಬಾಯಿ ಮಾಳಿಂಗರಾಯ ಯಲ್ಲಲಿಂಗ ಮಹಾರಾಜ ಇಟಗಿ ಭೀಮಾಂಬಿಕ ಅಮೋಘ ವೀರ ಪಾಂಡ್ಯ ಕಟ್ಟಾ ಬೊಮ್ಮನ್ ಕುರುಬ ಗೊಲ್ಲಾಳ ಸಜ್ಜಲಗುಡ್ಡ ಶರಣಮ್ಮ ಲಡ್ಡುಮುತ ಬಾಳುಮಾಮ ಜುಂಜೇ ಗೌಡ (ಹಕ್ಕ ಬುಕ್ಕ ರಾಯರು ವಿಜಯನಗರ ಸಾಮ್ರಾಜ್ಯ ಸ್ಥಾಪಕರು)

ಹಿನ್ನೆಲೆ

ವಿದ್ಯಾರಣ್ಯರೊಂದಿಗೆ ಹರಿಹರ ಮತ್ತು ಬುಕ್ಕ ಹಕ್ಕ ಮತ್ತು ಅವನ ಸಹೋದರ ಬುಕ್ಕನ ಆರಂಭಿಕ ಜೀವನದ ವಿವರಗಳು ಲಭ್ಯವಿಲ್ಲ. ಸಿದ್ಧಾಂತಗಳಲ್ಲಿನ ಹಲವು ಹೇಳಿಕೆಗಳಿಗೆ ಸಾಕ್ಷಗಳಿಲ್ಲ. ಇತಿಹಾಸಕಾರರ ಉಲ್ಲೇಖನಗಳಲ್ಲಿ ತಾರೀಕುಗಳು ಸಹ ಕೆಲವು ಕಡೆ ತಪ್ಪಿವೆ. ಇತಿಹಾಸಕಾರ ಫಾದ್ರಿ ಹೆನ್ರಿ ಹೇರಾಸ್ ಸಿದ್ಧಾಂತದ ಪ್ರಕಾರ, ಹಕ್ಕ-ಬುಕ್ಕ ಸಹೋದರರು ವಿರೂಪಾಕ್ಷ ಮತ್ತು ಕೇಶವನಂತಹ ಕರ್ನಾಟಕದ ದೇವರುಗಳ ಭಕ್ತರಾಗಿದ್ದರು. ಪರ್ಷಿಯನ್ ಇತಿಹಾಸಕಾಕರ, ಫರಿಷ್ತಾ ಈ ಅರಸರನ್ನು ಕರ್ನಾಟಕದವರೆಂದು ಉಲ್ಲೇಖಿಸಿದ್ದಾನೆ.

ಪರ್ಷಿಯನ್ ಇತಿಹಾಸಕಾರ, ಫರಿಷ್ತಾ ಈ ಅರಸರನ್ನು ಕರ್ನಾಟಕದವರೆಂದು ಉಲ್ಲೇಖಿಸಿದ್ದಾನೆ. [೧][೨][೩]

ಮತ್ತೊಂದು ಸಿದ್ಧಾಂತದ ಹೇಳುವಂತೆ, ಹಕ್ಕ-ಬುಕ್ಕರು ವಾರಂಗಲ್-ನ ಕಾಕತೀಯ ರಾಜನ ಸೈನ್ಯದಲ್ಲಿದ್ದರು. ವಾರಂಗಲ್ ರಾಜನನ್ನು ಮೊಹಮ್ಮದ್ ಬಿನ್ ತುಘ್ಹಲಕ್ ಸೋಲಿಸಿ ಹಕ್ಕ-ಬುಕ್ಕರು ಸೆರೆಯಾಳುಗಳನ್ನಾಗಿ ಮಾಡಿಕೊಂಡು ದೆಹಲಿಗೆ ಕಳುಹಿಸಿದ ಮತ್ತು ಅಲ್ಲಿ ಇಸ್ಲಾಮ್ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸಿದ. ಅಲ್ಲಿಂದ ತಪ್ಪಿಸಿಕೊಂಡು ಬಂದು, ವಿದ್ಯಾರಣ್ಯರ ಆಶೀರ್ವಾದಗಳೊಂದಿಗೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ರಾಜ್ಯಭಾರ ಬುಕ್ಕ ರಾಯನ 21 ವರ್ಷ ಆಳ್ವಿಕೆಯಲ್ಲಿ (37 ಇತಿಹಾಸಕಾರ ನನಿಜ್ ಪ್ರಕಾರ) ಸಾಮ್ರಾಜ್ಯವು ಬಹಳಷ್ಟು ಅಭಿವೃದ್ಧಿ ಹೊಂದಿತು. ಬುಕ್ಕ ರಾಯ ದಕ್ಷಿಣ ಭಾರತದ ರಾಜ್ಯಗಳನ್ನು ವಶಪಡಿಸಿಕೊಂಡು, ನಿರಂತರವಾಗಿ ಸಾಮ್ರಾಜ್ಯದ ಪ್ರದೇಶವನ್ನು ವಿಸ್ತರಿಸಿದ.

1360ರ ಹೊತ್ತಿನಲ್ಲಿ, ಅರ್ಕೊಟ್ ನ (ಇಂದಿನ ವೆಲ್ಲೂರ್, ತಮಿಳುನಾಡು) ಶಂಭುವರಾಯರ ರಾಜ್ಯ ಮತ್ತು ಕೊಂಡವೀಡು ರೆಡ್ಡಿಗಳನ್ನು ಸೋಲಿಸಿ ಪೆನುಕೊಂಡ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡ. ಬುಕ್ಕ 1371 ರಲ್ಲಿ, ಮಧುರೈನ ಸುಲ್ತಾನರನ್ನು ಸೋಲಿಸಿದನು ದಕ್ಷಿಣಕ್ಕೆ ರಾಮೇಶ್ವರಂ ವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ. ಬುಕ್ಕ ಮತ್ತು ಅವನ ಪುತ್ರ ಕುಮಾರ ಕಂಪಣ ದಕ್ಷಿಣ ಭಾರತದ ಬಹುತೇಕ ಪ್ರಭುತ್ವಗಳ ವಿರುದ್ಧ ಜಯಗಳಿಸಿದರು. ಬುಕ್ಕನ ಪತ್ನಿ ಗಂಗಾಂಬಿಕಾ ಬರೆದ ಸಂಸ್ಕೃತ ಕೃತಿ ಮಧುರಾ ವಿಜಯಂ (ಅಥವಾ ವೀರಕಂಪಾರ ಚರಣ್ರಾಮ್) ನಲ್ಲಿ ಈ ಪ್ರಯತ್ನಗಳನ್ನು ದಾಖಲಿಸಲಾಗಿದೆ. 1374 ರ ಸುಮಾರಿಗೆ, ತುಂಗಭದ್ರ-ಕೃಷ್ಣ ತಪ್ಪಲಿನ ಕೃಷಿ ಪ್ರದೇಶದಲ್ಲಿ, ಬಹಮನಿಗಳಿಗಿಂತಲೂ ಶಕ್ತಿಶಾಲಿಯಾದರು. ಒಡಿಶಾ (ಓರಿಯಾ) ರಾಜ್ಯವನ್ನು ಗೋವಾ ರಾಜ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.

ಅವನ ಮಗ ಕುಮಾರ ಕಂಪಾನಾ ಅವರೊಂದಿಗೆ ಪ್ರಚಾರ ಮಾಡಿದರು ಮತ್ತು ಅವರ ಪತ್ನಿ ಗಂಗಾಂಬಿಕಾ ಬರೆದ ಸಂಸ್ಕೃತ ಕೃತಿ ಮಧುರಾ ವಿಜಯಂ (ವೀರಕಂಪಾರ ಚರಣ್ರಾಮ್ ಎಂದು ಸಹ ಕರೆಯುತ್ತಾರೆ) ಅವರ ಪ್ರಯತ್ನಗಳನ್ನು ದಾಖಲಿಸಲಾಗಿದೆ. 1374 ರ ಹೊತ್ತಿಗೆ ಅವರು ತುಂಗಭದ್ರ-ಕೃಷ್ಣ ದೋಬ್ ನಿಯಂತ್ರಣಕ್ಕೆ ಬಹಮನಿಗಳ ಮೇಲೆ ಒಂದು ಮೇಲುಗೈ ಪಡೆದರು. ಒಡಿಶಾ (ಓರಿಯಾ) ಮತ್ತು ಗೋವಾ ರಾಜ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸಿಲೋನ್ ನ ಜಾಫ್ನಾ ಸಾಮ್ರಾಜ್ಯ ಮತ್ತು ಮಲಬಾರ್ನ ಝಮೊರಿನ್ ರಾಜ್ಯಗಳಿಂದ ಕಪ್ಪ ಕಾಣಿಕೆಗಳನ್ನು ಪಡೆದುಕೊಂಡರು.

Return to "ಬುಕ್ಕ ರಾಯ I" page.